ಅಂಕಣಗಳು

ವಡ್ಡರಗುಡಿಯ ಕುಸ್ತಿಪಟು ಎನ್.ನಾಗೇಶ್

• ಅನಿಲ್ ಅಂತರಸಂತೆ

ಕುಸ್ತಿ ಆಡಲು ಭಯ ಪಡುವವರೇ ಹೆಚ್ಚು. ಶತಮಾನಗಳ ಹಿಂದೆ ಗ್ರಾಮಗಳಿಗೊಂದ ರಂತಿದ್ದ ಕುಸ್ತಿ ಅಖಾಡದ ಗರಡಿಮನೆಗಳು ಇಂದು ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಅಲ್ಲೊಂದು ಇಲ್ಲೊಂದು ಮಾತ್ರ ಕಾಣಸಿಗುತ್ತವೆ. ಒಂದಿಷ್ಟು ಯುವಕರ ಹೊರತಾಗಿ ಇಂದು ಕುಸ್ತಿಯ ಅರಿವು ಯುವಜನರಿಂದ ದೂರಾಗಿದೆ. ಯುವಸಮೂಹ ಮೋಜುಮಸ್ತಿಯ ಕೂಟಗಳಲ್ಲೇ ಮುಳುಗಿದ್ದು, ದೇಶದ ಪ್ರಾಚೀನ ಕ್ರೀಡೆಯಾದ ಕುಸ್ತಿಯನ್ನು ಸಂಪೂರ್ಣ ಮರೆತ್ತಿದ್ದಾರೆ.

ಅನಾದಿ ಕಾಲದಿಂದಲೂ ಭಾರತ ತನ್ನದೇ ಆದ ಸಂಸ್ಕೃತಿ, ಪರಂಪರೆ, ಕ್ರೀಡೆಯನ್ನು ರೂಢಿಸಿಕೊಂಡು ಬಂದಿದೆ. ಇಂದಿಗೂ ಸಾಕಷ್ಟು ಹಳ್ಳಿಗಳಲ್ಲಿ ಆ ಪರಂಪರೆಗಳನ್ನು ಕಾಣಬಹುದು. ಅಂತಹ ಪರಂಪರೆಗಳಲ್ಲಿ ಕುಸ್ತಿಯೂ ಒಂದು. ರಾಜರ ಆಳ್ವಿಕೆಯ ಕಾಲದಲ್ಲಿ ಜಟ್ಟಿಗಳು ಪ್ರತಿ ಗ್ರಾಮದಲ್ಲಿಯೂ ಕಾಣಸಿಗುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಕುಸ್ತಿ ಒಂದು ಕ್ರೀಡೆಯಾಗಿ ನಡೆಯುತ್ತಿತ್ತು. ಸ್ವತಃ ರಾಜರುಗಳೂ ಜಟ್ಟಿಗಳಾಗಿದ್ದ ಉದಾಹರಣೆಗಳಿವೆ. ಅಂತಹ ದೇಸಿ ಸಂಸ್ಕೃತ ಮತ್ತು ಕ್ರೀಡೆಗಳು ಇಂದು ಯುವಜನರಿಂದ ದೂರಾಗಿ ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಕ್ರೀಡೆಗಳು ನಮ್ಮ ಬದುಕಿನ ಭಾಗವಾಗಿ ಹೋಗಿವೆ. ಇಂತಹ ದಿನಮಾನಗಳಲ್ಲಿಯೂ ದೇಸಿ ಕ್ರೀಡೆಯತ್ತ ಒಲವು ತೋರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಚ್‌.ಡಿ.ಕೋಟೆ ತಾಲ್ಲೂಕಿನ ವಡ್ಡರಗುಡಿಯ ಕುಸ್ತಿಪಟು ಎನ್.ನಾಗೇಶ್.

ಕುಸ್ತಿ ಭಾರತದ ಅತ್ಯಂತ ಪ್ರಾಚೀನ ಕ್ರೀಡ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ಇಂತಹ ಕುಸ್ತಿಯನ್ನು ಕಳೆದ 6 ವರ್ಷಗಳಿಂದ ನಿರಂತರವಾಗಿ ಅಭ್ಯಾಸ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ ಎನ್.ನಾಗೇಶ್.

ನಾಗೇಶ್ ಮೂಲತಃ ಎಚ್.ಡಿ.ಕೋಟೆ ತಾಲ್ಲೂಕಿನ ವಡ್ಡರಗುಡಿಯ ರೈತಾಪಿ ಕುಟುಂಬದ ಎ.ಪಿ.ನಿತ್ಯಾನಂದ ಮತ್ತು ಬಿ.ವಿ.ಸೌಭಾಗ್ಯ ದಂಪತಿಯ ಎರಡನೇ ಮಗ, ನಾಗೇಶ್ ತಮ್ಮ ಪಿಯುಸಿ ಶಿಕ್ಷಣವನ್ನು ಎಚ್.ಡಿ.ಕೋಟೆಯ ಆದಿಚುಂಚನಗಿರಿ ಕಾಲೇಜು ಮತ್ತು ಪದವಿ ಶಿಕ್ಷಣವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿದರು. ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ಕುಸ್ತಿ ಕ್ರೀಡೆಯ ಬಗ್ಗೆ ತಿಳಿಯುತ್ತಾ ಹೋದ ನಾಗೇಶ್ ನಂತರ
ಅದನ್ನು ಕಲಿಯುವ ಹಠ ತೊಟ್ಟರು. ಆರಂಭದಲ್ಲಿ ಮೈಸೂರಿನ ಮಧು ಎಂಬವರ ಬಳಿ ಕುಸ್ತಿ ಕಲಿತರು.

ಸತತ ಪರಿಶ್ರಮ ಮತ್ತು ಶ್ರದ್ಧೆಯಿಂದ ಜಿಲ್ಲಾ, ವಿಭಾಗೀಯ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟಗಳಲ್ಲಿ ಪದಕಗಳನ್ನು ಗಳಿಸಿದ ನಾಗೇಶ್, ಗೋವಾದಲ್ಲಿ ನಡೆದ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಗೆದ್ದು, ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದರು. 2023ರ ಜುಲೈನಲ್ಲಿ ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕುಸ್ತಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ನಾಗೇಶ್ ಅಲ್ಲಿಯೂ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಚಿನ್ನದ ಹುಡುಗನಾಗಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ಬಿ.ಕಾಂ ಪದವೀಧರರಾಗಿರುವ ನಾಗೇಶ್ ಮುಂಜಾನೆ ನಾಲ್ಕು ಗಂಟೆಗೆ ಎದ್ದು ಎಚ್.ಡಿ.ಕೋಟೆಯ ತಾಲ್ಲೂಕು ಕ್ರೀಡಾಂಣದಲ್ಲಿ ಲಘು ವ್ಯಾಯಾಮ ಮಾಡಿ ನಂತರ ಜಿಮ್ ಟೈನರ್ ಯಶವಂತ್ ರವರ ಜಿಮ್‌ನಲ್ಲಿ ಅವರ ಮಾರ್ಗದರ್ಶನದಲ್ಲಿ ವರ್ಕ್ ಔಟ್ ಮಾಡುತ್ತಾರೆ.

ನಂತರ ಜಮೀನಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ಅವರು, ಮತ್ತೆ ಸಂಜೆ ತಮ್ಮ ಜಮೀನಲ್ಲಿಯೇ ಸಣ್ಣ ಗರಡಿಮನೆಯನ್ನು ಆರಂಭಿಸಿದ್ದು, ಅಲ್ಲಿಯೇ ಸ್ಥಳೀಯ ಯುವಕರನ್ನೂ ಸೇರಿಸಿಕೊಂಡು ಅಭ್ಯಾಸ ನಿರತರರಾಗುತ್ತಾರೆ, ಪಂದ್ಯಾವಳಿಗಳು ಇದ್ದಾಗ, ಬಿಡುವಿನ ಸಂದರ್ಭದಲ್ಲಿ ಮೈಸೂರಿಗೆ ತೆರಳಿ ಮಧುರವರ ಬಳಿ ತರಬೇತಿಯನ್ನು ಪಡೆಯುತ್ತಾರೆ.

ಆರಂಭದಲ್ಲಿ ಕುಸ್ತಿ ಎಂದ ಕೂಡಲೇ ಬೇಡ ಎಂದಿದ್ದ, ಪೋಷಕರ ನಂತರ ತಮ್ಮ ಮಗನ ನಿರಂತರ ಪರಿಶ್ರಮವನ್ನು ಮೆಚ್ಚಿ ಪ್ರೋತ್ಸಾಹಿಸಲು ಆರಂಭಿಸಿದರು, ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ಬಂದ ಬಳಿಕ ತಮ್ಮ ಆಪ್ತವಲಯದಲ್ಲಿಯೂ, ಕಾಲೇಜಿನಲ್ಲಿಯೂ ಉತ್ತಮ ಪ್ರೋತ್ಸಾಹ ಪಡೆದ ನಾಗೇಶ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯ ಹಾದಿ ಹಿಡಿದರು.

ಇಂದು ಈ ಕುಸ್ತಿಯ ಬಗ್ಗೆ ಯುವಜನರಲ್ಲಿ ಅರಿವು ಕಡಿಮೆ ಯಾಗಿದೆ. ಕುಸ್ತಿ ಎಂದರೆ ಅದೊಂದು ಹೊಡೆದಾಟ ಎಂದಷ್ಟೇ ಯುವಕರು ಭಾವಿಸಿದ್ದಾರೆ. ಆದರೆ ಅದು ಹೊಡೆದಾಟವಲ್ಲ. ಒಂದು ಕ್ರೀಡೆ. ಅದನ್ನು ಅಭ್ಯಾಸ ಮಾಡುವುದರಿಂದ ನಮ್ಮ ಪರಂಪರೆಯನ್ನು ಉಳಿಸಿದಂತಾಗುತ್ತದೆ. ದೇಹದ ಆರೋಗ್ಯವೂ ಅನುಕೂಲಕರವಾಗಿರುತ್ತದೆ. ಆದ್ದರಿಂದಲೇ ನಾನು ಕುಸ್ತಿಯ ಕಡೆ ಒಲವು ತೋರಿದೆ ಎಂಬುದು ಕುಸ್ತಿಪಟು ನಾಗೇಶ್‌ರವರ ಮನದಾಳದ ಮಾತು.
(ania64936@gmail.com)

andolanait

Recent Posts

ಉಪಸಭಾಪತಿಗೆ ಚಿತ್ರಹಿಂಸೆ ಆರೋಪ : ಐಪಿಎಸ್‌ ಅಧಿಕಾರಿ ಬಂಧನ

ಅಮರಾವತಿ : ಹಿಂದಿನ ವೈಎಸ್‍ಆರ್‍ಸಿಪಿ ಆಡಳಿತದ ಅವಧಿಯಲ್ಲಿ ಆಂಧ್ರ ವಿಧಾನಸಭೆಯ ಪ್ರಸ್ತುತ ಉಪಸಭಾಪತಿ ಕೆ. ರಘುರಾಮ ಕೃಷ್ಣ ರಾಜು ಅವರ…

8 hours ago

ಮಾರ್ಚ್‌ 11ರಿಂದ ವೈದ್ಯಾಧಿಕಾರಿಗಳ ಮುಷ್ಕರ : ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11ರಿಂದ…

8 hours ago

ಟ್ರಂಪ್‌ ಜಾಗತಿಕ ಸುಂಕ ರದ್ದು : ವರದಿ

ವಾಷಿಂಗ್ಟನ್ : ಕಾನೂನುಬಾಹಿರವಾಗಿ ಟ್ರಂಪ್ ವಿಧಿಸಿದ್ದ ಆಮದು ಸುಂಕ ಸಂಗ್ರಹವನ್ನ ಅಮೆರಿಕ ನಿಲ್ಲಿಸಲಿದೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಗಡಿ…

8 hours ago

ಸಫಾರಿ ಆದಾಯದ ಶೇ.35 ಭಾಗ ಕಾಡಿನಂಚಿನ ಜನಕಲ್ಯಾಣಕ್ಕೆ ಬಳಕೆ : ಖಂಡ್ರೆ

ಬೆಂಗಳೂರು : ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದ ಜನರ ಕಲ್ಯಾಣಕ್ಕಾಗಿ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಗ್ರಾಮಗಳಲ್ಲಿ…

8 hours ago

ವನ್ಯಜೀವಿ ಸಂಚಾರ | ಕಾಡಂಚಿನ ಗ್ರಾಮದ ಮುಖಂಡರಿಗೆ ಮಾಹಿತಿ ರವಾನಿಸಲು ಖಂಡ್ರೆ ಸೂಚನೆ

ಬೆಂಗಳೂರು : ಅರಣ್ಯದಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ಬಂದ ಕೂಡಲೇ ತೋಟದ ಬೆಳೆಗಾರರ ಸಂಘಟನೆ…

9 hours ago

ಮನರೇಗಾ ನಾಶ | ಜನರ ಅನ್ನ ಕಿತ್ತುಕೊಳ್ಳುತ್ತಿರುವ ಕೇಂದ್ರ ; ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ : ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್…

9 hours ago