ಅಂಕಣಗಳು

ವಡ್ಡರಗುಡಿಯ ಕುಸ್ತಿಪಟು ಎನ್.ನಾಗೇಶ್

• ಅನಿಲ್ ಅಂತರಸಂತೆ

ಕುಸ್ತಿ ಆಡಲು ಭಯ ಪಡುವವರೇ ಹೆಚ್ಚು. ಶತಮಾನಗಳ ಹಿಂದೆ ಗ್ರಾಮಗಳಿಗೊಂದ ರಂತಿದ್ದ ಕುಸ್ತಿ ಅಖಾಡದ ಗರಡಿಮನೆಗಳು ಇಂದು ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಅಲ್ಲೊಂದು ಇಲ್ಲೊಂದು ಮಾತ್ರ ಕಾಣಸಿಗುತ್ತವೆ. ಒಂದಿಷ್ಟು ಯುವಕರ ಹೊರತಾಗಿ ಇಂದು ಕುಸ್ತಿಯ ಅರಿವು ಯುವಜನರಿಂದ ದೂರಾಗಿದೆ. ಯುವಸಮೂಹ ಮೋಜುಮಸ್ತಿಯ ಕೂಟಗಳಲ್ಲೇ ಮುಳುಗಿದ್ದು, ದೇಶದ ಪ್ರಾಚೀನ ಕ್ರೀಡೆಯಾದ ಕುಸ್ತಿಯನ್ನು ಸಂಪೂರ್ಣ ಮರೆತ್ತಿದ್ದಾರೆ.

ಅನಾದಿ ಕಾಲದಿಂದಲೂ ಭಾರತ ತನ್ನದೇ ಆದ ಸಂಸ್ಕೃತಿ, ಪರಂಪರೆ, ಕ್ರೀಡೆಯನ್ನು ರೂಢಿಸಿಕೊಂಡು ಬಂದಿದೆ. ಇಂದಿಗೂ ಸಾಕಷ್ಟು ಹಳ್ಳಿಗಳಲ್ಲಿ ಆ ಪರಂಪರೆಗಳನ್ನು ಕಾಣಬಹುದು. ಅಂತಹ ಪರಂಪರೆಗಳಲ್ಲಿ ಕುಸ್ತಿಯೂ ಒಂದು. ರಾಜರ ಆಳ್ವಿಕೆಯ ಕಾಲದಲ್ಲಿ ಜಟ್ಟಿಗಳು ಪ್ರತಿ ಗ್ರಾಮದಲ್ಲಿಯೂ ಕಾಣಸಿಗುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಕುಸ್ತಿ ಒಂದು ಕ್ರೀಡೆಯಾಗಿ ನಡೆಯುತ್ತಿತ್ತು. ಸ್ವತಃ ರಾಜರುಗಳೂ ಜಟ್ಟಿಗಳಾಗಿದ್ದ ಉದಾಹರಣೆಗಳಿವೆ. ಅಂತಹ ದೇಸಿ ಸಂಸ್ಕೃತ ಮತ್ತು ಕ್ರೀಡೆಗಳು ಇಂದು ಯುವಜನರಿಂದ ದೂರಾಗಿ ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಕ್ರೀಡೆಗಳು ನಮ್ಮ ಬದುಕಿನ ಭಾಗವಾಗಿ ಹೋಗಿವೆ. ಇಂತಹ ದಿನಮಾನಗಳಲ್ಲಿಯೂ ದೇಸಿ ಕ್ರೀಡೆಯತ್ತ ಒಲವು ತೋರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಚ್‌.ಡಿ.ಕೋಟೆ ತಾಲ್ಲೂಕಿನ ವಡ್ಡರಗುಡಿಯ ಕುಸ್ತಿಪಟು ಎನ್.ನಾಗೇಶ್.

ಕುಸ್ತಿ ಭಾರತದ ಅತ್ಯಂತ ಪ್ರಾಚೀನ ಕ್ರೀಡ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ಇಂತಹ ಕುಸ್ತಿಯನ್ನು ಕಳೆದ 6 ವರ್ಷಗಳಿಂದ ನಿರಂತರವಾಗಿ ಅಭ್ಯಾಸ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ ಎನ್.ನಾಗೇಶ್.

ನಾಗೇಶ್ ಮೂಲತಃ ಎಚ್.ಡಿ.ಕೋಟೆ ತಾಲ್ಲೂಕಿನ ವಡ್ಡರಗುಡಿಯ ರೈತಾಪಿ ಕುಟುಂಬದ ಎ.ಪಿ.ನಿತ್ಯಾನಂದ ಮತ್ತು ಬಿ.ವಿ.ಸೌಭಾಗ್ಯ ದಂಪತಿಯ ಎರಡನೇ ಮಗ, ನಾಗೇಶ್ ತಮ್ಮ ಪಿಯುಸಿ ಶಿಕ್ಷಣವನ್ನು ಎಚ್.ಡಿ.ಕೋಟೆಯ ಆದಿಚುಂಚನಗಿರಿ ಕಾಲೇಜು ಮತ್ತು ಪದವಿ ಶಿಕ್ಷಣವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿದರು. ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ಕುಸ್ತಿ ಕ್ರೀಡೆಯ ಬಗ್ಗೆ ತಿಳಿಯುತ್ತಾ ಹೋದ ನಾಗೇಶ್ ನಂತರ
ಅದನ್ನು ಕಲಿಯುವ ಹಠ ತೊಟ್ಟರು. ಆರಂಭದಲ್ಲಿ ಮೈಸೂರಿನ ಮಧು ಎಂಬವರ ಬಳಿ ಕುಸ್ತಿ ಕಲಿತರು.

ಸತತ ಪರಿಶ್ರಮ ಮತ್ತು ಶ್ರದ್ಧೆಯಿಂದ ಜಿಲ್ಲಾ, ವಿಭಾಗೀಯ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟಗಳಲ್ಲಿ ಪದಕಗಳನ್ನು ಗಳಿಸಿದ ನಾಗೇಶ್, ಗೋವಾದಲ್ಲಿ ನಡೆದ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಗೆದ್ದು, ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದರು. 2023ರ ಜುಲೈನಲ್ಲಿ ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕುಸ್ತಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ನಾಗೇಶ್ ಅಲ್ಲಿಯೂ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಚಿನ್ನದ ಹುಡುಗನಾಗಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ಬಿ.ಕಾಂ ಪದವೀಧರರಾಗಿರುವ ನಾಗೇಶ್ ಮುಂಜಾನೆ ನಾಲ್ಕು ಗಂಟೆಗೆ ಎದ್ದು ಎಚ್.ಡಿ.ಕೋಟೆಯ ತಾಲ್ಲೂಕು ಕ್ರೀಡಾಂಣದಲ್ಲಿ ಲಘು ವ್ಯಾಯಾಮ ಮಾಡಿ ನಂತರ ಜಿಮ್ ಟೈನರ್ ಯಶವಂತ್ ರವರ ಜಿಮ್‌ನಲ್ಲಿ ಅವರ ಮಾರ್ಗದರ್ಶನದಲ್ಲಿ ವರ್ಕ್ ಔಟ್ ಮಾಡುತ್ತಾರೆ.

ನಂತರ ಜಮೀನಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ಅವರು, ಮತ್ತೆ ಸಂಜೆ ತಮ್ಮ ಜಮೀನಲ್ಲಿಯೇ ಸಣ್ಣ ಗರಡಿಮನೆಯನ್ನು ಆರಂಭಿಸಿದ್ದು, ಅಲ್ಲಿಯೇ ಸ್ಥಳೀಯ ಯುವಕರನ್ನೂ ಸೇರಿಸಿಕೊಂಡು ಅಭ್ಯಾಸ ನಿರತರರಾಗುತ್ತಾರೆ, ಪಂದ್ಯಾವಳಿಗಳು ಇದ್ದಾಗ, ಬಿಡುವಿನ ಸಂದರ್ಭದಲ್ಲಿ ಮೈಸೂರಿಗೆ ತೆರಳಿ ಮಧುರವರ ಬಳಿ ತರಬೇತಿಯನ್ನು ಪಡೆಯುತ್ತಾರೆ.

ಆರಂಭದಲ್ಲಿ ಕುಸ್ತಿ ಎಂದ ಕೂಡಲೇ ಬೇಡ ಎಂದಿದ್ದ, ಪೋಷಕರ ನಂತರ ತಮ್ಮ ಮಗನ ನಿರಂತರ ಪರಿಶ್ರಮವನ್ನು ಮೆಚ್ಚಿ ಪ್ರೋತ್ಸಾಹಿಸಲು ಆರಂಭಿಸಿದರು, ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ಬಂದ ಬಳಿಕ ತಮ್ಮ ಆಪ್ತವಲಯದಲ್ಲಿಯೂ, ಕಾಲೇಜಿನಲ್ಲಿಯೂ ಉತ್ತಮ ಪ್ರೋತ್ಸಾಹ ಪಡೆದ ನಾಗೇಶ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯ ಹಾದಿ ಹಿಡಿದರು.

ಇಂದು ಈ ಕುಸ್ತಿಯ ಬಗ್ಗೆ ಯುವಜನರಲ್ಲಿ ಅರಿವು ಕಡಿಮೆ ಯಾಗಿದೆ. ಕುಸ್ತಿ ಎಂದರೆ ಅದೊಂದು ಹೊಡೆದಾಟ ಎಂದಷ್ಟೇ ಯುವಕರು ಭಾವಿಸಿದ್ದಾರೆ. ಆದರೆ ಅದು ಹೊಡೆದಾಟವಲ್ಲ. ಒಂದು ಕ್ರೀಡೆ. ಅದನ್ನು ಅಭ್ಯಾಸ ಮಾಡುವುದರಿಂದ ನಮ್ಮ ಪರಂಪರೆಯನ್ನು ಉಳಿಸಿದಂತಾಗುತ್ತದೆ. ದೇಹದ ಆರೋಗ್ಯವೂ ಅನುಕೂಲಕರವಾಗಿರುತ್ತದೆ. ಆದ್ದರಿಂದಲೇ ನಾನು ಕುಸ್ತಿಯ ಕಡೆ ಒಲವು ತೋರಿದೆ ಎಂಬುದು ಕುಸ್ತಿಪಟು ನಾಗೇಶ್‌ರವರ ಮನದಾಳದ ಮಾತು.
(ania64936@gmail.com)

andolanait

Recent Posts

ಚಾಮರಾಜನಗರ| ಒಟ್ಟಿಗೆ ಕಾಣಿಸಿಕೊಂಡ ಐದು ಹುಲಿಗಳು: ಭಯಭೀತರಾದ ಗ್ರಾಮಸ್ಥರು

ಚಾಮರಾಜನಗರ: ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳ ಗ್ರಾಮಸ್ಥರಲ್ಲಿ ವ್ಯಾಘ್ರಗಳ ಆತಂಕ ಮನೆ ಮಾಡಿದೆ. ಒಟ್ಟಿಗೆ ಐದು ಹುಲಿಗಳು ರಸ್ತೆಯಲ್ಲಿ ಹಾದು…

1 hour ago

ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿ

ಹಾಸನ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಳ್ಳಿ ಗ್ರಾಮದ ಸುಧಾಮಣಿ ಹಾಗೂ…

2 hours ago

ಅಸ್ಸಾಂನಲ್ಲಿ ಘೋರ ದುರಂತ: ರೈಲು ಡಿಕ್ಕಿಯಾಗಿ 7 ಆನೆಗಳು ಸಾವು

ಗುವಾಹಟಿ: ರೈಲು ಡಿಕ್ಕಿ ಹೊಡೆದ ಪರಿಣಾಮ ಏಳು ಆನೆಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಒಂದು ಆನೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಸ್ಸಾಂನ…

2 hours ago

ಬುರುಡೆ ಗ್ಯಾಂಗ್‌ನಲ್ಲಿ ಬಿರುಕು: ಏನಾಗಿದೆ ಗೊತ್ತಾ?

ಮಂಗಳೂರು: ಧರ್ಮಸ್ಥಳ ಷಡ್ಯಂತ್ರ ಪ್ರಕರಣದ ಪ್ರಮುಖ ಆರೋಪಿ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಇದೀಗ ಬುರುಡೆ ಗ್ಯಾಂಗ್‌ ವಿರುದ್ಧವೇ ತಿರುಗಿ ಬಿದ್ದಿದ್ದಾನೆ.…

3 hours ago

ದ್ವೇಷ ಭಾಷಣ ಪ್ರತಿಬಂಧನ ಮಸೂದೆಗೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಪತ್ರ ಬರೆದ ಶೋಭಾ ಕರಂದ್ಲಾಜೆ

ಬೆಂಗಳೂರು: ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕರಿಸಲಾದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಗೆ ಅಂಕಿತ ಹಾಕಬಾರದು…

3 hours ago

ಓದುಗರ ಪತ್ರ: ಕಾನೂನು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತೆ?

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಡಿ.೧೮ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ…

4 hours ago