ಅಂಕಣಗಳು

ಉಪದ್ರವಕಾರಿ ಶ್ವಾನಗಳ ನಿಯಂತ್ರಣಕ್ಕೆ ಪರಿಹಾರ ಕ್ರಮ ಅಗತ್ಯ

ವಸಂತಕುಮಾರ ಮೈಸೂರಮಠ, ಸಾಮಾಜಿಕ ಕಾರ್ಯಕರ್ತರು

ಶ್ವಾನ ಮನುಷ್ಯನ ಅತ್ಯತ್ತಮ ಸ್ನೇಹಿತ ಎಂಬುದರಲ್ಲಿ ಸಂದೇಹವಿಲ್ಲ! ಆದರೆ ಅವು ಉಪದ್ರವಕಾರಿ ಯಾದಾಗ ಏನಾದರೂ ಒಂದು ಪರಿ ಹಾರ ಕಂಡುಕೊಳ್ಳುವುದು ಅತ್ಯಗತ್ಯ. ನಾನು ೮೩ ವರ್ಷ ವಯಸ್ಸಿನವನು. ನಾಯಿಗಳೊಂದಿಗೇ ಬೆಳೆದವನು. ಕೆಲವೊಮ್ಮೆ ಅವು ಅನಾರೋಗ್ಯದಿಂದ ನನ್ನನ್ನು ಕಚ್ಚಿರುವ ಘಟನೆಗಳೂ ನಡೆದಿವೆ. ಬೀದಿಗಳಲ್ಲಿ ನನ್ನ ನಾಯಿಗಳನ್ನು ರಕ್ಷಿಸಲು ಪ್ರಯತ್ನಿಸುವಾಗ ಕೆಲವೊಮ್ಮೆ ಬೀದಿ ನಾಯಿಗಳಿಂದ ಕಚ್ಚಿಸಿಕೊಂಡು ಹಲವಾರು ಬಾರಿ ರೇಬಿಸ್ ನಿರೋಧಕ ಚುಚ್ಚುಮದ್ದುಗಳನ್ನೂ ಹಾಕಿಸಿಕೊಂಡಿದ್ದೇನೆ. ನಮ್ಮ ಜಮೀನು/ಎಸ್ಟೇಟ್‌ನಲ್ಲಿ ಕಾಡು ನಾಯಿಗಳ ಜೊತೆಗೂ ನಾನು ಅನುಭವವನ್ನು ಹೊಂದಿದ್ದೇನೆ. ನ್ಯಾಯಾಂಗ ತೀರ್ಪುಗಳ ಸಾಧಕ/ಬಾಧಕಗಳ ವಿಚಾರಕ್ಕೆ ಹೋಗದೆ, ಮಾನವೀಯ ದೃಷ್ಟಿಯ ಆಧಾರದ ಮೇಲೆ ಈ ಕೆಳಗಿನ ಸಲಹೆಗಳನ್ನು ನೀಡುತ್ತಿದ್ದೇನೆ

ಎಲ್ಲೆಲ್ಲಿ ಬೀದಿ ನಾಯಿಗಳು ಅಪಾಯವಾಗಿ ಪರಿಣಮಿಸಿವೆಯೋ ಅಲ್ಲೆಲ್ಲ…:

೧ ಬೀದಿನಾಯಿಗಳನ್ನು ಹಿಡಿಯಿರಿ, ಪಶುವೈದ್ಯರಿಂದ ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಅನಾರೋಗ್ಯದಿಂದ ಬಳಲುತ್ತಿರುವ ಶ್ವಾನಗಳನ್ನು ಆರೋಗ್ಯವಂತ ನಾಯಿಗಳಿಂದ ಬೇರ್ಪಡಿಸಿ, ಆರೋಗ್ಯವಂತ ನಾಯಿಗಳ ಕಿವಿಗೆ ಒಂದು ಗುರುತಿನ ಸಂಖ್ಯೆಯೊಂದಿಗೆ ಜಿಪಿಎಸ್ ಟ್ಯಾಗ್ ಅನ್ನು ಅಳವಡಿಸಿ

೨ ಬೀದಿ ನಾಯಿಗಳನ್ನು ದತ್ತು ಪಡೆಯಲು ಶ್ವಾನಪ್ರಿಯರನ್ನು ಆಹ್ವಾನಿಸುವ ಬಗ್ಗೆ ಆಗಾಗ್ಗೆ ಪತ್ರಿಕಾ ಪ್ರಕಟಣೆಗಳನ್ನು ಹೊರಡಿಸಬಹುದು. ದತ್ತು ಪಡೆಯುವವರ ಆಧಾರ್ ಸಂಖ್ಯೆ ಇತ್ಯಾದಿಗಳನ್ನು ಪಡೆದು ನೋಂದಣಿ ಮಾಡಿಕೊಡಬಹುದು. ಆದರೆ, ನಾಯಿಯನ್ನು ಮತ್ತೆ ಬೀದಿಗಿಳಿಯಲು ಬಿಡುವುದಿಲ್ಲ ಮತ್ತು ಹಾಗೊಮ್ಮೆ ಬಿಟ್ಟು ಉಲ್ಲಂಘಿ ಸಿದರೆ ಅದಕ್ಕೆ ದತ್ತು ಪಡೆದವರೇ ಜವಾಬ್ದಾರರಾಗುತ್ತಾರೆ ಎಂದು ಮುಚ್ಚಳಿಕೆ ಬರೆಸಿಕೊಳ್ಳಬೇಕು

೩ ಶ್ವಾನಪ್ರಿಯರು ಉಳಿದ ಆರೋಗ್ಯವಂತ ನಾಯಿಗಳನ್ನು ಸೂಕ್ತ ಕಾಳಜಿ ಮತ್ತು ತಪಾಸಣೆಯೊಂದಿಗೆ ಆಶ್ರಯ ಕೇಂದ್ರಗಳಲ್ಲಿ ನೋಡಿಕೊಳ್ಳಬಹುದು

೪ ಆರೋಗ್ಯವಂತ ನಾಯಿಗಳ ಸಂಖ್ಯೆ ಹೆಚ್ಚಿದ್ದರೆ ಅಥವಾ ಅವು ನಿರ್ವಹಿಸಲು ಸಾಧ್ಯವಾಗದಷ್ಟು ಸಂಖ್ಯೆಯಲ್ಲಿದ್ದರೆ, ಅವುಗಳನ್ನು ದಟ್ಟವಾದ ಅರಣ್ಯ ಪ್ರದೇಶಗಳಿಗೆ ಕರೆದೊಯ್ದು ಬಿಡುವ ಮೂಲಕ ಹುಲಿ, ಚಿರತೆ ಮುಂತಾದ ಕಾಡು ಪ್ರಾಣಿಗಳಿಗೆ ಸುರಕ್ಷಿತ ಆಹಾರವಾಗುವಂತೆ ಮಾಡಬಹುದು. ನಾಯಿ ಮಾಂಸವನ್ನು ಕಾಡುಪ್ರಾಣಿಗಳು ಸೇವಿಸುವ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಬಹುದು. ಆದರೆ, ಆಹಾರಕ್ಕಾಗಿ ಹಳ್ಳಿಗಳ ಮೇಲೆ ದಾಳಿ ಮಾಡುವಾಗ ಕಾಡು ಪ್ರಾಣಿಗಳು ನಾಯಿಗಳನ್ನು ಕೂಡ ಹೊತ್ತೊಯ್ಯುವುದು ನಿಜವಷ್ಟೇ. ಕಾಡಿನ ಬಳಿ ಕುರಿ/ಹಸುಗಳನ್ನು ಮೇಯಿಸುವ ರೈತರ ಮೇಲೆ ಹಸಿವಿನಿಂದ ಕಂಗೆಟ್ಟ ಕಾಡು ಪ್ರಾಣಿಗಳು ದಾಳಿ ನಡೆಸುತ್ತಿವೆ; ಅವರನ್ನು ಕೊಲ್ಲುತ್ತಿವೆ, ತಿನ್ನುತ್ತಿವೆ. ಅವು ಎಷ್ಟಾದರೂ ಮಾಂಸಾಹಾರ ಪ್ರಾಣಿಗಳು, ಎಷ್ಟೇ ಹಸಿವಾದರೂ ಅವು ಹುಲ್ಲು ತಿನ್ನುವುದುಂಟೇ? ಪ್ರಾಣಿಗಳ ಜೀವಕ್ಕಿಂತ ಮನುಷ್ಯರ ಜೀವ ಹೆಚ್ಚು ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮೇಲಿನ ಸಲಹೆಗಳನ್ನು ನೀಡಲಾಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯವು ಒಳ್ಳೆಯದಲ್ಲ ಸರಿ. ಆದರೆ ಭಾರತ ಗೋಮಾಂಸದ ಅಗ್ರ ರಫ್ತುದಾರ ದೇಶ ಗಳಲ್ಲಿ ಒಂದೆಂಬ ಅಂಶವೂ ಇಲ್ಲಿ ಗಮನಾರ್ಹವಾಗಿದೆ.

ಆಂದೋಲನ ಡೆಸ್ಕ್

Recent Posts

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

22 mins ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

27 mins ago

ಓದುಗರ ಪತ್ರ: ಇ-ಕೊಲಿ ಬ್ಯಾಕ್ಟೀರಿಯಾ ಪತ್ತೆ: ಮನಸ್ಸುಗಳಿಗಿಲ್ಲ ‘ಕೂಲ್‌ಕೂಲ್’

ದೇಶದ ಬಹುತೇಕ ರೈಲು ನಿಲ್ದಾಣದ ಫ್ಲಾಟ್‌ ಫಾರ್ಮ್‌ಗಳಲ್ಲಿ  ಸಾರ್ವಜನಿಕರು ಕುಡಿಯುವ ವಾಟರ್ ಕೂಲರ್‌ಗಳಲ್ಲಿ, ಇ-ಕೊಲಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ಕಂಟ್ರೋಲರ್…

4 hours ago

ಓದುಗರ ಪತ್ರ: ಕೆಎಸ್‌ಪಿಸಿಬಿಯನ್ನು ರಾಜಕೀಯ ಮುಕ್ತಗೊಳಿಸಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉನ್ನತ ಹುದ್ದೆಗಳಿಗೆ ತಜ್ಞರನ್ನು ಬಿಟ್ಟು ರಾಜಕೀಯ ವ್ಯಕ್ತಿಗಳನ್ನು ನೇಮಿಸುತ್ತಿರುವುದು ರಾಜ್ಯದ ಪರಿಸರ ಆಡಳಿತಕ್ಕೆ…

4 hours ago

ಓದುಗರ ಪತ್ರ: ಪರಸ್ಪರ ಗೌರವಕ್ಕೆ ಮತ್ತೊಮ್ಮೆ ಕನ್ನಡಿ

ದೇಶದ ೮೦ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಕ್ಷಣಗಳಲ್ಲಿ, ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನ ‘ಬುರ್ಜ್ ಖಲೀಫಾ’ದಲ್ಲಿ ಭಾರತದ ತ್ರಿವರ್ಣ…

4 hours ago

ನಡೆಯದ ಸಂಸತ್ ಕಲಾಪ; ಕುಗ್ಗಿದ ಮೋದಿ-ಶಾ ವರ್ಚಸ್ಸು

ದೆಹಲಿ ಕಣ್ಣೋಟ ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ಸಂಸತ್ ಎಂದರೆ ಪ್ರಜಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಿಕೊಂಡು ದೇಶದ ಸಮಸ್ಯೆಗಳು ಮತ್ತು…

4 hours ago