ಅಂಕಣಗಳು

ರಂಜನಿ ರಾಘವನ್ ರಂಗನಟಿ, ಸಿನೆಮಾ ತಾರೆ, ಕವಯಿತ್ರಿ

• ಪ್ರಶಾಂತ್ ಎಸ್.

ರಂಗಭೂಮಿ ಕಲಾವಿದೆಯಾಗಿ ‘ಪುಟ್ಟಗೌರಿ ಮದುವೆ’ ಎಂಬ ಕಿರುತೆರೆ ಧಾರಾವಾಹಿಯ ಮೂಲ ಗೌರಿಯಾಗಿ ಕರುನಾಡಿನ ಮನೆ ಮಾತಾಗಿದ್ದ ರಂಜನಿ ರಾಘವನ್ ತಮ್ಮ ನಟನೆಯ ಮೂಲಕವೇ ಜನಪ್ರಿಯತೆ ಗಿಟ್ಟಿಸಿಕೊಂಡ ಬೆಡಗಿ. ಇತ್ತೀಚೆಗೆ ತೆರೆಕಂಡ ‘ಕನ್ನಡತಿ’ ಧಾರಾವಾಹಿಯ ಭುವಿ ಅಲಿಯಾಸ್ ಸೌಪರ್ಣಿಕಾ ಪಾತ್ರದಲ್ಲಿ ರಂಜನಿ ರಾಘವನ್ ಮಿಂಚಿದ್ದಾರೆ.

ಧಾರಾವಾಹಿ ಮಾತ್ರವಲ್ಲದೆ ಸಿನಿಮಾಗಳಲ್ಲಿಯೂ ನಟಿಸಬೇಕು ಎಂಬುದು ರಂಜನಿ ರಾಘವನ್‌ ರವರ ಮನದ ಆಶಯ. ಅದರಂತೆ ಈಗ ಅವರ ನಟನಾ ಪ್ರತಿಭೆಗೆ ಪ್ರತಿಫಲವೆಂಬಂತೆ ಇದೀಗ ಅವರ ಅಭಿನಯದ ಮೂರು ಸಿನಿಮಾಗಳು ಸೆಟ್ಟೇರಲು ಸಿದ್ದವಾಗುತ್ತಿವೆ. ‘ಸತ್ಯಂ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ಅವರು ತಮ್ಮ ಅನುಭವದ ಬಗ್ಗೆ ‘ಆಂದೋಲನ’ ಪತ್ರಿಕೆಯೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.

ಸಂತೋಷ್ ಬಾಲರಾಜ್ ನಾಯಕನಾಗಿ ಅಭಿನಯಿಸುತ್ತಿರುವ ‘ಸತ್ಯಂ’ ಒಂದು ಫ್ಯಾಮಿಲಿ ಎಂಟರ್ ಟೇನರ್ ಹಾಗೂ ಮಾಸ್ ಮತ್ತು ಕ್ಲಾಸ್ ಸಿನಿಮಾ ಆಗಿ ಮೂಡಿ ಬರುತ್ತಿದೆ. ಈ ಸಿನಿಮಾದಲ್ಲಿ ಗೀತಾ ಎಂಬ ಮಲೆನಾಡಿನ ಹುಡುಗಿಯ ಪಾತ್ರದಲ್ಲಿ ರಂಜನಿ ರಾಘವನ್ ನಟಿಸುತ್ತಿದ್ದಾರೆ. ಬಹಳ ಆಸಕ್ತಿದಾಯಕ ಕಥೆ ಹೊಂದಿರುವ ಈ ಸಿನಿಮಾ ಕುಟುಂಬ ಸಮೇತರಾಗಿ ನೋಡುವ ಹಾಗೆ ಮೂಡಿಬಂದಿದ್ದು, ಇದರ ಹಾಡುಗಳೂ ಸುಮಧುರವಾಗಿ ಮೂಡಿಬಂದಿವೆ ಎನ್ನುತ್ತಾರೆ ರಂಜನಿ ರಾಘವನ್‌.

ನನಗೆ ಕಥೆಯೇ ಮುಖ್ಯ: ಜನ ನನ್ನನ್ನು ತಮ್ಮ ಮನೆ ಮಗಳಾಗಿ ನೋಡುತ್ತಿದ್ದಾರೆ. ಹಾಗಾಗಿ ನನ್ನ ಪಾತ್ರಗಳ ಆಯ್ಕೆ ಮುಖ್ಯವಾಗಿರುತ್ತದೆ. ನಾನು ಕಥೆಗೆ ಪ್ರಾಮುಖ್ಯತೆ ಕೊಡುತ್ತೇನೆ. ನನ್ನ ಪಾತ್ರ ಮಲಯಾಳಂನಲ್ಲಿ ಸಾಯಿ ಪಲ್ಲವಿ ಒಪ್ಪಿಕೊಳ್ಳುವ ಸಿನಿಮಾದ ರೀತಿ ಇರುತ್ತದೆ. ಈಗ ಒಪ್ಪಿಕೊಂಡಿರುವ ಸಿನಿಮಾಗಳಲ್ಲಿನ ನನ್ನ ಪಾತ್ರಗಳೂ ಹಾಗೆಯೇ ಇವೆ. ಪಕ್ಕದ ಮನೆಯ ಹುಡುಗಿ ಎನ್ನುವ ಭಾವನೆ ಮೂಡಿಸುವ ಆಪ್ತವಾಗುವಂಥ ಪಾತ್ರಗಳು ನನ್ನ ಹೆಚ್ಚಿನ ಆಯ್ಕೆಯಾಗಿರುತ್ತವೆ.

ಸಿನಿಮಾದತ್ತ ಗಮನ: ಕನ್ನಡತಿ ಧಾರಾವಾಹಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ರಂಜನಿ ಅವರು ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದವರು. ಆದರೆ ಸಿನಿಮಾ ಬಗ್ಗೆ ಒಂದಷ್ಟು ಕನಸುಗಳನ್ನು ಹೊಂದಿರುವ ಅವರು ಸಿನಿಮಾಗಳಲ್ಲಿಯೂ ಸಾಕಷ್ಟು ಉತ್ತಮ ಪಾತ್ರಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ.

‘ಸತ್ಯಂ’ ಸಿನಿಮಾ ಒಂದು ಫ್ಯಾಮಿಲಿ ಎಂಟರ್‌ಟೇನರ್ ಸಿನಿಮಾವಾಗಿದ್ದು, ಇದರಲ್ಲಿ ಮಾಸ್ ಮತ್ತು ಕ್ಲಾಸ್ ಎಲ್ಲವೂ ಇದೆ. ಗೀತಾ ಎಂಬ ಮಲೆನಾಡಿನ ಹುಡುಗಿಯ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಈ ಸಿನಿಮಾದ ಗೀತಾ ಎನ್ನುವ ಪಾತ್ರ ನನಗೆ ಬಹಳ ಖುಷಿ ಕೊಟ್ಟಿದೆ. ಬಹಳ ಆಸಕ್ತಿದಾಯಕ ಕಥೆ ಹೊಂದಿರುವ ಈ ಸಿನಿಮಾ ಸುಂದರವಾಗಿ ಮೂಡಿಬಂದಿದೆ. ಅಲ್ಲದೆ ಇದರ ಹಾಡುಗಳು ಸಹ ಬಹಳ ಚೆನ್ನಾಗಿವೆ
-ರಂಜನಿ ರಾಘವನ್
Prashanthsmysore5@gmail.com

andolanait

Recent Posts

ಓದುಗರ ಪತ್ರ: ಪ್ರಕೃತಿ ಪ್ರೀತಿ ಅತಿಮುಖ್ಯ

ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…

6 hours ago

ಓದುಗರ ಪತ್ರ: ಪ್ಲಾಸ್ಟಿಕ್ ನೋಟುಗಳ ಬಿಡುಗಡೆ ನಿರ್ಧಾರ ದೂರದೃಷ್ಟಿಯ ಹೆಜ್ಜೆ

ಆರ್‌ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…

6 hours ago

ಓದುಗರ ಪತ್ರ: ಸಮಾನತೆ ಮಾತನಾಡುವವರ ನಡವಳಿಕೆ ಇದೇನಾ?

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯ. ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ಹೆಸರಿನಲ್ಲಿ…

7 hours ago

ಚಲನಚಿತ್ರ: ಪ್ರಮಾಣೀಕರಣ ಮಂಡಳಿಯದೇ ಅಂತಿಮ ತೀರ್ಪು

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಇಂದು ಬಿಡುಗಡೆಯಾಗುತ್ತಿರುವ ‘ ಬಾಸ್’ಎಂದೋ ತೆರೆಗೆ ಬರಬೇಕಾಗಿತ್ತು. ಆದರೆ ಚಿತ್ರದ ಹೆಸರು,…

7 hours ago

ಕೊಡಗು ಜಿಲ್ಲೆಯಲ್ಲಿ ಶೇ.37ರಷ್ಟು ಮಳೆ ಕೊರತೆ

ನವೀನ್ ಡಿಸೋಜ ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆ; ವಾಡಿಕೆ ಮಳೆ ಕೊರತೆ ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.೪೩…

7 hours ago

ಕಬಿನಿ ಜಲಾಶಯದಿಂದ ಹರಿಸುತ್ತಿದ್ದ ನೀರು ಸ್ಥಗಿತ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಬಂದ್…

7 hours ago