ಮಳೆ ಹನಿಗಳ ನಡುವೆ ಸೌಂದರ್ಯ ಇಮ್ಮಡಿಗೊಳಿಸುವ ಮಾನ್ಸೂನ್ ಔಟ್ಫಿಟ್ಸ್ !

– ಚೈತ್ರಾ ಎನ್ ಭವಾನಿ, ಲೈಫ್ ಸ್ಟೈಲ್ ಜರ್ನಲಿಸ್ಟ್

ಮಾನ್ಸೂನ್ ಬಂತಂದ್ರೆ ಎಲ್ಲೆಲ್ಲೂ ಹಸಿ ಹಸಿಯಾದ ವಾತಾವರಣ. ಮಳೆಯ ಈ ಸೌಂದರ್ಯದೊಂದಿಗೆ ನಾವು ಧರಿಸುವ ಉಡುಗೆಯೂ ಹೊಂದಿಕೊಂಡರೇ ನಮ್ಮ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರುಗು ಬರುವುದರಲ್ಲಿ ಅನುಮಾನವೇ ಇಲ್ಲ. ಹಾಗಾದ್ರೆ ಮಳೆಗಾಲದಲ್ಲಿ ಯಾವೆಲ್ಲಾ ಔಟ್ಫಿಟ್ಗಳು ಸೌಂದರ್ಯ ಇಮ್ಮಡಿಗೊಳಿಸುತ್ತವೆ? ಈ ಎಲ್ಲದರ ಬಗ್ಗೆಯೂ ಒಂದಷ್ಟು ಮಾಹಿತಿ ಇಲ್ಲಿದೆ.

ಶಾರ್ಟ್ ಟಾಪ್ಸ್ ಮತ್ತು ಆ್ಯಂಕಲ್ ಲೆಂತ್ ಲೆಗ್ಗಿನ್ಸ್: ನೀವು ಟ್ರೆಡಿಷನಲ್ ಉಡುಗೆ ಇಷ್ಟಪಡುವವರಾಗಿದ್ದರೆ ಶಾರ್ಟ್ ಟಾಪ್ ಅಥವಾ ಕುರ್ತಿ ಧರಿಸಬಹುದು. ಇದಕ್ಕೆ ಆ?ಯಂಕಲ್ ಲೆಂತ್ ಲೆಗ್ಗಿನ್ಸ್ ಹೊಂದುತ್ತದೆ. ಆ್ಯಂಕಲ್ ಲೆಂತ್ ಲೆಗ್ಗಿನ್ಸ್ ಮಳೆ ನೀರಿನಿಂದ ರಸ್ತೆಯ ಮೇಲೆ ಹರಿಯುವ ಧೂಳು ಮಿಶ್ರಿತ ನೀರಿನಿಂದ ಬಟ್ಟೆ ಹಾಳಾಗಂದಂತೆ ಕಾಪಾಡುತ್ತದೆ.

ನೀ ಲೆಂತ್ ಸ್ಕರ್ಟ್ : ಪೆನ್ಸಿಲ್ ಕಟ್ ಅಥವಾ ಎ ಕಟ್ ನಂತಹ ಸ್ಕರ್ಟ್ ಮಳೆಗಾಲಕ್ಕೆ ಹೊಂದುತ್ತದೆ. ಇದಕ್ಕೆ ದೊಡ್ಡ ಸಾಕ್ಸ್ ಮತ್ತು ವಾಟರ್ ಪ್ರೂಫ್ ಶೂ ಬಳಸುವುದು ಸೂಕ್ತ. ಇದರಿಂದ ಮಳೆಗಾಲದಲ್ಲಿ ಪಾದಗಳ ರಕ್ಷಣೆಯಾಗುತ್ತದೆ.

ಬೇಸಿಕ್ ಜಂಪ್ ಸೂಟ್ : ಮಳೆಗಾಲದಲ್ಲಿ ಬೇಸಿಕ್ ಶಾರ್ಟ್ ಜಂಪ್ ಸೂಟ್ಗಳು ನಿಮ್ಮ ಅಂದವನ್ನು ಹೆಚ್ಚಿಸುತ್ತವೆ. ಮಳೆಗಾಲದ ಬಣ್ಣಗಳಾದ ನೀಲಿ, ಕೆಂಪು, ಹಳದಿ, ಬಿಳಿ ಬಣ್ಣದ ವಸ್ತ್ರಗಳು ಹೆಚ್ಚು ಆಕರ್ಷಕವಾಗಿ ಕಾಣುವುದಲ್ಲದೇ ನಿಮ್ಮ ಸೌಂದರ್ಯವನ್ನು ಇಮ್ಮಡಿ ಗೊಳಿಸುತ್ತದೆ.

ಪೋಲ್ಕಿ ಡಾಟ್ ಟಾಪ್ಸ್ ಅಥವಾ ಸ್ಯಾರಿ : ಪೋಲ್ಕಿ ಡಾಟ್ ಸೀರೆ, ಟಾಪ್ಸ್ ಮೋಡ ಮುಚ್ಚಿದ ವಾತಾವರಣಕ್ಕೆ ವಿಶೇಷ ಮೆರುಗು ನೀಡುತ್ತದೆ, ಅಲ್ಲದೇ ನಿಮ್ಮನ್ನು ಹೈಲೈಟ್ ಮಾಡುತ್ತದೆ.

ವಾಟರ್ ಪ್ರೂಫ್ ಶೂ ಮತ್ತು ಲಾಂಗ್ ಸಾಕ್ಸ್ : ಮಳೆಗಾಲದಲ್ಲಿ ವಾಟರ್ ಪ್ರೂಫ್ ಶೂ ಇರಲೇಬೇಕು. ಅಲ್ಲದೇ ಮಂಡಿಯವರೆಗೂ ಬರುವಂತಹ ಸಾಕ್ಸ್ಗಳನ್ನು ಧರಿಸಿದ್ರೆ ಕಾಲುಗಳ ರಕ್ಷಣೆಯಾಗುತ್ತದೆ. ಜೊತೆಗೆ ಹ್ಯಾಂಡ್ ಗ್ಲೌಸ್ ಮರೆಯಬೇಡಿ. ಜಾಕೆಟ್ಸ್ : ಟೀ ಶರ್ಟ್, ಜೀನ್ಸ್ ಏನೇ ಧರಿಸಿದ್ರೂ ವಾಟರ್ ಪ್ರೂಫ್ ಜಾಕೆಟ್ ಧರಿಸುವುದನ್ನು ಮರೆಯಬೇಡಿ. ಇದು ನಿಮ್ಮ ಲುಕ್ ಅನ್ನು ಬದಲಿಸುವುದರ ಜೊತೆಗೆ ಮಳೆಯಿಂದ ರಕ್ಷಣೆ ನೀಡುತ್ತದೆ.

andolana

Recent Posts

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

11 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

11 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

11 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

11 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

11 hours ago

ಪಿರಿಯಾಪಟ್ಟಣ: ಗರಿಗೆದರಿದ ತಂಬಾಕು ಕೃಷಿ ಚಟುವಟಿಕೆ

ನವೀನ್‌ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…

11 hours ago