• ಅನಿಲ್ ಅಂತರಸಂತೆ
ದಶಕಗಳ ಹಿಂದೆ ದೇಶದ ಶೇ.50ಕ್ಕಿಂತಲೂ ಅಧಿಕ ಜನರ ಮುಖ್ಯ ಕಸುಬಾಗಿದ್ದ ಕೃಷಿ ಕ್ಷೇತ್ರ ಇತ್ತೀಚೆಗೆ ಹಂತ ಹಂತವಾಗಿ ಇಳಿಮುಖವಾಗುತ್ತಿದೆ. ಕೃಷಿಯಲ್ಲಿ ಲಾಭವಿಲ್ಲ, ಬೆಳಗೆ ಬೆಂಬಲ ಬೆಲೆ ಇಲ್ಲ, ಕೃಷಿಯನ್ನು ನಂಬಿ ಗುಣಮಟ್ಟದ ಜೀವನ ಸಾಗಿಸಲು ಸಾಧ್ಯವಿಲ್ಲ ಎಂಬೆಲ್ಲ ಭಾವನೆ ಗಳಿಂದ ಸಾಕಷ್ಟು ಯುವಕರು ಕೃಷಿಯನ್ನು ತ್ಯಜಿಸಿ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬರು ತಮ್ಮ ವೃತ್ತಿ ಬದುಕನ್ನೇ ತ್ಯಜಿಸಿ ತಾವೊಬ್ಬ ಕೃಷಿಕನಾಗಬೇಕು ಎಂಬ ಮಹದಾಸೆಯಿಂದ ಕೃಷಿ ಕ್ಷೇತ್ರಕ್ಕೆ ತೆರಳಿ, ಯುವಕರಿಗೆ ಮಾದರಿಯಾಗಿದ್ದಾರೆ. ಬಿಎಸ್ಎನ್ಎಲ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ, ಎಚ್.ಡಿ.ಕೋಟೆ ತಾಲ್ಲೂಕಿನ ನೂರಲಕುಪ್ಪೆ ‘ಎ’ ಗ್ರಾಮದ ಎನ್.ಎನ್. ಮಹೇಶ್ ತಮ್ಮ ವೃತ್ತಿಯಿಂದ ವೈಯಕ್ತಿಕ ನಿವೃತ್ತಿ ಪಡೆದು ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮಹೇಶ್ ತಮ್ಮ 10 ಎಕರೆ ಜಮೀನಿನಲ್ಲಿ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದು, ಕೃಷಿಯಲ್ಲಿ ಶ್ರಮವಹಿಸಿ, ಆಸಕ್ತಿಯಿಂದ ದುಡಿದರೆ ಅಲ್ಲಿಯೂ ಲಾಭವಿದೆ, ಉತ್ತಮ ಆದಾಯ ಗಳಿಸಿ ಆರ್ಥಿಕವಾಗಿ ಮುಂದೆ ಬರಬಹುದು ಎಂಬುದನ್ನು ಸಾಧಿಸಿ ಉಳಿದವರಿಗೆ ಮಾದರಿಯಾಗಿದ್ದಾರೆ. ಜಮೀನಿಗೆ ಯಾವುದೇ ರಾಸಾಯನಿಕಗಳನ್ನು ಬಳಸದೇ ಸಾವಯವ ಕೃಷಿ ಮಾಡುತ್ತಿರುವ ಮಹೇಶ್, ‘ಸುಭಾಷ್ ಪಾಳೇಕರ್ ನ್ಯಾಚುರಲ್ ಫಾಮಿಂಗ್’ ವಿಧಾನವನ್ನು ಅಳವಡಿಸಿಕೊಂಡಿ ದ್ದಾರೆ. ಈ ಕೃಷಿ ಪದ್ಧತಿಯ ಮೂಲಕ ‘ಫೈವ್ (5) ಲೇಯರ್ ಫಾರ್ಮಿಂಗ್’ ಪದ್ಧತಿಯನ್ನು ಅಳವಡಿಸಿಕೊಂಡು ತೆಂಗು, ಅಡಕೆ, ಬಾಳೆ, ಶುಂಠಿ ಸೇರಿದಂತೆ ಇತರೆ ತರಕಾರಿಗಳು, ಮೆಣಸು, ಗೆಡ್ಡೆಗೆಣಸುಗಳನ್ನು ಬೆಳೆಯುತ್ತಿದ್ದಾರೆ. ಬಿಎಸ್ಎನ್ಎಲ್ ಸಂಸ್ಥೆಯಲ್ಲಿನ ಉತ್ತಮ ಉದ್ಯೋಗದಲ್ಲಿದ್ದ ಇವರು ಅದನ್ನು ತ್ಯಜಿಸಿ ಕೃಷಿಯತ್ತ ವಾಲಿದ್ದೇ ಒಂದು ವಿಶೇಷ. ವೃತ್ತಿಯಿಂದ ಅಷ್ಟಾಗಿ ಆರ್ಥಿಕ ಸ್ಥಿತಿ ಸುಧಾರಿಸದ ಪರಿಣಾಮ ಕೆಲಸಕ್ಕೆ ವೈಯಕ್ತಿಕ ನಿವೃತ್ತಿ ಪಡೆದು ತಮ್ಮ ತಂದೆಯಿಂದ ಬಳುವಳಿಯಾಗಿ ಬಂದ ಭೂಮಿಯಲ್ಲಿ ದುಡಿಯಲು ಆರಂಭಿಸಿದರು.
ತಾವು ಕೃಷಿ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಕೇವಲ ಆರ್ಥಿಕ ಸ್ಥಿತಿ ಮಾತ್ರವಲ್ಲದೆ, ಸಾವಯವ ಕೃಷಿಯ ಬಗ್ಗೆ ಅವರಲ್ಲಿದ್ದ ಒಲವೂ ಅಧ್ಯಯನದ ಕ್ರಿಯಾಶೀಲತೆ, ಹತ್ತಾರು ಕಡೆ ಸುತ್ತಿ ಸಾವಯವ ಕೃಷಿಯ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುವಂತೆ ಮಾಡಿತು. ಅಲ್ಲದೆ, ಕೃಷಿಯಿಂದ ದೂರಾಗುತ್ತಿರುವ ಯುವ ಸಮೂಹವನ್ನು ಮತ್ತೆ ಕೃಷಿಯತ್ತ ಸೆಳೆಯಬೇಕು, ಅವರಿಗೆ ಇದರಲ್ಲಿಯೂ ಉತ್ತಮ ಆದಾಯವಿದೆ ಎಂಬುದನ್ನು ತೋರಿಸಿಕೊಡಬೇಕು, ಕೃಷಿಕರಾದ ತಾವು ಪ್ರಕೃತಿಯೊಂದಿಗೆ ನೇರ ಸಂಪರ್ಕದಲ್ಲಿರ ಬಹುದು ಎಂಬೆಲ್ಲ ಕಾರಣಗಳ ಜತೆಗೆ ತಮ್ಮ ಮಕ್ಕಳಿಗೂ ಕೃಷಿಯ ಮೇಲೆ ಆಸಕ್ತಿ ಹೆಚ್ಚಾಗಿ, ಅವರೂ ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿ ಕೊಳ್ಳಲು ಅನುಕೂಲವಾಗಲಿ ಎಂಬ ಕಾರಣ ಕ್ಕಾಗಿ ಮಹೇಶ್ ಕೃಷಿ ಕ್ಷೇತ್ರಕ್ಕೆ ಮರಳಿದ್ದಾರೆ.
2 ವರ್ಷಗಳಿಂದ ಕೃಷಿಕರಾಗಿ ಬೇಸಾಯದ ಬಗ್ಗೆ ಹೆಚ್ಚು ಒಲವು ತೋರಿರುವ ಮಹೇಶ್, ಅಡಕೆ ಮತ್ತು ತೆಂಗು ಉತ್ತಮ ಫಲಸು ನೀಡಲು ಆರಂಭಿಸಿದರೆ ವಾರ್ಷಿಕ 50 ಲಕ್ಷ ರೂ.ಗಳ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದು, ಮಹೇಶ್, ಮಾದರಿ ಕೃಷಿಕರಾಗಿ ಹೊರಹೊಮ್ಮಿದ್ದಾರೆ.
ania64936@gmail.com
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸುತ್ತದೆ. ಈ…
ಮೈಸೂರು: ಚಾಮುಂಡಿಬೆಟ್ಟದ ಸುತ್ತಮುತ್ತ ಇದೀಗ ಬೆಟ್ಟದ ಅಸ್ತಿತ್ವಕ್ಕೆ ಗಂಡಾಂತರ ತರುವ ರೀತಿಯಲ್ಲಿ ಸುಮಾರು ೮ ಅಂತಸ್ತಿನ ಕಾಂಕ್ರೀಟ್ ಕಟ್ಟಡಗಳು ತಲೆ…
ಇದು ಕಳೆದ ಒಂದು ವರ್ಷದಿಂದೀಚಿನ ಬೆಳವಣಿಗೆ. ಬೇರೆ ರಾಜ್ಯಗಳಲ್ಲಿ ಇದು ನಡೆದಿತ್ತೋ ಏನೋ ಮಾಹಿತಿ ಇಲ್ಲ. ಆದರೆ ಕೇರಳದಲ್ಲಿ ಈ…
ಮೈಸೂರು: ದಸರಾ ಹಬ್ಬ ಮುಗಿದಿದೆ... ಚಿನ್ನದ ಅಂಬಾರಿ ಹೊತ್ತ ಜಂಬೂಸವಾರಿಯೂ ಸಂಪನ್ನವಾಗಿದೆ. ಆದರೆ, ನಗರದಲ್ಲಿ ಈಗಲೂ ‘ಅಂಬಾರಿ’ಯೊಂದರಲ್ಲಿ ಸಂಚರಿಸಲು ಪ್ರವಾಸಿಗರು…
ಮಂಡ್ಯ: ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರು ಹಾಗೂ ಕ್ಷೇತ್ರದ ಸಂಸದರೂ ಆಗಿರುವ ಎಚ್. ಡಿ. ಕುಮಾರಸ್ವಾಮಿ…
ಮೈಸೂರು: ದುಡಿಯಲು ಉದ್ಯೋಗ ಇಲ್ಲದೆ ನಗರ ಪ್ರದೇಶಗಳತ್ತ ಯುವ ಸಮುದಾಯ ವಲಸೆ ಹೋಗುತ್ತಿರುವುದು ಹೆಚ್ಚುತ್ತಿರುವ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ…