ಅಂಕಣಗಳು

ಇವರ ಕೈಯಲ್ಲಿ ಲಂಟಾನ ಕಡ್ಡಿಗಳು ಕಲಾಕೃತಿಗಳು

ಪ್ರಶಾಂತ್ ಎಸ್.

ಲಂಟಾನ ಕಾಡಿನಲ್ಲಿ ಬೆಳೆಯುವ ಒಂದು ಕಳೆ ಸಸ್ಯ. ಈ ಸಸ್ಯವನ್ನು ಬ್ರಿಟಿಷರು ಭಾರತಕ್ಕೆ ಪರಿಚಯಿಸಿದರು. ನಿರುಪಯುಕ್ತ ಸಸ್ಯ ಎಂದು ಬೀಸಾಡಿದ್ದ ಲಂಟಾನ ಪ್ರಸ್ತುತ ದೇಶದಲ್ಲಿ ಶೇ. ೭೫ ರಷ್ಟು ಅರಣ್ಯ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಈ ಸಸ್ಯ ಬೆಳೆದ ಜಾಗದಲ್ಲಿ ಇತರೆ ಸಸ್ಯವರ್ಗ ಗಳನ್ನು ಬೆಳೆಯಲು ಬಿಡದಿರುವ ಪರಿಣಾಮ ಪ್ರತಿವರ್ಷ ಲಂಟಾನವನ್ನು ಅರಣ್ಯ ಇಲಾಖೆಯು ಬುಡಸಮೇತ ಕಿತ್ತು ಹಾಕಲು ಶ್ರಮಿಸುತ್ತಿದೆ.

ಹೀಗೆ ಅರಣ್ಯಕ್ಕೆ, ಇತರೆ ಸಸ್ಯವರ್ಗಗಳಿಗೆ, ಪ್ರಾಣಿಗಳಿಗೆ ಬೇಡವಾದ ಲಂಟಾನವನ್ನು ಕರಕುಶಲಕರ್ಮಿಗಳು ಬಳಸಿಕೊಂಡು ಸುಂದರವಾದ ಕಲಾಕೃತಿಗಳನ್ನು ತಯಾರು ಮಾಡುತ್ತಿದ್ದು, ಈ ಕಲಾಕೃತಿಗಳು ಬಹುರೂಪಿಯ ವಸ್ತುಪ್ರದರ್ಶನದಲ್ಲಿ ಮಾರಾಟವಾಗಿದ್ದು ವಿಶೇಷ. ನಿರುಪಯುಕ್ತ ಅನಿಸಿದ್ದ ಲಂಟಾನದಿಂದ ಬೃಹದಾ ಕಾರದ ಆನೆಯ ಕಲಾಕೃತಿ, ಪೀಠೋಪಕರಣಗಳು ಹಾಗೂ ಇತರೆ ಕಲಾಕೃತಿಗಳನ್ನು ತಮ್ಮ ಕೈಚಳಕದ ಮೂಲಕ ಸುಂದರವಾಗಿ ರಚಿಸಿ, ತಮ್ಮ ಮನೆಯ ಸಮೀಪವೇ ಅಂಗಡಿಯೊಂದನ್ನು ತೆರೆದು ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ ಹಿರಿಯ ಕರಕುಶಲ ಕಲಾವಿದ ಸುರೇಶ್.

ಸುರೇಶ್ ಮೂಲತಃ ಕುಶಾಲನಗರದವರು. ಚಿಕ್ಕ ವಯಸ್ಸಿನಿಂದಲೂ ಕರಕುಶಲಕರ್ಮಿಯಾಗಿ ಕೆಲಸ ಮಾಡುತ್ತಿರುವ ಇವರು, ಲಂಟಾನ ಕಡ್ಡಿಯಿಂದ ಆನೆ ಹಾಗೂ ಇತರೆ ಕಲಾಕೃತಿಗಳನ್ನು ಸುಂದರ ವಾಗಿ ತಯಾರಿಸುತ್ತಿದ್ದು, ಇವರ ಕೈಚಳಕದಲ್ಲಿ ಮೂಡಿದ ಕಲಾಕೃತಿಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಇತ್ತೀಚೆಗೆ ನಡೆದ ಬಹುರೂಪಿಯಲ್ಲಿ ಮಳಿಗೆ ತೆರೆದು ಅಲ್ಲಿಯೂ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಉತ್ತಮವಾಗಿ ಮಾರಾಟ ಮಾಡಿದ್ದಾರೆ.

ಕುರ್ಚಿ, ಮೇಜು, ಕೀ ನೇತು ಹಾಕುವ ಬೋರ್ಡ್, ಪೀಠೋಪಕರಣಗಳನ್ನು ಸುಂದರವಾಗಿ ತಯಾರಿಸುವ ಇವರ ಕೈಚಳಕ ಬಹುರೂಪಿ ನಾಟ ಕೋತ್ಸವದಲ್ಲಿ ಆಯೋಜನೆಗೊಂಡಿದ್ದ ವಸ್ತು ಪ್ರದ ರ್ಶನದಲ್ಲಿ ಎಲ್ಲರ ಗಮನ ಸೆಳೆದಿದ್ದಂತೂ ನಿಜ.

ಅರಣ್ಯ ಇಲಾಖೆ ಹಾಗೂ ಅನೇಕ ಎನ್ ಜಿಒಗಳ ಸಹಕಾರದಿಂದ ನಾಗರಹೊಳೆ, ಬಂಡೀಪುರ ಹಾಗೂ ಬಿಆರ್‌ಟಿಯ ಕೆಲ ಗ್ರಾಮಗಳಲ್ಲಿನ ಜನರು ಸ್ವಸಹಾಯ ಸಂಘಗಳನ್ನು ಸೇರಿಕೊಂಡು ಲಂಟಾನ ಕಡ್ಡಿಗಳಿಂದ ಕಲಾಕೃತಿಗಳನ್ನು ತಯಾರಿಸುವ ತರಬೇತಿ ಪಡೆಯುತ್ತಿದ್ದಾರೆ. ಆದಿವಾಸಿ ಹಾಡಿಗಳ ಜನರು ಉದ್ಯೋಗ ಅರಸಿ ವಲಸೆ ಹೋಗುವುದನ್ನು ತಪ್ಪಿಸುವುದರ ಜತೆಗೆ ಅರಣ್ಯಕ್ಕೆ ಹಾನಿಕಾರಕವಾದ ಲಂಟಾನವನ್ನು ತೆರವುಗೊಳಿಸಲು ಒಂದು ಪರ್ಯಾಯ ಮಾರ್ಗವಾಗಲಿದೆ. ಅಲ್ಲದೆ ಮನೆಯ ಮುಂದೆಯೇ ಕೆಲಸ ದೊರೆಯುವುದರಿಂದ ಆರ್ಥಿಕವಾಗಿಯೂ ತಮ್ಮ ಕುಟುಂಬದ ಸ್ಥಿರತೆಯನ್ನು ಕಾಪಾಡಿಕೊಳ್ಳುವಂತಾಗಿದೆ. ಹೀಗಾಗಿ ಹಾಡಿಯ ಮಕ್ಕಳಿಗೆ ಎಂದಿನಂತೆ ವಿದ್ಯಾಭ್ಯಾಸ ದೊರೆಯಲು ಅನುಕೂಲವಾಗಿದೆ ಎಂಬುದು ಕುಶಲಕರ್ಮಿ ಸುರೇಶ್ ಅವರ ಅಭಿಪ್ರಾಯ.

ಲಂಟಾನ ತೆರವು ಅನಿವಾರ್ಯ: ಬಂಡೀಪುರ, ನಾಗರಹೊಳೆ ಸೇರಿದಂತೆ ಹಲವು ಅರಣ್ಯ ಪ್ರದೇಶಗಳನ್ನು ಆವರಿಸಿರುವ ಲಂಟಾನ ತೆರವಿಗೆ ಇದೊಂದು ಪರ್ಯಾಯ ಮಾರ್ಗವೆಂದರೆ ತಪ್ಪಾಗಲಾರದು. ಸ್ವದೇಶಿ ಸಸ್ಯಗಳನ್ನು ಬೆಳೆಸಲು ಲಂಟಾನಗಳ ತೆರವು ಈಗ ಅನಿವಾರ್ಯವಾಗಿದ್ದು, ಲಂಟಾನ ಕಡ್ಡಿಗಳಿಂದ ಕರಕುಶಲ ವಸ್ತುಗಳನ್ನು ತಯಾರಿಸಿ ಕರಕುಶಲಕರ್ಮಿಗಳನ್ನೂ ಆರ್ಥಿಕವಾಗಿ ಸಬಲರನ್ನಾಗಿಸಬಹುದಾಗಿದೆ.

ಆಂದೋಲನ ಡೆಸ್ಕ್

Recent Posts

ಆಂಧ್ರದಲ್ಲಿ ಮತ್ತೆ ಕೋವಿಡ್‌ ಆತಂಕ: ಇಬ್ಬರು ಬಲಿ

ಅಮರಾವತಿ: ಆಂಧ್ರಪ್ರದೇಶದಲ್ಲಿ ಮತ್ತೆ ಕೋವಿಡ್‌ ಸೋಂಕಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ವೈಎಸ್‌ಆರ್‌ ಕಡಪ ಜಿಲ್ಲೆಯಲ್ಲಿ ಇತ್ತೀಚಿನ ವಾರಗಳಲ್ಲಿ 8 ಸಕ್ರಿಯ ಕೋವಿಡ್‌…

56 mins ago

ಪಂಚಭೂತಗಳಲ್ಲಿ ಲೀನರಾದ ಗಾನಕೋಗಿಲೆ ಎಸ್.ಜಾನಕಿ

ಮೈಸೂರು: ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ಅಂತ್ಯಕ್ರಿಯೆಯು ತೆಲುಗು ಬ್ರಾಹ್ಮಣ ಕುಟುಂಬದ ಸಂಪ್ರದಾಯದಂತೆ ನೆರವೇರಿತು. ಜಾನಕಿ ಅವರ ಪುತ್ರ…

2 hours ago

ಹೇಮಾವತಿ ನದಿ ಹಿನ್ನೀರಿನಲ್ಲಿ ಕಣ್ಮರೆಯಾಗಿದ್ದ ಇಬ್ಬರ ಮೃತದೇಹ ಪತ್ತೆ

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದ ಹೇಮಾವತಿ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿ ಕಣ್ಮರೆಯಾಗಿದ್ದ ಸ್ಥಳೀಯ…

3 hours ago

ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನ: ಹಾರ್ಮುಜ್‌ ಜಲಸಂಧಿ ಮುಚ್ಚಿದ ಇರಾನ್‌

ಟೆಹರಾನ್:‌ ಹಾರ್ಮುಜ್‌ ಜಲಸಂಧಿಯನ್ನು ಮುಚ್ಚುವುದಾಗಿ ಐಆರ್‌ಜಿಸಿ ಘೋಷಣೆ ಮಾಡಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಅಮೇರಿಕಾ ತನ್ನ ಹಸ್ತಕ್ಷೇಪವನ್ನು ಕೊನೆಗೊಳಿಸುವವರೆಗೆ ಜಲಮಾರ್ಗವನ್ನು…

3 hours ago

ರಾಜ್ಯದಲ್ಲಿ ನೈರುತ್ಯ ಮುಂಗಾರು ಮತ್ತೆ ದುರ್ಬಲ: ತೀವ್ರಗೊಂಡ ಬರದ ಛಾಯೆ

ಬೆಂಗಳೂರು: ನೈಋತ್ಯ ಮುಂಗಾರು ಮತ್ತೆ ರಾಜ್ಯದಲ್ಲಿ ದುರ್ಬಲಗೊಂಡಿದ್ದು, ಮಳೆ ಕೊರತೆಯಿಂದಾಗಿ ಬರದ ಛಾಯೆ ತೀವ್ರವಾಗತೊಡಗಿದೆ. ಜುಲೈ ತಿಂಗಳ ಮೊದಲ ವಾರದಲ್ಲಿ…

3 hours ago

ಕಣಿಯನಹುಂಡಿ ತೋಟದ ಮನೆಯಲ್ಲಿ ನೆರವೇರಲಿದೆ ಎಸ್‌.ಜಾನಕಿ ಅವರ ಅಂತ್ಯಕ್ರಿಯೆ

ಮೈಸೂರು: ಹಿರಿಯ ಗಾಯಕಿ ಎಸ್. ಜಾನಕಿ ಅವರ ಅಂತ್ಯಕ್ರಿಯೆ ಇಂದು ಮೈಸೂರಿನ ಬೋಗಾದಿ ಬಳಿಯ ಕಣಿಯನಹುಂಡಿ ತೋಟದ ಮನೆಯಲ್ಲಿ ಸಕಲ…

5 hours ago