ಅಂಕಣಗಳು

ಹಿಜಾಬ್ ಬೇಕು- ಬೇಡ ಎಂಬುದು ಮುಖ್ಯವಲ್ಲ; ಹೆಣ್ಣುಮಕ್ಕಳಿಗೆ ಶಿಕ್ಷಣವಷ್ಟೇ ಮುಖ್ಯ

• ಹೆಚ್.ಎಂ.ಶ್ವೇತಾಮಣಿ, ಉಪನ್ಯಾಸಕರು

ಕರ್ನಾಟಕದಲ್ಲಿ ಹಿಜಾಬ್ ಪ್ರಕರಣ ಕೋಮು ಅಸಹನೆಯ ಮನಸ್ಥಿತಿಯಿಂದಾಗಿ ಸೃಷ್ಟಿಯಾಯಿತು. ಕೋಮು ಅಸಹನೆಗೆ ಸ್ಪಂದಿಸಿದ ಸರ್ಕಾರ ಕೂಡ ಹಿಜಾಬ್ ಅನ್ನು ನಿಷೇಧಿಸಿತು. ಇದರಿಂದಾಗಿ ಅನೇಕ ಹೆಣ್ಣುಮಕ್ಕಳು ಶೈಕ್ಷಣಿಕವಾಗಿ ವಂಚಿತರಾದರು; ಪರೀಕ್ಷೆಗಳನ್ನು ತಪ್ಪಿಸಿಕೊಂಡರು. ಇದನ್ನು ನಾವ್ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಇದನ್ನು ಹೆಣ್ಣುಮಕ್ಕಳ ಶೈಕ್ಷಣಿಕ ಹಕ್ಕಿನ ಪ್ರಶ್ನೆಯಾಗಿ ನೋಡುವ ಕಣ್ಣನ್ನು ಸಮಾಜ ಪಡೆದುಕೊಳ್ಳಲಿಲ್ಲ.

ಕಳೆದ ವರ್ಷ ಪರೀಕ್ಷೆಯ ಸಂದರ್ಭದಲ್ಲಿ ಪರೀಕ್ಷಾ ಕೊಠಡಿಗಳಿಗೆ ಹಿಜಾಬ್ ಧರಿಸಿ ಬರಬಾರದು ಎಂದು ಸರ್ಕಾರ ಆದೇಶಿಸಿತು. ಇದರಿಂದ ಎಷ್ಟೋ ಹೆಣ್ಣುಮಕ್ಕಳು ತರಗತಿ ಮತ್ತು ಪರೀಕ್ಷೆಗಳನ್ನು ತಪ್ಪಿಸಿಕೊಂಡರು. ನಮ್ಮ ಕಾಲೇಜಿನಲ್ಲಿ ಕೆಲವು ಹೆಣ್ಣುಮಕ್ಕಳು ಪ್ರತಿರೋಧ ತೋರದೆ ಹಿಜಾಬ್ ಅನ್ನು ತೆಗೆದರು. ಮತ್ತೆ ಕೆಲವರು ಬಲವಂತ ದಿಂದ ಹಿಜಾಬ್ ಕಳಚಿಟ್ಟು ಬಂದರು. ಆದರೆ ಒಬ್ಬ ವಿದ್ಯಾರ್ಥಿನಿ ಮಾತ್ರ ಹಿಜಾಬ್ ತೆಗೆಯಲು ಒಪ್ಪಲಿಲ್ಲ. ನಮಗೆ ಕಾನೂನು ಪಾಲನೆ ಮಾಡಲೇಬೇಕಾದ ಅನಿವಾರ್ಯ ತೆಯಿತ್ತು. ನಾವೆಲ್ಲರೂ ಸೇರಿ ಎಷ್ಟೇ ಮನ ವೊಲಿಸಿದರೂ ಆ ವಿದ್ಯಾರ್ಥಿನಿ ಅಳುತ್ತಾ ನಿಂತುಬಿಟ್ಟಳು.

ಕೊನೆಗೆ ಆಕೆಯ ತಂದೆಯನ್ನು ಕರೆಸಿ ಪರಿಸ್ಥಿತಿಯನ್ನು ವಿವರಿಸಿದೆವು. ಅವರು ಹೇಳಿದರು: ನಾವು ಹಿಜಾಬ್ ಧರಿಸಬೇಕೆಂಬ ಕಡ್ಡಾಯವನ್ನೇನೂ ಮಾಡಿಲ್ಲ. ಆದರೆ ಅವಳಿಗೆ ಅದು ಅಭ್ಯಾಸವಾಗಿ ಹೋಗಿದೆ. ಅದರಿಂದ ಒಂದು ಥರದ ಕಂಫ‌ ಫೀಲ್ ಮಾಡ್ತಾಳೆ ಎನ್ನುತ್ತಾ ಆಕೆಯನ್ನು ಮನವೊಲಿಸಲು ಪ್ರಯತ್ನಿಸಿದರು. ಆಕೆ ಅವರ ಮಾತಿಗೂ ಅಳುವಿನ ಮೂಲಕವೇ ಉತ್ತರಿಸಿದಳು. ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ಆಕೆ ತಯಾರಿರ ಲಿಲ್ಲ. ನಮ್ಮದು ಹುಡುಗಿಯರ ಕಾಲೇಜಾಗಿದ್ದರೂ, ಪರೀಕ್ಷೆ ಬರೆಯುವವರೆಲ್ಲ ಹೆಣ್ಣುಮಕ್ಕಳೇ ಆಗಿದ್ದರೂ, ಮಹಿಳಾ ಉಪನ್ಯಾಸಕರೇ ಮೇಲ್ವಿಚಾರಕರಾಗಿ ಬರುತ್ತಾರೆಂದರೂ ಆಕೆಯ ಮನಸ್ಸನ್ನು ಬದಲಿಸಲಾಗಲಿಲ್ಲ. “l quit’ ಎಂದು ಪರೀಕ್ಷೆ ಬರೆಯದೇ ಹೋದಳು.

ಈಗ ಮುಖ್ಯಮಂತ್ರಿಗಳು ಹಿಜಾಬ್ ನಿಷೇಧವನ್ನು ವಾಪಸ್ ಪಡೆಯುತ್ತೇವೆ ಎಂದಿದ್ದಾರೆ ಎಂಬ ಸುದ್ದಿಗಳಿಂದ ಒಬ್ಬ ಹೆಣ್ಣುಮಗಳು ನಾನು ಮುಂದಿನ ವರ್ಷದಿಂದ ಕಾಲೇಜಿಗೆ ಹೋಗಬಹುದು ಎಂದು ತನ್ನ ಸಂತಸ ಹಂಚಿಕೊಂಡಿದ್ದಾಳೆ. ಹಿಜಾಬ್ ಧಾರ್ಮಿಕವಾಗಿ ಹೇರಿರುವ ಆಚರಣೆ ಇರಬಹುದು. ಹಾಗೆ ನೋಡಿದರೆ ಹೆಣ್ಣುಮಕ್ಕಳು ಮಾತ್ರವೇ ಧರಿಸಬೇಕಾದ ಪ್ರತಿಯೊಂದೂ ಅವರ ಮೇಲಿನ ಹೇರಿಕೆಯೇ ಆಗಿದೆ. ತಾಳಿ, ಕಾಲುಂಗುರ, ಕುಂಕುಮ ಹೀಗೆ ಹೆಣ್ಣುಮಕ್ಕಳ ಮೇಲೆ ಸಂಸ್ಕೃತಿಯ ಹೆಸರಲ್ಲಿ ಹೇರಲಾಗಿರುವಂಥವೇ ಆಗಿವೆ.

ಶಾಲೆಯ ಐಕ್ಯತೆಯ ಹೆಸರನ್ನು ಮುಂದಿಟ್ಟು ಹಿಜಾಬ್ ವಿಷಯವನ್ನು ಚರ್ಚಿಸುವುದು ಕೂಡ ಹಲವು ಮಿತಿಗಳಿಂದ ಕೂಡಿರುವಂಥದ್ದು. ನಮ್ಮದು ಬಹು ಸಂಸ್ಕೃತಿಗಳ ಸಮಾಜವಾದ್ದರಿಂದ ಐಕ್ಯತೆಯ ವ್ಯಾಖ್ಯಾ ನವೇ ಬದಲಾಗಬೇಕಾಗಿದೆ. ಹಾಗೆಂದು ಹಿಜಾಬ್ ಬೇಕೇ? ಬೇಡವೇ? ಸರಿಯೇ? ತಪ್ಪೇ? ಎನ್ನುವ ಪ್ರಶ್ನೆಗಳಿಗಿಂತ ಹಿಜಾಬ್‌ಗೆ ಒಗ್ಗಿರುವ ಹೆಣ್ಣುಮಕ್ಕಳಿಗೆ ಮೊದಲು ಶಿಕ್ಷಣ ಸಿಕ್ಕು ಅವರು ಸ್ವಾತಂತ್ರ್ಯವನ್ನು ಪಡೆಯುವಂತೆ ಮಾಡು ವುದು ನಮ್ಮ ಜವಾಬ್ದಾರಿಯಾಗಿದೆ. ಹೆಣ್ಣುಮಕ್ಕಳು ಶಿಕ್ಷಣವನ್ನು ಪಡೆಯುವ ಅವಕಾಶದಿಂದ ವಂಚಿತರನ್ನಾಗಿ ಮಾಡಿ ಅವರನ್ನು ಸ್ವಾವಲಂಬಿಗಳನ್ನಾಗಿ, ಸ್ವಾಭಿಮಾನಿ ಗಳನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಮಾಜ ಮತ್ತು ಸರ್ಕಾರಗಳು ಇದನ್ನು ಸೂಕ್ಷ್ಮವಾಗಿ ಚಿಂತಿಸಬೇಕು.

andolanait

Recent Posts

ಕಟಾವಿಗೆ ಬಂದಿದ್ದ ಕಬ್ಬಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ರೈತರು ಕಂಗಾಲು

ನಂಜನಗೂಡು: ಆಳೆತ್ತರ ಬೆಳೆದು ನಿಂತಿದ್ದ ಕಬ್ಬಿನ ಬೆಳೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಐದು ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿರುವ…

10 hours ago

ಹನೂರು| ಬಿರುಗಾಳಿ ಸಹಿತ ಭಾರೀ ಮಳೆಗೆ ಬೆಳೆ ನಾಶ: ಕಂಗಾಲಾದ ರೈತರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬಿರುಗಾಳಿ ಸಹಿತ ಮಳೆಗೆ ಹಲವಾರು ರೈತರು ಬೆಳೆದಿದ್ದ 50ಕ್ಕೂ ಹೆಚ್ಚು…

10 hours ago

ಗುಂಡ್ಲುಪೇಟೆ| ಭಾರೀ ಗಾಳಿ ಮಳೆಗೆ ಬಾಳೆ ಬೆಳೆ ನಾಶ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ‌ ಬುಧವಾರ ಸುರಿದ ಬಿರುಗಾಳಿ ಮಳೆಗೆ ಬಾಲೆ ಬೆಳೆ ನಾಶವಾಗಿರುವ ಘಟನೆ…

10 hours ago

ಬೌರಿಂಗ್‌ ಆಸ್ಪತ್ರೆ ಬಳಿ ಗೋಡೆ ಕುಸಿದು 7 ಮಂದಿ ಸಾವು: ಕಾರ್ಯಪಾಲಕ ಎಂಜಿನಿಯರ್‌ ಅಮಾನತ್ತಿಗೆ ಸಿಎಂ ಆದೇಶ

ಬೆಂಗಳೂರು: ಬೌರಿಂಗ್‌ ಆಸ್ಪತ್ರೆ ಬಳಿ ಗೋಡೆ ಕುಸಿದು 7 ಮಂದಿ ಬಲಿಯಾಗಿದ್ದ ಪ್ರಕರಣದಲ್ಲಿ ಸಂಬಂಧಪಟ್ಟ ಎಂಜಿನಿಯರ್‌ ಅನ್ನು ಕೂಡಲೇ ಅಮಾನತು…

10 hours ago

ಗುಂಡ್ಲುಪೇಟೆ| ಮನೆ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿ, ಇಬ್ಬರು…

10 hours ago

ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಗೊಂದಲವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿನ ರಾಜಕೀಯ ಗೊಂದಲಗಳನ್ನು ಆದಷ್ಟು…

10 hours ago