ಕಪ್ಪೆ ಅನ್ನುವ ಉಭಯವಾಸಿ ಭೂಮಿಯಲ್ಲಿ ಯಾಕಿದೆ ಎಂದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಕಪ್ಪೆ ಅಂದರೆ ಕಪ್ಪೆ ಅಷ್ಟೇ! ಉಭಯವಾಸಿ ಎಂಬ ಉತ್ತರಕ್ಕಿಂತ ಹೆಚ್ಚಿನದ್ದನ್ನು ಹೆಚ್ಚಿನವರಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರಸ್ತುತ ಅಧ್ಯಯನಗಳ ಪ್ರಕಾರ ಕಪ್ಪೆಗಳ ಸಂಖ್ಯೆ ಮತ್ತು ಕಪ್ಪೆಗಳ ಪ್ರಭೇದಗಳು ಗಣನೀಯವಾಗಿ ಕಡಿಮೆಯಾಗುತ್ತಿದೆ.
ಕೃಷಿಗೆ ಫಲವತ್ತತೆ ಹೆಚ್ಚಿಸಲು ಬಳಸುತ್ತಿರುವ ರಸಗೊಬ್ಬರಗಳು ಮತ್ತು ಕೀಟನಾಶಕಗಳು, ನಗರ-ಪಟ್ಟಣದಲ್ಲಿ ಉತ್ಪಾದನೆಯಾಗುತ್ತಿರುವ ರಾಸಾಯನಿಕ ಅನಿಲಗಳ ಕಾರಣದಿಂದಾಗಿ ಓಜೋನ್ ಪದರದ ನಾಶ. ಪರಿಣಾಮ ಅತಿನೇರಳೆ ಕಿರಣಗಳು ಭೂಮಿಗೆ ನೇರವಾಗಿ ಬೀಳುತ್ತಿರುವುದು. ಇಷೆಲ್ಲ ಕಾರಣಗಳಿಂದಾಗಿ ಕಪ್ಪೆಗಳ ಅಂಗಾಂಗಗಳು ಅನಾರೋಗ್ಯಕ್ಕೀಡಾಗುತ್ತಾ ಕಡೆಗೆ ಕಪ್ಪೆಗಳ ಸಂತತಿಯೇ ನಾಶದ ಕಡೆಗೆ ಚಲಿಸುತ್ತಿದೆ.
ವಿನಾಶದ ಅಂಚಿನಲ್ಲರಿವ ಕಪ್ಪೆಗಳ ಸಂಬಂಧ ಕರ್ನಾಟಕ ಜೀವವೈವಿಧ್ಯ ಮಂಡಲಿ ಕಳೆದ ವರ್ಷ ಪಟ್ಟಿ ಮಾಡಿ, ಈರಿಡಿಚಿಡಿಥಿಚಿ ಡಿಣ, ಟಿಜಡಿಚಿಟಿಚಿ ಟಿಜಥಿಚಿ, ಟಿಜಡಿಚಿಟಿಚಿ ಠಿಡಿಟಿಜಡಿಚಿ ಎಂಬ ಈ ಮೂರೂ ಪ್ರಬೇಧದ ಕಪ್ಪೆಗಳು ಅಳಿವಿನಂಚಿನಲ್ಲಿವೆ ಎಂದು ಹೇಳಿತ್ತು.
ನಮ್ಮ ಪ್ರಕೃತಿಗೆ ಕಪ್ಪೆಗಳಿಂದ ಆಗುವ ಅನುಕೂಲವಾದರೂ ಏನು? ಕೂಪ ಮಂಡೂಕರಾಗಿರುವ ನಾವುಗಳು, ಬಾವಿಯಿಂದ ಆಚೆಗೆ ಬಂದು, ಅನುಕೂಲಗಳೇನು? ಪ್ರಕೃತಿ ಉಳಿಸಲು ನಾವು ಮಾಡಬೇಕಾದ ಕೆಲಸಗಳೇನು ಎಂಬುದನ್ನು ಆಲೋಚಿಸಬೇಕಿದೆ.ಭೂ ದಿಕ್ಸೂಚಿಯಾಗಿ ಕಪ್ಪೆಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ? ಎಂಬುದರ ಬಗ್ಗೆ ಮುಂದಿನ ಭಾಗದಲ್ಲಿ ಮಾತನಾಡುತ್ತೇನೆ..
‘ಕಪ್ಪೆಗಳ ಮದುವೆ’ ಎಂಬ ಸುದ್ದಿ ಪ್ರಕಟವಾದಾಗ ಕಪ್ಪೆಗಳ ನೆನಪಾಗುವುದುಂಟು. ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎಂದು ವಿಮರ್ಶಿಸುವುದನ್ನು ಬಿಟ್ಟರೆ, ನಮಗೆ ಕಪ್ಪೆಗಳ ಕುರಿತು ಏನುಗೊತ್ತಿಲ್ಲ ಮತ್ತು ಆ ಕುರಿತು ಹೆಚ್ಚಿನವರೂ ಕೂಪ ಮಂಡೂಕರೇ!
ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…
ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…
ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…
ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…
ಅಮರಾವತಿ: ಜಗತ್ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…