ಅಂಕಣಗಳು

ಪ್ರತೀ ನಾಶವೊಂದು ಪಾಠ; ಪ್ರತೀ ಪಾಠವೊಂದು ಅವಕಾಶ

ಜೂನ್ ೨೬, ೨೦೨೫ರಂದು  ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಮೀಣ್ಯಂ ಅರಣ್ಯ ವಲಯದಲ್ಲಿ ಸಂಭವಿಸಿದ ತಾಯಿ ಹುಲಿ ಮತ್ತು  ನಾಲ್ಕು ಮರಿಗಳ ಮೃತ್ಯು ಸುದ್ದಿ ರಾಜ್ಯವನ್ನೆಲ್ಲ ತಲುಪಿದ ಮೌನ ನಡುಕವಾಗಿದೆ. ಇದು ಕೇವಲ ಒಂದು ವರ್ಗದ ಜೀವಿಯ ನಾಶವಲ್ಲ – ಇದು ನಮ್ಮ ಸಂರಕ್ಷಣಾ ವ್ಯವಸ್ಥೆಯ, ಮಾನವೀಯ ನೈತಿಕತೆ ಮತ್ತು ಜವಾಬ್ದಾರಿಯ ಬಿರುಕು.

ಈ ಹುಲಿಗಳ ಸಾವಿಗೆ ವಿಷಪ್ರಾಶನ ಕಾರಣ ಎಂಬುದು ವನ್ಯಜೀವಿ ಪ್ರಿಯರನ್ನು ಬೆಚ್ಚಿಬೀಳಿಸಿದೆ. ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಬಂಧ ಈ ಮಟ್ಟದ ದ್ವೇಷಕ್ಕೆ ಇಳಿಯುವುದು   ಘಾತಕ ಪ್ರವೃತ್ತಿಯ ಸೂಚನೆ.

ಹುಲಿಯ ಕತೆ: ಅರಣ್ಯದ ಬಾಳು ಕೀಲಿ: ಹುಲಿ ಎಂದರೆ ಕೇವಲ ಅರಣ್ಯದ ಗರ್ವವಲ್ಲ. ಅದು ಒಂದು ಪರಿಸರ ವ್ಯವಸ್ಥೆಯ ಸ್ಥಿರತೆಯ ಚಿಹ್ನೆ. ಒಂದು  ತಾಯಿ ಹುಲಿ ತನ್ನ ನಾಲ್ಕು ಮರಿಹುಲಿಗಳೊಂದಿಗೆ ನಾಶವಾದದ್ದು, ನಿಸರ್ಗದಲ್ಲಿ ಮುಂದಿನ ತಲೆಮಾರಿಗೆ ಬಿದ್ದ ಮರ್ಮಾಘಾತ. ಇದು Project Tiger ನಂತಹ ಮಹತ್ವದ ಯೋಜನೆಗಳ ಮೇಲೆ ಬಿದ್ದ ಬೃಹತ್ ಕಪ್ಪುಚುಕ್ಕೆ. ನಾವು ಕೆಲ ವರ್ಷಗಳಿಂದ ಹುಲಿ ಸಂರಕ್ಷಣೆಯಲ್ಲಿ ಸಾಧಿಸಿದ ಯಶಸ್ಸನ್ನು ಒಂದೇ ದಿನದ ಅಸಹಜ (೫ ಹುಲಿಗಳ ಸಾವು) ಘಟನೆಯಿಂದ ಛಿದ್ರ ಮಾಡಿದಂತಾಗಿದೆ.

ಗಂಭೀರ ಪ್ರಶ್ನೆಗಳು: ಈ ದುರ್ಘಟನೆಯ ಹಿಂದೆ ಕೆಲವೊಂದು ಗಂಭೀರ ಪ್ರಶ್ನೆಗಳು ತಲೆಯೆತ್ತಿವೆ. ಅರಣ್ಯ ಇಲಾಖೆಗೆ ಮೊದಲು ಈ ಹುಲಿಗಳ ಚಲನೆಯ ಮಾಹಿತಿ ಏಕೆ ಸಿಕ್ಕಿರಲಿಲ್ಲ? ವಿಷ ಪ್ರಾಷನ ಇಷ್ಟೆಲ್ಲ ವಿಸ್ತಾರವಾಗಿ ಬಳಸಲಾಗುತ್ತಿರುವುದನ್ನು ಎಷ್ಟರ ಮಟ್ಟಿಗೆ ನಾವು ಗಮನದಲ್ಲಿಟ್ಟುಕೊಂಡಿದ್ದೇವೆ? ಮನುಷ್ಯರ ಜೀವನದ ಭದ್ರತೆ ಮತ್ತು ವನ್ಯಜೀವಿಗಳ ಸಂರಕ್ಷಣೆಯ ನಡುವೆ ಹೇಗೆ  ಸಮತೋಲನ ಸಾಧಿಸಬೇಕು?

ಅರಣ್ಯದ ಭದ್ರತೆ  ಕೇವಲ ಪೊಲೀಸ್ ಕೆಲಸವಲ್ಲ: ಅರಣ್ಯ ಸಂರಕ್ಷಣೆಯ ಕೆಲಸ ಕೇವಲ ಗಸ್ತ್ ಪಟ್ರೋಲ್, ಕ್ಯಾಮೆರಾ ಅಳವಡಿಸುವುದು ಅಥವಾ ಡ್ರೋನ್ ಹಾರಿಸುವುದಕ್ಕೆ ಸೀಮಿತವಾಗಬಾರದು. ಇದು ಮಾನವ ಸಮುದಾಯ, ವಿಜ್ಞಾನ, ಶಿಕ್ಷಣ ಮತ್ತು ತಂತ್ರಜ್ಞಾನ ಇವುಗಳ ಸಹಯೋಗದೊಂದಿಗೆ ಸಾಧಿತವಾಗಬೇಕು. ನಮ್ಮ  ಜಂಗಲ್ ಎಂದರೆ ಅದರೊಳಗಿನ ಜೀವಿಗಳೂ, ಗ್ರಾಮೀಣರ ಬದುಕೂ ಒಂದೇ ಸಮಾನವಾಗಿ ಬಾಳುತ್ತವೆ ಎಂಬ ಅರ್ಥವನ್ನು ಮರೆತುಬಿಟ್ಟಿದ್ದೇವೆ. ಹುಲಿಗಳನ್ನು ಉಳಿಸಿಕೊಳ್ಳುವುದೇ ಸವಾಲು: ಕೇಂದ್ರ ಮತ್ತು ರಾಜ್ಯ

ಸರ್ಕಾರಗಳು ಹುಲಿ ಸಂರಕ್ಷಣೆಗೆ ಕೋಟಿ ಕೋಟಿ ರೂ. ಹಣ ಮೀಸಲಿರಿಸಿ ಯೋಜನೆ ರೂಪಿಸಿವೆ. ಆದರೆ ಹುಲಿಗಳ ಹತ್ಯೆಯು ಕ್ರಿಯಾನ್ವಯದ ದುರ್ಬಲತೆಯನ್ನು ತೋರಿಸುತ್ತಿದೆ. ಕಾನೂನಿಗೆ  ತೀಕ್ಷ್ಣತೆ ಇದೆ. ಆದರೆ    ಜಾಗೃತಿಗೆ ಜಡತೆ ಇದೆ. ಈ ಮಧ್ಯೆ ಹುಲಿ ಹಾಗೂ ಅದರ ಗರುಡ ಹೆಜ್ಜೆಗಳು ಮನುಷ್ಯನ ತಪ್ಪು ಹೆಜ್ಜೆಯಿಂದ ನಾಶವಾಗುತ್ತಿವೆ.

ಪ್ರತೀ ನಾಶವೊಂದು ಪಾಠ: ಪ್ರತೀ ಪಾಠವೊಂದು ಅವಕಾಶ: ಹುಲಿಗಳಿಗೆ ಸುರಕ್ಷಿತ ವಾಸಸ್ಥಾನ, ಸ್ಥಳಾಂತರ ಮಾರ್ಗಗಳು (scorridors) ಮತ್ತು ಮಾದರಿ ಸಂರಕ್ಷಣಾ ಶೃಂಖಲೆಗಳು ಕಡ್ಡಾಯ.

ವಿಷ ಪ್ರಾಷನ  ವಿರೋಧಿ ಕಾನೂನು ಜಾಗೃತಿ: ಗ್ರಾಮೀಣ ಪ್ರದೇಶದಲ್ಲಿ ಮನುಷ್ಯರಿಗೆ ಅರಿವು ಮೂಡಿಸುವ ಕೆಲಸವು ಅವಶ್ಯ. ಅರಣ್ಯ ಇಲಾಖೆ ಸ್ವತಃ ಮರುಪರಿಶೀಲನೆಗೆ ಒಳಗಾಗಬೇಕು  ಮತ್ತು ಸಿಬ್ಬಂದಿ ಲಭ್ಯತೆ, ತರಬೇತಿ,  ತಂತ್ರಜ್ಞಾನ ಉಪಯೋಗ, ಸಮರ್ಥ ವರದಿ ವ್ಯವಸ್ಥೆ ಮತ್ತು ಸಾಮಾಜಿಕ ಸಹಭಾಗಿತ್ವ-ಸ್ಥಳೀಯರು ಸಂರಕ್ಷಣೆಯ ಪಾಲುದಾರರಾಗಬೇಕಾದುದು   ಅವಶ್ಯ. ನಾವಿಲ್ಲದ ಸ್ಥಳದಲ್ಲಿ  ಹುಲಿ ಬದುಕಲಾಗದು – ಹುಲಿಯಿಲ್ಲದ ಪರಿಸರದಲ್ಲಿ ನಾವು  ಬದುಕಲಾಗದು.

” ಗ್ರಾಮೀಣ ಪ್ರದೇಶದಲ್ಲಿ ಮನುಷ್ಯರಿಗೆ ಅರಿವು ಮೂಡಿಸುವ ಕೆಲಸವು ಅವಶ್ಯ. ಅರಣ್ಯ ಇಲಾಖೆ ಸ್ವತಃ ಮರುಪರಿಶೀಲನೆಗೆ ಒಳಗಾಗಬೇಕು.  ಸಿಬ್ಬಂದಿ ಲಭ್ಯತೆ, ತರಬೇತಿ, ತಂತ್ರಜ್ಞಾನ ಉಪಯೋಗ,  ಸಮರ್ಥ ವರದಿ ವ್ಯವಸ್ಥೆ ಮತ್ತು  ಸಾಮಾಜಿಕ ಸಹಭಾಗಿತ್ವ – ಸ್ಥಳೀಯರು ಸಂರಕ್ಷಣೆಯ ಪಾಲುದಾರರಾಗಬೇಕಾದುದು ಅವಶ್ಯ.”

ಶ್ರೇಯಸ್ ದೇವನೂರು

ಆಂದೋಲನ ಡೆಸ್ಕ್

Recent Posts

ಮಲೆನಾಡಿನಲ್ಲಿ ಮಳೆಯ ಅಬ್ಬರ: ಜೋಗ ಜಲಪಾತಕ್ಕೆ ಜೀವಕಳೆ

ಶಿವಮೊಗ್ಗ: ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ವಿಶ್ವವಿಖ್ಯಾತ ಜೋಗ ಜಲಪಾತ ಜೀವಕಳೆ ಪಡೆದುಕೊಂಡಿದೆ. ಕಳೆದ ನಾಲ್ಕೈದು ದಿನಗಳಿಂದ ಶಿವಮೊಗ್ಗದಲ್ಲಿ ಭಾರೀ…

15 hours ago

ಕೊಡಗು ಜಿಲ್ಲೆಯ ಮಳೆ ವಿವರ

ಕೊಡಗು: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮನೆಮಾಡಿದೆ. ಜಿಲ್ಲೆಯ ಮಳೆಯ ವಿವರ ಈ…

15 hours ago

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026: ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಮಡಿಕೇರಿ: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಗಜಪಡೆಗೆ ಆಯ್ಕೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಇದರ ಭಾಗವಾಗಿ…

16 hours ago

ವಯನಾಡಿನಲ್ಲಿ ಮೇಘಸ್ಫೋಟ: ಇಬ್ಬರು ಕಾರ್ಮಿಕರು ಜೀವಂತ ಸಮಾಧಿ: 30 ಮಂದಿ ನಾಪತ್ತೆ

ತಿರುವನಂತಪುರಂ: ವಯನಾಡಿನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಮೆಪ್ಪಾಡಿಯಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ವಯನಾಡಿನ ಸುರಂಗ ನಿರ್ಮಾಣ ಪ್ರದೇಶದ ಮೀನಾಕ್ಷಿ…

17 hours ago

ಬ್ರಿಡ್ಜ್‌ ಮ್ಯಾನ್‌ ಖ್ಯಾತಿಯ ಪದ್ಮಶ್ರೀ ಡಾ.ಗಿರೀಶ್‌ ಭಾರದ್ವಾಜ್‌ ನಿಧನ

ಮಂಗಳೂರು: ತೂಗುಸೇತುವೆಗಳ ಸರದಾರ, ಸುಳ್ಯದ ವಿಶ್ವೇಶ್ವರಯ್ಯ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಎಂಜಿನಿಯರ್‌ ಡಾ.ಗಿರೀಶ್‌ ಭಾರದ್ವಾಜ್‌ ಅವರು ಇಂದು ನಿಧನರಾಗಿದ್ದಾರೆ.…

17 hours ago

ಕೊಡಗು: ಕಾಫಿ ತೋಟದಲ್ಲಿ ಕಾಡಾನೆ ಮೃತದೇಹ ಪತ್ತೆ

ಕೊಡಗು: ಕಾಫಿ ತೋಟದಲ್ಲಿ ಕಾಡಾನೆ ಮೃತದೇಹ ಪತ್ತೆಯಾಗಿದೆ. ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪರದಂಡ…

19 hours ago