ಅಂಕಣಗಳು

ಮಹಿಳೆಯರಿಗೆ ನೇರ ನಗದು ವರ್ಗಾವಣೆ ಸಮಾನತೆಯೆಡೆಗೆ ಹೆಜ್ಜೆ

ಸಾಮಾಜಿಕ ಸುಧಾರಣೆಗಳ ಅಂಗವಾಗಿ ಆರ್ಥಿಕ-ಸಾಮಾಜಿಕ ಹಿಂದುಳಿಯುವಿಕೆಯನ್ನು ಹೋಗಲಾಡಿಸಲು ನೋಂದಾಯಿತ ಅರ್ಹರಿಗೆ ನೇರ ನಗದು ವರ್ಗಾವಣೆಗಳು ೧೯೭೦ರ ದಶಕದಿಂದಲೇ ಆರಂಭವಾದವು. ಆಗ ಪೋಷಣೆ ಮಾಡುವವರಿಲ್ಲದ ಹಿರಿಯ ನಾಗರಿಕ ನಿರ್ಗತಿಕರಿಗೆ ಓಲ್ಡ್ ಏಜ್ ಪೆನ್ಷನ್ (Old age Pension) ನಂತಹ ಪಿಂಚಣಿ ಯೋಜನೆಗಳು ಆರಂಭವಾದವು.

ಬ್ಯಾಂಕಿಂಗ್ ಸೇವೆಗಳು ಹಳ್ಳಿಗಳವರೆಗೆ ಇನ್ನೂ ಹೋಗದೇ ಇದ್ದಾಗ ಪೋಸ್ಟ್ ಆಫೀಸ್ ಮನಿ ಆರ್ಡರ್ ಮೂಲಕ ಕಳುಹಿಸಲಾಗುತ್ತಿತ್ತು. ಬ್ಯಾಂಕಿಂಗ್ ವಿಸ್ತರಣೆಯಾದ ನಂತರ ಬ್ಯಾಂಕ್ ಖಾತೆ ಹೊಂದುವಂತೆ ಮಾಡಿ ಅವುಗಳ ಮುಖಾಂತರ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಬ್ಯಾಂಕ್ ಸೇವೆಯನ್ನು ಬಳಸುವುದನ್ನು ಕಲಿಸುವ ಯೋಜನೆಯ ಭಾಗವೂ ಇದಾಗಿದೆ. ಮಹಿಳಾ ಸಬಲೀಕರಣದ ಭಾಗವಾಗಿ ಆರ್ಥಿಕ, ಸಾಮಾಜಿಕ ಹಿಂದುಳಿಯುವಿಕೆ ಅನುಭವಿಸುತ್ತಿರುವ ಅರ್ಹ ನೋಂದಾಯಿತ ಮಹಿಳೆಯರಿಗೆ ನೇರ ನಗದು ವರ್ಗಾವಣೆಗಳನ್ನು ಬಹುತೇಕ ಎಲ್ಲ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಒಂದಿಲ್ಲೊಂದು ಯೋಜನೆಯಡಿ ನೇರವಾಗಿಯೋ, ಪರೋಕ್ಷವಾಗಿಯೋ ಮಾಡುತ್ತಿವೆ.

ಅರ್ಹ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ವಿಶೇಷ ಸಹಾಯಧನ ಕೊಡುವ ಯೋಜನೆಗಳೂ ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿವೆ. ಮಹಿಳೆ ಆರ್ಥಿಕವಾಗಿ ಸಬಲಳಾದರೆ ಸಾಮಾಜಿಕ ಸಮಾನತೆಗೆ ಬಲ ತರುತ್ತದೆ ಎನ್ನುವ ತತ್ವದ ಭಾಗವೇ ಇದಾಗಿದೆ. ಅಲ್ಲದೇ ಅವರ ಆಹಾರದ ಸೇವನೆಯು ಹೆಚ್ಚುವುದಲ್ಲದೇ ಪೌಷ್ಟಿಕತೆಯೂ ಹೆಚ್ಚುತ್ತದೆ ಎಂಬ ವಿಶ್ವಾಸವೂ ಇದರಲ್ಲಿದೆ. ಆರೋಗ್ಯ ಸುಭದ್ರತೆಯ ಆಶಯವೂ ಇದರಲ್ಲಿದೆ. ಆಹಾರ ಸೇವನೆಯಲ್ಲಿ ಪುರುಷ ಮತ್ತು ಸೀಯರಲ್ಲಿ ಇರುವ ಅಸಮಾನತೆಯನ್ನು (ಸೀಯರಲ್ಲಿ ಕಡಿಮೆ ಇರುವುದನ್ನು) ಒಮ್ಮೆಲೇ ಪೂರ್ಣವಾಗಿ ಹೋಗಲಾಡಿಸ ಲಾಗದಿದ್ದರೂ ಕಡಿಮೆ ಮಾಡುತ್ತ ಹೋಗುವುದು ಸಾಧ್ಯವಾಗಬಹುದು. ಅಲ್ಲದೇ ತೀರ ಚಿಕ್ಕ ಮಕ್ಕಳ (ಕೈಗೂಸುಗಳು ಮತ್ತು ಎರಡು , ಮೂರು ವರ್ಷ ವಯಸ್ಸಿನ ಮಕ್ಕಳ) ಪೋಷಣೆಯಲ್ಲಿಯೂ ಈ ವರ್ಗಾವಣೆಗಳಿಂದ ಸುಧಾರಣೆಯಾಗುವುದೆಂದು ಆಶಿಸಲಾಗಿದೆ. ಇದು ಕೌಟುಂಬಿಕ ಹಣಕಾಸು ಸ್ಥಿತಿ ಸುಧಾರಿಸಲು ಸಹಕಾರಿಯಾಗುತ್ತದೆ.

ಇದನ್ನು ಓದಿ: ಉಂಡು ಮಲಗಿದರೂ ನಿಲ್ಲದ ಮುನಿಸು

‘ದಿ ಎಕನಾಮಿಸ್ಟ್’ ಪತ್ರಿಕೆಯ ಒಂದು ವಿಶ್ಲೇಷಣೆಯ ಪ್ರಕಾರ ಮಹಿಳೆಯರನ್ನೇ ಗುರಿಯಾಗಿಟ್ಟುಕೊಂಡು ಆರಂಭವಾದ ರಾಜ್ಯ ಸರ್ಕಾರಗಳ ನಗದು ವರ್ಗಾವಣೆ ಯೋಜನೆ ೨೦೧೩ರಲ್ಲಿ ಆರಂಭವಾದ ಗೋವಾ ಸರ್ಕಾರದ ‘ಗೃಹ ಆಧಾರ’ ಯೋಜನೆ (ಮಾಸಿಕ ೧,೫೦೦ ರೂ. ವರ್ಗಾವಣೆ) ಮಾತ್ರ ಇದ್ದದ್ದು ೨೦೨೪ರ ಹೊತ್ತಿಗೆ ದೇಶಾದ್ಯಂತ ವ್ಯಾಪಿಸಿ ಬಹುತೇಕ ಎಲ್ಲ ರಾಜ್ಯಗಳಲ್ಲಿ ಸಣ್ಣ ದೊಡ್ಡ ವರ್ಗಾವಣೆ ಯೋಜನೆಗಳೊಂದಿಗೆ ದೇಶದ ಜಿಡಿಪಿಯ ಶೇ.೦೬ರ ಮಟ್ಟಕ್ಕೆ ತಲುಪಿತ್ತು. ಪ್ರಮುಖವಾಗಿ ದೊಡ್ಡ ಮೊತ್ತದ ವರ್ಗಾವಣೆಯ ಯೋಜನೆಗಳನ್ನು ರೂಪಿಸಿರುವ ೧೬ ರಾಜ್ಯಗಳ ಯೋಜನೆಗಳ ವಿವರಗಳನ್ನು ಇಲ್ಲಿನ ಸಂಖ್ಯಾ ಪಟ್ಟಿಯಲ್ಲಿ ಕೊಡಲಾಗಿದೆ.

ಯೋಜನೆಗಳು ಸಮರ್ಪಕವಾಗಿ ಜಾರಿಯಾಗಬೇಕು ನ್ಯಾಷನಲ್ ಬ್ಯೂರೋ ಆ- ಇಕನಾಮಿಕ್ ರಿಸರ್ಚ್ ಸಂಸ್ಥೆಯೂ ಸೇರಿ ದಂತೆ ಹಲವು ಅಧ್ಯಯನಗಳು ಈ ಯೋಜನೆಗಳ ಮೌಲ್ಯಮಾಪನ ಮಾಡಿರುವ ವರದಿಗಳಿವು. ಅವುಗಳಂತೆ ನೇರ ನಗದು ವರ್ಗಾವಣೆ ಯೋಜನೆಯಿಂದ ಸಾಕಷ್ಟು ಅನುಕೂಲಗಳಾಗಿವೆ. ಮಕ್ಕಳು ಮತ್ತು ಮಹಿಳೆಯರ ಆಹಾರ ಸೇವನೆಯ ಪ್ರಮಾಣ ಜಾಸ್ತಿಯಾಗಿದ್ದು, ಪುರುಷರು, ಮಹಿಳೆಯರು ಮತ್ತು ಮಕ್ಕಳ ಪೌಷ್ಟಿಕಾಂಶ ಸೇವನೆಯ ನಡುವಿನ ಅಂತರ ಗಣನೀಯವಾಗಿ ಕಡಿಮೆಯಾಗಿದೆ ಎಂದು ವರದಿಗಳು ಹೇಳುತ್ತವೆ .

ಒಟ್ಟಾರೆ ಈ ವರ್ಗಾವಣೆಗಳಿಂದ ಹಲವು ರಾಜ್ಯಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಹಾಗೂ ಮಹಿಳೆಯರ ಸ್ವಾತಂತ್ರ್ಯ ಹೆಚ್ಚಾಗಿವೆ ಎಂದು ಅಧ್ಯಯನಗಳು ಹೇಳುತ್ತವೆ. ಈ ವರ್ಗಾವಣೆ ಯೋಜನೆಗಳು ಮುಂದುವರಿಯಬೇಕಲ್ಲದೆ ಅರ್ಹರಿಗೆ ಮತ್ತು ಅವಶ್ಯವಿರುವವರಿಗೆ ತಲುಪಬೇಕು. ಅಲ್ಲದೇ ಸಮಾಜದ ಕಟ್ಟ ಕಡೆಯ ಮಹಿಳೆಯೂ ಆರ್ಥಿಕ ಸ್ವಾತಂತ್ರ್ಯ ಮತ್ತು ಸಬಲತೆ ಹೊಂದಿ ಸಮಾನತೆಯನ್ನು ಅನುಭವಿಸುವವರೆಗೆ ಈ ನೇರ ವರ್ಗಾವಣೆಗಳು ಅವಶ್ಯ. ಇವುಗಳನ್ನು ಸದುಪಯೋಗಪಡಿಸಿಕೊಂಡು ಸಬಲರಾಗಲು ಕುಟುಂಬದ ಎಲ್ಲ ಸದಸ್ಯರು ಮಹಿಳೆಯರಿಗೆ ಸಹಕಾರ ಮತ್ತು ಬೆಂಬಲ ಒದಗಿಸಬೇಕು. ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯ ಸಮಪಾಲು ಎಂಬುದನ್ನು ಅರಿಯಬೇಕು.

” ಒಟ್ಟಾರೆ ಈ ವರ್ಗಾವಣೆಗಳಿಂದ ಹಲವು ರಾಜ್ಯಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಹಾಗೂ ಮಹಿಳೆಯರ ಸ್ವಾತಂತ್ರ್ಯ ಹೆಚ್ಚಾಗಿವೆ ಎಂದು ಅಧ್ಯಯನಗಳು ಹೇಳುತ್ತವೆ. ಈ ವರ್ಗಾವಣೆ ಯೋಜನೆಗಳು ಮುಂದುವರಿಯಬೇಕಲ್ಲದೆ ಅರ್ಹರಿಗೆ ಮತ್ತು ಅವಶ್ಯವಿರುವವರಿಗೆ ತಲುಪಬೇಕು.”

-ಪ್ರೊ.ಆರ್.ಎಂ.ಚಿಂತಾಮಣಿ

ಆಂದೋಲನ ಡೆಸ್ಕ್

Recent Posts

ಸಿಎಂ ಬದಲಾವಣೆ ಚರ್ಚೆಗೆ ಸಚಿವ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯೆ

ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…

11 mins ago

ಮಂಡ್ಯ| ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರು ನಿರಾಳ

ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…

40 mins ago

ರಾಜ್‌ಘಾಟ್‌ಗೆ ಭೇಟಿ ನೀಡಿ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್‌

ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್‌ ಪುಟಿನ್‌, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…

1 hour ago

ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣಹವೆ: ಕೆಲವೆಡೆ ಮಂಜು ಕವಿದ ವಾತಾವರಣ

ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…

1 hour ago

ಹಾಸನ | ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆ

ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…

2 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮರಗಳ ಮಾರಣಹೋಮ: ಎಫ್‌ಐಆರ್‌ ದಾಖಲು

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…

2 hours ago