ಅನಿಲ್ ಅಂತರಸಂತೆ
ರಾಜ್ಯದಲ್ಲಿ ಕೆಲ ಸರ್ಕಾರಿ ಶಾಲೆಗಳ ಸ್ಥಿತಿ ಹೇಳಿಕೊಳ್ಳುವಷ್ಟು ಸುಧಾರಿಸಿಲ್ಲ. ಇಲ್ಲಿ ಮೂಲಸೌಕರ್ಯಗಳಿಲ್ಲ, ಉತ್ತಮ ವಾತಾವರಣವಿಲ್ಲ, ಮೈದಾನವಿಲ್ಲ, ಕಟ್ಟಡಗಳ ಸ್ಥಿತಿ ಉತ್ತಮವಾಗಿಲ್ಲ ಎಂಬೆಲ್ಲ ಕಾರಣಗಳಿಂದಾಗಿ ಇಂದು ಸಾಕಷ್ಟು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿದ್ದಾರೆ.
ಶಾಲೆಗಳ ಈ ಸಮಸ್ಯೆಗಳಿಂದ ಮಕ್ಕಳ ದಾಖಲಾತಿ ಪ್ರಮಾಣವು ಇಳಿಮುಖವಾಗಿದೆ. ಇದರಿಂದಾಗಿ ಕೆಲ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುವಿಪಿವೆ, ಸಾಕಷ್ಟು ಮುಚ್ಚಿವೆ ಕೂಡ. ಸರ್ಕಾರಿ ಶಾಲೆಗಳ ಈ ಪರಿಸ್ಥಿತಿ ಕಂಡ ಯುವತಿ ಅಕ್ಕ ಅನು ತನ್ನ ಗೆಳೆಯರ ಬಳಗವನ್ನು ಕಟ್ಟಿಕೊಂಡು ಸರ್ಕಾರಿ ಶಾಲೆಗಳಿಗೆ ಸುಣ್ಣಬಣ್ಣ ಬಳಿಯುವ ಜತೆಗೆ ಆವರಣವನ್ನು ಸ್ವಚ್ಛಗೊಳಿಸುತ್ತಾ ‘ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ’ ಅಭಿಯಾನವನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಮೈಸೂರು, ಮಂಡ್ಯ ಭಾಗಗಳ ಸರ್ಕಾರಿ ಶಾಲೆಗಳಲ್ಲಿ ತಮ್ಮ ಶ್ರಮದಾನ ಮಾಡಿರುವ ಅಕ್ಕ ಅನು ಮತ್ತು ತಂಡ ಎಚ್. ಡಿ. ಕೋಟೆಯ ಅಂತರಸಂತೆ ಶಾಲೆ, ಗಂಗಡಹೊಸಹಳ್ಳಿ ಶಾಲೆ, ಹ್ಯಾಂಡ್ಪೋಸ್ಟ್ ಶಾಲೆ, ಹುಣಸೂರಿನ ಹುಂಡೀಮಾಳ, ನಾಗರಹೊಳೆ ಅರಣ್ಯ ವ್ಯಾಪ್ತಿಯ ನಾಗರಹೊಳೆ ಗಿರಿಜನ ಆಶ್ರಮ ಶಾಲೆ, ವಡಕನ ಮಾಳ ಶಾಲೆ, ಹೊಸೂರು ಹಾಡಿ ಶಾಲೆ, ಮಂಡ್ಯದ ದೊಡ್ಡಬೇಡರಹಳ್ಳಿ ಶಾಲೆ, ಹೊಸಕೆರೆ ಶಾಲೆ, ಅರೆಚಾಕನಹಳ್ಳಿ ಶಾಲೆಗಳನ್ನು ಸ್ವಚ್ಚಗೊಳಿಸಿ, ಬಣ್ಣ ಹೆಚ್ಚಿ ಸುಂದರಗೊಳಿಸಿದ್ದಾರೆ. ಗಿಡಗಂಟಿಗಳಿಂದ ಆವೃತ್ತಗೊಂಡು ಸುಣ್ಣ ಬಣ್ಣವಿಲ್ಲದೆ ದುಸ್ಥಿತಿಯಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿಯುವುದೇ ಈ ತಂಡದ ಕಾಯಕ. ಇಂತಹ ಸಮಾಜ ಸೇವೆಯಿಂದಲೇ ಇಂದು ಕರ್ನಾಟಕದ ಮನೆ ಮಾತಾಗಿರುವ ಅಕ್ಕ ಅನು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಚಿಕ್ಕಬೆರಗಿ ಗ್ರಾಮದ ಹೇಮಣ್ಣ ಮತ್ತು ಈರಮ್ಮ ದಂಪತಿಗಳ ಮೂರನೇ ಮಗಳು. ಅಕ್ಕ ಅನು ಎಂದೇ ಪ್ರಸಿದ್ಧಿ ಪಡೆದಿರುವ ಇವರು ತಮ್ಮ 12-15 ಮಂದಿಯ ತಂಡದ ಸಹಾಯದೊಂದಿಗೆ ರಾಜ್ಯದ 121ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಶ್ರಮದಾನ ಮಾಡುವ ಮೂಲಕ ಹೊಸ ರೂಪ ನೀಡುತ್ತಿದ್ದಾರೆ.
ಸ್ವಚ್ಛ ಭಾರತ ಅಭಿಯಾನ ಮತ್ತು ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಅಭಿಯಾನದ ಮೂಲಕ ಅಕ್ಕ ಅನು ಮತ್ತು ತಂಡ 2019ರಿಂದ ಈ ಸೇವೆಯನ್ನು ಆರಂಭಿಸಿದ್ದು, ಈಗಾಗಲೇ ರಾಜ್ಯದ ಸುಮಾರು 23 ಜಿಲ್ಲೆಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳನ್ನು ಸ್ವಚ್ಛ ಮಾಡುವ ಜೊತೆಗೆ ಸ್ಥಳೀಯ ದಾನಿಗಳ ಸಹಕಾರದಿಂದ ಶಾಲೆಗಳಿಗೆ ಸುಣ್ಣ ಬಣ್ಣ ಬಳಿಯುವ ಕಾಯಕ ಮಾಡುತ್ತಿದ್ದಾರೆ. ಕನ್ನಡ ಶಾಲೆಗಳ ಪರಿಸ್ಥಿತಿ ಕಂಡ ಅನು ಆರಂಭದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿಯೇ ಬಣ್ಣ ಬಳಿಯುವ ಕೆಲಸ ಆರಂಭಿಸಿದರು. ಆರಂಭದಲ್ಲಿರ ಸರ್ಕಾರಿ ಶಾಲಾಗಳಲ್ಲ ಇವರು ಕೈಗೊಂಡ ಸೇವೆ ಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ ಕೆಲ ಉತ್ಸಾಹಿ ಯುವಕರೂ ಅವರ ತಂಡ ಸೇರಲು ಬಯಸಿ ಸುಮಾರು 12-15 ಜನರ ತಂಡವಾಗಿ ಪರಿವರ್ತನೆಗೊಂಡು ರಾಜ್ಯವನ್ನು ಸುತ್ತಿ ಅಲ್ಲಿನ ಸರ್ಕಾರಿ ಶಾಲೆಗಳಲ್ಲಿ ಶ್ರಮದಾನ ಮಾಡುತ್ತಿದೆ. ಈವರೆಗೂ ಸುಮಾರು 121ಕ್ಕೂ ಅಧಿಕ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಜನರ ಸಹಕಾರವಿದ್ದರೆ ಇನ್ನೂ ಹೆಚ್ಚಿನ ಶಾಲೆಗಳನ್ನು ದರಸ್ತಿಗೊಳಿಸಲಿದ್ದೇವೆ. ನಮ್ಮ ಉದ್ದೇಶ ಸರ್ಕಾರಿ ಶಾಲೆಗಳು ಉಳಿಯಬೇಕು. ಸರ್ಕಾರಿ ಶಾಲೆಗಳು ಅಭಿವೃದ್ಧಿಯಾದರೆ ಕನ್ನಡ ಭಾಷೆ ಉಳಿಯಲಿದೆ ಎನ್ನುತ್ತಾರೆ ಅಕ್ಕ ಅನು.
ಅನು ಅವರು ಈ ಸೇವೆಯನ್ನು ತಮ್ಮ ಕಾಲೇಜು ದಿನಗಳಲ್ಲೇ ಆರಂಭಿಸಿ ದರೂ ಆಗ ಅವರಿಗೆ ಸರಿಯಾದ ಪ್ರೋತ್ಸಾಹ ಸಿಗಲಿಲ್ಲ. ಈಗ ಇವರ ಕೆಲಸ ಮೆಚ್ಚಿ ಲಕ್ಷಾಂತರ ಮಂದಿ ಬೆಂಬಲಿಸುತ್ತಿದ್ದಾರೆ. ಕೇವಲ ಶಾಲೆಗಳು ಮಾತ್ರವ ಲ್ಲದೆ ಪುರಾತಾನ ದೇಗುಲಗಳು, ಸ್ಮಶಾನ, ಬಾವಿ, ಕಲ್ಯಾಣಿಗಳನ್ನೂ ಸ್ವಚ್ಛಗೊಳಿಸಿ ಸ್ವಚ್ಛ ಭಾರತ ಅಭಿಯಾನವನ್ನೂ ಮಾಡುತ್ತಿದ್ದಾರೆ. ಕೊವೀಡ್ ವೇಳೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹಿರೇಮಾದಿನಾಳ ಗ್ರಾಮದ ಅಜ್ಜಿಯೊಬ್ಬರಿಗೆ ಮನೆಯನ್ನು ನಿರ್ಮಿಸಿಕೊಡುವ ಮೂಲಕ ಅನು ಮಾದರಿಯಾಗಿದ್ದಾರೆ.
ಖಾಸಗಿ ಶಾಲೆಗಳ ಎದುರು ಸರ್ಕಾರಿ ಶಾಲೆಗಳು ಮಂಕಾಗುತ್ತಿವೆ. ಸರ್ಕಾರಿ ಶಾಲೆಗಳು ಮುಚ್ಚಿ ಹೋಗುವ ಹಂತ ತಲುಪಿವೆ. ಸರ್ಕಾರಿ ಶಾಲೆಗಳು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದ್ದು, ಅವು ಮುಚ್ಚಿದರೆ ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಆದ್ದರಿಂದ ನಮ್ಮ ಶಾಲೆಗಳೂ ಉತ್ತಮವಾಗಿದ್ದರೆ ಹೆಚ್ಚು ಮಕ್ಕಳು ದಾಖಲಾಗಿ ಶಾಲೆ ಉಳಿಯಲಿದೆ ಎಂಬುದು ನಮ್ಮ ಉದ್ದೇಶ.
-ಅಕ್ಕ ಅನು, ಸಮಾಜ ಸೇವಕಿ
ಹನೂರು: ತಾಲೂಕಿನ ಮಿಣ್ಯಂ ಗ್ರಾಮದಿಂದ ಹನೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕರಿಗೆ ಅರಣ್ಯ ವ್ಯಾಪ್ತಿಯಲ್ಲಿ ಹುಲಿರಾಯ ದರ್ಶನ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ…
ಬೆಳಗಾವಿ: ಆದಷ್ಟು ಬೇಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುತ್ತದೆ ಎಂದು ಸಚಿವ ರಹೀಂ ಖಾನ್ ತಿಳಿಸಿದರು. ವಿಧಾನಪರಿಷತ್ ಕಲಾಪದಲ್ಲಿ…
ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಮಂಡ್ಯ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಅದ್ಧೂರಿಯಾಗಿ ಆಚರಣೆ ಮಾಡಿದರು. ಮದ್ದೂರಿನಲ್ಲಿ ಮಾಜಿ…
ಬೆಳಗಾವಿ: ಕೋಳಿ ಮೊಟ್ಟೆ ಸೇವಿಸಿದರೆ ಕ್ಯಾನ್ಸರ್ ಬರುವ ವದಂತಿ ಎಲ್ಲೆಡೆ ಹಬ್ಬಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ…
ಮಳವಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಳವಳ್ಳಿಯಲ್ಲಿ ನಡೆಯಲಿರುವ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ…
ಬೆಳಗಾವಿ: ವಿಧಾನಸಭೆಯಲ್ಲಿ ಇಂದು ಗ್ರೇಟರ್ ಬೆಂಗಳೂರು ಆಡಳಿತ 2ನೇ ತಿದ್ದುಪಡಿ ವಿಧೇಯಕ ಮಂಡನೆ ಆಗಿದೆ. ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ…