ಟೆಲ್ ಅವೀವ್: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಉಗ್ರ ಹಮಾಸ್ ನಡುವಿನ ಸಂಘರ್ಷ ಏಳನೇ ದಿನವೂ ಮುಂದುವರಿದಿದೆ. ಏತನ್ಮಧ್ಯೆ, ಇಸ್ರೇಲಿ ಸೇನೆಯು ಹಮಾಸ್ ಹೋರಾಟಗಾರರ ವಿರುದ್ಧ ನಡೆಸಿದ ಕಾರ್ಯಾಚರಣೆಯ ಒಂದು ವೀಡಿಯೊವನ್ನು ಬಿಡುಗಡೆ ಮಾಡಿದೆ.
ವೀಡಿಯೊದಲ್ಲಿ, ಇಸ್ರೇಲಿ ಡಿಫೆನ್ಸ್ ಫೋರ್ಸ್ (ಐಡಿಎಫ್) ಸೈನಿಕರು ಕಾಂಪೌಂಡ್ಗೆ ಪ್ರವೇಶಿಸಿ ಹಮಾಸ್ ಭಯೋತ್ಪಾದಕರು ಒತ್ತೆಯಾಳಾಗಿದ್ದ ಜನರನ್ನು ರಕ್ಷಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಬಾಡಿ ಕ್ಯಾಮರಾ ದೃಶ್ಯಗಳನ್ನು ಹಂಚಿಕೊಂಡಿರುವ IDF, ‘ಇಸ್ರೇಲಿ ಸೇನೆಯು ಗಾಜಾ ಭದ್ರತಾ ಬೇಲಿ ಬಳಿ ಕಾರ್ಯಾಚರಣೆ ನಡೆಸಿತು. ಈ ಅವಧಿಯಲ್ಲಿ, ಭಯೋತ್ಪಾದಕರ ಒತ್ತೆಯಾಳಾಗಿದ್ದ 250 ಜನರನ್ನು ಸೇನೆಯು ಸುರಕ್ಷಿತವಾಗಿ ರಕ್ಷಿಸಿದ್ದು 60 ಹಮಾಸ್ ಭಯೋತ್ಪಾದಕರನ್ನು ಹತ್ಯೆ ಮಾಡಿದೆ.
https://x.com/idfonline/status/1712513580132704360?s=20
ಅಲ್ಲದೆ ಕಾರ್ಯಾಚರಣೆ ವೇಳೆ 26 ಮಂದಿಯನ್ನು ಜೀವಂತವಾಗಿ ಸೆರೆಹಿಡಿಯಲಾಗಿದ್ದು ಇದರಲ್ಲಿ ಹಮಾಸ್ ದಕ್ಷಿಣ ನೌಕಾ ವಿಭಾಗದ ಉಪ ಕಮಾಂಡರ್ ಅಬು ಅಲಿ ಕೂಡ ಸೇರಿದ್ದಾನೆ. ವಿಡಿಯೋದಲ್ಲಿ, ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿರುವ ಕಟ್ಟಡವನ್ನು ಪತ್ತೆಹಚ್ಚುವ ಮೊದಲು ಡಜನ್ಗಿಂತಲೂ ಹೆಚ್ಚು ಸೈನಿಕರು ಹಲವಾರು ಕಟ್ಟಡಗಳ ಒಳಗೆ ಹೋಗುವುದನ್ನು ಕಾಣಬಹುದು. ಹಮಾಸ್ ಗಡಿ ಪೋಸ್ಟ್ನಲ್ಲಿ ಸೈನಿಕರು ಹಿಂದಿನಿಂದ ಗುಂಡು ಹಾರಿಸುವುದು ಮತ್ತು ಗ್ರೆನೇಡ್ಗಳನ್ನು ಎಸೆಯುವುದು ಕಂಡುಬಂದಿದೆ.
ವೀಡಿಯೋದಲ್ಲಿ ಹಿರಿಯ ಅಧಿಕಾರಿಯೊಬ್ಬರು ಸೈನಿಕರಿಗೆ ಸೂಚನೆ ನೀಡುತ್ತಿರುವುದನ್ನು ಕೇಳಬಹುದು. ವೀಡಿಯೊದ ಒಂದು ಹಂತದಲ್ಲಿ, ಸೈನಿಕನೊಬ್ಬ ಗಾಯಗೊಂಡ ಭಯೋತ್ಪಾದಕನನ್ನು, ಕಾರ್ಯಾಚರಣೆಯ ಸಮಯದಲ್ಲಿ ಗಾಯಗೊಂಡ ಭಯೋತ್ಪಾದಕನನ್ನು ಬಂಕರ್ನಿಂದ ಹೊರಗೆ ತೆಗೆದುಕೊಂಡು ಗೋಡೆಯ ಕಡೆಗೆ ಹಿಡಿದಿರುವುದನ್ನು ಕಾಣಬಹುದು. ಸೈನಿಕರು ನಂತರ ಬಂಕರ್ನೊಳಗೆ ಹೋಗಿ ಒತ್ತೆಯಾಳುಗಳನ್ನು ಉಳಿಸಲು ಇಲ್ಲಿಗೆ ಬಂದಿರುವುದಾಗಿ ಭರವಸೆ ನೀಡಿದ್ದು ಅವರಿಗೆ ಏನಾದರೂ ‘ಪ್ರಥಮ ಚಿಕಿತ್ಸೆ’ ಅಗತ್ಯವಿದೆಯೇ ಎಂದು ಕೇಳುತ್ತಾರೆ.
ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…
ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…
ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…
ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…
ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…
ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…