BREAKING NEWS

Under 19 Worldcup 2024: ಸೆಮಿಫೈನಲ್‌ ಪ್ರವೇಶಿಸಿದ ಭಾರತ

ದಕ್ಷಿಣ ಆಫ್ರಿಕಾದ ಮಾಂಗ್ವಾಂಗ್ ಓವಲ್ ಕ್ರೀಡಾಂಗಣದಲ್ಲಿ ಭಾರತ ಅಂಡರ್ 19 ತಂಡ ಸೂಪರ್ ಸಿಕ್ಸ್ ಸುತ್ತಿನ ತಮ್ಮ ಎರಡನೇ ಪಂದ್ಯದಲ್ಲಿ ನೇಪಾಳ ಅಂಡರ್ 19 ತಂಡವನ್ನು 132 ರನ್‌ಗಳ ಅಂತರದಿಂದ ಸೋಲಿಸಿ ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದೆ. ಮಂಗಳವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಜತೆ ಸೆಣಸಾಡಲಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರ್‌ಗಳಲ್ಲಿ ನಾಯಕ ಉದಯ್ ಸಹರಣ್ ಹಾಗೂ ಸಚಿನ್ ದಾಸ್ ಶತಕಗಳ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 297 ರನ್ ಕಲೆಹಾಕಿ ನೇಪಾಳ ತಂಡಕ್ಕೆ ಗೆಲ್ಲಲು 298 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ನೇಪಾಳ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ‌ 165 ರನ್ ಗಳಿಸಿತು‌.

 

ಭಾರತದ ಇನ್ನಿಂಗ್ಸ್: ಆದರ್ಶ್ ಸಿಂಗ್ 21, ಅರ್ಶಿನ್ ಕುಲ್ಕರ್ಣಿ 18, ಪ್ರಿಯಂಶು ಮೊಳಿಯ 19, ಉದಯ್ ಸಹರಣ್ 100, ಸಚಿನ್ ದಾಸ್ 116, ಮುಶೀರ್ ಖಾನ್ ಅಜೇಯ 9 ರನ್ ಹಾಗೂ ಅರವೆಳ್ಳಿ ಅವಿನಾಶ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.

ನೇಪಾಳದ ಪರ ಗುಲ್ಶಾನ್ ಝಾ 3 ವಿಕೆಟ್ ಹಾಗೂ ಆಕಾಶ್ ಚಂದ್ 1 ವಿಕೆಟ್ ಪಡೆದರು.

ನೇಪಾಳ ಇನ್ನಿಂಗ್ಸ್: ದೀಪಕ್ ಬೊಹಾರ 22, ಅರ್ಜುನ್ ಕುಮಾಲ್ 26, ಉತ್ತಮ್ ಮಗರ್ 8, ದೇವ್ ಖನಲ್ 33, ಬಿಶಾಲ್ ಬಿಕ್ರಮ್ 1, ದೀಪಕ್ ದುಮ್ರೆ ೦, ಗುಲ್ಶಾನ್ ಝಾ 1, ದೀಪೇಶ್ ಕಂಡೆಲ್ 0, ಸುಭಾಷ್ ಭಂಡಾರಿ 5, ಆಕಾಶ್ ಚಾಂದ್ ಅಜೇಯ 19 ಹಾಗೂ ದುರ್ಗೇಶ್ ಗುಪ್ತಾ ಅಜೇಯ 29 ರನ್ ಗಳಿಸಿದರು.

ಭಾರತದ ಪರ ಸೌಮಿ ಪಾಂಡೆ 4 ವಿಕೆಟ್, ಅರ್ಶಿನ್ 2 ವಿಕೆಟ್, ರಾಜ್ ಲಿಂಬಾಣಿ, ಆರಾಧ್ಯ ಶುಕ್ಲಾ ಹಾಗೂ ಮುರುಗನ್ ಅಭಿಷೇಕ್ ತಲಾ ಒಂದೊಂದು ವಿಕೆಟ್ ಪಡೆದರು.

andolana

Recent Posts

ಓದುಗರ ಪತ್ರ: ಪ್ರಕೃತಿ ಪ್ರೀತಿ ಅತಿಮುಖ್ಯ

ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…

9 hours ago

ಓದುಗರ ಪತ್ರ: ಪ್ಲಾಸ್ಟಿಕ್ ನೋಟುಗಳ ಬಿಡುಗಡೆ ನಿರ್ಧಾರ ದೂರದೃಷ್ಟಿಯ ಹೆಜ್ಜೆ

ಆರ್‌ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…

9 hours ago

ಓದುಗರ ಪತ್ರ: ಸಮಾನತೆ ಮಾತನಾಡುವವರ ನಡವಳಿಕೆ ಇದೇನಾ?

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯ. ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ಹೆಸರಿನಲ್ಲಿ…

9 hours ago

ಚಲನಚಿತ್ರ: ಪ್ರಮಾಣೀಕರಣ ಮಂಡಳಿಯದೇ ಅಂತಿಮ ತೀರ್ಪು

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಇಂದು ಬಿಡುಗಡೆಯಾಗುತ್ತಿರುವ ‘ ಬಾಸ್’ಎಂದೋ ತೆರೆಗೆ ಬರಬೇಕಾಗಿತ್ತು. ಆದರೆ ಚಿತ್ರದ ಹೆಸರು,…

9 hours ago

ಕೊಡಗು ಜಿಲ್ಲೆಯಲ್ಲಿ ಶೇ.37ರಷ್ಟು ಮಳೆ ಕೊರತೆ

ನವೀನ್ ಡಿಸೋಜ ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆ; ವಾಡಿಕೆ ಮಳೆ ಕೊರತೆ ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.೪೩…

9 hours ago

ಕಬಿನಿ ಜಲಾಶಯದಿಂದ ಹರಿಸುತ್ತಿದ್ದ ನೀರು ಸ್ಥಗಿತ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಬಂದ್…

9 hours ago