ಮೈಸೂರು: ಶ್ರೀರಾಮ ಪ್ರಭುವಿನ ದರ್ಶನಕ್ಕೆ ಜಿಲ್ಲೆಯಿಂದ ತೆರಳುವ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅಯೋಧ್ಯೆಗೆ ಮೈಸೂರಿನಿಂದ ರೈಲು ಸಂಪರ್ಕ ಕಲ್ಪಿಸಲಾಗಿದೆ.
ಮೈಸೂರು ಮಾರ್ಗವಾಗಿ ಅಯೋಧ್ಯೆಗೆ ಅತ್ಯಂತ ವೇಗವಾಗಿ ಚಲಿಸುವ ಮೈಸೂರು-ಅಯೋಧ್ಯೆ-ಮೈಸೂರು ರೈಲು ಸೇವೆ ಫೇಬ್ರವರಿ 4ರಿಂದ ಆರಂಭವಾಗಲಿದೆ. ಈ ಬಗ್ಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮೈಸೂರಿನಿಂದ ಅಯೋಧ್ಯೆಗೆ ರೈಲು ಫೆಬ್ರವರಿ 4 ಮತ್ತು ಫೆಬ್ರವರಿ 18 ರಂದು ಓಡಾಟ ನಡೆಸಲಿದೆ. ಅದರಂತೆಯೇ ಅಯೋಧ್ಯೆಯಿಂದ ಮೈಸೂರಿಗೆ ಫೆಬ್ರವರಿ 7 ಮತ್ತು ಫೆಬ್ರವರಿ 21 ರಂದು ಸಂಚಾರ ನಡೆಸಿಲಿದೆ.
ರೈಲ್ವೆ ಇಲಾಖೆ ತಯಾರಿಸಿರುವ ಈ ವೇಳಾಪಟ್ಟಿ ಅನ್ವಯ ರೈಲು ಮೈಸೂರಿನಿಂದ ಫೆಬ್ರವರಿ 4 ರಂದು ರಾತ್ರಿ 12.15 ಕ್ಕೆ ಹೊರಟು ಅಯೋಧ್ಯೆಗೆ ಫೆಬ್ರವರಿ 7ರ ರಾತ್ರಿ 12.55ಕ್ಕೆ ತಲುಪಲಿದೆ. ಇನ್ನು ಫೆಬ್ರವರಿ 18 ರಂದು ಇದೇ ಸಮಯಕ್ಕೆ ಹೊರಡಲಿರುವ ರೈಲು ಫೆಬ್ರವರಿ 21 ರಂದು ಅಯೋಧ್ಯೆ ತಲುಪಲಿದೆ.
ಅಯೋಧ್ಯೆಯಿಂದ ಮೈಸೂರಿನ ಕಡೆ ಸಂಚರಿಸಲಿರುವ ರೈಲು ಫೆಬ್ರವರಿ 7 ರಂದು ರಾತ್ರಿ 9.20ಕ್ಕೆ ಅಯೋಧ್ಯೆಯಿಂದ ಹೊರಟು ಮೈಸೂರಿಗೆ ಫೆಬ್ರವರಿ 10 ರ ಬೆಳಗ್ಗೆ 7 ಗಂಟೆಗೆ ತಲುಪಲಿದೆ. ಫೆಬ್ರವರಿ 21 ರಂದು ಕೂಡಾ ಇದೇ ಸಮಯಕ್ಕೆ ರೈಲು ಮೈಸೂರನನ್ನು ತಲುಪಲಿದೆ.
22 ಕೋಚ್ ಹೊಂದಿರುವ ಈ ರೈಲು ಮೈಸೂರು ಮಾರ್ಗವಾಗಿ ರಾಜ್ಯದ ಬೆಂಗಳೂರು, ತುಮಕೂರು, ಅರಸೀಕೆರೆ ಜಂಕ್ಷನ್, ಕಡೂರು, ಬೀರೂರು ಜಂಕ್ಷನ್ಗಳಲ್ಲಿ ನಿಲ್ದಾಣ ಹೊಂದಿರಲಿದೆ.
ಮುಂಬೈ : ಐಪಿಎಲ್ ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್ ( ಕೆಕೆಆರ್) ತಂಡಕ್ಕೆ ನೆರೆಯ ಬಾಂಗ್ಲಾದೇಶದ ಆಟಗಾರನನ್ನು ಖರೀದಿಸಿರುವ ಬಾಲಿವುಡ್…
ಹುಬ್ಬಳ್ಳಿ : ಮರ್ಯಾದೆಗೇಡು ಹತ್ಯೆ ಅಂತಹ ಘಟನೆ ತಡೆಗೆ ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ಜಾರಿಗೊಳಿಸುವ ಬಗ್ಗೆ ಗಂಭೀರ ಚಿಂತನೆ…
ಬೆಂಗಳೂರು: ರಾಜ್ಯದಲ್ಲಿ ನುಸುಳುಕೋರರು, ಬಾಂಗ್ಲಾದೇಶದವರು, ರೋಹಿಂಗ್ಯಾಗಳು ಯಾರು ಅಂತ ತನಿಖೆ ಮಾಡಿ, ಬಳಿಕ ಪುನರ್ ವಸತಿ ಕಲ್ಪಿಸಬೇಕು ಎಂದು ಶಾಸಕ…
ಸ್ವಿಟ್ಜರ್ಲೆಂಡ್: ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್ಲೆಂಡ್ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 40 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.…
ಬೆಂಗಳೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಒಂದೇ ದಿನ 8.93 ಲಕ್ಷ ಜನರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದು, 3.08 ಕೋಟಿ ರೂ…
ಬೆಂಗಳೂರು: ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಬಿಗ್ ಶಾಕ್ ನೀಡಿದೆ. 2026ರ ಜನವರಿ.1ರಿಂದ ಮುಂದಿನ ಆರು…