BREAKING NEWS

ಸ್ಕ್ಯಾಂಡಿನೇವಿಯಾ: 6000 ವರ್ಷಗಳ ಹಿಂದಿನ ಚ್ಯೂಯಿಂಗ್​ ಗಮ್ ಪತ್ತೆ

‘ಸ್ಕ್ಯಾಂಡಿನೇವಿಯಾದಲ್ಲಿ 6,000 ವರ್ಷಗಳಷ್ಟು ಹಳೆಯದಾದ ಚ್ಯೂಯಿಂಗ್​ ಗಮ್​  (Chewing Gum) ಪತ್ತೆಯಾಗಿದೆ. ಇಷ್ಟೇ ಅಲ್ಲ ಇದನ್ನು ಜಗಿದವರ ಡಿಎನ್​ಎ (DNA)ಯನ್ನು ಕೂಡ ಇದು ಸಂರಕ್ಷಿಸಿಟ್ಟುಕೊಂಡಿದೆ. ಈ ಚ್ಯೂಯಿಂಗ್​ ಗಮ್​ ಅನ್ನು ಜಗಿದವಳು ಬೇಟೆಗಾರರ ಪುಟ್ಟ ಹುಡುಗಿ, ಈಕೆ ಕಪ್ಪು ಚರ್ಮ, ಕಂದು ಕೂದಲು ಮತ್ತು ನೀಲಿ ಕಣ್ಣುಗಳನ್ನು ಹೊಂದಿದ್ದಳು. ಈ ಚ್ಯೂಯಿಂಗ್​ಗಿಂತ ಮೊದಲು ಈಕೆ ಹಝಲ್​ನಟ್​ ಮತ್ತು ಬಾತುಕೋಳಿಯನ್ನು ತಿಂದಿದ್ದಳು’ ಎನ್ನುವ ಮಾಹಿತಿಯನ್ನು ಹೊತ್ತ ಈ ಟ್ವೀಟ್ ಇದೀಗ ವೈರಲ್ ಆಗುತ್ತಿದೆ.

ಡಾ. ಡೋರ್ಸಾ ಅಮೀರ್​ ಎಂಬ ಟ್ವೀಟಿಗರು ಇದನ್ನು ಟ್ವೀಟ್ ಮಾಡಿದ್ದಾರೆ. ಕೆಲವರು ಈ ವಿಷಯದ ಸತ್ಯಾಸತ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಕ್ಕೆ 5,700 ವರ್ಷ ಹಳೆಯ ಚೂಯಿಂಗ್ ಗಮ್‌ನಿಂದ ಮಾನವ ಜೀನೋಮ್ ಅನ್ನು ಮರಳಿ ಪಡೆದುದರ ಕುರಿತು ಇಂಗ್ಲಿಷ್​ ಲೇಖನವೊಂದರ ಲಿಂಕ್​ ಅನ್ನು ಈಕೆ ಈ ಟ್ವೀಟಿನಡಿ ಲಗತ್ತಿಸಿದ್ದಾರೆ. ಅನೇಕರು ಈ ವಿಷಯದ ಬಗ್ಗೆ ಕುತೂಹಲದಿಂದ ಪ್ರಶ್ನಿಸಿದ್ದಾರೆ.

ಆ ಹುಡುಗಿಯ ಚರ್ಮದ ಬಣ್ಣವನ್ನೂ ಕೂಡ ಅಷ್ಟೊಂದು ದೃಢವಾಗಿ ಪತ್ತೆ ಹಚ್ಚಿದ್ದಾರಲ್ಲ! ಎಂದು ಒಬ್ಬರು ಕೇಳಿದ್ದಾರೆ. ಬಹುಶಃ ಈಕೆ ನನ್ನ ಅಜ್ಜಿಯಾಗಿದ್ದಿರಬಹುದು ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ನಮ್ಮ ಪೂರ್ವಜರು ಬೇಟೆ ಪ್ರವೃತ್ತಿಯಿಂದ ಅವರು ಕೃಷಿಗೆ ಇಳಿದಾಗ ಅವರ ಆಹಾರ ಪದ್ಧತಿಯೂ ಬದಲಾಯಿತು. ಆದ್ದರಿಂದಲೇ ನಮಗೆ ವಿಟಮಿನ್​ ಡಿ ಕೊರತೆ ಉಂಟಾಗಿದೆ ಎನ್ನಿಸುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಆಹ್ ನನಗಂತೂ ಆ ಬಾಲೆ ಪುಟ್ಟ ಮತ್ಸ್ಯಕನ್ಯೆಯಂತೆ ಕಾಣುತ್ತಿದ್ದಾಳೆ ಎಂದಿದ್ದಾರೆ ಮಗದೊಬ್ಬರು.

andolanait

Recent Posts

ಹೊಸ ವರ್ಷಾಚರಣೆಗೆ ಮುನ್ನೆಚ್ಚರಿಕೆ : ಸೂಕ್ಷ ಪ್ರದೇಶಗಳ ಬಗ್ಗೆ ಸಮೀಕ್ಷೆ ವರದಿಗೆ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…

49 mins ago

ಸಿಲಿಂಡರ್‌ ಸ್ಪೋಟ ಪ್ರಕರಣ : ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಂಜುಳ ಸಾವು

ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…

2 hours ago

ಇತಿಹಾಸ ಸೃಷ್ಟಿಸಿದ ಬಿಜೆಪಿ : ತಿರುವನಂತಪುರಂನ ಮೇಯರ್ ಆಗಿ ವಿ.ವಿ.ರಾಜೇಶ್ ಆಯ್ಕೆ

ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…

2 hours ago

ಅಧಿಕಾರ ಶಾಶ್ವತವಲ್ಲ : ‘ನನ್ನ ತಂದೆಯ ಇಚ್ಛೆಯಂತೆಯೇ ನಡೆಯುವೆ’ ; ಯತೀಂದ್ರ

ಚಿಕ್ಕೋಡಿ : ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಯಾವುದೇ…

2 hours ago

ಗುರುಪುರದ ಬಳಿ ಮತ್ತೆ ಹುಲಿ ಪ್ರತ್ಯಕ್ಷ : ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಹುಣಸೂರು : ತಾಲ್ಲೂಕಿನ ಗುರುಪುರದ ಟಿಬೆಟ್ ನಿರಾಶ್ರಿತರ ಕೇಂದ್ರದಲ್ಲಿ ಮತ್ತೆ ಹುಲಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನಾಗರಹೊಳೆ ರಾಷ್ಟ್ರೀಯ…

2 hours ago

ಜಗತ್ತಿಗೆ ಸ್ಪರ್ಧೆ ನೀಡುತ್ತಿದ್ದ ಬೆಂಗಳೂರಿನ ಮೂಲಸೌಕರ್ಯ ಹಾಳಾಗಿದೆ : ಎಚ್‌ಡಿಕೆ

ಬೆಂಗಳೂರು : ಭಾರತವು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಗತ್ತಿನ ಮೂರನೇ ಆರ್ಥಿಕ ಶಕ್ತಿ ಆಗುವತ್ತ ದಾಪುಗಾಲಿಡುತ್ತಿದೆ. ಆದರೆ, ಉತ್ತಮ…

2 hours ago