ನವದೆಹಲಿ: ಆ್ಯಂಡ್ರಾಯ್ಡ್ ಮೊಬೈಲ್ ಸಾಧನಗಳ ಪ್ರಕರಣದಲ್ಲಿ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ನೀಡಿದ್ದ ಆದೇಶ ವನ್ನು ಭಾಗಶಃ ಎತ್ತಿಹಿಡಿದಿರುವ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು (ಎನ್ಸಿಎಲ್ಎಟಿ), ₹ 1,338 ಕೋಟಿ ದಂಡವನ್ನು 30 ದಿನಗಳಲ್ಲಿ ಪಾವತಿಸು ವಂತೆ ಗೂಗಲ್ ಕಂಪನಿಗೆ ಸೂಚಿಸಿದೆ.
ಆದರೆ, ಗೂಗಲ್ ಕಂಪನಿಯು ಆ್ಯಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯ ಸ್ಮಾರ್ಟ್ಫೋನ್ಗಳಲ್ಲಿ ತಾನು ಮೊದಲೇ ಇನ್ಸ್ಟಾಲ್ ಮಾಡಿರುವ ಆ್ಯಪ್ಗಳನ್ನು ತೆಗೆದುಹಾಕುವ ಅವಕಾಶವನ್ನು ಗ್ರಾಹಕರಿಗೆ ಕೊಡಬೇಕು ಎಂದು ಸಿಸಿಐ ನೀಡಿದ್ದ ಸೂಚನೆಯನ್ನು ಎನ್ಸಿಎಲ್ಎಟಿ ರದ್ದುಮಾಡಿದೆ.
ಎನ್ಸಿಎಲ್ಎಟಿ ನೀಡಿರುವ ಆದೇಶವನ್ನು ಪರಿಶೀಲಿಸುತ್ತಿರುವುದಾಗಿ ಗೂಗಲ್ ಹೇಳಿದೆ. ಗೂಗಲ್ ಕಂಪನಿಯು ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗಳ ವಿಚಾರದಲ್ಲಿ ಸ್ಪರ್ಧಾತ್ಮಕತೆಯ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಸಿಸಿಐ ಹೇಳಿತ್ತು. ಈ ಆದೇಶವನ್ನು ಎನ್ಸಿಎಲ್ಎಟಿಯಲ್ಲಿ ಪ್ರಶ್ನಿಸಲಾಗಿತ್ತು.
ತಾನು ಮೊದಲೇ ಇನ್ಸ್ಟಾಲ್ ಮಾಡಿಕೊಡುವ ಗೂಗಲ್ ಮ್ಯಾಪ್ಸ್, ಯೂಟ್ಯೂಬ್, ಜಿಮೇಲ್ನಂತಹ ಆ್ಯಪ್ಗಳನ್ನು ತೆಗೆದುಹಾಕಲು ಗೂಗಲ್ ಕಂಪನಿಯು ಗ್ರಾಹಕರಿಗೆ ಅವಕಾಶ ಕೊಡಬೇಕು ಎಂದು ಸಿಸಿಐ ನೀಡಿದ್ದ ನಿರ್ದೇಶನವನ್ನು ಎನ್ಸಿಎಲ್ಎಟಿ ರದ್ದುಮಾಡಿದೆ. ಅಲ್ಲದೆ, ಗೂಗಲ್ ಕಂಪನಿಯು ತನ್ನ ಪ್ಲೇಸ್ಟೋರ್ನಲ್ಲಿ ಇತರ ಕಂಪನಿಗಳ ಆ್ಯಪ್ ಸ್ಟೋರ್ಗೆ ಅವಕಾಶ ಕೊಡಬೇಕಾಗಿಲ್ಲ ಎಂದು ಕೂಡ ಎನ್ಸಿಎಲ್ಎಟಿ ಹೇಳಿದೆ.
ಯಾವುದೇ ಆ್ಯಪ್ ಸ್ಟೋರ್ ಬಳಸದೆ, ಬೇರೆಡೆಗಳಿಂದ ಆ್ಯಪ್ ಡೌನ್ಲೋಡ್ ಮಾಡುವುದರ ಮೇಲೆ ನಿರ್ಬಂಧ ವಿಧಿಸಲು ಗೂಗಲ್ಗೆ ಅವಕಾಶ ಇರುತ್ತದೆ.
ಈ ನಿರ್ದೇಶನಗಳು ಸಿಂಧು
ಸಿಸಿಐ ನೀಡಿದ್ದ ಹತ್ತು ನಿರ್ದೇಶನಗಳ ಪೈಕಿ ಆರನ್ನು ಎನ್ಸಿಎಲ್ಎಟಿ ಎತ್ತಿಹಿಡಿದಿದೆ. ಎನ್ಸಿಎಲ್ಎಟಿ ಎತ್ತಿಹಿಡಿದಿರುವ ಪ್ರಮುಖ ನಿರ್ದೇಶನಗಳು ಇಲ್ಲಿವೆ:
l ಮೊಬೈಲ್ ಸಾಧನವನ್ನು ಆರಂಭದಲ್ಲಿ ಬಳಕೆಗೆ ಸಿದ್ಧಮಾಡಿಕೊಳ್ಳುವಾಗ (ಸೆಟಪ್) ಗ್ರಾಹಕರಿಗೆ ತಮ್ಮ ಸರ್ಚ್ ಎಂಜಿನ್ ಯಾವುದಾಗಿರಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರಬೇಕು
l ಸ್ಮಾರ್ಟ್ಫೋನ್ ತಯಾರಕರಿಗೆ ಇಂಥದ್ದೇ ಆ್ಯಪ್ಗಳನ್ನು ಮೊದಲೇ ಇನ್ಸ್ಟಾಲ್ ಮಾಡುವಂತೆ ತಾಕೀತು ಮಾಡುವಂತಿಲ್ಲ.
ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…
ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…
ಇತ್ತೀಚಿನ ದಿನಗಳಲ್ಲಿ, ಟೂತ್ ಪೇಸ್ಟ್ಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಅಂಶ ಪತ್ತೆಯಾಗಿದ್ದು, ಇದರ ಸೇವನೆಯಿಂದ ಹಲವು ಮಕ್ಕಳು ತೊಂದರೆಗೊಳಗಾಗಿರುವ ಘಟನೆಗಳು…
ಮೈಸೂರಿನ ಕುವೆಂಪುನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ರಸ್ತೆ, ಗದ್ದಿಗೆ ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ವಿದ್ಯಾರಣ್ಯಪುರಂ -…
ಆಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಜಾರಿಗೆ ತಂದ ನೂತನ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ…
ತಿ.ನರಸೀಪುರ : ಬೈಕ್ ಗೆ ಎದುರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿ ಘಟನೆ ತಾಲೂಕಿನ…