BREAKING NEWS

ಮೈಸೂರು ದಸರಾ-23: ಮೂರು ವಾರಗಳಲ್ಲಿ 140 ಕಿಲೋ ತೂಕ ಹೆಚ್ಚಿಸಿಕೊಂಡ ಅಭಿಮನ್ಯು

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಮಾಜಿ ಕ್ಯಾಪ್ಟನ್​ ಅರ್ಜುನ ಅತಿ ಹೆಚ್ಚು ತೂಕದ ಆನೆ ಎಂಬ ಹೆಸರನ್ನು ಈ ಬಾರಿಯೂ ಉಳಿಸಿಕೊಂಡಿದ್ದಾನೆ.

ಅರಮನೆಯಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆ ನಿತ್ಯವೂ ತಾಲೀಮು ನಡೆಸುತ್ತಿವೆ. ಇಂದು ದಸರಾ ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಯಿತು.

ಒಟ್ಟು 14 ಆನೆಗಳು ಪೊಲೀಸರ ಬಿಗಿ ಭದ್ರತೆಯಲ್ಲಿ ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರಕ್ಕೆ ಆಗಮಿಸಿ ತೂಕ ಪರೀಕ್ಷೆಯಲ್ಲಿ ಭಾಗಿಯಾದವು. ಎರಡನೇ ಹಂತದ ಆನೆಗಳ ಜೊತೆ ಮೊದಲನೇ ಹಂತದ ಆನೆಗಳಿಗೂ ತೂಕ ಪರೀಕ್ಷೆ ಮಾಡಲಾಗಿದೆ.

ಸೆ. 6ರಂದು ಮೊದಲನೇ ಹಂತದ ಆನೆಗಳಿಗೆ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ ಅಭಿಮನ್ಯು 5160 ರಿಂದ 5300ಕೆಜಿಗೆ ತೂಕ ಏರಿಸಿಕೊಂಡಿದ್ದಾನೆ. ಭೀಮ 4370 ರಿಂದ 4685, ಮಹೇಂದ್ರ 4530 ರಿಂದ 4665, ಧನಂಜಯ 4940 ರಿಂದ 4990, ಗೋಪಿ 5080 ರಿಂದ 5145, ಕಂಜಾನ್​ 4240 ರಿಂದ 4395, ವಿಜಯಾ 2830 ರಿಂದ 2885 ಮತ್ತು ವರಲಕ್ಷ್ಮಿ 3020 ರಿಂದ 3170 ಕೆಜಿಗೆ ತೂಕ ಹೆಚ್ಚಿಸಿಕೊಂಡಿವೆ.

5685 ಕೆಜಿಯೊಂದಿಗೆ ಈ ಬಾರಿಯೂ ಅರ್ಜನನೇ ಮೊದಲ ಸ್ಥಾನದಲ್ಲಿದ್ದಾನೆ. 5300 ಕೆಜಿ ತೂಕದೊಂದಿಗೆ ಅಂಬಾರಿ ಹೊರುವ ಅಭಿಮನ್ಯು ಎರಡನೇ ಸ್ಥಾನದಲ್ಲಿದ್ದಾನೆ. ತೂಕ ಹೆಚ್ಚಿಸಿಕೊಳ್ಳವ ವಿಚಾರದಲ್ಲಿ ಭೀಮ ಎಲ್ಲರಿಗಿಂತ ಮುಂದಿದ್ದಾನೆ. ಭೀಮ ಬರೋಬ್ಬರಿ 315 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ.

ದಸರಾ ಗಜಪಡೆಯ ತೂಕದ ವಿವರ

ಆನೆ : ಅಭಿಮನ್ಯು (ಅಂಬಾರಿ ಆನೆ)
ವಯಸ್ಸು: 57 ವರ್ಷಗಳು
ಮೂಲ: ಮತ್ತಿಗೋಡು ಆನೆ ಶಿಬಿರ, ಕೊಡಗು ಜಿಲ್ಲೆ,
ಮಾವುತ: ಜೆ.ಎಸ್. ವಸಂತ, ಕಾವಾಡಿ ಜೆ.ಕೆ. ರಾಜು
ದಸರಾ ಅನುಭವ: 21 ವರ್ಷ, 4ನೇ ಬಾರಿ ಅಂಬಾರಿ
ತೂಕ: 5,300 ಕೆ.ಜಿ( 5160 ಕೆಜಿ.- ಸೆ.06 ರಂದು ಇದ್ದ ತೂಕ)

ಆನೆ : ವಿಜಯ (ಕುಮ್ಕಿ ಆನೆ)
ವಯಸ್ಸು : 63 ವರ್ಷಗಳು
ಮೂಲ: ದುಬಾರೆ ಅರಣ್ಯ,
ಮಾವುತ: ಜೆ.ಕೆ. ಬೋಜಪ್ಪ, ಕಾವಾಡಿ ಬಿ.ಪಿ. ಭರತ್
ದಸರಾ ಅನುಭವ: 13 ವರ್ಷ
ತೂಕ : 2,885 ಕೆಜಿ (2830 ಕೆಜಿ)

ಆನೆ : ಗೋಪಿ
ವಯಸ್ಸು : 41 ವರ್ಷಗಳು
ಮೂಲ: ದೊಡ್ಡಬೆಟ್ಟ ಅರಣ್ಯ, ಹಾಸನ
ಮಾವುತ ಪಿ.ಬಿ. ನವೀನ್ ಕುವಾರ್, ಕಾವಾಡಿಕ ಜೆ.ಆರ್. ಶಿವು
ದಸರಾ ಅನುಭವ : 12 ವರ್ಷ
ತೂಕ : 5145 ಕೆಜಿ (5080)

ಆನೆ : ವರಲಕ್ಷ್ತ್ರ್ಮಿ
ವಯಸ್ಸು : 67 ವರ್ಷಗಳು
ಮೂಲ: ಭೀಮನಕಟ್ಟೆ ಆನೆ ಶಿಬಿರ ಕಾಕನಕೋಟೆ ಅರಣ್ಯ
ಮಾವುತ ಜೆ.ಕೆ. ರವಿ, ಕಾವಾಡಿ ಕೆ.ಎಸ್.ಲವ
ದಸರಾ ಅನುಭವ : 10 ವರ್ಷ
ತೂಕ : 3,170ಕೆಜಿ (3020)

ಆನೆ : ಅರ್ಜುನ
ವಯಸ್ಸು : 65 ವರ್ಷಗಳು
ಮೂಲ : ಬಳ್ಳೆ ಆನೆ ಶಿಬಿರ, ಕಾಕನಕೋಟೆ ಅರಣ್ಯ
ಮಾವುತ ವಿನು, ಕಾವಾಡಿ ಡಿ.ರಾಜ
ದಸರಾ ಅನುಭವ : 22 ವರ್ಷ
ತೂಕ: 5680

ಆನೆ : ಕಂಜನ್
ವಯಸ್ಸು: 21 ವರ್ಷಗಳು
ಮೂಲ: ದುಬಾರೆ ಆನೆ ಶಿಬಿರ
ಮಾವುತ ಜೆಬಿ ವಿಜಯ, ಕಾವಾಡಿ ಮಣಿಕಂಠ
ಅನುಭವ: ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸಲಿದ್ದಾನೆ.
ತೂಕ : 4,395 ಕೆಜಿ (4240)

ಆನೆ : ಮಹೇಂದ್ರ
ವಯಸ್ಸು : 40 ವರ್ಷಗಳು
ಮೂಲ : ಮತ್ತಿಗೋಡು ಆನೆ ಶಿಬಿರ
ಮಾವುತ ರಾಜಣ್ಣ, ಕಾವಾಡಿ ಮಲ್ಲಿಕಾರ್ಜುನ
ದಸರಾ ಅನುಭವ : 2 ವರ್ಷ
ತೂಕ : 4660 ಕೆಜಿ (4530)

ಆನೆ : ಧನಂಜಯ
ವಯಸ್ಸು : 43 ವರ್ಷಗಳು
ಮೂಲ : ದುಬಾರೆ ಆನೆ ಶಿಬಿರ
ಮಾವುತ ಜೆ.ಸಿ. ಭಾಸ್ಕರ್, ಕಾವಾಡಿ ಜೆ.ಎಸ್.ರಾಜಣ್ಣ
ದಸರಾ ಅನುಭವ : 4 ವರ್ಷ
ತೂಕ : 4,990 ಕೆಜಿ (4940)

ಆನೆ : ಭೀಮ
ವಯಸ್ಸು : 23 ವರ್ಷ
ಮೂಲ : ಮತ್ತಿಗೋಡು ಆನೆ ಶಿಬಿರ
ಮಾವುತ : ಗುಂಡ, ಕಾವಾಡಿಗ: ನಂಜುಂಡಸ್ವಾಮಿ
ದಸರಾ ಅನುಭವ : 4 ವರ್ಷಗಳು
ತೂಕ : 4,685 ಕೆಜಿ (4370)

ಆನೆ: ಹಿರಣ್ಯ
ವಯಸ್ಸು: 46 ವರ್ಷ
ಮೂಲ: ದುಬಾರೆ ಆನೆ ಶಿಬಿರ
ಮಾವುತ: ಚಂದ್ರಶೇಖರ, ಕಾವಾಡಿಗ: ಮನ್ಸೂರ್‌
ದಸರಾ ಅನುಭವ: ಮೊದಲನೇ ಬಾರಿಗೆ ದಸರಾದಲ್ಲಿ ಭಾಗವಹಿಸಲಿದ್ದಾರೆ.
ತೂಕ: 2915 ಕೆಜಿ

ಆನೆ: ಲಕ್ಷ್ಮೀ
ವಯಸ್ಸು: 52 ವರ್ಷ
ಮೂಲ: ದೊಡ್ಡಹರವೆ ಆನೆ ಶಿಬಿರ
ಮಾವುತ: ರವಿ, ಕಾವಾಡಿಗ: ಮಂಜು
ದಸರಾ ಅನುಭವ: ಮೊದಲನೇ ಬಾರಿಗೆ ದಸರಾದಲ್ಲಿ ಭಾಗವಹಿಸಲಿದ್ದಾರೆ.
ತೂಕ: 3235

ಆನೆ: ಸುಗ್ರೀವಾ
ವಯಸ್ಸು: 41 ವರ್ಷ
ಮೂಲ: ದುಬಾರೆ ಆನೆ ಶಿಬಿರ
ಮಾವುತ: ಜೆ.ಬಿ.ಶಂಕರ್‌, ಕಾವಾಡಿಗ: ಜೆ.ಬಿ.ಹರೀಶ್‌
ದಸರಾ ಅನುಭವ: 2 ವರ್ಷ
ತೂಕ: 5035

ಆನೆ: ರೋಹಿತ್‌
ವಯಸ್ಸು: 21 ವರ್ಷ
ಮೂಲ: ರಾಮಪುರ ಆನೆ ಶಿಬಿರ
ಮಾವುತ: ಮಹದೇವ, ಕಾವಾಡಿಗ: ಮಣಿ
ದಸರಾ ಅನುಭವ: ಮೊದಲನೇ ಬಾರಿಗೆ ದಸರಾದಲ್ಲಿ ಭಾಗವಹಿಸಲಿದ್ದಾರೆ.
ತೂಕ: 3360 ಕೆ.ಜಿ

ಆನೆ: ಪ್ರಶಾಂತ್
ವಯಸ್ಸು: 50 ವರ್ಷ
ಮೂಲ: ದುಬಾರೆ ಆನೆ ಶಿಬಿರ
ಮಾವುತ: ಚಿನ್ನಪ್ಪ, ಕಾವಾಡಿಗ: ಚಂದ್ರ
ದಸರಾ ಅನುಭವ: ಮೊದಲನೇ ಬಾರಿಗೆ ದಸರಾದಲ್ಲಿ ಭಾಗವಹಿಸಲಿದ್ದಾರೆ.
ತೂಕ: 4970

andolanait

Recent Posts

ತೆಕ್ಕಲಕೋಟೆ | ಉತ್ಖನನ ವೇಳೆ ಎರಡು ಅಸ್ಥಿ ಪಂಜರ ಪತ್ತೆ

ಬಳ್ಳಾರಿ : ಜಿಲ್ಲೆಯಲ್ಲಿ ಐದು ಸಾವಿರ ವರ್ಷಗಳಷ್ಟು ಹಳೆಯದಾದ ಪ್ರಾಗೈತಿಹಾಸಿಕ ಕಾಲದ ಎರಡು ಅಸ್ಥಿ ಪಂಜರಗಳು ಪತ್ತೆಯಾಗಿದ್ದು, ಇತಿಹಾಸ ಸಂಶೋಧನಾ…

1 min ago

ಮಂಡ್ಯದಲ್ಲಿ ಎಆರ್‌ಎಐ ಸೆಂಟರ್‌ ತೆರೆಯಲು 500 ಕೋಟಿ ರೂ. : ಎಚ್‌ಡಿಕೆ

ಮೈಸೂರು : ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆ, ಉತ್ತೇಜನಕ್ಕೆ ಕೇಂದ್ರಸರ್ಕಾರ ಆದ್ಯತೆ ನೀಡಿರುವ ಜತೆಗೆ, ಮಂಡ್ಯ ಜಿಲ್ಲೆಯಲ್ಲಿ ಆಟೋಮೋಟಿವ್ ರೀಸರ್ಚ್ ಅಸೋಸಿಯೆಷನ್…

26 mins ago

ಗಮನ ಸೆಳೆದ ಸ್ವಚ್ಛತಾ ಮ್ಯಾರಥಾನ್‌

ಮೈಸೂರು : ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಛತೆಯಲ್ಲಿ ಸಾರ್ವಜನಿಕರ ಸಹಭಾಗಿತ್ವಕ್ಕಾಗಿ ಓಡೋಣ ಮೈಸೂರಿಗಾಗಿ ಒಂದಾಗೋಣ ಸ್ವಚ್ಛತೆಗಾಗಿ ಶೀರ್ಷಿಕೆಯಡಿ ಸ್ವಚ್ಚತಾ…

53 mins ago

ಗೃಹಲಕ್ಷ್ಮಿಗೆ ಜೀವಿತ ಪ್ರಮಾಣಪತ್ರ ಕಡ್ಡಾಯ : ಸಿಎಂ ಸೂಚನೆ

ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಜೀವಿತ ಪ್ರಮಾಣಪತ್ರ ನೀಡುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಪರಿಶೀಲಿಸಿ, ಕೂಡಲೇ ಕ್ರಮ ವಹಿಸುವಂತೆ ಸಿಎಂ…

2 hours ago

ವಿಜಯಪುರದ ಮಂಗಳೂರಿನಲ್ಲಿ ಖಾಸಗಿ ವಿಮಾನ ಪತನ: ಇಬ್ಬರಿಗೆ ಗಂಭೀರ ಗಾಯ

ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ಜೆಟ್‌ ವಿಮಾನವೊಂದು ಪತನವಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಕಲಬುರ್ಗಿಯಿಂದ ಬೆಳಗಾವಿಗೆ…

3 hours ago

ಕಳೆದ 4 ವರ್ಷದಲ್ಲಿ ಆನ್‌ಲೈನ್ ಬೆಟ್ಟಿಂಗ್ ದಂಧೆಗೆ 35 ಮಂದಿ ಬಲಿ

ಬೆಂಗಳೂರು: ರಾಜ್ಯದಲ್ಲಿ ಆನ್‌ಲೈನ್ ಬೆಟ್ಟಿಂಗ್ ಹಾವಳಿ ತೀವ್ರಗೊಂಡಿದೆ. ಕಳೆದ 4 ವರ್ಷದಲ್ಲಿ 35 ಮಂದಿ ಆನ್ ಲೈನ್ ಬೆಟ್ಟಿಂಗ್ ದಂಧೆಗೆ…

3 hours ago