ಗುಜರಾತ್ : ದಂಪತಿ ತಮ್ಮ ತಲೆಯನ್ನು ತಾವೇ ಕಡಿದುಕೊಂಡ ಭಯಾನಕ ಘಟನೆ ಗುಜರಾತ್ ರಾಜ್ಯದ ರಾಜ್ಕೋಟ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ವಿಂಚಿಯಾ ಎಂಬ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. 38 ವರ್ಷ ವಯಸ್ಸಿನ ಕೃಷಿಕ ಹಾಗೂ ಆತನ ಪತ್ನಿ ‘ಗಿಲ್ಲೊಟಿನ್’ ಮಾದರಿಯ ಯಂತ್ರಕ್ಕೆ ತಮ್ಮ ತಲೆಯನ್ನು ಕೊಟ್ಟು ಸಾವಿಗೆ ಶರಣಾಗಿದ್ದಾರೆ.
ಫ್ರೆಂಚ್ ಕ್ರಾಂತಿಯ ವೇಳೆ ಗಿಲ್ಲೋಟಿನ್ ಯಂತ್ರ ಕುಖ್ಯಾತವಾಗಿತ್ತು. ರಾಜಕೀಯ ವಿರೋಧಿಗಳ ತಲೆಯನ್ನು ಈ ಯಂತ್ರದಲ್ಲಿ ಇರಿಸಿ ಕತ್ತರಿಸಲಾಗುತ್ತಿತ್ತು. ಈ ಯಂತ್ರದಲ್ಲಿ ತಲೆಯನ್ನು ಕತ್ತರಿಸುವಷ್ಟ ಹರಿತವಾದ ಬ್ಲೇಡ್ ಇರುತ್ತದೆ. ಯಂತ್ರಕ್ಕೆ ತಲೆಯನ್ನು ಇರಿಸಿ ಯಂತ್ರವನ್ನು ಚಾಲನೆ ಮಾಡಿ ರುಂಡ ಹಾಗೂ ಮುಂಡ ಬೇರ್ಪಡುವಂತೆ ಮಾಡಲಾಗುತ್ತಿತ್ತು.
ರಾಜ್ಕೋಟ್ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ? : ಗಿಲ್ಲೊಟಿನ್ ಮಾದರಿಯ ಯಂತ್ರಕ್ಕೆ ತಮ್ಮ ತಲೆಯನ್ನು ಕೊಟ್ಟು ರಾಜ್ಕೋಟ್ನ ಕೃಷಿಕ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎಂಬ ವಿಚಾರ ಇದೀಗ ಪೊಲೀಸರಿಗೂ ತಲೆ ನೋವಾಗಿ ಪರಿಣಮಿಸಿದೆ. ಮೂಢನಂಬಿಕೆ, ಮಂತ್ರ – ತಂತ್ರದ ಬಲೆಗೆ ಬಿದ್ದು ಈ ಕೃತ್ಯ ಎಸಗಿದ್ದಾರಾ ಎಂಬ ಅನುಮಾನವೂ ಮೂಡಿದೆ.
ಈ ನಡುವೆ ಪೊಲೀಸರಿಗೆ ಗುಜರಾತಿ ಭಾಷೆಯಲ್ಲಿ ಬರೆದಿರುವ ಆತ್ಮಹತ್ಯೆ ಪತ್ರ ಹಾಗೂ ದಂಪತಿಗಳಿಬ್ಬರ ಹೆಬ್ಬೆಟ್ಟು ಮುದ್ರೆ ಕೂಡಾ ಪತ್ತೆಯಾಗಿದೆ. ದಂಪತಿ ತಮ್ಮ ಸಾವಿಗೆ ತಾವೇ ಕಾರಣ ಎಂದು ಹೇಳಿಕೊಂಡಿದ್ಧಾರೆ. ತಮ್ಮ ಸಾವಿಗೆ ಯಾರನ್ನೂ ದೂಷಿಸುವ ಅಗತ್ಯವಿಲ್ಲ ಎಂದೂ ದಂಪತಿ ಮನವಿ ಮಾಡಿದ್ದಾರೆ.
ಮೃತರನ್ನು 38 ವರ್ಷ ವಯಸ್ಸಿನ ಹೇಮು ಮಕ್ವಾನಾ ಹಾಗೂ ಆತನ ಪತ್ನಿ 35 ವರ್ಷ ವಯಸ್ಸಿನ ಹನ್ಸಾ ಮಕ್ವಾನಾ ಎಂದು ಗುರುತಿಸಲಾಗಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದರು. ಈ ಮಕ್ಕಳು ತಮ್ಮ ಪೋಷಕರ ಮೃತ ದೇಹವನ್ನು ಕಂಡು ಕಂಗಾಲಾಗಿ ಕಣ್ಣೀರಿಡುತ್ತಾ ನೆರೆ ಹೊರೆಯವರಿಗೆ ಮಾಹಿತಿ ನೀಡಿದ್ದರು. ಆತ್ಮಹತ್ಯೆಗೆ ಶರಣಾದ ದಂಪತಿ 13 ವರ್ಷದ ಮಗ ಹಾಗೂ 12 ವರ್ಷ ವಯಸ್ಸಿನ ಮಗಳನ್ನು ಅಗಲಿದ್ದಾರೆ. ಮಕ್ಕಳಿಬ್ಬರೂ ತಮ್ಮ ಸಂಬಂಧಿಕರ ಮನೆಯಿಂದ ವಾಪಸ್ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯ ಮೃತ ದೇಹಗಳನ್ನು ರಾಜ್ಕೋಟ್ನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ದೇಹಗಳ ವಿಧಿವಿಜ್ಞಾನ ಪರೀಕ್ಷೆ ಹಾಗೂ ಮರಣೋತ್ತರ ಪರೀಕ್ಷೆ ನಡೆಯಬೇಕಿದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದಿಂದ ಕೆಂಡಗಣ್ಣಸ್ವಾಮಿ ಗದ್ದಿಗೆ ಮಾರ್ಗವಾಗಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯ ಎರಡೂ ಬದಿಗಳಲ್ಲಿರುವ ಬಹುತೇಕ…
ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡ ಕಟ್ಟಡಗಳು ಇಂದಿಗೂ ಸದೃಢವಾಗಿ ಕಂಗೊಳಿಸುತ್ತಿರುವುದು ಮೈಸೂರಿನ ಭವ್ಯ ಪರಂಪರೆಗೆ ಸಾಕ್ಷಿಯಾಗಿವೆ. ಇಂತಹ ಪಾರಂಪರಿಕ ಕಟ್ಟಡಗಳ…
ಮಡಿಕೇರಿ: ಓದುವ ಛಲ, ಆತ್ಮವಿಶ್ವಾಸ, ಪ್ರೋತ್ಸಾಹ, ಮಾರ್ಗದರ್ಶನವಿದ್ದರೆ ಮಕ್ಕಳು ಸರ್ಕಾರಿ ಕಾಲೇಜಿನಲ್ಲಿ ಓದಿದರೂ ಉತ್ತಮ ಅಂಕ ಗಳಿಸಲು ಸಾಧ್ಯವಿದೆ. ಇದಕ್ಕೆ…
ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಪಿರಿಯಾಪಟ್ಟಣ: ತಂಗಿಗೆ ಆಸ್ತಿಯನ್ನು ನೀಡಲೇಬಾರದು ಎಂದು ತೀರ್ಮಾನಿಸಿ ತನ್ನ ಸೋದರ ಅಳಿಯನನ್ನು ಕೊಲ್ಲಲು…
ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 15) ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಮೊದಲ…