BREAKING NEWS

ಚಂದ್ರಯಾನ-3: ವಿಕ್ರಮ್ ಲ್ಯಾಂಡರ್‌ ಸೆರೆ ಹಿಡಿದ ಚಂದ್ರನ ಮೇಲ್ಮೈ ವಿಡಿಯೋ ಹಂಚಿಕೊಂಡ ಇಸ್ರೋ!

ನವದೆಹಲಿ: ಇಸ್ರೋ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಕ್ರಮ್ ಲ್ಯಾಂಡರ್‌ ಸೆರೆ ಹಿಡಿದಿರುವ ಚಂದ್ರನ ಮೇಲ್ಮೈಯ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದೆ.

ವಿಕ್ರಮ್ ಲ್ಯಾಂಡರ್‌ನಲ್ಲಿ ಅಳವಡಿಸಿರುವ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ(LPDC) ಈ ವೀಡಿಯೊವನ್ನು ಸೆರೆಹಿಡಿದಿದೆ. ವಿಕ್ರಮ್ ಲ್ಯಾಂಡರ್‌ನ ಕೆಳಭಾಗದಲ್ಲಿ LPDC ಅಳವಡಿಸಲಾಗಿದೆ. ವಿಕ್ರಮ್ ತನಗಾಗಿ ಸರಿಯಾದ ಮತ್ತು ಸಮತಟ್ಟಾದ ಲ್ಯಾಂಡಿಂಗ್ ಸ್ಥಳವನ್ನು ಕಂಡುಕೊಳ್ಳಲು ಇದನ್ನು ಸ್ಥಾಪಿಸಲಾಗಿದೆ. ಈ ಕ್ಯಾಮೆರಾದ ಸಹಾಯದಿಂದ ವಿಕ್ರಮ್ ಲ್ಯಾಂಡರ್ ಯಾವುದೇ ಉಬ್ಬು ಪ್ರದೇಶಕ್ಕೆ ಇಳಿಯುತ್ತಿಲ್ಲ ಎಂಬುದನ್ನು ನೋಡಬಹುದು.

ಲ್ಯಾಂಡಿಂಗ್‌ಗೂ ಮೊದಲು ಈ ಕ್ಯಾಮೆರಾವನ್ನು ಮತ್ತೆ ಆನ್ ಮಾಡಬಹುದು. ಏಕೆಂದರೆ ಈಗ ಬಂದಿರುವ ಚಿತ್ರವನ್ನು ನೋಡಿದರೆ ಈ ಕ್ಯಾಮೆರಾವನ್ನು ಪ್ರಯೋಗಕ್ಕಾಗಿ ಆನ್ ಮಾಡಲಾಗಿದೆ ಎಂದು ತೋರುತ್ತದೆ. ಇದರಿಂದ ಅದು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಚಿತ್ರಗಳು ಅಥವಾ ವೀಡಿಯೊಗಳಿಂದ ತಿಳಿಯಬಹುದು. ಈ ಸಂವೇದಕವನ್ನು ಚಂದ್ರಯಾನ-2 ರಲ್ಲೂ ಬಳಸಲಾಗಿತ್ತು.

LPDC ಯ ಕೆಲಸವೆಂದರೆ ವಿಕ್ರಮ್‌ಗೆ ಸರಿಯಾದ ಲ್ಯಾಂಡಿಂಗ್ ಸ್ಥಳವನ್ನು ಕಂಡುಹಿಡಿಯುವುದು. ಲ್ಯಾಂಡರ್ ಅಪಾಯ ಪತ್ತೆ ಮತ್ತು ತಪ್ಪಿಸುವ ಕ್ಯಾಮರಾ (LHDAC), ಲೇಸರ್ ಆಲ್ಟಿಮೀಟರ್ (LASA), ಲೇಸರ್ ಡಾಪ್ಲರ್ ವೆಲಾಸಿಟಿಮೀಟರ್ (LDV) ಮತ್ತು ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (LHVC) ಈ ಪೇಲೋಡ್‌ನೊಂದಿಗೆ ಒಟ್ಟಿಗೆ ಕೆಲಸ ಮಾಡುತ್ತದೆ. ಇದರಿಂದ ಲ್ಯಾಂಡರ್ ಅನ್ನು ಸುರಕ್ಷಿತ ಮೇಲ್ಮೈಯಲ್ಲಿ ಇಳಿಸಬಹುದು.

ಯಾವಾಗ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುತ್ತದೆಯೋ ಆ ಸಮಯದಲ್ಲಿ ಅದರ ವೇಗ ಸೆಕೆಂಡಿಗೆ 2 ಮೀಟರ್ ಆಗಿರುತ್ತದೆ. ಆದರೆ ಸಮತಲ ವೇಗವು ಸೆಕೆಂಡಿಗೆ 0.5 ಮೀಟರ್ ಆಗಿರುತ್ತದೆ. ವಿಕ್ರಮ್ ಲ್ಯಾಂಡರ್ 12 ಡಿಗ್ರಿ ಇಳಿಜಾರಿನಲ್ಲಿ ಇಳಿಯಬಹುದು. ಈ ಎಲ್ಲಾ ಉಪಕರಣಗಳು ಈ ವೇಗ, ದಿಕ್ಕು ಮತ್ತು ಸಮತಟ್ಟಾದ ನೆಲವನ್ನು ಕಂಡುಹಿಡಿಯಲು ವಿಕ್ರಮ್ ಲ್ಯಾಂಡರ್‌ಗೆ ಸಹಾಯ ಮಾಡುತ್ತವೆ. ಈ ಎಲ್ಲಾ ಉಪಕರಣಗಳನ್ನು ಲ್ಯಾಂಡಿಂಗ್ ಮೊದಲು ಸುಮಾರು 500 ಮೀಟರ್ ಇರುವಾಗಲೇ ಸಕ್ರಿಯಗೊಳಿಸಲಾಗುತ್ತದೆ.

andolanait

Recent Posts

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

28 mins ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

54 mins ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

2 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

2 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

2 hours ago

ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ: ʻಜಿಟಿಡಿʼ

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…

3 hours ago