BREAKING NEWS

ಸಿಇಟಿ ಫಲಿತಾಂಶ ಪ್ರಕಟ : ಯಾವ ವಿಷಯದಲ್ಲಿ ಯಾರು ಟಾಪರ್‌

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಕೆಸಿಇಟಿ 2023 ಫಲಿತಾಂಶ ಪ್ರಕಟಿಸಲಾಗಿದ್ದು.ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬೆಂಗಳೂರು ಕುಮರನ್ಸ್‌ ಚಿಲ್ಡರ್ನ್‌ ಹೋಂನ ಮೂರು ವಿಷಯಗಳಲ್ಲಿ ಟಾಪರ್‌ ಆಗಿ ಹೊರ ಹೊಮ್ಮಿದ್ದಾರೆ. ಬೆಂಗಳೂರು ಮಹೇಶ್‌ ಪಿಯು ಕಾಲೇಜಿನ ಮಾಲವಿಕಾ ಕಪೂರ್‌ ಎರಡು ವಿಷಯದಲ್ಲಿ ಟಾಪರ್‌ ಎನ್ನಿಸಿದ್ದಾರೆ.

ಪ್ರತೀಕ್ಷಾ ಬಿ ಫಾರ್ಮ, ಡಿ ಫಾರ್ಮ ಹಾಗೂ ನ್ಯಾಚುರೋಪತಿ ಹಾಗೂ ಯೋಗ ಸೈನ್ಸ್‌ನಲ್ಲಿ ಹೆಚ್ಚು ಅಂಕದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮಾಲವಿಕ ಕಪೂರ್‌ ಬಿಎಸ್ಸಿ ನರ್ಸಿಂಗ್‌ ಹಾಗೂ ಬಿವಿಎಸ್ಸಿ ಯಲ್ಲಿ ಟಾಪರ್‌ ಆಗಿದ್ದಾರೆ.

ಬೆಂಗಳೂರು ಕುಮರನ್‌ ಚಿಲ್ಡ್ರನ್ಸ್‌ ಹೋಂನ ವಿಘ್ನೇಶ್‌ ನಟರಾಜ್‌ ಕುಮಾರ್‌ ಗೆ ಎಂಜಿನಿಯರಿಂಗ್‌ ನಲ್ಲಿ ಮೊದಲ ಸ್ಥಾನ ಲಭಿಸಿದೆ. ಎಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ನಟರಾಜ್ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ಕ್ವಾಲಿಫೈ ಪರೀಕ್ಷೆಯಲ್ಲಿ 99.667 ಅಂಕ ಗಳಿಸಿದ್ದ ವಿಘ್ನೇಶ್, ಸಿಇಟಿಯಲ್ಲಿ 96.111 ಅಂಕ ಪಡೆದಿದ್ದರು. ಎರಡರ ಸರಾಸರಿಯಲ್ಲಿ ಇವರು 97.111 ಅಂಕ ತಮ್ಮದಾಗಿಸಿಕೊಂಡಿದ್ದಾರೆ.

ಬಿಎಸ್ಸಿ ಅಗ್ರಿಯಲ್ಲಿ ಮಂಗಳೂರು ಎಕ್ಸ್‌ಪರ್ಟ್‌ ಕಾಲೇಜಿನ ಎಸ್‌.ಎಚ್‌.ಭೈರಶ್‌ ಟಾಪರ್‌ ಎನ್ನಿಸಿದ್ದಾರೆ.

ಮಂಗಳೂರು, ಉಡುಪಿ, ಹುಬ್ಬಳ್ಳಿ, ದಾವಣಗೆರೆ, ಬೀದರ್‌, ರಾಯಚೂರು ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳಲ್ಲಿ ಟಾಪರ್‌ಗಳ ಪಟ್ಟಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಸಿಇಟಿ ಫಲಿತಾಂಶವನ್ನು ಪ್ರಕಟಿಸಿದರು.

ಕರ್ನಾಟಕದಲ್ಲಿ ಈ ವರ್ಷ ಒಟ್ಟು 2,44,345 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ಎಂಜಿನಿಯರ್‌ಗೆ 2,03,381, ಕೃಷಿ ವಿಜ್ಞಾನಕ್ಕೆ 1,64,187, ಪಶುಸಂಗೋಪನೆಗೆ 1,66,756, ಯೋಗ ಮತ್ತು ನ್ಯಾಚುರೋಪತಿಗೆ 1,66,74, ಬಿಫಾರ್ಮಾಕ್ಕೆ 1,06,191, ಡಿ ಫಾರ್ಮಾಕ್ಕೆ 1,06,340 ವಿದ್ಯಾರ್ಥಿಗಳು ಅರ್ಹತೆ ಗಳಿಸಿದ್ದಾರೆ ಎಂದು ಸಚಿವ ಡಾ ಎಂಸಿ ಸುಧಾಕರ ಹೇಳಿದರು.

ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ 60ಕ್ಕೆ 60 ಅಂಕಗಳನ್ನು ಯಾರೂ ಪಡೆದಿಲ್ಲ. ಗಣಿತದಲ್ಲಿ 4 ಮಂದಿ, ಜೀವಶಾಸ್ತ್ರದಲ್ಲಿ 135 ಅಭ್ಯರ್ಥಿಗಳು 60ಕ್ಕೆ 60 ಅಂಕಗಳನ್ನು ಪಡೆದಿದ್ದಾರೆ. ಎಲ್ಲ ಕೋರ್ಸ್‌ಗಳಲ್ಲಿ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಹತೆ ಗಳಿಸಿದ್ದಾರೆ ಎಂದು ಸಚಿವರು ಹೇಳಿದರು.

ಟಾಪರ್‌ ಎಂಜಿನಿಯರಿಂಗ್‌

1. ವಿಘ್ನೇಶ್‌ ನಟರಾಜ್‌ ಕುಮಾರ್‌ ಕುಮರನ್‌ ಚಿಲ್ಡ್ರನ್ಸ್‌ ಹೋಂ ಉತ್ತರಹಳ್ಳಿ ಬೆಂಗಳೂರು

2. ಅರ್ಜುನ್‌ ಕೃಷ್ಣಸ್ವಾಮಿ ಆರ್‌ವಿ ಪಿಯು ಕಾಲೇಜು ಜಯನಗರ ಬೆಂಗಳೂರು

3. ಸಮೃದ್ದ್‌ ಶೆಟ್ಟಿ ವಿದ್ಯಾ ನಿಕೇತನ ಪಿಯು ಕಾಲೇಜು ಹುಬ್ಬಳ್ಳಿ

4. ಎಸ್‌ ಎಸ್‌ ಸುಮೇಧ್‌ ಜಿಂದಾಲ್‌ ವಿದ್ಯಾ ಮಂದಿರ ತೋರಣಗಲ್ಲು ಬಳ್ಳಾರಿ

5. ಮಾಧವ್‌ ಸೂರ್ಯ ತಡೇಪಲ್ಲಿ ನಾರಾಯಣ ಈ ಟೆಕ್ನೋ ಸ್ಕೂಲ್‌ ಮಾರತ್ತಹಳ್ಳಿ ಬೆಂಗಳೂರು

6. ಸುಜಿತ್‌ ಅಡಿಗ ಆರ್‌ವಿ ಪಿಯು ಕಾಲೇಜು ಬೆಂಗಳೂರು

7. ಉಜ್ವಲ್‌ ಎಲ್‌ ಶಂಕರ್‌ ನಾರಾಯಣ ಒಲಂಪಿಯಾಡ್‌ ಸಹಕಾರ ನಗರ ಬೆಂಗಳೂರು

8. ರಿಶಿತ್‌ ಗುಪ್ತ ಅಲೈನೆ ಪಬ್ಲಿಕ್‌ ಶಾಲೆ ಕನಕಪುರ ರಸ್ತೆ ಬೆಂಗಳೂರು

9. ಅಭಿನವ್‌ ದೀಕ್ಷಾ ಪಿಯುಉ ಕಾಲೇಜು ತಲಘಟ್ಟಪುರ ಬೆಂಗಳೂರು

10. ಭುವನ್‌ ಕೆ.ಪ್ರಸಾದ್‌ ದೀಕ್ಷಾ ಕಾಲೇಜು ತಲಘಟ್ಟಪುರ ಬೆಂಗಳೂರು‌

ಟಾಪರ್‌ ನ್ಯಾಚುರೋಪತಿ ಹಾಗೂ ಯೋಗ ಸೈನ್ಸ್‌

1. ಆರ್‌.ಪ್ರತೀಕ್ಷಾ ಕುಮರನ್‌ ಚಿಲ್ಡ್ರನ್ಸ್‌ ಹೋಂ ಪದ್ಮನಾಭನಗರ ಬೆಂಗಳೂರು

2. ಎಸ್‌ ಎಚ್‌.ಭೈರೇಶ್‌ ಎಕ್ಸ್‌ಪರ್ಟ್‌ ಪಿಯು ಕಾಲೇಜು ಮಂಗಳೂರು

3. ಎಂ. ಎಚ್‌. ಸೃಜನ್‌ ಬೇಸ್‌ ಪಿಯು ಕಾಲೇಜು ಅಕ್ಷಯ ಕಾಲೋನಿ ಹುಬ್ಬಳ್ಳಿ
4. ಕಾರ್ತಿಕ ಮನೋಹರ್‌ ಸಿಂಹಾಸನ್‌ ಲೇಡಿ ಅನುಸೂಯ ಅಕಾಡೆಮಿ ರಾಜಸ್ಥಾನ

5. ಮಾಲವಿಕಾ ಕಪೂರ್‌ ಮಹೇಶ್‌ ಪಿಯು ಕಾಲೇಜು ಚಾಮರಾಜಪೇಟೆ ಬೆಂಗಳೂರು

6. ಎ ಪ್ರತೀಕ್ಷ ಚೈತನ್ಯ ಪಿಯು ಕಾಲೇಜು ರಾಜಾಜಿನಗರ ಬೆಂಗಳೂರು

7. ಎಂ ವೈಶಾಖ್‌ ಎಕ್ಸಲೆಂಟ್‌ ಪಿಯುಕಾಲೇಜು ಮೂಡಬಿದ್ರೆ

8. ಆಕಾಶ್‌ ಗೋವಿಂದಯ್ಯ ಚೈತನ್ಯ ಪಿಯು ಕಾಲೇಜು ನಾಗರಬಾವಿ ಬೆಂಗಳೂರು

9. ಸಾತ್ವಿಕ್‌ ಕುಲಕರ್ಣಿ ಮಿರಾಂಡ ಜೂನಿಯರ್‌ ಕಾಲೇಜು ಇಂದಿರಾನಗರ ಬೆಂಗಳೂರು

10. ಶ್ರೀನಿವಾಸ ಬಸನಗೌಡ ಮಾಲೀ ಪಾಟೀಲ ಸರ್‌ ಎಂವಿ ಪಿಯು ಕಾಲೇಜು ದಾವಣಗೆರೆ

ಟಾಪರ್‌ ಬಿಎಸ್ಸಿ ಕೃಷಿ

1. ಎಚ್‌ ಎಚ್‌ ಭೈರೇಶ್‌ ಎಕ್ಸಪರ್ಟ್‌ ಪಿಯು ಕಾಲೇಜು ಮಂಗಳೂರು

2. ಅನುರಾಗ್‌ ರಂಜನ್‌ ಪಮಾಣ ಪಿಯು ಕಾಲೇಜು ರಾಯಚೂರು

3. ಕಾರ್ತಿಕ ಮನೋಹರ್‌ ಸಿಂಹಾಸನ್‌ ಲೇಡಿ ಅನುಸೂಯ ಅಕಾಡೆಮಿ ರಾಜಸ್ಥಾನ

4. ಪಸ್ಪಲೇಟಿ ಧೃವ ಶಿವಕಾಂತ್‌ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್‌ ಜೆಪಿನಗರ ಬೆಂಗಳೂರು

5. ಶ್ರೀನಿವಾಸ ಬಸನಗೌಡ ಮಾಲೀಪಾಟೀಲ ಸರ್‌ ಎಂವಿ ಪಿಯು ಕಾಲೇಜು ದಾವಣಗೆರೆ

6. ಪ್ರಣವ್‌ ಗುಜ್ಜರ್‌ ಕಾರ್ಕಳ ಜ್ಞಾನಸುಧಾ ಕಾಲೇಜು ಕುಕ್ಕಂದೂರು ಉಡುಪಿ

7. ಎನ್‌ ಪ್ರೀತಂ ವಿದ್ಯಾಮಂದಿರ ಪಿಯುಕಾಲೇಜು ಮಲ್ಲೇಶ್ವರಂ ಬೆಂಗಳೂರು

8. ಪ್ರಣವ್‌ ಆರ್‌ ಭಟ್‌ ವೆಂಕಟ ಇಂಟರನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ ರಾಜಾಜಿನಗರ ಬೆಂಗಳೂರು

9. ಉಜ್ವಲ್‌ ಎಲ್‌ ಶಂಕರ್‌ ನಾರಾಯಣ ಒಲಂಪಿಯಾಡ್‌ ಸ್ಕೂಲ್‌ ಸಹಕಾರ ನಗರ ಬೆಂಗಳೂರು

10. ಸಾತ್ವಿಕ್‌ ಕುಲಕರ್ಣಿ ಮಿರಿಂಡಾ ಜೂನಿಯರ್‌ ಕಾಲೇಜು ಇಂದಿರಾನಗರ ಬೆಂಗಳೂರು

ಟಾಪರ್‌ ಬಿವಿಎಸ್ಸಿ

1. ಮಾಲವಿಕಾ ಕಪೂರ್‌ ಮಹೇಶ್‌ ಪಿಯು ಕಾಲೇಜು ಚಾಮರಾಜಪೇಟೆ ಬೆಂಗಳೂರು

2. ಆರ್‌.ಪ್ರತೀಕ್ಷಾ ಕುಮರನ್‌ ಚಿಲ್ಡ್ರನ್ಸ್‌ ಹೋಂ ಪದ್ಮನಾಭನಗರ ಬೆಂಗಳೂರು

3. ಚಂದನ್‌ಗೌಡ ಸಿ ಎನ್‌ ಮಹೇಶ್‌ ಪಿಯು ಕಾಲೇಜು ಚಾಮರಾಜಪೇಟೆ ಬೆಂಗಳೂರು

4. ಎಚ್‌ ಎಚ್‌ ಭೈರೇಶ್‌ ಎಕ್ಸಪರ್ಟ್‌ ಪಿಯು ಕಾಲೇಜು ಮಂಗಳೂರು

5. ಕಾರ್ತಿಕ ಮನೋಹರ್‌ ಸಿಂಹಾಸನ್‌ ಲೇಡಿ ಅನುಸೂಯ ಅಕಾಡೆಮಿ ರಾಜಸ್ಥಾನ

6. ಎಂ. ಎಚ್‌. ಸೃಜನ್‌ ಬೇಸ್‌ ಪಿಯು ಕಾಲೇಜು ಅಕ್ಷಯ ಕಾಲೋನಿ ಹುಬ್ಬಳ್ಳಿ

7. ಆದಿತ್ಯ ಶ‌ಹೀನ್ ಕಾಲೇಜು ಬೀದರ್‌

8. ಆದರ್ಶ್‌ ಸಜ್ಜನ್‌ ಶ್ರೀ ರಾಮಗ್ಲೋಬಲ್‌ ಕಾಲೇಜು ಸಮೇತನಹಳ್ಳಿ ಬೆಂಗಳೂರು

9. ಎ ಪ್ರತೀಕ್ಷ ಚೈತನ್ಯ ಪಿಯು ಕಾಲೇಜು ರಾಜಾಜಿನಗರ ಬೆಂಗಳೂರು

10. ಆಕಾಶ್‌ ಗೋವಿಂದಯ್ಯ ಚೈತನ್ಯ ಪಿಯು ಕಾಲೇಜು ನಾಗರಬಾವಿ ಬೆಂಗಳೂರು

lokesh

Recent Posts

ಪರಿಷತ್‌ ಚುನಾವಣೆಯಲ್ಲಿ ಕ್ರಾಸ್‌ ವೋಟ್‌ ಮಾಡಿದ ಶಾಸಕರು ಗೊತ್ತಿದೆ ; ಎಚ್‌.ಡಿ.ಕುಮಾರಸ್ವಾಮಿ

ಮೈಸೂರು : ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಜಾ.ದಳದಿಂದ ಕ್ರಾಸ್ ವೋಟ್ ಮಾಡಿದ ನಾಲ್ಕು ಜನರು ಯಾರೆಂದು ಗೊತ್ತಿದೆ.…

2 hours ago

ಮಂಡ್ಯ | ಐವರು ಅಂತರ್‌ ಜಿಲ್ಲಾ ಕಳ್ಳರ ಬಂಧನ

ಮಂಡ್ಯ : ಜಿಲ್ಲೆಯ ವಿವಿಧೆಡೆ ನಡೆದ 21 ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ 553 ಗ್ರಾಂ…

2 hours ago

ಜೂನ್‌ 21ರಂದು ನೀಟ್‌ ಮರುಪರೀಕ್ಷೆ ; ಮೈಸೂರು ಜಿಲ್ಲೆಯಲ್ಲಿ 7886 ಪರೀಕ್ಷಾರ್ಥಿಗಳ ನೋಂದಣಿ

ಮೈಸೂರು : ಜಿಲ್ಲೆಯಲ್ಲಿ ನೀಟ್ ಪರೀಕ್ಷೆಯನ್ನು ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಅಪರ…

2 hours ago

ನೀಟ್‌ಗಾಗಿ ಟೆಲಿಗ್ರಾಂ ನಿಷೇಧ ; ಕೇಂದ್ರದ ನಿರ್ಧಾರ ಎತ್ತಿ ಹಿಡಿದ ಕೋರ್ಟ್‌

ಹೊಸದಿಲ್ಲಿ : ನೀಟ್‌-ಯುಜಿ 2026 ಮರುಪರೀಕ್ಷೆ ಹಿನ್ನೆಲೆ ಟೆಲಿಗ್ರಾಂನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ.…

3 hours ago

ಮಂತ್ರಿಗಿರಿ, ಅಧಿಕಾರಕ್ಕಾಗಿ ಎಂದಿಗೂ ಯಾರನ್ನು ಕೇಳಿಕೊಂಡಿಲ್ಲ ; ಡಾ.ಎಚ್.ಸಿ.ಮಹದೇವಪ್ಪ

ಮೈಸೂರು : ಮಂತ್ರಿಗಿರಿ, ಅಧಿಕಾರಕ್ಕಾಗಿ ಎಂದಿಗೂ ಯಾರನ್ನು ಕೇಳಿಕೊಂಡಿಲ್ಲ. ಅತ್ತು-ಕರೆದು ಅಧಿಕಾರ ಪಡೆದಿಲ್ಲ. ನನ್ನ-ಸಿದ್ದರಾಮಯ್ಯರ ನಡುವೆ ಯಾವ ವೈಮನಸ್ಸು ಇಲ್ಲ.…

4 hours ago

ಮೈಸೂರು | ಠಾಣಾ ಮಟ್ಟದಲ್ಲಿ ರೌಡಿ ಪ್ರತಿಬಂಧಕ ದಳ ಸ್ಥಾಪನೆ

ಮೈಸೂರು : ನಗರದಲ್ಲಿ ರೌಡಿಗಳ ಚಟುವಟಿಕೆಯನ್ನು ಹತ್ತಿಕ್ಕಲು ಮುಂದಾಗಿರುವ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು, ಸರ್ಕಾರದ ಆದೇಶದನ್ವಯ…

12 hours ago