BREAKING NEWS

ಹೆಂಡತಿ ಜತೆ ಜಗಳವಾಡಿ ಹೈ ಟೆನ್ಷನ್ ವೈರ್ ಕಚ್ಚಿದ ಕುಡುಕ

ಚೆನ್ನೈ: ‘ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ’ ಎನ್ನುವುದು ಗಾದೆ ಮಾತು. ಆದರೆ ಕೆಲವೊಂದು ಯುದ್ಧಗಳು ಊಟದ ಬಳಿಕವೂ ಮುಂದುವರಿಯುತ್ತವೆ. ಇಲ್ಲೊಬ್ಬ ಕುಡುಕ ಮತ್ತು ಹೆಂಡತಿಯ ಜಗಳ, ಆತ ಕೋಪದ ಭರದಲ್ಲಿ ಹೈಟೆನ್ಷನ್ ವೈರ್ ಅನ್ನು ಕಡಿಯುವವರೆಗೂ ಹೋಗಿದೆ.
ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಟ್ರಾನ್ಸ್‌ಫಾರ್ಮರ್ ಮೇಲೆ ಹತ್ತಿ, ಹೈಟೆನ್ಷನ್ ವೈರ್ ಅನ್ನು ಕಚ್ಚಿದ್ದಾನೆ. ಇದರ ಪರಿಣಾಮ ಆತನ ಮುಖದಲ್ಲಿ ತೀವ್ರ ಸುಟ್ಟ ಗಾಯಗಳಾಗಿವೆ. ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಹೆಂಡತಿ ಜಗಳದ ನಂತರ ತನ್ನ ತವರು ಗ್ರಾಮ ರೆಡ್ಡಿಪಾಳಯಂಗೆ ತನ್ನನ್ನು ಬಿಟ್ಟು ಹೋಗಿದ್ದಾಳೆ ಎಂದು ಬೇಸರಗೊಂಡಿದ್ದ ಚಿನ್ನಮಂಗೋಡು ಗ್ರಾಮದ ನಿವಾಸಿ, 33 ವರ್ಷದ ಧರ್ಮದೊರೈ, ಹರಿಯುವ ಕರೆಂಟ್‌ಗೆ ಬಾಯಿಟ್ಟಿದ್ದಾನೆ. ಹೆಂಡತಿ ಜತೆಗಿನ ಜಗಳಕ್ಕಿಂತಲೂ ವಿದ್ಯುತ್ ಶಾಕ್ ಪ್ರಭಾವ ಕಡಿಮೆ ಇರಬಹುದು ಎಂದು ಆತ ಭಾವಿಸಿರಬಹುದು. ಜತೆಗೆ ಆತನೊಳಗಿದ್ದ ಎಣ್ಣೆಯ ಕಿಕ್ ಆತನಿಗೆ ಮತ್ತಷ್ಟು ಉತ್ತೇಜನ ನೀಡಿತ್ತು.
ತನ್ನ ಹೆಂಡತಿಯನ್ನು ತವರು ಮನೆಯಿಂದ ಮರಳಿ ಕರೆತರಲು ಸಹಾಯ ಮಾಡಬೇಕು ಎಂದು ಕೋರಿ ಧರ್ಮದೊರೈ, ಪತ್ನಿಯ ಸಹೋದರರ ವಿರುದ್ಧ ದೂರು ನೀಡಲು ಅರಂಬಕ್ಕಂ ಪೊಲೀಸ್ ಠಾಣೆಯನ್ನು ಹಲವು ಬಾರಿ ಸಂಪರ್ಕಿಸಿದ್ದ ಎಂದು ಮೂಲಗಳು ತಿಳಿಸಿವೆ.
ಕುಡಿತ ಅಮಲಿನಲ್ಲಿ ತೂರಾಡುತ್ತಿದ್ದ ಧರ್ಮದೊರೈ, ಬುಧವಾರ ಕೂಡ ಪೊಲೀಸ್ ಠಾಣೆಗೆ ಬಂದಿದ್ದ. ಆತನನ್ನು ಸ್ವಲ್ಪ ಕಾಲ ಕಾಯುವಂತೆ ಪೊಲೀಸರು ಸೂಚಿಸಿದ್ದರು. ಸ್ವಲ್ಪ ಹೊತ್ತು ಕುಳಿತಿದ್ದ ಧರ್ಮದೊರೈ, ಇದ್ದಕ್ಕಿದ್ದಂತೆ ಎದ್ದು ನಡೆದಿದ್ದಾನೆ. ಪೊಲೀಸ್ ಠಾಣೆ ಆವರಣದಿಂದ ಹೊರಗೆ ಎದುರಿನ ಕಟ್ಟಡದ ಸಮೀಪವಿದ್ದ ಟ್ರಾನ್ಸ್‌ಫಾರ್ಮರ್ ಕಂಬವನ್ನು ಏರಿದ್ದಾನೆ.
ಇದನ್ನು ಕಂಡ ಪೊಲೀಸರು ಹಾಗೂ ಸ್ಥಳೀಯರು ಗಾಬರಿಗೊಂಡಿದ್ದಾರೆ. ನಿನ್ನ ಸಮಸ್ಯೆಯನ್ನು ಪರಿಹರಿಸುತ್ತೇವೆ, ಕೆಳಗೆ ಇಳಿದು ಬಾ ಎಂದು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆತ ಅನಾಹುತಕಾರಿ ಹೆಜ್ಜೆ ಇರಿಸುತ್ತಾನೆ ಎಂಬ ಭಯ ಉಂಟಾಗಿತ್ತು. ಕೆಳಗಿನಿಂದ ಎಷ್ಟೇ ಕೂಗಿ ಕರೆದರೂ ಆತ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಎಲ್ಲರೂ ನೋಡ ನೋಡುತ್ತಿದ್ದಂತೆಯೇ ಒಂದು ಹೈ ಟೆನ್ಷನ್ ವೈರ್ ಅನ್ನು ಕಚ್ಚಿದ್ದಾನೆ. ಆಗ ಒಮ್ಮೆಲೆ ಬೆಂಕಿ ಹೊತ್ತಿಕೊಂಡು ಆರಿದೆ. ಆತ ಅಲ್ಲಿಯೇ ಪ್ರಜ್ಞೆ ತಪ್ಪಿ ನಿಂತಿದ್ದು, ಆಗ ಮತ್ತೊಮ್ಮೆ ತಂತಿಗೆ ಆತನ ದೇಹ ತಾಗಿದೆ. ಇದರಿಂದ ಜೋರಾಗಿ ಬೆಂಕಿ ಉರಿದಿದ್ದು, ವಿದ್ಯುತ್ ಆಘಾತಕ್ಕೆ ಆತ ಕೆಳಗೆ ಬಿದ್ದಿದ್ದಾನೆ. ಸುಮಾರು ಐದು- ಆರು ಅಡಿ ಎತ್ತರದಿಂದ ಆತ ನೆಲದ ಮೇಲೆ ಬಿದ್ದಿದ್ದಾನೆ.

ಕೂಡಲೇ ಪೊಲೀಸರು ಧರ್ಮದೊರೈನನ್ನು ಎಳವೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಅಲ್ಲಿಂದ ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆತನ ಮುಖ ಹಾಗೂ ವಿವಿಧ ಭಾಗಗಳಲ್ಲಿ ತೀವ್ರ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆತನಿಗೆ ಎಷ್ಟು ಪ್ರಮಾಣದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿಲ್ಲ.

lokesh

Recent Posts

ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರು ಬದಲಾವಣೆ : ಸಂಸದ ಯದುವೀರ್‌

ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…

7 hours ago

ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಇಳುವರಿ ಜೊತೆಗೆ ಹೆಚ್ಚಿನ ಆದಾಯ ಪಡೆಯರಿ : ರೈತರಿಗೆ ಸಿಎಂ ಕರೆ

ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…

8 hours ago

ಟಿ-20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ :ಸೂರ್ಯಕುಮಾರ್ ಯಾದವ್ ನಾಯಕ

ಹೊಸದಿಲ್ಲಿ: ಮುಂಬರುವ ಐಸಿಸಿ ಟಿ-೨೦ ವಿಶ್ವಕಪ್‌ಗಾಗಿ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್…

8 hours ago

ಮೊಟ್ಟೆ ಕ್ಯಾನ್ಸರ್‌ ಕಾರಕವಲ್ಲ : ಕೇಂದ್ರ ವರದಿ

ಹೊಸದಿಲ್ಲಿ : ಮೊಟ್ಟೆ ಸೇವೆನೆಗೆ ಸುರಕ್ಷಿತವಾಗಿದ್ದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಾಗುವ ಯಾವುದೇ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಆಹಾರ…

8 hours ago

‘ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಿ’ : ಶಿವಶಂಕರ್ ಸೂಚನೆ

ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…

8 hours ago

ಮೈಸೂರು | ನಾಳೆಯಿಂದ ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ

ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…

8 hours ago