BREAKING NEWS

ಬಿಎಸ್ಎನ್‌ಎಲ್ ಪುನಶ್ಚೇತನಕ್ಕೆ 89,047 ಕೋಟಿ ರೂ. ಪ್ಯಾಕೇಜ್

ಹೊಸದಿಲ್ಲಿ : ಖಾಸಗಿ ದೂರ ಸಂಪರ್ಕ ಸಂಸ್ಥೆಗಳ ಪೈಪೋಟಿಯಲ್ಲಿ ಮುಚ್ಚುವ ಭೀತಿಯಲ್ಲಿರುವ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್ ಎನ್ ಎಲ್ ಪುನಶ್ಚೇತನಕ್ಕೆ ಕೇಂದ್ರ ಸರಕಾರ 89,047 ಕೋಟಿ ರೂ. ಮೊತ್ತದ ಪ್ಯಾಕೇಜ್ ಘೋಷಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ. ಇದರಲ್ಲಿ ಬಿಎಸ್ ಎನ್ ಎಲ್ ಗೆ 4ಜಿ/5ಜಿ ಸ್ಪೆಕ್ಟ್ರಂ ಹಂಚಿಕೆ ಕೂಡ ಸೇರಿದೆ. ಈ ಮೊತ್ತವು ಭಾರತ್ ಸಂಚಾರ್ ನಿಗಮ ಲಿ.( ಬಿಎಸ್ ಎನ್ ಎಲ್) ಪುನಶ್ಚೇತನಕ್ಕೆ ಕಳೆದ ವರ್ಷ ಘೋಷಣೆಯಾದ 1.64 ಲಕ್ಷ ಕೋಟಿ ರೂ. ಪ್ಯಾಕೇಜ್ ಭಾಗವಾಗಿದೆ. ಇದೀಗ ಬಿಎಸ್ ಎನ್ ಎಲ್ ಅಧಿಕೃತ ಬಂಡವಾಳ 1,50,000ಕೋಟಿ ರೂ.ನಿಂದ 2,10,000 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಪುನಶ್ಚೇತನ ಪ್ಯಾಕೇಜ್ ನಿಂದ ಬಿಎಸ್ ಎನ್ ಎಲ್ ಸುಭದ್ರವಾದ ದೂರಸಂಪರ್ಕ ಸೇವಾ ಪೂರೈಕೆದಾರ ಸಂಸ್ಥೆಯಾಗಿ ರೂಪುಗೊಳ್ಳಲಿದ್ದು, ಭಾರತದ ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಗಮನ ಕೇಂದ್ರೀಕರಿಸಲಿದೆ ಎಂದು ಸರ್ಕಾರ ಹೇಳಿಕೆಯೊಂದರಲ್ಲಿ ತಿಳಿಸಿದೆ. 

2023-24ನೇ ಹಣಕಾಸು ಸಾಲಿನಲ್ಲಿ ಸರ್ಕಾರ 52,937 ಕೋಟಿ ರೂ. ಬಂಡವಾಳ ನೆರವನ್ನು ಘೋಷಿಸಿತ್ತು. ಇದಕ್ಕಿಂತ ಹಿಂದಿನ ಸಾಲಿನಲ್ಲಿ 44,720 ಕೋಟಿ ರೂ. ಬಂಡವಾಳ ನೆರವು ಘೋಷಿಸಲಾಗಿತ್ತು. ಇತ್ತೀಚಿನ ಸ್ಪೆಕ್ಟ್ರಂ ಹಂಚಿಕೆಯಿಂದ ಬಿಎಸ್ ಎನ್ ಎಲ್ ಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ 4ಜಿ ಹಾಗೂ 5ಜಿ ಸೇವೆಗಳನ್ನು ನೀಡಲು ಸಾಧ್ಯವಾಗಲಿದೆ. ವಿವಿಧ ಸಂಪರ್ಕ ಯೋಜನೆಗಳ ಅಡಿಯಲ್ಲಿ ಗ್ರಾಮೀಣ ಹಾಗೂ ಸಂಪರ್ಕ ಹೊಂದಿರದ ಹಳ್ಳಿಗಳಿಗೆ 4ಜಿ ಕವರೇಜ್ ಅನ್ನು ಬಿಎಸ್ ಎನ್ ಎಲ್ ನೀಡಬಹುದು. 

ಬಿಎಸ್ಎನ್ಎಲ್ / ಎಂಟಿಎನ್ ಎಲ್ ಗೆ 2019ರಲ್ಲಿ ಮೊದಲ ಪುನಶ್ಚೇತನ ಪ್ಯಾಕೇಜ್ ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಇದು 69,000 ಕೋಟಿ ರೂ. ಪ್ಯಾಕೇಜ್ ಆಗಿದ್ದು, ಬಿಎಸ್ ಎನ್ ಎಲ್ /ಎಂಟಿಎನ್ ಎಲ್ ನಲ್ಲಿ ಸ್ಥಿರತೆ ತಂದಿತ್ತು. 2022ರಲ್ಲಿ ಸರ್ಕಾರ ಬಿಎಸ್ ಎನ್ ಎಲ್/ ಎಂಟಿಎನ್ ಎಲ್ ಗೆ 1.64 ಲಕ್ಷ ಕೋಟಿ ರೂ. ಮೊತ್ತದ ಎರಡನೇ ಪುನಶ್ಚೇತನ ಪ್ಯಾಕೇಜ್ ಗೆ ಅನುಮೋದನೆ ನೀಡಿತ್ತು. ಈ ಎರಡು ಪ್ಯಾಕೇಜ್ ಗಳ ಕಾರಣದಿಂದ 2021-22ನೇ ಹಣಕಾಸು ಸಾಲಿನಿಂದ ಬಿಎಸ್ ಎನ್ ಎಲ್ ಲಾಭ ಗಳಿಸಲು ಪ್ರಾರಂಭಿಸಿತ್ತು. ಬಿಎಸ್ ಎನ್ ಎಲ್ ಮೇಲಿನ ಒಟ್ಟು ಸಾಲದ ಹೊರೆ 32,944 ಕೋಟಿ ರೂ.ನಿಂದ 22,289 ಕೋಟಿ ರೂ.ಗೆ ತಗ್ಗಿತ್ತು. ಹೋಮ್ ಫೈಬರ್ ವಲಯದಲ್ಲಿ ಬಿಎಸ್ ಎನ್ ಎಲ್ ಉತ್ತಮ ಬೆಳವಣಿಗೆ ದಾಖಲಿಸಿದೆ. 

ಬಿಎಸ್ ಎನ್ ಎಲ್ ಈ ಹಿಂದೆ ನಿರಂತರ ನಷ್ಟಕ್ಕೆ ತುತ್ತಾಗಿತ್ತು. 2019-20ನೇ ಸಾಲಿನಲ್ಲಿ ಬಿಎಸ್ ಎನ್ ಎಲ್ ಗೆ 15,500 ಕೋಟಿ ರೂ. ನಷ್ಟವಾಗಿತ್ತು. 2019ರಲ್ಲಿ ಪುನಶ್ಚೇತನ ಪ್ಯಾಕೇಜ್ ನೀಡಿದ ಬಳಿಕ 2020-21 ನೇ ಸಾಲಿನಲ್ಲಿ 7,441 ಕೋಟಿ ರೂ.ಗೆ ಇಳಿಕೆಯಾಗಿತ್ತು.

lokesh

Recent Posts

ಮೈಸೂರು | ನಾಳೆಯಿಂದ ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ

ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…

22 mins ago

ರೇಸ್‌ಕ್ಲಬ್‌ ಸುತ್ತಮುತ್ತ ಕುದುರೆ ಚಟುವಟಿಕೆಗಳಿಗೆ ನಿರ್ಬಂಧ

ಮೈಸೂರು : ಮೈಸೂರಿನ ರೇಸ್‌ಕ್ಲಬ್‌ನ ಪ್ರದೇಶದ ಸುತ್ತಲಿನ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಕುದುರೆ, ಕತ್ತೆ, ಹೇಸರಗತ್ತೆ ಪ್ರಾಣಿಗಳ ಚಲನವಲನ, ಕುದುರೆಗಳನ್ನು…

60 mins ago

ರಸ್ತೆ ಅಪಘಾತ ಸಂಖ್ಯೆ ಶೂನ್ಯವಾಗಬೇಕು : ನಿ.ನ್ಯಾಯಮೂರ್ತಿ ಅಭಯ್‌ ಮನೋಹರ್‌ ಸಪ್ರೆ

ಮೈಸೂರು : ಪ್ರತಿ ಜೀವ ಅಮೂಲ್ಯ, ರಸ್ತೆ ಅಪಘಾತಗಳ ಸಂಖ್ಯೆ ಶೂನ್ಯವಾಗುವುದು ಗುರಿಯಾಗಬೇಕು ಎಂದು ಸುಪ್ರೀಂ ಕೋಟ್೯ನ ನಿ.ನ್ಯಾಯಮೂರ್ತಿಯೂ ಆದ…

1 hour ago

ಸ್ಲೀವ್‌ಲೆಸ್‌, ಹರಿದ ಜೀನ್ಸ್‌ ಹಾಕುವ ಸರ್ಕಾರಿ ನೌಕರರೇ ಹುಷಾರ್.. : ರಾಜ್ಯ ಸರ್ಕಾರದ ಎಚ್ಚರಿಕೆ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ಬರುವಾಗ ಯೋಗ್ಯ ಸೂಕ್ತ ಬಟ್ಟೆ ಧರಿಸಿಕೊಂಡು ಬರದಿದ್ದರೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ…

2 hours ago

ಮೈಸೂರು ವಿಶ್ವವಿದ್ಯಾನಿಲಯ ; ಅನಧಿಕೃತ ವಿವಿಧ ವಿದ್ಯಾರ್ಥಿ ಸಂಘಟನೆಗಳ ಪ್ರವೇಶಕ್ಕೆ ನಿರ್ಬಂಧ

ಮೈಸೂರು : ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸುವ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಿಕೆ ಹಾಗೂ ವಿ.ವಿ ಕ್ಯಾಂಪಸ್‌ಗೆ ಅನಧಿಕೃತ…

2 hours ago

ವಿಶೇಷ ಚೇತನರಿಗೆ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರ ಬದ್ಧ

ಬೆಂಗಳೂರು : ವಿಶೇಷ ಚೇತನರ ಬಗ್ಗೆ ಯಾರೂ ಕನಿಷ್ಠ ಭಾವನೆ ಹೊಂದಬೇಕಾಗಿಲ್ಲ. ಅವರಿಗೆ ದೇವರು ವಿಶೇಷವಾದ ಶಕ್ತಿಯನ್ನು ಕೊಟ್ಟಿರುತ್ತಾನೆ. ಹೀಗಾಗಿ…

2 hours ago