ಮನೆ ಗುಡಿಸಿ ಒರೆಸಲು ರೋಬೊ ವಾಕ್ಯೂಮ್ ಕ್ಲೀನರ್‌ಗಳಿಂದಲೇ ಮನೆಮಾತಾಗಿರುವ ಯುರೇಕಾ ಫೋರ್ಬ್ಸ್ ಕಂಪೆನಿಯು ಇತ್ತೀಚೆಗೆ ‘ಸ್ಮಾರ್ಟ್ ಕ್ಲೀನ್ ವಿತ್ ಆಟೋ ಬಿನ್’ ಎಂಬ ನೂತನ ವಾಕ್ಯೂಮ್ ಕ್ಲೀನರನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಕ್ಲೀನ್ ವಾಕ್ಯೂಮ್ ಕ್ಲೀನರ್‌ನಲ್ಲಿ ಎರಡು ಸಾಧನಗಳಿವೆ. ಒಂದು ಕಸದಬುಟ್ಟಿಯಂತಿರುವ ದೊಡ್ಡ ಸಾಧನ. ಇದರಲ್ಲಿ ೪ ಲೀ. ಸಾಮರ್ಥ್ಯದ ಚೀಲವಿದ್ದು, ಇದರಲ್ಲಿ ಕಸ, ದೂಳು ಸಂಗ್ರಹಿಸಬಹುದಾಗಿದೆ. ಪ್ರಬಲವಾದ ಹೀರಿಕೊಳ್ಳುವ ವ್ಯವಸ್ಥೆ ಇದರಲ್ಲಿದ್ದು, ಮನೆಯ ತುಂಬಾ ಸುತ್ತಾಡಿ ಗುಡಿಸಿ ಒರೆಸುವ ಚಕ್ರಾಕಾರದ ರೋಬೊ ಎರಡನೇ ಸಾಧನ. ಅತ್ಯಾಧುನಿಕವಾದ ಲಿಡಾರ್ ೩.೦ ನೇವಿಗೇಶನ್ ತಂತ್ರಜ್ಞಾನ ಅಡಕವಾಗಿರುವ ಈ ಚಕ್ರಾಕಾರದ ರೋಬೊ ನೆಲವನ್ನು ಸ್ವಚ್ಛಗೊಳಿಸುವುದಕ್ಕಾಗಿ ಆರಂಭದಲ್ಲಿ ತಾನೇ ಮನೆಯೊಳಗೆ ಸುತ್ತಾಡಿ ನಕ್ಷೆ ರಚಿಸಿಕೊಳ್ಳುತ್ತದೆ. ಅಲ್ಲದೆ ಮರ್, ಟೈಲ್ಸ್, ಮಾರ್ಬಲ್ ಮತ್ತು ಕಾರ್ಪೆಟ್‌ಗಳನ್ನು ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ.

ಇನ್ನು ಇದನ್ನು ಸ್ಮಾರ್ಟ್ ಲೈಫ್ ಆಪ್ ಮೂಲಕ ನಿಯಂತ್ರಿಸಬಹುದಾಗಿದೆ. ಅಮೆಜಾನ್‌ನ ಅಲೆಕ್ಸಾ ಅಥವಾ ಗೂಗಲ್ ಅಸಿಸ್ಟೆಂಟ್ ಮೂಲಕ ಧ್ವನಿಯಿಂದಲೇ ಇದನ್ನು ನಿಯಂತ್ರಿಸಬಹುದು.

ಈ ಯಂತ್ರವು ಮೂರು ಕೆಲಸಗಳನ್ನು ಮಾಡಲಿದ್ದು, ಗುಡಿಸುವುದು, ಗುಡಿಸಿ ಸಂಗ್ರಹಿಸಿದ ಕಸವನ್ನು ಸ್ವಯಂಚಾಲಿತವಾಗಿ ಕಸದ ಬುಟ್ಟಿಗೆ ಸೇರಿಸುವುದು ಮತ್ತು ಒದ್ದೆ ಬಟ್ಟೆಯಲ್ಲಿ ನೆಲವನ್ನು ಒರೆಸುವ ಕೆಲಸ ಮಾಡುತ್ತದೆ. ಈ ಯಂತ್ರವನ್ನು ಚಾಲನೆ ಮಾಡಿದ ತಕ್ಷಣ ಅದು ಎಲ್ಲ ಕೊಠಡಿಗಳಿಗೂ ಚಲಿಸಿ ತಾನಾಗಿಯೇ ಮ್ಯಾಪಿಂಗ್ ಮಾಡಿಕೊಳ್ಳುತ್ತದೆ.

ಮರುದಿನವೂಅದೇ ಪಥದಲ್ಲಿ ತಿರಗಾಡುತ್ತಾ ಸ್ವಚ್ಛತಾ ಕೆಲಸವನ್ನು ಮಾಡುತ್ತದೆ. ಇದರಲ್ಲಿ ೫,೦೦೦ ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದ್ದು, ನಿರಂತರವಾಗಿ ಬಳಸಿದರೆ ಸುಮಾರು ೫ ಗಂಟೆಗಳ ಕಾಲ ಕೆಲಸ ಮಾಡಬಹು ದಾಗಿದೆ. ನಂತರ ರೀಚಾರ್ಚ್ ಮಾಡಿಕೊಳ್ಳಲು ಚಕ್ರಾಕಾರದ ರೋಬೊ ತಾನಾಗಿಯೇ ಬಂದು ಚಾರ್ಜರ್‌ಗೆ ಸೇರಿಕೊಳ್ಳುತ್ತದೆ. ಚಾರ್ಜಿಂಗ್ ಆಗುತ್ತದೆ. ಇದರ ಸದ್ಯದ ಮಾರುಕಟ್ಟೆಯ ಬೆಲೆ ೩೪,೯೯೯ ರೂ. ಆಗಿದೆ.

ಇದರ ಮತ್ತೊಂದು ವಿಶೇಷವೆಂದರೆ ಈ ಸ್ಮಾರ್ಟ್ ಕ್ಲೀನ್ ವಾಕ್ಯೂಮ್ ಕ್ಲೀನರ್ ಬೆಕ್ಕು, ನಾಯಿ ಸಾಕುವವರಿಗೆ ಹೆಚ್ಚಿನ ಅನುಕೂಲವಾಗಿದ್ದು, ನೆಲ ಅಥವಾ ಸೋಫಾ ಮೇಲೆ ಉದುರುವ ಅವುಗಳ ರೋಮಗಳನ್ನೂ ಸುಲಭವಾಗಿ ಸ್ವಚ್ಛಗೊಳಿಸಬಹುದಾಗಿದೆ.

ಆಂದೋಲನ ಡೆಸ್ಕ್

Recent Posts

ಹನೂರು: ಏಕಕಾಲದಲ್ಲೇ ಕಾಣಿಸಿಕೊಂಡ ಎರಡು ಚಿರತೆಗಳು

ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…

9 hours ago

ನಾಳೆಯೊಳಗೆ ಪ್ರಯಾಣಿಕರಿಗೆ ಮರುಪಾವತಿ ಮಾಡಿ: ಇಂಡಿಗೋ ಏರ್‌ಲೈನ್ಸ್‌ಗೆ ಗಡುವು ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…

9 hours ago

ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಮಾಜಿ ಸಚಿವ ಕೆ.ಎನ್.ರಾಜಣ್ಣ

ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…

9 hours ago

ನನ್ನನ್ನು ಹೆದರಿಸ್ತೀನಿ ಅಂದ್ರೆ ಅದು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ

ಹಾಸನ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್‌ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…

10 hours ago

ಹೇಮಾವತಿ ಜಲಾಶಯದ ಬಳಿ ಉದ್ಯಾನವನ ನಿರ್ಮಿಸಲು ಸಿಎಂ ಸಿದ್ದರಾಮಯ್ಯ ಭರವಸೆ

ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…

10 hours ago

ಮೈಸೂರು| ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…

11 hours ago