ಯುವ ಡಾಟ್ ಕಾಂ

ಹಲವು ಹೊಸತುಗಳ ಸೋನಿ ಹೆಡ್‌ಫೋನ್‌

ಸೋನಿ ಕಂಪೆನಿಯು ಗೇಮಿಂಗ್ ಹಾಗೂ ಸಂಗೀತ ಪ್ರಿಯ ಯುವಜನರಿಗಾಗಿಯೇ ರೂಪಿಸಲಾದ ಅಲ್ಡ್ ವೇರ್ (Sony ULT Wear) ಎಂಬ ಸರಣಿಯ ಹೆಡ್‌ಫೋನ್‌ ಅನ್ನು ಹೆಚ್ಚು ಜನಪ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದೆ.

ಹಗುರವಾದ ಮತ್ತು ಕಿವಿಯ ಮೇಲ್ಬಾಗದಲ್ಲಿ ಸರಿಯಾಗಿ ಕೂರುವಂತೆ ಹೊಂದಿಸಿಕೊಳ್ಳಲು ವ್ಯವಸ್ಥೆಯಿರುವ ಈ ಹೆಡ್‌ಫೋನ್‌ ತಲೆಯ ಮೇಲೆ ಧರಿಸಲು ಅನುಕೂಲಕರವಾಗಿದ್ದು, ಅಳತೆ ಹೊಂದಿಸಿಕೊಳ್ಳಲು ಇದರಲ್ಲಿ ಅವಕಾಶ ನೀಡಲಾಗಿದೆ. ಇದರ ಇಯರ್ ಕಪ್‌ಗಳನ್ನು ಹೇಗೆ ಕೂರಿಸಲಾಗಿದೆ ಎಂದರೆ ಅವುಗಳನ್ನು ಬೇಕಾದ ಕೋನಕ್ಕೆ ತಿರುಗಿಸಿ ಮಡಚ ಬಹುದಾಗಿದ್ದು, ಕಾಂಪ್ಯಾಕ್ ಕೇಸ್ ಒಳಗೆ ಈ ಹೆಡ್‌ಫೋನ್‌ ಕೂರುತ್ತದೆ. ಪ್ರಯಾಣ ಮಾಡುವಾಗ ಬ್ಯಾಗ್ ನೊಳಗೆ ಒಯ್ಯಲು ತೀರಾ ಅನುಕೂಲಕರವಾದ ಕೇಸ್ ಹೊಂದಿದೆ.

ಅಲ್ಪ ವೇರ್ ಹೆಡ್‌ಫೋನ್‌ನಲ್ಲಿ ಆಲಿಸುವ ಧ್ವನಿಯ ಗುಣಮಟ್ಟವು ಅದ್ಭುತವಾಗಿದ್ದು, ಕಿವಿಯ ಮೇಲಿರುವ ಕುಶನ್ ಭರಿತ ಇಯರ್ ಕಪ್‌ಗಳು ಹೊರಗಿನ ಗದ್ದಲ ಒಳಗೆ ಬಾರದಂತೆ ಮತ್ತು ಸಾಧನದ ಮೂಲಕ ಕೇಳಿಸುವ ಧ್ವನಿ ಹೊರಗೆ ಹೋಗದಂತೆ ತಡೆಯುವುದರಿಂದ ಹಾಡುಗಳನ್ನು ಆನಂದದಿಂದ ಆಲಿಸಬಹುದಾಗಿದೆ. ಅಲ್ಲದೆ ಇದರಲ್ಲಿನ ಹೊರಗಿನ ಸದ್ದನ್ನು ಸಂಪೂರ್ಣ ತಡೆಯುವ ನಾಯ್ಸ್ ಕ್ಯಾನ್ಸಲೇಶನ್ ಬಟನ್ ಒತ್ತಿದರೆ ಹೊರಗಿನ ಸದ್ದನ್ನು ತಡೆಯುವ ಮತ್ತು ಆಲಿಸುವ ಸೌಲಭ್ಯ ಪಡೆಯಬಹುದು. ಜತೆಗೆ ಪಕ್ಕದಲ್ಲೇ ಇರುವ ಹೊಳೆಯುವ ULT ಬಟನ್ ಆನ್ ಮಾಡಿದರೆ ಬೇಸ್ ಧ್ವನಿ ಗರಿಷ್ಟಮಟ್ಟದಲ್ಲಿ ಕೇಳಿಸುತ್ತದೆ.

ಈ ಸುಂದರ ಹೆಡ್ ಫೋನ್‌ ಅನ್ನು ಬ್ಲೂಟೂತ್ ಮೂಲಕ ಸ್ಟಾರ್ಟ್‌ಫೋನ್, ಟಿವಿ, ಕಂಪ್ಯೂಟರ್ ಹಾಗೂ ಬೇರಾವುದೇ ಪ್ಲೇಯರ್‌ಗಳನ್ನು ಸಂಪರ್ಕಿಸಬಹುದಾಗಿದೆ. ಅಲ್ಲದೆ 3.5 ಜ್ಯಾಕ್ ಇದೆ ಮತ್ತು ಕೇಬಲ್ ಸಂಪರ್ಕ ಕೂಡ ನೀಡಲಾಗಿದೆ. ಬ್ಲೂಟೂತ್ ಸಂಪರ್ಕ ಸುಲಭವಾಗಿ ಕನೆಕ್ಟ್ ಆಗಲಿದ್ದು, ಇದಕ್ಕಾಗಿ ಪ್ರತ್ಯೇಕ ಆ್ಯಪ್ ಬೇಕಿಲ್ಲ.

ಇನ್ನು ಈ ಹೆಡ್‌ಫೋನ್‌ ಅನ್ನು ಕೇಬಲ್ ಮೂಲಕ ಸಂಪರ್ಕಿಸಿದರೆ ಬ್ಯಾಟರಿಯೇನೂ ಬಳಕೆಯಾಗುವುದಿಲ್ಲ. ಬ್ಲೂಟೂತ್ ಮೂಲಕ ಸಂಪರ್ಕಿಸಿದರೆ ಬ್ಯಾಟರಿ ಬಳಕೆಯಾಗುತ್ತದೆ. ನಾಲ್ಡ್ ಕ್ಯಾನ್ಸಲಿಂಗ್ ಆನ್ ಮಾಡಿಕೊಂಡರೆ ಹೆಚ್ಚುವರಿ ಬ್ಯಾಟರಿ ಖರ್ಚಾಗುತ್ತದೆ. ನಾಯ್ ಕ್ಯಾನ್ಸಲಿಂಗ್ ಆನ್ ಮಾಡಿಕೊಂಡು 30 ಗಂಟೆಗಳ ಕಾಲ ಸತತವಾಗಿ ಹಾಡುಗಳನ್ನು ಕೇಳಬಹುದು. ಇನ್ನು ಇದರ ಬ್ಯಾಟರಿ ಶೂನ್ಯದಿಂದ ಪೂರ್ಣವಾಗಿ ಚಾರ್ಜ್ ಆಗಲು ಸುಮಾರು ಮೂರುವರೆ ಗಂಟೆ ಬೇಕಾಗುತ್ತದೆ.

ಇಂತಹ ಅದ್ಭುತವಾದ ಸೋನಿ ಕಂಪೆನಿಯ ಹೆಡ್‌ಫೋನ್‌ 16,990 ರೂ.ಗಳಿಗೆ ಲಭ್ಯವಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…

19 hours ago

ಓದುಗರ ಪತ್ರ: ರಾಜಕೀಯ ಗದ್ದಲದ ಮುಂದೆ ಜನರ ಸಮಸ್ಯೆ ಗೌಣವಾಗಬಾರದು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…

19 hours ago

ಓದುಗರ ಪತ್ರ: ಸಾಹಿತ್ಯ ಸಮಾರಂಭದಲ್ಲಿ ವಿಷಯಾಂತರ ಏಕೆ?

ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…

19 hours ago

ಹಾಳಾಗಿರುವ ಜನರೇಟರ್; ಡಯಾಲಿಸಿಸ್ ರೋಗಿಗಳ ಪರದಾಟ

ವೈದ್ಯರು ಮೊಬೈಲ್ ಟಾರ್ಚ್ ‌ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…

19 hours ago

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ

ಮಂಜು ಕೋಟೆ ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ…

19 hours ago