ಯುವ ಡಾಟ್ ಕಾಂ

ಒತ್ತಡವಿಲ್ಲದೆ ಬದುಕಲು ಕಲಿಯರಿ

ಕುಮಾರಸ್ವಾಮಿ ವಿರಕ್ತಮಠ, ಮೈಸೂರು

ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಒಂದೊಂದು ವಿಶೇಷ ಸ್ಥಾನಮಾನವಿದೆ. ಕುವೆಂಪುರವರ ಮಾತಿನಂತೆ ಇಲ್ಲಿ ‘ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ’. ಜೀವನದಲ್ಲಿ ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಂಡು, ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಹೋದರೆ ಯಶಸ್ಸು ನಮ್ಮನ್ನು ಅರಸಿ ಬರುತ್ತದೆ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನಗಳೂ ದೊರಕುತ್ತವೆ.

ಇಂದಿನ ಯುವ ಸಮೂಹ ಸಾಧನೆಯ ಹಾದಿಯಿಂದ ದೂರ ಸರಿಯುತ್ತಿರುವುದು ಬೇಸರದ ಸಂಗತಿ. ಮಹಾನಗರಗಳಲ್ಲಿನ ಬಹುತೇಕ ಯುವಕರು ಮೋಜು-ಮಸ್ತಿಯ ಚಟಕ್ಕೆ ಬಿದ್ದು, ಅಮೂಲ್ಯವಾದ ಯೌವ್ವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಪೋಷಕರಿಂದ ದೊರಕುವ ಸಂಪತ್ತನ್ನು ಖರ್ಚು ಮಾಡುವ ಕೆಲವೊಂದಿಷ್ಟು ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ತಂದೆ ಮಾಡಿಟ್ಟ ಆಸ್ತಿ ಎಷ್ಟಾದರೂ ಇರಲಿ, ನನ್ನದೊಂದಿಷ್ಟು ಶ್ರಮವಿರಲಿ ಎಂದು ಪರಿಶ್ರಮದಿಂದ ದುಡಿಯುವ ಜೀವನೋತ್ಸಾಹ ಬೇರೆಲ್ಲೂ ಸಿಗುವುದಿಲ್ಲ. ಆದ್ದರಿಂದ ಯುವಸಮೂಹ ದುಡಿಮೆಯತ್ತ ಸಾಗಬೇಕು.

ರಾಜ್ಯದಲ್ಲಿ ದಿನವೊಂದಕ್ಕೆ ೩೦೦ ಕೋಟಿ ರೂ. ಗಳಿಗೂ ಅಽಕ ಮೌಲ್ಯದ ಮದ್ಯ ಮಾರಾಟ ವಾಗಿರುವುದು, ಯುವಕರಿಗೆ ಜೀವನದ ಮೇಲಿನ ಉತ್ಸಾಹಕ್ಕಿಂತ ಮತ್ತಿನ ಮೇಲಿನ ವ್ಯಾಮೋಹವೇ ಹೆಚ್ಚಿದೆ ಎಂಬುದಕ್ಕೆ ಸಾಕ್ಷಿಯಂ ತಿದೆ. ಹೊಸ ವರ್ಷವನ್ನು ಹೊಸ ಹೊಸ ಆಲೋಚನೆಗಳಿಂದ, ಹೊಸ ಹೊಸ ಕನಸು ಗಳೊಂದಿಗೆ ಬರಮಾಡಿಕೊಳ್ಳಬೇಕಿದ್ದ ಯುವ ಸಮೂಹ ಮತ್ತಿನಲ್ಲಿ ಮುಳುಗಿದ್ದು ದುರಂತವೇ ಸರಿ.

ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ನಿರುತ್ಸಾಹಿಯಾಗುತ್ತಿದೆ. ವಿಜ್ಞಾನ, ತಂತ್ರ
ಜ್ಞಾನದ ಹೊಸ ಹೊಸ ಅನ್ವೇಷಣೆಗಳು ಸಮಾಜಕ್ಕೆ ಉಪಯೋಗವಾಗಿದ್ದರೂ ಅವು ಅಷ್ಟೇ ವೇಗವಾಗಿ ಉದ್ಯೋಗಗಳನ್ನು ಕಸಿಯು ತ್ತಿವೆ. ಇದರಿಂದಾಗಿ ಯುವಕರು ಅರ್ಹತೆಗೆ ತಕ್ಕಂತೆ ಕೆಲಸ ಸಿಗದಿದ್ದರೂ ಸಿಕ್ಕ ಕೆಲಸವನ್ನು ಮಾಡುತ್ತಾ ತಮ್ಮಲ್ಲಿರುವ ಪ್ರತಿಭೆಯನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಯೌವನವನ್ನು ಮಾನವೀಯ ಮೌಲ್ಯಗಳಿಲ್ಲದೆ ಕಳೆಯುತ್ತಿದ್ದಾರೆ.

ಪೀಳಿಗೆಯಿಂದ ಪೀಳಿಗೆಗೆ ಮನುಷ್ಯನ ಜೀವನ ತಾಂತ್ರಿಕವಾಗಿ ಅಭಿವೃದ್ಧಿ ಹೊಂದುತ್ತಿರಬಹುದು. ಆದರೆ ಅವನ ನೈಜ ಪ್ರಾಕೃತಿಕ ಜೀವನ ಸಂಕುಚಿತಗೊಳ್ಳುತ್ತಿದೆ. ನಾವು ನಮ್ಮ ಸುತ್ತಲಿನ ಪರಿಸರವನ್ನು, ಸಂಬಂಧಗಳನ್ನು, ಜೀವನ ಮೌಲ್ಯಗಳನ್ನು ಪ್ರೀತಿಸುತ್ತಿಲ್ಲ. ನಮ್ಮನ್ನೇ ನಾವು ಪ್ರೀತಿಸಲಾರದಷ್ಟು ಒತ್ತಡದ ಬದುಕನ್ನು ನಿರ್ಮಿಸಿಕೊಂಡಿದ್ದೇವೆ. ನಮಗೆ ತಂದೆ, ತಾಯಿ, ಮಕ್ಕಳ ಬಗೆಗಿನ ಕಾಳಜಿ ಇರಲಿ ಕನಿಷ್ಠ ಪಕ್ಷ ತಿನ್ನಲೂ ಬಿಡುವಿಲ್ಲದಂತಾಗಿದೆ.

ಒತ್ತಡದ ಬದುಕು ಯುವ ಸಮೂಹವನ್ನು ಜೀವನದ ಮೌಲ್ಯಗಳನ್ನೇ ಅರಿಯಲು ಬಿಟ್ಟಿಲ್ಲ. ಬದುಕನ್ನು ಸವಿಯಲು ಸಾಧ್ಯವಾಗಿಲ್ಲ. ಕಾರಣವಿಷ್ಟೇ, ದಿನವಿಡೀ ದುಡಿಯುವ ಕೈಗಳಿಗೆ ತಿಂಗಳಿಗೆ ಬೇಕಾಗುವಷ್ಟು ವೇತನವೇ ಸಿಗು ತ್ತಿಲ್ಲ. ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಇದೆ. ಎಲ್ಲರಲ್ಲೂ ಹಾಡುಗಾರನಿದ್ದಾನೆ, ಬರಹ ಗಾರನಿದ್ದಾನೆ, ನೃತ್ಯಗಾರನಿದ್ದಾನೆ. ಅವೆಲ್ಲದ್ದಕೂ ಸಮಯ ಹೊಂದಿಸಿಕೊಂಡು ಅವುಗಳನ್ನು ಹೊರ ಹಾಕುವ ಪ್ರಯತ್ನ ಮಾಡಬೇಕು.

ಜೀವನದ ಹಾದಿಯಲ್ಲಿ ಏಳುತ್ತಿದ್ದೇವೆ, ಬೀಳುತ್ತಿದ್ದೇವೆ. ಬಿದ್ದ ಕೆಲವರು ತಮ್ಮ ಶಕ್ತಿ ಗುರುತಿಸಿಕೊಂಡು ಎದ್ದು ಎತ್ತರಕ್ಕೇರಿದ್ದಾರೆ. ಏಳಲಾಗದವರು ಕೈ ಹಿಡಿದು ಎಬ್ಬಿಸಿದರೂ ಏಳಲಾರದಷ್ಟು ಹುದುಗಿ ಹೋಗಿಬಿಟ್ಟಿದ್ದಾರೆ. ಒಟ್ಟಿನಲ್ಲಿ ಯುವ ಸಮೂಹ ಎಚ್ಚೆತ್ತುಕೊಂಡು ಮುನ್ನಡೆಯಬೇಕಿದೆ.

ಆಂದೋಲನ ಡೆಸ್ಕ್

Recent Posts

ಅಧಿವೇಶನವನ್ನು ಒಂದು ವಾರ ವಿಸ್ತರಿಸಲು ಮನವಿ : ಸ್ಪೀಕರ್‌ಗೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್‌.ಅಶೋಕ

ಬೆಳಗಾವಿ : ಉತ್ತರ ಕರ್ನಾಟಕದ ಸಮಸ್ಯೆ, ಕಾನೂನು ಸುವ್ಯವಸ್ಥೆಯಲ್ಲಿ ಲೋಪ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇನ್ನೂ ದೀರ್ಘ ಚರ್ಚೆ…

3 mins ago

ಮೊಟ್ಟೆಯಲ್ಲಿ ಕ್ಯಾನ್ಸರ್‌ ಅಂಶ : ವರದಿ ನೀಡಲು ಸೂಚಿಸಿದ ಆರೋಗ್ಯ ಇಲಾಖೆ

ಬೆಳಗಾವಿ : ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ವಿಚಾರದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿ ವರದಿ ನೀಡಲು ಇಲಾಖೆಗೆ ಸೂಚಿಸಲಾಗಿದೆ ಎಂದು…

1 hour ago

ಹವಾಮಾನ ವೈಪರೀತ್ಯ : ವಿಮಾನದಲ್ಲೇ ಸಿಲುಕಿದ್ದ ಕರ್ನಾಟಕದ 21 ಶಾಸಕರು ಮತ್ತು 7 ಸಚಿವರು

ಹೊಸದಿಲ್ಲಿ : ದಿಲ್ಲಿಯಲ್ಲಿ ಉಂಟಾದ ದಟ್ಟವಾದ ಹೊಗೆ ಹಾಗೂ ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ 21 ಶಾಸಕರು ಮತ್ತು 7…

2 hours ago

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ : ದಿಲ್ಲಿ ಪೊಲೀಸರ ನೋಟಿಸ್‌ಗೆ ಕಾಲಾವಕಾಶ ಕೋರುವೆ ಎಂದ ಡಿಕೆಶಿ

ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೋಟೀಸ್ʼಗೆ ಉತ್ತರ ನೀಡಲು ಕಾಲಾವಕಾಶ ಕೋರುವೆ ಎಂದು ಡಿಸಿಎಂ…

2 hours ago

ಆಕಸ್ಮಿಕ ಬೆಂಕಿ : ಯಮಹಾ ಬೈಕ್‌ ಸಾಗಿಸುತ್ತಿದ್ದ ಲಾರಿ ಭಸ್ಮ : ಸುಟ್ಟು ಕರಕಲಾದ 40ಬೈಕ್‌ಗಳು

ಬಳ್ಳಾರಿ : ನಗರದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಲಾರಿಯಲ್ಲಿ ಸಾಗಿಸುತ್ತಿದ್ದ ಯಮಹಾ ಕಂಪನಿಯ 40 ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು…

2 hours ago

ಆಸ್ಟ್ರೇಲಿಯಾದಲ್ಲಿ ಉಗ್ರರ ದಾಳಿ : ದಿಲ್ಲಿ, ಬೆಂಗಳೂರಿನಲ್ಲಿ ಹೈ ಅಲರ್ಟ್‌

ಬೆಂಗಳೂರು : ಆಸ್ಪ್ರೇಲಿಯಾದ ಬೀಚ್‌ನಲ್ಲಿ ಭಾನುವಾರ ಮಧ್ಯಾಹ್ನ ಭೀಕರ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಪೊಲೀಸರು ಸೇರಿದಂತೆ 12 ಮಂದಿ…

4 hours ago