Andolana originals

ಸೈಕ್ಲೋನ್‌ ಪರಿಣಾಮ ಜನವರಿಯಲ್ಲೂ ಜಲ ಸಮೃದ್ಧಿ

ಮಂಡ್ಯ ಜಿಲ್ಲೆಯ 968 ಕೆರೆಗಳ ಪೈಕಿ 550 ಕೆರೆಗಳು ಈಗಲೂ ಭರ್ತಿ

ಹೇಮಂತ್‌ಕುಮಾರ್
ಮಂಡ್ಯ: ಜಿಲ್ಲೆಯಲ್ಲಿ ಕಳೆದ ಮೂರ‍್ನಾಲ್ಕು ತಿಂಗಳಿಂದ ಸೈಕ್ಲೋನ್ ಪರಿಣಾಮ ಸುರಿದ ಮಳೆಯಿಂದಾಗಿ ಅಂತರ್ಜಲ ಸಮೃದ್ಧವಾಗಿದ್ದು, ಜಲಾಶಯಗಳ ನೀರಿನ ಮಟ್ಟವೂ ಯಥಾಸ್ಥಿತಿಯಲ್ಲಿರುವಂತೆ, ಬಹುತೇಕ ಕೆರೆ-ಕಟ್ಟೆಗಳೂ ಪೂರ್ಣಮಟ್ಟ ಕಾಯ್ದುಕೊಂಡಿರುವುದು ಈ ವರ್ಷದ ವಿಶೇಷ.

ರೈತರ ಮೊದಲ ಸುಗ್ಗಿ ಹಬ್ಬವಾದ ಸಂಕ್ರಾಂತಿಗೆ ದನಕರುಗಳ ಮೈ ತೊಳೆಯಲು ನಾಲೆಗಳಿಗೆ ನೀರು ಬಿಡಿ ಎಂಬ ಒತ್ತಾಯ ಮಾಡುತ್ತಿದ್ದ ಸನ್ನಿವೇಶ ಈಗಿಲ್ಲ. ಕೆಆರ್ ಎಸ್ ಅಣೆಕಟ್ಟೆಯಲ್ಲಿ ಈಗಲೂ ಸಮೃದ್ಧವಾದ ಜಲರಾಶಿ ಇದ್ದು, ನೀರಾವರಿ ಸಲಹಾ ಸಮಿತಿ ನಿರ್ಧಾರ ಕೈಗೊಂಡಂತೆ ನಾಲೆಗಳಿಗೆ ೧೮ ದಿನಗಳು ನೀರು ಹರಿಸಿ ೧೨ ದಿನಗಳು ಸ್ಥಗಿತಗೊಳಿಸುವ ಮೂಲಕ ಕಟ್ಟು ನೀರು ಬಿಡಲಾಗುತ್ತದೆ.

ಜನವರಿ ತಿಂಗಳ ವೇಳೆಗೆ ಕೆರೆ-ಕಟ್ಟೆಗಳು ಅರ್ಧಮಟ್ಟಕ್ಕಿಂತ ಕೆಳಗಿರುತ್ತಿದ್ದ ಸನ್ನಿವೇಶದಲ್ಲಿ ೨೦೨೪ರಲ್ಲಿ ಜೂನ್‌ನಿಂದ ಇದುವರೆಗೆ ಸರಾಸರಿಗಿಂತ ಹೆಚ್ಚಿನ ಮಳೆಯಾಗಿದ್ದು, ಈ ಜಲಸಂವೃದ್ಧಿಗೆ ಕಾರಣ. ಸರಾಸರಿ ೬೯೨ ಮಿ. ಮೀ. ವಾಡಿಕೆ ಮಳೆಯಿದ್ದು ೮೬೪ ಮಿ. ಮೀ. ನಷ್ಟು ಮಳೆ ಸುರಿದಿದೆ ಎಂದರೆ ಶೇ. ೨೫ರಷ್ಟು ಹೆಚ್ಚುವರಿಯಾಗಿದೆ. ಇದರ ಪರಿಣಾಮ ಸಾಕಷ್ಟು ಭತ್ತದ ಬೆಳೆ ಗದ್ದೆಯಲ್ಲೇ ಹಾಳಾಗಿ ರೈತನಿಗೆ ನಷ್ಟವುಂಟಾಗಿದೆ. ಇತ್ತ ಕಟಾವು ಮಾಡಿ ಭತ್ತವನ್ನು ಮೂಟೆಗೆ ತುಂಬಿದವರಿಗೆ ಸರಿಯಾದ ದರ ಸಿಗುತ್ತಿಲ್ಲ. ಹೀಗಿರುವಾಗ ಭತ್ತ ಖರೀದಿ ಕೇಂದ್ರವನ್ನು ಇನ್ನೂ ತೆರೆದಿಲ್ಲ. ಮಧ್ಯವರ್ತಿ ಗಳು ಕಡಿಮೆ ದರಕ್ಕೆ ಭತ್ತ ಕೇಳುತ್ತಾರೆ. ಅದಕ್ಕೂ ಬೇಡಿಕೆ ಇಲ್ಲ. ಹೀಗೆ ರೈತರಿಗೆ ಎರಡೂ ಕಡೆಯಿಂದ ನಷ್ಟವೇ ಆಗಿದೆ.

ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಬರುವ ಕೆರೆಗಳು ತುಂಬಿರುವ ಬಗ್ಗೆ ನಿಖರ ಮಾಹಿತಿ ನೀಡಬೇಕು ಹಾಗೂ ನೀರು ತುಂಬಿಸಲು ಸಾಧ್ಯವಾಗದ ಕೆರೆಗಳಿಗೆ ಸಂಬಂಽಸಿದಂತೆ ಸರಿ ಯಾದ ಕಾರಣ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ಕಾವೇರಿ ನೀರಾವರಿ ನಿಗಮದ ೧೭೪ ಕೆರೆಗಳು, ಸಣ್ಣನೀರಾವರಿ ಇಲಾಖೆಯ ೪೮, ಪಿಆರ್‌ಇಡಿಯ ೪೧೭, ಪಾಂಡವಪುರ ಎಚ್‌ಲ್‌ಬಿಸಿಯ ೧೧೦, ನಾಗಮಂಗಲ ಎಚ್‌ಎಲ್‌ಬಿಸಿಯ ೬೪, ಕೆಆರ್. ಪೇಟೆ ಎಚ್‌ಎಲ್‌ಬಿಸಿಯ ೯೪ ಕೆರೆಗಳು ಸೇರಿದಂತೆ ಒಟ್ಟು ೯೬೮ ಕೆರೆಗಳಿದ್ದು, ಅವುಗಳಲ್ಲಿ ೫೪೮ ಕೆರೆಗಳು ಭರ್ತಿಯಾಗಿದ್ದರೆ, ೭೪ ಕರೆಗಳು ಶೇ. ೨೫ರಷ್ಟು ಮಾತ್ರ ನೀರು ಹೊಂದಿದೆ. ಮುಖ್ಯವಾಗಿ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಈ ವರ್ಷ ೧೨೪. ೮೦ ಪೂರ್ಣಮಟ್ಟವನ್ನು ಕಾಯ್ದುಕೊಂಡಿರುವುದು ವಿಶೇಷ. ೪೯. ೪೫೨ ಟಿಎಂಸಿ ಗರಿಷ್ಟ ಮಟ್ಟವನ್ನು ಉಳಿಸಿಕೊಳ್ಳಲಾಗಿದೆ. ಹಾಗಾಗಿ ಈಗಿರುವ ನೀರು ಜೂನ್‌ವರೆಗೂ ಲಭ್ಯವಾಗುತ್ತದೆ ಎನ್ನಲಾಗಿದೆ.

ಕಳೆದ ವರ್ಷ ಮಂಡ್ಯ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಲಿಲ್ಲ. ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚು ಬಿದ್ದಿರುವುದನ್ನು ಹೊರತುಪಡಿಸಿದರೆ ಜೂನ್- ಜುಲೈ ತಿಂಗಳಲ್ಲಿ ಮುಂಗಾರು ಮಳೆ ಸಾಕಷ್ಟು ಕೊರತೆಯಾಗಿದೆ. ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ಆಶಾದಾಯಕವಾಗಿತ್ತು. ನಂತರ ಮುಂಗಾರು ಮಳೆ ಜಿಲ್ಲೆಯೊಳಗೆ ಕಣ್ಣಾಮುಚ್ಚಾಲೆ ಆಟವಾಡುತ್ತಾ ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದ ಸನ್ನಿವೇಶ ಆತಂಕವುಂಟುಮಾಡಿತ್ತು.

ಸದ್ಯ ಅಂತರ್ಜಲ ವೃದ್ಧಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಮುಚ್ಚಿಹೋಗಿದ್ದ ಹಲವಾರು ಕಲ್ಯಾಣಿಗಳು, ಕಟ್ಟೆಗಳನ್ನೆಲ್ಲಾ ಅಮೃತ ಸರೋವರ ಯೋಜನೆಯಡಿ ಪುನಶ್ಚೇತನಗೊಳಿಸಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ. ಆದರೂ ಜಿಲ್ಲಾ ಉಸ್ತುವರಿ ಸಚಿವ ಎನ್. ಚಲುವರಾಯಸ್ವಾಮಿ ಅವರು, ವಿ ನಾಲೆ ಆರಂಭದಿಂದ ಕೊನೆ ಭಾಗದ ರೈತರು ಏಕಕಾಲದಲ್ಲಿ ನಾಟಿಗೆ ಮುಂದಾಗಬೇಕು. ಮುಂದೆ ಯಾವ ಪರಿಸ್ಥಿತಿ ಎದುರಾಗುತ್ತದೋ ಗೊತ್ತಿಲ್ಲ. ಅಲ್ಪಾವಽ ಬೆಳೆ ಬೆಳೆಯಲು ಆದ್ಯತೆ ನೀಡಬೇಕೆಂದು ಮನವಿ ಮಾಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…

19 hours ago

ಓದುಗರ ಪತ್ರ: ರಾಜಕೀಯ ಗದ್ದಲದ ಮುಂದೆ ಜನರ ಸಮಸ್ಯೆ ಗೌಣವಾಗಬಾರದು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…

19 hours ago

ಓದುಗರ ಪತ್ರ: ಸಾಹಿತ್ಯ ಸಮಾರಂಭದಲ್ಲಿ ವಿಷಯಾಂತರ ಏಕೆ?

ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…

19 hours ago

ಹಾಳಾಗಿರುವ ಜನರೇಟರ್; ಡಯಾಲಿಸಿಸ್ ರೋಗಿಗಳ ಪರದಾಟ

ವೈದ್ಯರು ಮೊಬೈಲ್ ಟಾರ್ಚ್ ‌ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…

19 hours ago

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ

ಮಂಜು ಕೋಟೆ ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ…

19 hours ago