ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್ಎನ್ಎಲ್) ೭೮ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಕೇವಲ ಒಂದು ರೂಪಾಯಿಗೆ ನಿತ್ಯ ೨ಜಿಬಿ ಡೇಟಾ, ಅನಿಯಮಿತ ಕರೆ ಯೋಜನೆಯನ್ನು ಪ್ರಕಟಿಸಿದೆ.
ಬಿಎಸ್ಎನ್ಎಲ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹೊಸ ಆಜಾದಿ ಕಾ ಯೋಜನೆಯನ್ನು ಘೋಷಿಸಿದೆ. ಇದರ ಪ್ರಕಾರ ಬಿಎಸ್ಎನ್ಎಲ್ನ ಈ ಒಂದು ರೂ. ಪ್ಲ್ಯಾನ್ ಬಳಕೆದಾರರಿಗೆ ಅನಿಯಮಿತ ಕರೆಗಳ ಜೊತೆಗೆ ನಿತ್ಯ ೧೦೦ ಎಸ್ಎಂಎಸ್ ಉಚಿತ ನೀಡುತ್ತಿದೆ. ಇದರ ಜೊತೆಗೆ ೨ ಜಿಬಿ ದೈನಂದಿನ ಡೇಟಾವನ್ನೂ ಈ ಪ್ಯಾಕ್ನಲ್ಲಿ ನೀಡುತ್ತಿದೆ.
ಬಿಎಸ್ಎನ್ಎಲ್ ಕಂಪೆನಿಯ ಈ ಯೋಜನೆಯ ಮಾನ್ಯತೆ ಒಂದು ತಿಂಗಳು ಮಾತ್ರ! ಈ ಪ್ಲ್ಯಾನ್ ಜೊತೆಗೆ ಹಲವು ಪ್ರಯೋಜನಗಳೊಂದಿಗೆ ಸಿಮ್ ಕಾರ್ಡ್ ಅನ್ನೂ ಉಚಿತವಾಗಿ ನೀಡಲಾಗುತ್ತಿದೆ. ಬಿಎಸ್ಎನ್ಎಲ್ ಸೇವೆಯನ್ನು ಬಳಸಲುಬಯಸಿದರೆ ಕೇವಲ ಒಂದು ರೂಪಾಯಿ ಪಾವತಿಸುವ ಮೂಲಕ ಹೊಸ ಸಿಮ್ ಖರೀದಿಸಿ, ಇದರಿಂದ ಅನಿಯಮಿತ ಕರೆ, ಉಚಿತ ಎಸ್ಎಂಎಸ್ ಮತ್ತು ನಿತ್ಯ ೨ಜಿಬಿ ಡೇಟಾವನ್ನೂ ಪಡೆಯಬಹುದು. ಬಿಎಸ್ಎನ್ಎಲ್ನ ಈ ಫ್ರೀಡಂ ಆಫರ್ ಆ.೧ರಿಂದ ಪ್ರಾರಂಭವಾಗಿದ್ದು ಆ.೩೧ರವರೆಗೆ ಇರುತ್ತದೆ. ಈ ಅವಧಿಯಲ್ಲಿ ಜನರು ತಮ್ಮ ಹತ್ತಿರದ ಬಿಎಸ್ಎನ್ಎಲ್ ಕಚೇರಿ ಅಥವಾ ಚಿಲ್ಲರೆ ವ್ಯಾಪಾರಿಗಳ ಮೂಲಕ ಸಿಮ್ ಪಡೆದು ಈ ಆಫರ್ನ ಸೇವೆಯನ್ನು ಬಳಸಿಕೊಳ್ಳಬಹುದು.
ಚೆನ್ನೈ: ರಾಜ್ಯದಲ್ಲಿ ಅಪ್ರಾಪ್ತ ವಯಸ್ಕರಲ್ಲಿ ಹೆಚ್ಚುತ್ತಿರುವ ಮದ್ಯ ಸೇವನೆಯನ್ನು ತಡೆಯಲು, ತಮಿಳುನಾಡು ಸರ್ಕಾರವು ಎಲ್ಲಾ ರೀತಿಯ ಮದ್ಯ ಖರೀದಿ ಮತ್ತು…
ಬೆಂಗಳೂರು: ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಿಗೆ ಪೂರ್ವ ಮುಂಗಾರು ಆರ್ಭಟ ಮುಂದುವರಿದಿದೆ. ನಾಳೆ ಮತ್ತಷ್ಟು ತೀವ್ರತೆ…
ಲಕ್ನೋ: ಉತ್ತರ ಪ್ರದೇಶದಾದ್ಯಂತ ಭಾರೀ ಮಳೆ ಮತ್ತು ಬಿರುಗಾಳಿಗೆ ಈವರೆಗೆ 104 ಜನರು ಸಾವನ್ನಪ್ಪಿದ್ದಾರೆ. ಮಳೆ ಹೊಡೆತಕ್ಕೆ 53 ಜನರಿಗೆ…
ಬೆಂಗಳೂರು: ಇದೇ ತಿಂಗಳ 24 ರಂದು ನಡೆಯಬೇಕಿದ್ದ ಎಂಬಿಎ, ಎಂಸಿಎ ಕೋರ್ಸ್ಗಳ ಪ್ರವೇಶ್ ಪರೀಕ್ಷೆಯನ್ನು ಜೂನ್.14ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಮಿಳುನಾಡಿಗೆ ಭತ್ತ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ…
ಹನೂರು: ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಹೊಂದಿರುವ ಮಾರ್ಟಳ್ಳಿಯಲ್ಲಿ ಸದ್ಯ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಗ್ರಾಮದ…