ಆಂದೋಲನ ಪುರವಣಿ

ಯೋಗಕ್ಷೇಮ : ಹಿಮ್ಮಡಿ ನೋವಿದ್ದರೆ ಹೀಗೆ ಮಾಡಿ

ವಯಸ್ಸಾಗುತ್ತಾ ಹೋದಂತೆ ಹಿಮ್ಮಡಿ, ಪಾದಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಹಜ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಫ್ಲಾಂಟರ್ ಫಾಸಿಟಿಸ್ ಎನ್ನುತ್ತಾರೆ. ಬೆಳಿಗ್ಗೆ ಏಳುವಾಗಲೇ ನೋವು, ನಡೆದಾಡುವಾಗ ಏನೋ ಚುಚ್ಚಿದ ರೀತಿಯ ಅನುಭವ, ಮಾಂಸಖಂಡಗಳಲ್ಲಿ ಸೆಳೆತ ಉಂಟಾಗುವುದು ಈ ಸಮಸ್ಯೆಯ ಲಕ್ಷಣಗಳು.

ನೋವು ಕಾಣಿಸಿಕೊಂಡಾಗಿ ಪೇನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಂಡು ತಕ್ಷಣಕ್ಕೆ ನೋವಿನಿಂದ ಪಾರಾಗಬಹುದು. ಆದರೆ ಇದರಿಂದ ದೀರ್ಘಕಾಲೀನ ಪರಿಹಾರ ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಕೆಳಗಿನ ಸರಳ ಮಾರ್ಗಗಳನ್ನು ಅನುಸರಿಸಿದರೆ ಹಿಮ್ಮಡಿ, ಪಾದಗಳ ನೋವಿಗೆ ಪರಿಹಾರ ಸಿಗುತ್ತದೆ.

* ಬೆಳಿಗ್ಗೆ ಏಳುವ ಮುನ್ನವೇ ಮಲಗಿದ್ದಲ್ಲೇ ಎರಡೂ ಪಾದಗಳನ್ನು ಒಟ್ಟಿಗೆ ಎಷ್ಟು ಸಾಧ್ಯವೋ ಅಷ್ಟು ಮುಂದಕ್ಕೆ-ಹಿಂದಕ್ಕೆ ಆಡಿಸಿ. ಈ ರೀತಿಯಾಗಿ ಕನಿಷ್ಟ ೫೦ ಬಾರಿ ಮಾಡಿರಿ. ಇದರಿಂದ ಇಡೀ ದಿನ ಪಾದಗಳ ನೋವು ಕಾಣಿಸಿಕೊಳ್ಳುವುದಿಲ್ಲ.

* ಟೆನ್ನಿಸ್ ಬಾಲ್ ಅಥವಾ ಅಷ್ಟೇ ಗಾತ್ರದ ಮೆತ್ತನೆಯ ವಸ್ತುವನ್ನು ಕೆಳಗೆ ಇಟ್ಟು ನೋವಿರುವ ಪಾದವನ್ನು ಅದರ ಮೇಲಿಟ್ಟು, ಪಾದವನ್ನು ಹಿಂದೆ ಮುಂದೆ ಆಡಿಸಿರಿ.

* ರಾತ್ರಿ ವೇಳೆ ಬಿಸಿ ನೀರಿಗೆ ಕಲ್ಲುಪ್ಪು ಹಾಕಿ ಚೆನ್ನಾಗಿ ಕರಗಿದ ನಂತರ ಪಾದಗಳನ್ನು ಅದರಲ್ಲಿ ಮುಳುಗಿಸಿ ಅರ್ಧ ಘಂಟೆ ಕುಳಿತುಕೊಳ್ಳಿ. ನೋವು ಕಮ್ಮಿಾಂಗುತ್ತದೆ.

* ಪ್ರತಿ ದಿನ ಅರ್ಧ ಗಂಟೆ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ನೋವು ನಿಧಾನವಾಗಿ ಕಡಿಮೆಯಾಗುತ್ತದೆ.

* ಮಾರುಕಟ್ಟೆಯಲ್ಲಿ ಎಂಸಿಪಿ ಅಥವಾ ಆರ್ಥೂಪೀಡಿಕ್ ಚಪ್ಪಲಿ/ಶೂಗಳು ಸಿಗುತ್ತವೆ. ಇವುಗಳ ಬಳಕೆಯಿಂದ ನೋವು ಕಡಿಮೆಯಾಗುತ್ತದೆ.

andolanait

Recent Posts

ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಚಿರತೆ ಸೆರೆ

ನಂಜನಗೂಡು: ತಾಲ್ಲೂಕಿನ ಅಳಗಂಚಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆಯೊಂದು ಸೆರೆಯಾಗಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.…

16 mins ago

ಮೈಸೂರು ಜಿಲ್ಲೆಯಲ್ಲಿ ಮುಂದುವರಿದ ಹುಲಿ ದಾಳಿ ಪ್ರಕರಣಗಳು: ಕಂಗಾಲಾದ ರೈತರು

ಮೈಸೂರು: ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಮುಂದುವರಿದಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಮೂಡಿಸಿದೆ. ಹುಣಸೂರು ತಾಲ್ಲೂಕಿನ ಗುರುಪುರ ಕೆರೆ ಬಳಿ…

20 mins ago

ಓದುಗರ ಪತ್ರ:   ಜನೌಷಧ ಕೇಂದ್ರ: ಸುಪ್ರೀಂ ತೀರ್ಮಾನ ಸ್ವಾಗತಾರ್ಹ

ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರದಿಂದ ಆರಂಭಿಸಲ್ಪಟ್ಟಿದ್ದ ಜನ ಔಷಧ ಕೇಂದ್ರಗಳು ಹಲವು ವರ್ಷಗಳಿಂದ ರಾಜ್ಯದೆಲ್ಲೆಡೆ ಕಾರ್ಯನಿರ್ವಹಿಸುತ್ತಿವೆ. ಕಡು ಬಡಜನರಿಗೆ ಹಾಗೂ…

27 mins ago

ಓದುಗರ ಪತ್ರ:  ಹೀಲಿಯಂ ಗ್ಯಾಸ್ ಬಲೂನ್ ಮಾರಾಟ ನಿಷೇಧಿಸಿ

ಡಿ. 25ರ ಗುರುವಾರ ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಛೋಟ ಸಂಭವಿಸಿದ್ದು, ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯ…

49 mins ago

ಓದುಗರ ಪತ್ರ: ಯಥಾ ರಾಜ.. ತಥಾ ಅಧಿಕಾರಿ

‘ಸರಿಯಾಗಿ ಕೆಲಸ ಮಾಡದಿದ್ದರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ. ನಾಚಿಕೆ ಆಗಲ್ವ ನಿಮಗೆ.. ಜನರನ್ನು ಯಾಕೆ ಹೀಗೆ ಸಾಯಿಸುತ್ತೀರಿ. ಯುವ ಅಧಿಕಾರಿಗಳಾದ…

1 hour ago

ಸೇವಾ ಕೈಂಕರ್ಯದ ಪ್ರತಿರೂಪ ಚೈತನ್ಯ ಚಾರಿಟಬಲ್ ಟ್ರಸ್ಟ್‌

ಮಹಿಳೆಯರು, ಮಕ್ಕಳ ಸಬಲೀಕರಣವೇ ಸಂಸ್ಥೆಯ ಧ್ಯೇಯ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸೇವೆ ಮಾಡುವ ಸಂಸ್ಥೆಗಳು ವಿರಳ. ಅಂತಹ ವಿರಳಾತೀತ ವಿರಳ…

1 hour ago