ಆಂದೋಲನ ಪುರವಣಿ

ಯೋಗ ಕ್ಷೇಮ : ಸೂರ್ಯ ನಮಸ್ಕಾರ

ಆರೋಗ್ಯವರ್ಧನೆಯ ಸರಳ,ಸುಲಭ ಸೂತ್ರ

-ಭಾರತಿ ನಾಗರಮಠ

ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶ ಈ ಪಂಚ ಮಹಾಭೂತಗಳಿಂದಲೇ ಸೃಷ್ಟಿಯು. ಸಕಲ ಜೀವಿಗಳಿಗೆ ಇವುಗಳೇ ಆಧಾರ.
ಸೂರ್ಯ ನಮಸ್ಕಾರವು ವ್ಯಾಯಾಮ ಮತ್ತು ಯೋಗಾಸನದ ಮಧ್ಯ ಸೇತುವೆ ಇದ್ದ ಹಾಗೆ. ಸೂರ್ಯ ನಮಸ್ಕಾರವನ್ನು ವೇಗವಾಗಿ ಮಾಡಿದರೆ ಅದು ಶೀಥಿಲೀಕರಣ ವ್ಯಾಯಾಮ. ನಿಧಾನವಾಗಿ ಮಾಡಿದರೆ  ಯೋಗಾಸನ. ಉಸಿರಾಟದ ಜೊತೆಗೆ ಮಾಡಿದರೆ ಅದು ಪ್ರಾಣಾಯಾಮ. ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ದೇಹದ ಅಂಗಾಂಗಗಳು ಸಡಿಲಗೊಂಡು ಮುಂದೆ ಆಸನಗಳನ್ನು ಪ್ರಾಣಾಯಾಮಗಳನ್ನು ಮಾಡಲು ಹದಗೊಳ್ಳುತ್ತದೆ. ಸೂರ್ಯ ನಮಸ್ಕಾರದಲ್ಲಿ ಸಂಪೂರ್ಣ ದೇಹ ಚಲನೆಗೊಳ್ಳುವುದರಿಂದ ಯೋಗಾಸನ ಮಾಡಲು ಸಮಯದ ಅಭಾವವಿದ್ದರೆ ಹನ್ನೆರಡು ಸೂರ್ಯ ನಮಸ್ಕಾರ ಮಾಡಿದರೆ ಸಾಕು ಅಂದಿನ ಯೋಗಾಭ್ಯಾಸದ ಕ್ರಿಯೆ ಮುಗಿದಂತೆ. ಇದನ್ನು ಸಮಯದ ಅಭಾವ ಇದ್ದಾಗ ಮಾತ್ರ ವಾಡಬೇಕು.


ಸೂರ್ಯ ನಮಸ್ಕಾರದ ನಿಯಮಗಳು:

* ಆರನೆಯ ವಯಸ್ಸಿನಿಂದ ಸೂರ್ಯ ನಮಸ್ಕಾರವನ್ನು ಪ್ರಾರಂಭಿಸಬಹುದು.
* ಸ್ತ್ರೀ, ಪುರುಷರು, ವೃದ್ಧರೂ ಸೂರ್ಯ  ನಮಸ್ಕಾರ ಮಾಡಬಹುದು.
*ಸೂರ್ಯ ನಮಸ್ಕಾರವನ್ನು ಬೆಳಿಗ್ಗೆ 8 ರವರೆಗೆ, ಸಂಜೆ 5 ರ ನಂತರ ಮಾಡಬಹುದು.
*ಗಾಳಿ, ಬೆಳಕು ಇರುವ ಸ್ವಚ್ಛ ಜಾಗದಲ್ಲಿ ಸೂರ್ಯ ನಮಸ್ಕಾರ ಮಾಡಬೇಕು.
*ಸೂರ್ಯಾಭಿಮುಖವಾಗಿ ಸೂರ್ಯ ನಮಸ್ಕಾರ ಉತ್ತಮ.
*ನೆಲದ ಮೇಲೆ ಜಮಖಾನೆ ಹಾಸಿ ಮತ್ತು ಸಡಿಲವಾದ ಬಟ್ಟೆ ಧರಿಸಿ ಮಾಡಬೇಕು.
* ಸೂರ್ಯ ನಮಸ್ಕಾರವನ್ನು ಖಾಲಿ ಹೊಟ್ಟೆಯಲ್ಲಿ ಮಾಡಬೇಕು.

* ಯಾವುದಾದರೂ ಪಾನೀಯ ಸ್ವೀಕರಿಸಿದ ನಂತರ ಅರ್ಧ ಗಂಟೆ ಬಿಟ್ಟು ಮಾಡಬಹುದು.
* ಪ್ರಾರಂಭದಲ್ಲಿ ಹನ್ನೆರಡು ಸೂರ್ಯ ನಮಸ್ಕಾರದಿಂದ ಪ್ರಾರಂಭಿಸಬೇಕು.


ಸೂರ್ಯ ನಮಸ್ಕಾರ ಮಾಡುವ ವಿಧಾನ:

ಜಮಖಾನೆಯನ್ನು ಹಾಸಿ ಪೂರ್ವ ದಿಕ್ಕಿಗೆ ಮುಖ ಮಾಡಿ ಜಮಖಾನೆಯ ಮುಂಭಾಗದಿಂದ ಶೇ. ಇಪ್ಪತೈದು ಪ್ರತಿಶತದಷ್ಟು ಬಿಟ್ಟು ನೇರವಾಗಿ ನಿಲ್ಲಬೇಕು. ಎರಡೂ ಪಾದದ ಮಧ್ಯ ಒಂದು ಪಾದದ ಅಳತೆ ಬಿಡಬೇಕು. ಹಾಗೆ ಕೈ ನಮಸ್ಕಾರದ ಸ್ಥಿತಿ ಇರಬೇಕು. ಬೆನ್ನು ಕತ್ತು ನೇರವಾಗಿರಬೇಕು. ನಮ್ಮ ಎರಡೂ ಪಾದದ ಮೇಲೆ ದೇಹದ ಸಮಭಾರವಿರಲಿ.
ಸೂರ್ಯ ನಮಸ್ಕಾರದಲ್ಲಿ ಒಟ್ಟಯ 12 ಬಗೆಯುಂಟು:ಊರ್ಧ್ವ ನಮಸ್ಕಾರ,ಪಾದ ಹಸ್ತಾಸನ,ಏಕಪಾದ ಪ್ರಸರಣಾಸನ,ದ್ವೀಪಾದ ಪ್ರಸರಣಾಸನ,ಶಶಾಂಕಾಸನ, ಭೂನಮನಾಸನ,ಭುಜಂಗಾಸನ,ಪರ್ವತಾಸನ,ಶಶಾಂಕಾಸನ,ಏಕ ಪಾದ ಪ್ರಸರಣಾಸನ,ಪಾದ ಹಸ್ತಾಸನ,
ಊರ್ಧ್ವ ನಮನಾಸನ, ಈ ಹನ್ನೆರಡು ಆಸನಗಳು ಪ್ರಮುಖ ಮತ್ತು ಸರಳವಾದವು. ಕನಿಷ್ಠ ದಿನಾಲು ಹನ್ನೆರಡು ಸೂರ್ಯ ನಮಸ್ಕಾರ ಮಾಡಿದರೆ ಶರೀರ ಬಲಿಷ್ಠ ಮತ್ತು ಆರೋಗ್ಯವಾಗಿರುತ್ತದೆ.


ಸೂರ್ಯ ನಮಸ್ಕಾರದ ಉಪಯೋಗಗಳು:
ದೇಹದ ಎಲ್ಲಾ ಅವಯವಗಳು ಸಡಿಲಗೊಂಡು ನರನಾಡಿಗಳು ಚೈತನ್ಯಗೊಳ್ಳುತ್ತವೆ, ಮೆದುಳಿನ ಕಾರ್ಯ ಚುರುಕಾಗಿ ಓಜಸ್ಸು, ತೇಜಸ್ಸು ಹೆಚ್ಚುತ್ತದೆ, ಪಚನಕ್ರಿಯೆಗೆ ಸಹಕಾರಿ, ಮಲಬದ್ಧತೆ ನಿವಾರಣೆಯಾಗುತ್ತದೆ, ಉದರ ದೋಷವನ್ನು ಹೋಗಲಾಡಿಸುತ್ತದೆ, ಮನಸ್ಸು ಸದಾ ಲವಲವಿಕೆಯಿಂದ ಕೂಡಿರುತ್ತದೆ,ಸ್ತ್ರೀಯರ ಎಲ್ಲಾ ತರದ ಅನಾರೋಗ್ಯವನ್ನು ಹೋಗಲಾಡಿಸುವ ಶಕ್ತಿ ಸೂರ್ಯ ನಮಸ್ಕಾರಕ್ಕಿದೆ, ಉಸಿರಾಟದ ಸಮಸ್ಯೆಯನ್ನು ಹೋಗಲಾಡಿಸುತ್ತದೆ, ಚರ್ಮ ಖಾಯಿಲೆ ನಿವಾರಿಸುತ್ತದೆ, ಕತ್ತು, ಬೆನ್ನುಹುರಿ, ತೊಡೆ, ಮೀನಖಂಡ ಭಾಗಗಳನ್ನು ಬಲಿಷ್ಠಗೊಳಿಸುತ್ಯದೆ, ರಕ್ತ ಸಂಚಾರ ಇಡೀ ದೇಹಕ್ಕೆ ಸರಾಗವಾಗಿ ಸರಬರಾಜಾಗುತ್ತದೆ, ಕೂದಲುದುರುವ, ಹೊಟ್ಟು, ಬಾಲನೆರೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.

 

 

andolanait

Recent Posts

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

1 min ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

1 hour ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

2 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

2 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

2 hours ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

3 hours ago