ಆಂದೋಲನ ಪುರವಣಿ

ಯೋಗ ಕ್ಷೇಮ : ನೀರು ಕುಡಿದು ನಿರ್ಜಲೀಕರಣ ತಡೆಯಿರಿ

ನೀವು ಕುಡಿಯುವ ನೀರಿನಲ್ಲಿದೆ ನಿಮ್ಮ ಆಯಸ್ಸು, ಜೀವಜಲ ದಿನಕ್ಕೆಷ್ಟು ಬೇಕು ಗೊತ್ತಾ…?
ಸಂಶೋಧಕರು ದೀರ್ಘಕಾಲ ಬದುಕುವ ಮಾರ್ಗಗಳನ್ನು ಸಂಶೋಧಿಸುತ್ತಿದ್ದಾರೆ. ವಿಜ್ಞಾನಿಗಳ ಪ್ರಕಾರ ಬಹುಬೇಗನೆ ವಯಸ್ಸಾಗಲು, ಆಯಸ್ಸು ಕಡಿಮೆಯಾಗಲು ಪ್ರಮುಖ ಕಾರಣ ಡಿಹೈಡ್ರೇಶನ್. ಸರಿಯಾಗಿ ನೀರು ಕುಡಿಯದೇ ಇರುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಚೆನ್ನಾಗಿ ನೀರು ಕುಡಿದು ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳುವವರು ನೀರು ಕುಡಿಯದವರಿಗಿಂತ ಹೆಚ್ಚು ಕಾಲ ಬದುಕುತ್ತಾರೆನ್ನುತ್ತದೆ ಸಂಶೋಧನೆ.

ನಿರ್ಜಲೀಕರಣವು ಹೃದಯ ಮತ್ತು ಶ್ವಾಸಕೋಶದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.
ಹೈಡ್ರೇಶನ್ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಸತತ ಮೂರು ದಶಕಗಳ ಕಾಲ ಸುಮಾರು 10,000ಕ್ಕೂ ಹೆಚ್ಚು ಜನರ ಅಂಕಿ-ಅಂಶಗಳನ್ನು ಸಂಗ್ರಹಿಸಿ ಸಂಶೋಧಕರು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರ ನೀರಿನ ಸೇವನೆ ಮತ್ತು ಡಿಹೈಡ್ರೇಶನ್ ಅನ್ನು ನಿರ್ಧರಿಸಲು ಸಂಶೋಧಕರು ಸೀರಮ್ ಸೋಡಿಯಂ ಪರೀಕ್ಷೆಯನ್ನು ಬಳಸಿದ್ದರು. ರಕ್ತದಲ್ಲಿ ಎಷ್ಟು ಸೋಡಿಯಂ ಇದೆ ಎಂಬುದನ್ನು ಇದು ಪರಿಶೀಲಿಸುತ್ತದೆ. ವ್ಯಕ್ತಿಯ ರಕ್ತದಲ್ಲಿ ಸೋಡಿಯಂನ ಸಾಮಾನ್ಯ ಮಟ್ಟವು ಪ್ರತಿ ಲೀಟರ್‌ಗೆ 135-145 ಎಂಎಂಒಎಲ್ ನಡುವೆ ಇರಬೇಕು.

ಸಂಶೋಧನೆಯ ಫಲಿತಾಂಶ: ಪ್ರತಿ ಲೀಟರ್‌ಗೆ 144 ಎಂಎಂಒಎಲ್‌ಗಿಂತ ಹೆಚ್ಚಿನ ಸೋಡಿಯಂ ಮಟ್ಟವು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಸಂಶೋಧನೆಯ ಪ್ರಕಾರ ದೀರ್ಘಕಾಲದ ಡಿಹೈಡ್ರೇಶನ್ ನಮ್ಮ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ.

ದಿನಕ್ಕೆ ಎಷ್ಟು ನೀರು ಕುಡಿಯಬೇಕು?
ತಜ್ಞರು ದಿನಕ್ಕೆ ಕನಿಷ್ಟ ಆರರಿಂದ ಎಂಟು ಗ್ಲಾಸ್ ನೀರನ್ನು ಕುಡಿಯಲು ಶಿಫಾರ ಮಾಡುತ್ತಾರೆ. ಪುರುಷರು 15 ಗ್ಲಾಸ್ ಮತ್ತು ಮಹಿಳೆಯರು 11.5 ಗ್ಲಾಸ್ ನೀರು ಕುಡಿಯಬೇಕೆಂದು ಶಿಫಾರಸು ಮಾಡುತ್ತಾರೆ. ಹೈಡ್ರೇಟೆಡ್ ಆಗಿರಲು ದಿನವಿಡೀ ಸಾಕಷ್ಟು ನೀರು ಮತ್ತು ಹಣ್ಣಿನ ರಸ ಕುಡಿಯಲು ಪ್ರಯತ್ನಿಸಿ.

andolanait

Recent Posts

ಕೂರ್ಗಳ್ಳಿ ಕೆರೆ ಒತ್ತುವರಿ ಕೂಗು; ಗ್ರಾಮಸ್ಥರಲ್ಲಿ ಹಲವು ಅನುಮಾನ

ಸಾಲೋಮನ್ ೨೨.೨೦ ವಿಸ್ತೀರ್ಣದ ಕೆರೆ ಈಗ ಉಳಿದಿರುವುದು ೫ ಎಕರೆ! ಅನೇಕ ವರ್ಷಗಳಿಂದ ದೂರು ನೀಡಿದರೂ ಕ್ರಮ ಜರುಗಿಸಿಲ್ಲ ಯಾರೇ…

42 mins ago

ಸ್ಥಳೀಯ ಸಂಸ್ಥೆ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ: ಭೋಸರಾಜು

ನವೀನ್ ಡಿಸೋಜ ಖಾಲಿ ಹುದ್ದೆಗಳ ಭರ್ತಿ ಸಂಬಂಧ ಚರ್ಚೆ ಸ್ಥಳೀಯ ಸಂಸ್ಥೆಗಳ ಸಮಸ್ಯೆ ಹಿಂದಿನಿಂದಲೂ ಇದೆ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ…

47 mins ago

‘ಖಾಲಿ ಹುದ್ದೆ ಭರ್ತಿಗೆ ಕ್ರಮವಹಿಸುವುದು ಅಗತ್ಯ : ಸಚಿವ ಚಲುವರಾಯಸ್ವಾಮಿ

ಬಿ.ಟಿ. ಮೋಹನ್ ಕುಮಾರ್ ಶೇ.೬೦ರಷ್ಟು ಬಿ, ಸಿ, ಡಿ ಹುದ್ದೆಗಳು ಬಹಳ ವರ್ಷಗಳಿಂದ ಖಾಲಿ ಪೌರಕಾರ್ಮಿಕರ ಹುದ್ದೆ ಭರ್ತಿಗೆ ಸಂಬಂಧಪಟ್ಟ…

48 mins ago

ಬೀದಿ ಮಕ್ಕಳ ಆಶಾಕಿರಣ “ಚೇತನಾ”

ಪಂಜು ಗಂಗೊಳ್ಳಿ  ಹತ್ತನೇ ತರಗತಿ ಪರೀಕ್ಷೆಗಳು ಮುಗಿದು ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ಮಕ್ಕಳಿಗೆ ಈ ಹತ್ತನೇ…

49 mins ago

ಓದುಗರ ಪತ್ರ: ಗಿಡಗಂಟೆ ತೆರವುಗೊಳಿಸಿ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕ್ಯಾತಮಾರನಹಳ್ಳಿ 4ನೇ ಹಂತದ ಕಲ್ಯಾಣಗಿರಿ ನಗರ ಬಡಾವಣೆಯನ್ನು ನಿರ್ಮಿಸಲಾಗಿದೆ. ಇಲ್ಲಿನ ವಾಸದ ಮನೆಗಳ ಪಕ್ಕ ಇರುವ…

50 mins ago

ಅವಶ್ಯಕತೆಗೆ ಅನುಗುಣವಾಗಿ ನೇಮಕಾತಿ: ಸಚಿವ ವೆಂಕಟೇಶ್‌

ಆಂದೋಲನ’ ಸಂದರ್ಶನದಲ್ಲಿ ಸಚಿವ ಕೆ.ವೆಂಕಟೇಶ್ ಭರವಸೆ ನೇರ ನೇಮಕಾತಿ ಅಥವಾ ನಿಯೋಜನೆ ಮೂಲಕ ಭರ್ತಿಗೆ ಸೂಚನೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ…

50 mins ago