ಕು.ಯಶಸ್ವಿನಿ ಭರತನಾಟ್ಯ ರಂಗ ಪ್ರವೇಶ
ನಾದ ವಿದ್ಯಾಲಯ ಸಂಗೀತ ಮತ್ತು ನೃತ್ಯ ಅಕಾಡೆಮಿ ವತಿಯಿಂದ ವಿದುಷಿ ಮಿತ್ರಾನ ನವೀನ್ ಅವರ ಶಿಷ್ಯೆ ಕು.ಯಶಸ್ವಿನಿ ಬಿ.ಎಂ. ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಭಾನುವಾರ ಸಂಜೆ 5.30 ಕ್ಕೆ ಮೈಸೂರಿನ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ನಡೆಯಲಿದೆ.
ಸಮಾರಂಭದ ಮುಖ್ಯ ಅತಿಥಿಗಳಾಗಿ ನಾಟ್ಯಾಚಾರ್ಯ ಪ್ರೊ.ಕೆ.ರಾಮಮೂರ್ತಿರಾವ್, ಅಮೃತ ವಿಶ್ವವಿದ್ಯಾಪೀಠಂನ ಪ್ರಾಂಶುಪಾಲರಾದ ಡಾ.ಜಿ. ರವೀಂದ್ರನಾಥ್ ಹಾಗೂ ನಗರ ಪಾಲಿಕೆ ಸದಸ್ಯ ಎಂ.ಸಿ.ರಮೇಶ್ ಭಾಗವಹಿಸುವರು.
ಕಾರ್ಯಕ್ರಮವನ್ನು ವಿದುಷಿ ಮಿತ್ರನವೀನ್ ನಿರ್ದೇಶಿಸಿ, ನೃತ್ಯ ಸಂಯೋಜಿಸಿದ್ದಾರೆ.ವಿ. ನವೀನ್ ಎಂ.ಎಸ್.ಅಂದಗಾರ್ ಗಾಯನ, ವಿ. ವಿವೇಕ ಕೃಷ್ಣ ಕೊಳಲು, ವಿ.ಜಿ.ಎಸ್. ನಾಗರಾಜ್ ಮೃದಂಗ ಸಹಕಾರ ನೀಡಲಿದ್ದಾರೆ. ಡಾ.ಭುವನೇಶ್ವರಿ ನಿರೂಪಣೆ ನಡೆಸಿಕೊಡುವರು.
ಕು.ಯಶಸ್ವಿನಿ ಬಿ.ಎಂ.ಅವರು ಮಂಜುನಾಥ್ ಮತ್ತು ಭವಾನಿ ದಂಪತಿಯ ಪುತ್ರಿ, ವಿದುಷಿ ಮಿತ್ರಾ ನವೀನ್ ಅವರ ಬಳಿ 15 ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ಅಮೃತ ವಿದ್ಯಾಪೀಠಂ ನಲ್ಲಿ ದ್ವಿತೀಯ ವರ್ಷದ ಬಿ.ಕಾಂ. ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
‘ಮೇರಿ ಆವಾಜ್ ಸುನೋ’ ಗಾನ ಸುಧೆ
ಮೈಸೂರಿನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಭಾನುವಾರ ಸಂಜೆ 5-30 ಕ್ಕೆ ‘ಮೇರಿ ಆವಾಜ್ ಸುನೋ’ ಹಳೆಯ ಹಿಂದಿ ಚಲನ ಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.ಗಾಯನ ಕ್ಷೇತ್ರದಲ್ಲಿ ಆಸಕ್ತಿ ಇರಿಸಿಕೊಂಡಿರುವ ವೃತ್ತಿಯಲ್ಲಿ ವಕೀಲರಾದ ಚಂದ್ರಶೇಖರ್ ಅವರು ತಮ್ಮ ಸ್ನೇಹಿತರೊಡಗೂಡಿ ಈ ಗಾಯನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮೈಸೂರಿನ ಗಾಯಕರಾದ ಅಮೂಲ್ಯ, ದೇವಿಕಾ, ಡಾ.ರೇಖಾ, ಸುಭಾಷ್, ಪುಷ್ಪಲತಾ, ಜಾಯ್ಸ್, ಗುರುರಾಜ್, ವಕೀಲ ಚಂದ್ರಶೇಖರ್ ಅವರು ಖ್ಯಾತ ಗಾಯಕರಾದ ಕಿಶೋರ್ ಕುಮಾರ್, ಮಹಮದ್ ರಫಿ, ಆಶಾಬೋಸ್ಲೆ, ಲತಾಂಗೇಶ್ಕರ್ ಅವರ ಕಂಠಸಿರಿಯಿಂದ ಹೊರಹೊಮ್ಮಿರುವ ಜನಪ್ರಿಯ ಗೀತೆಗಳ ಗಾಯನ ಸುಧೆಯನ್ನು ಹರಿಸಲಿದ್ದಾರೆ.
ಕೀಬೋರ್ಡ್: ಪ್ರಸನ್ನಕುಮಾರ್ ಹಾಗೂ ದೀಪಕ್, ತಬಲಾ: ಕಿರಣ್, ರಘುನಾಥ್, ರಿದಂ: ವಿನ್ಸಂಟ್, ಗಿಟಾರ್: ವಿನಯ್ ಹಾಗೂ ನೀತೂ ನಿನಾದ್ ಕೊಳಲು ಸಹಕಾರ ನೀಡಲಿದ್ದಾರೆ. ಸಂಜೆ 5.30ಕ್ಕೆ ಆರಂಭವಾಗುವ ಕಾರ್ಯಕ್ರಮ ರಾತ್ರಿ 9.30 ರ ವರೆಗೂ ನಡೆಯಲಿದೆ.
ಪಂ.ವೆಂಕಟೇಶ್ ಕುಮಾರ್ ಗಾಯನ ನಾಳೆ
ಶ್ರೀ ಪಂಚಾಕ್ಷರ ಗವಾಯಿಗಳವರ 131 ನೇ ಜನ್ಮದಿನ ಹಾಗೂ ಪದ್ಮಭೂಷಣ ಡಾ.ಎಂ. ಪುಟ್ಟರಾಜಗವಾಯಿಗಳವರ 109 ನೇ ಜನ್ಮದಿನ ಆಚರಣೆ ಮತ್ತು ಸಂಗೀತೋತ್ಸವ ಕಾರ್ಯಕ್ರಮವನ್ನು ಹುಣಸೂರಿನ ಶಿಕ್ಷಕರ ಭವನದಲ್ಲಿ ಭಾನುವಾರ ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ.
ಸಂಜೆ 4 ಗಂಟೆಗೆ ವೇದಿಕೆ ಕಾರ್ಯಕ್ರಮವಿದ್ದು, 6 ಗಂಟೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ್ ವೆಂಕಟೇಶ್ಕುಮಾರ್ ಅವರಿಂದ ಗಾಯನ ಕಾರ್ಯಕ್ರಮವಿದೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳ ಸಂಗೀತ ಪಾಠಶಾಲೆಯ ಮಕ್ಕಳಿಂದ ಗಾಯನ ಕಾರ್ಯಕ್ರಮವಿದೆ.
ಹಾಸನ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಳ್ಳಿ ಗ್ರಾಮದ ಸುಧಾಮಣಿ ಹಾಗೂ…
ಗುವಾಹಟಿ: ರೈಲು ಡಿಕ್ಕಿ ಹೊಡೆದ ಪರಿಣಾಮ ಏಳು ಆನೆಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಒಂದು ಆನೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಸ್ಸಾಂನ…
ಮಂಗಳೂರು: ಧರ್ಮಸ್ಥಳ ಷಡ್ಯಂತ್ರ ಪ್ರಕರಣದ ಪ್ರಮುಖ ಆರೋಪಿ ಮಾಸ್ಕ್ ಮ್ಯಾನ್ ಚಿನ್ನಯ್ಯ ಇದೀಗ ಬುರುಡೆ ಗ್ಯಾಂಗ್ ವಿರುದ್ಧವೇ ತಿರುಗಿ ಬಿದ್ದಿದ್ದಾನೆ.…
ಬೆಂಗಳೂರು: ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕರಿಸಲಾದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಗೆ ಅಂಕಿತ ಹಾಕಬಾರದು…
ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಡಿ.೧೮ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ…
ರಾಜ್ಯದಲ್ಲಿ ‘ಸಾಮಾಜಿಕ ಬಹಿಷ್ಕಾರ ನಿಷೇಧ ’ ಕಾನೂನನ್ನು ಜಾರಿಗೊಳಿಸಲು ಮುಂದಾಗಿರುವ ರಾಜ್ಯಸರ್ಕಾರದ ಕ್ರಮ ಶ್ಲಾಘನೀಯ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾರ್ವಭೌಮತೆ,…