ವಾರಾಂತ್ಯ ವಿಶೇಷ

ನಾಳೆ ಭೂಮಿಗೀತದಲ್ಲಿ ‘ಉರಿಯ ಉಯ್ಯಾಲೆ’

ರಚನೆ ಡಾ.ಎಚ್‌.ಎಸ್.ವೆಂಕಟೇಶ್ ಮೂರ್ತಿ, ನಿದೇರ್ಶನ ಬಿ.ಎನ್.ಶಶಿಕಲಾ

ಸಾಲೊಮನ್
ರಂಗಭೂಮಿಗೆ ಹೊಸಬರನ್ನು ಪರಿಚಯಿಸುವ ಉದ್ದೇಶದಿಂದ ಆರಂಭಿಸಿದ ಶಶಿ ಥಿಯೇಟರ್ ಸಂಸ್ಥೆ ‘ಉರಿಯ ಉಯ್ಯಾಲೆ’ ಎಂಬ ನಾಟಕವನ್ನು ರಂಗಾಯಣದ ಭೂಮಿಗೀತದಲ್ಲಿ ಅ.27ರಂದು ಸಂಜೆ 6.30ಕ್ಕೆ ಪ್ರಸ್ತುತಪಡಿಸುತ್ತಿದೆ.

ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ ರಚನೆಯ ಉರಿಯ ಉಯ್ಯಾಲೆ’ ನಾಟಕದ ವಿನ್ಯಾಸ ಹಾಗೂ ನಿರ್ದೇಶನವನ್ನು ಬಿ.ಎನ್. ಶಶಿಕಲಾ ಮಾಡಿದ್ದಾರೆ. ನಾಟಕದಲ್ಲಿ ಕಲಾವಿದರಾದ ಬಿ.ಎಲ್.ಸರಳ, ಜಯಶ್ರೀ ರವಿಕುಮಾರ್, ಆರ್.ಎಂ. ಶ್ರುತಿ, ಸುಮಾ ಪ್ರಶಾಂತ್, ಎಚ್.ಎಚ್.ಸುನೀತ, ಎಚ್.ಎಂ.ದೀಪ್ತಿ ಶೆಟ್ಟಿ, ಕವಿತ ಎ.ಎಂ.ಅಳಗಂಚಿ ಹಾಗೂ ಮೀನಾಕ್ಷಿ ವಗದಾಳೆ ಬೀದರ್‌ ಅಭಿನಯಿಸಿದ್ದಾರೆ. ನಾಟಕಕ್ಕೆ ಸುಬ್ರಹ್ಮಣ್ಯ ಮೈಸೂರು ಅವರು ಹಿನ್ನೆಲೆ ಸಂಗೀತ ನೀಡಿದ್ದು, ಬೆಳಕಿನ ವಿನ್ಯಾಸವನ್ನು ಜೀವನ್ ಹೆಗ್ಗೋಡು ಹಾಗೂ ಪರಿಕರ ಮತ್ತು ರಂಗ ಸಜ್ಜಿಕೆಯ ಕಾರ್ಯವನ್ನು ಎಸ್.ಶ್ರೀಕಾಂತ್ ನಿರ್ವಹಿಸುತ್ತಿದ್ದಾರೆ. ಮಹಾಭಾರತ ಯುದ್ಧಾನಂತರದ ಸಂದರ್ಭದಲ್ಲಿನ ದೌಪದಿಯು ತನ್ನ ವರ್ಣರಂಜಿತ ಪುಟಗಳನ್ನು ತೆರೆದು ನೋಡಿದಾಗ ಅವಳ ಬದುಕು ಜೀವನ ಜೋಕಾಲಿಯಾಗದೆ ‘ಉರಿವ ಉಯ್ಯಾಲೆ’ ಯಾಗಿರುವುದನ್ನು ನಾಟಕ ಶ್ರುತಪಡಿಸುತ್ತದೆ.

ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಡಿಪ್ಲೊಮೊ ಪಡೆದು ರಂಗಭೂಮಿಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಶಶಿಕಲಾ ಅವರು ಮೂಲತಃ ಮೈಸೂರಿನವರು. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಅನೇಕ ಬೀದಿ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಮಕ್ಕಳಿಗಾಗಿಯೂ ಹಲವು ನಾಟಕಗಳನ್ನು ರಚಿಸಿ, ನಿರ್ದೇಶಿಸಿರುವ ಇವರು ರಂಗಾಯಣದ ಕಲಾವಿದರಾಗಿ ಅನೇಕ ನಾಟಕಗಳ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಾ ಕಳೆದ 35 ವರ್ಷಗಳಿಂದಲೂ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಚಿತ್ರ ಸಾಹಿತಿ ಜಯಂತ್ ಕಾಯ್ಕಿಣಿಯವರ ‘ಗಾಳಿ ಮರದ ನೆರಳು’ ಸಣ್ಣಕತೆಯನ್ನು ಕಿರುಚಿತ್ರವಾಗಿ ಶಶಿ ಥಿಯೇಟರ್ಸ್ ನಿರ್ಮಿಸಿತ್ತು. ನಂತರ ಶಶಿಕಲಾ ಅವರು ಅಭಿನಯ ಕಾರ್ಯಾಗಾರ, ನೇಪಥ್ಯ ಕಾರ್ಯಾಗಾರ, ಚಲನಚಿತ್ರ ರಸಗ್ರಹಣ ಶಿಬಿರ ಹಾಗೂ ರಂಗ ಸಂಗೀತ ಕುರಿತು ಶಿಬಿರಗಳನ್ನು ನಡೆಸಿದ್ದಾರೆ. ಮೈಸೂರು ರಂಗಾಯಣದ ಭಾರತೀಯ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳ ಪ್ರಯೋಗಾರ್ಥ ಪ್ರದರ್ಶನಕ್ಕಾಗಿ ಪ್ರೇಮಾ ಕಾರಂತರ ‘ಕುರುಡು ಕಾಂಚಾಣ’ ನಾಟಕವನ್ನು ನಿರ್ದೇಶಿಸಿದ್ದಾರೆ. ಆಕಾಶವಾಣಿಗಾಗಿ ಕೆಲವು ನಾಟಕಗಳನ್ನು ರಚಿಸಿರುವ ಇವರು ‘ಗೋಲಾ ರಾಕ್ಷಸ’, ‘ಕೊತ್ತಿಲ್ ಕೊತ್ತಲ್ ಢಣ್ ಢಣ್’, ‘ಜನ್ ನಮೂನಿ ನಾಟ್ಕ’ ಮುಂತಾದವುಗಳನ್ನು ನಾಲ್ಕ ನಿರ್ದೇಶಿಸಿದ್ದಾರೆ.

ಪಿ.ಶೇಷಾದ್ರಿ, ಕೆ.ಶಿವರುದ್ರಯ್ಯ, ನಾಗೇಂದ್ರ ಶಾ ಇವರುಗಳ ನಿರ್ದೇಶನದ ಹಲವಾರು ಸಾಕ್ಷ್ಯಚಿತ್ರಗಳಲ್ಲಿಯೂ ಶಶಿಕಲಾ ನಟಿಸಿದ್ದಾರೆ. ಕೆ.ಶಿವರುದ್ರಯ್ಯ ನಿರ್ದೇಶಿಸಿದ ದೇವನೂರ ಮಹಾದೇವ ಅವರ ಕಥೆ ಆಧಾರಿತ ‘ಮಾರಿಕೊಂಡವರು’ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ.

ರಂಗ ದಿಗ್ಗಜರಾದ ಬಿ.ವಿ.ಕಾರಂತ, ಪ್ರಸನ್ನ, ಸಿ.ಬಸವಲಿಂಗಯ್ಯ, ಸುರೇಶ್ ಆನಗಳ್ಳಿ, ಬಿ. ಜಯಶ್ರೀ, ಚಿದಂಬರರಾವ್ ಜಂಬೆ, ರಘು ನಂದನ್, ಆರ್.ನಾಗೇಶ್, ಪ್ರಕಾಶ್ ಬೆಳವಾಡಿ ಮುಂತಾದವರ ನಿರ್ದೇಶನದ, ರಂಗಪ್ರಯೋಗಗಳಲ್ಲಿ ಅಭಿನಯಿಸಿರುವ ಇವರು ತಮ್ಮದೇ ಆದ ಶಶಿ ಥಿಯೇಟರ್ ಆರಂಭಿಸಿ ಹೊಸ ಪ್ರತಿಭೆಗಳನ್ನು ರಂಗಭೂಮಿಗೆ ಪರಿಚಯಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಶಶಿಕಲಾ ಅವರು 2019ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ-ನಾಗರಹೊಳೆ ಸಫಾರಿ ಆರಂಭಿಸಿ: ಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ

ಬೆಂಗಳೂರು: ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನಗಳಲ್ಲಿ ಸಫಾರಿ ಆರಂಭಿಸಿ ಎಂದು ಸಿಎಂ ಡಿ.ಕೆ.ಶಿವಕುಮಾರ್‌…

7 hours ago

ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 1700ಕ್ಕೆ ಏರಿಕೆ

ವೆನೆಜುವೆಲಾ: ಇಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 5000ಕ್ಕೂ…

7 hours ago

ರಾಜಸ್ಥಾನದಲ್ಲಿ ಪ್ಯಾರಾಮೆಡಿಕಲ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ನಾಲ್ವರು ಅರೆಸ್ಟ್‌

ಜೈಪುರ: ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ಯಾರಾಮೆಡಿಕಲ್‌ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿದ್ದ ವೇಳೆಯೇ ಪರೀಕ್ಷೆ ಹಾಲ್‌ ಮೇಲೆ ಪೊಲೀಸರು…

7 hours ago

ಎಸ್‌ಐಆರ್‌ ಬಗ್ಗೆ ಗಾಬರಿ ಬೇಡ: ಬಾನು ಮುಷ್ತಾಕ್‌

ಹಾಸನ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಆರಂಭವಾಗಿದೆ. ಹಾಸನದಲ್ಲಿ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌…

8 hours ago

ನಾಡಿನ ಖ್ಯಾತ ಕಲಾವಿದ ಕೆ.ಟಿ.ಶಿವಪ್ರಸಾದ್‌ ನಿಧನ

ಬೆಂಗಳೂರು: ನಾಡಿನ ಖ್ಯಾತ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ‌ಕೆ.ಟಿ. ಶಿವಪ್ರಸಾದ್(77) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.…

9 hours ago

ಕೈಕೊಟ್ಟ ಮುಂಗಾರು: 126 ವರ್ಷಗಳಲ್ಲೇ ಮೂರನೇ ಬಾರಿ ದೇಶದಲ್ಲಿ ಮಳೆ ಕೊರತೆ

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಕಳೆದ 126 ವರ್ಷಗಳ ಇತಿಹಾಸದಲ್ಲೇ ಜೂನ್‌ ತಿಂಗಳಿನಲ್ಲಿ ಮೂರನೇ…

9 hours ago