ಸಕುಬಾಯಿ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಹುಟ್ಟಿದವಳು, ಏಳು ವರ್ಷದವಳಿದ್ದಾಗಲೇ ತಾಯಿ ಲಕ್ಷ್ಮೀಬಾಯಿ ಝಾಮಡೆ ಜೊತೆ ಹೊಟ್ಟೆಪಾಡಿಗಾಗಿ ಮುಂಬೈ ಮಹಾನಗರಕ್ಕೆ ಬಂದವಳು. ಎಲ್ಲರಂತೆ ತಾನೂ ಓದಬೇಕು ಎನ್ನುವ ಕನಸನ್ನು ಬದುಕಿನ ಅನಿವಾರ್ಯತೆಗಾಗಿ ಮೊಟಕುಗೊಳಿಸಿಕೊಂಡವಳು.
ಗಲ್ಲಿಗಲ್ಲಿಗಳಲ್ಲಿ ತಿರುಗುತ್ತ, ಮನೆಮನೆಗಳಲ್ಲಿ ಕೆಲಸ ಮಾಡುತ್ತ ಬದುಕಿನ ಅಪಾರ ಅನುಭವವನ್ನು ಪಡೆದುಕೊಂಡವಳು. ತನ್ನ ತಂದೆ, ತಾಯಿ, ತಂಗಿಗಾಗಿ ಮಿಡಿಯುವ ಹೃದಯದವಳು, ಸಂಸ್ಕೃತಿಹೀನ ಸಿರಿವಂತರ ಮನೆಗಳಲ್ಲಿ ಕೆಲಸ ಮಾಡುತ್ತಲೇ, ಪಾತ್ರೆಗಳನ್ನು ತೊಳೆಯುತ್ತಲೇ ಮಗಳನ್ನು ಸುಸಂಸ್ಕೃತಳನ್ನಾಗಿ ಮಾಡಿದವಳು.
ಮನೆ ಮಂದಿಗಾಗಿ ದುಡಿಯುವ ತನ್ನ ತಂದೆ, ಯಾರದೋ ಆಮಿಷಕ್ಕೆ ಬಲಿಯಾಗಿ ಮುಂಬೈನ ಕಾಮಾಟಿಪುರದಲ್ಲಿ ನೇಣಿಗೆ ಶರಣಾಗುವ ತಂಗಿ, ಏಡ್ಸ್ ಮಹಾಮಾರಿಗೆ ಬಲಿಯಾಗುವ ಗಂಡ, ಈ ಎಲ್ಲ ಘಟನೆಗಳಿಗೆ ಎದುರುಗೊಳ್ಳುತ್ತ ಬದುಕು ಕಟ್ಟಿಕೊಳ್ಳಲು ಹೆಣಗುವವಳು. ಕೊನೆಯಲ್ಲಿ ಆಕೆಯ ಮಗಳೇ ಅವಳನ್ನು ಓದುವಂತೆ ಪ್ರೇರೇಪಿಸುತ್ತಾಳೆ. ಆ ಮೂಲಕ ಅಕ್ಷರಜ್ಞಾನದ ಕಡೆಗೆ ಮುಖ ಮಾಡುತ್ತಾಳೆ ಸಕುಬಾಯಿ.
• ಹಿಂದಿ ಮೂಲ: ನಾದಿರಾ ಒಬ್ಬರ್
• ಕನ್ನಡ ಅನುವಾದ ಡಿ.ಎಸ್.ಚೌಗಲೆ
• ನಿರ್ದೇಶನ- ಹುಲುಗಪ್ಪ ಕಟ್ಟಿಮನಿ
• ಮುದ್ರಿತ ಸಂಗೀತ ವಿನ್ಯಾಸ-
ಸಾಲಿಯಾನ ಉಮೇಶ್ ನಾರಾಯಣ
• ಪ್ರಸ್ತುತಿ- ನುಡಿರಂಗ ಬೆಂಗಳೂರು
ನವದೆಹಲಿ: ಕೆನರಾ ಬ್ಯಾಂಕ್ ಇಂದು ತನ್ನ ರೆಪೊ-ಲಿಂಕ್ಡ್ ಸಾಲ ದರವನ್ನು 25 ಬೇಸಿಸ್ ಪಾಯಿಂಟ್ಗಳಿಂದ ಕಡಿಮೆ ಮಾಡುವ ಮೂಲಕ ಸಾಲಗಾರರಿಗೆ…
ಬೆಂಗಳೂರು: ಚಿನ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯ ಗೌಡ ಹಾಗೂ ಶಾಸಕ ವಿನಯ್ ಕುಲಕರ್ಣಿ ಅವರ ಮನೆಗಳ ಮೇಲೆ ಇಡಿ…
ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಿಂದ 26 ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್…
ಹನೂರು: ಕಾವೇರಿ ವನ್ಯಜೀವಿ ಧಾಮ, ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಅರಣ್ಯದ ಸುತ್ತಮುತ್ತ ಮಾನವ- ವನ್ಯಜೀವಿ…
ಶಿವಮೊಗ್ಗ: ಪ್ರವಾಸಿಗರಿಗೆ ಗುಡ್ನ್ಯೂಸ್ ಸಿಕ್ಕಿದ್ದು, ಮೇ.1ರಿಂದ ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ…
ಮಂಡ್ಯ: ಕಾವೇರಿ ಮಾತೆಗೆ ಗಂಗಾರತಿ ಮಾದರಿಯಲ್ಲಿ ‘ಕಾವೇರಿ ಆರತಿ’ ನೆರವೇರಿಸುವ ಸಂಬಂಧ ರಾಜ್ಯ ಸರ್ಕಾರವು ಗುರುವಾರ ನಡೆದ ಸಚಿವ ಸಂಪುಟದಲ್ಲಿ…