ಸಕುಬಾಯಿ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಹುಟ್ಟಿದವಳು, ಏಳು ವರ್ಷದವಳಿದ್ದಾಗಲೇ ತಾಯಿ ಲಕ್ಷ್ಮೀಬಾಯಿ ಝಾಮಡೆ ಜೊತೆ ಹೊಟ್ಟೆಪಾಡಿಗಾಗಿ ಮುಂಬೈ ಮಹಾನಗರಕ್ಕೆ ಬಂದವಳು. ಎಲ್ಲರಂತೆ ತಾನೂ ಓದಬೇಕು ಎನ್ನುವ ಕನಸನ್ನು ಬದುಕಿನ ಅನಿವಾರ್ಯತೆಗಾಗಿ ಮೊಟಕುಗೊಳಿಸಿಕೊಂಡವಳು.
ಗಲ್ಲಿಗಲ್ಲಿಗಳಲ್ಲಿ ತಿರುಗುತ್ತ, ಮನೆಮನೆಗಳಲ್ಲಿ ಕೆಲಸ ಮಾಡುತ್ತ ಬದುಕಿನ ಅಪಾರ ಅನುಭವವನ್ನು ಪಡೆದುಕೊಂಡವಳು. ತನ್ನ ತಂದೆ, ತಾಯಿ, ತಂಗಿಗಾಗಿ ಮಿಡಿಯುವ ಹೃದಯದವಳು, ಸಂಸ್ಕೃತಿಹೀನ ಸಿರಿವಂತರ ಮನೆಗಳಲ್ಲಿ ಕೆಲಸ ಮಾಡುತ್ತಲೇ, ಪಾತ್ರೆಗಳನ್ನು ತೊಳೆಯುತ್ತಲೇ ಮಗಳನ್ನು ಸುಸಂಸ್ಕೃತಳನ್ನಾಗಿ ಮಾಡಿದವಳು.
ಮನೆ ಮಂದಿಗಾಗಿ ದುಡಿಯುವ ತನ್ನ ತಂದೆ, ಯಾರದೋ ಆಮಿಷಕ್ಕೆ ಬಲಿಯಾಗಿ ಮುಂಬೈನ ಕಾಮಾಟಿಪುರದಲ್ಲಿ ನೇಣಿಗೆ ಶರಣಾಗುವ ತಂಗಿ, ಏಡ್ಸ್ ಮಹಾಮಾರಿಗೆ ಬಲಿಯಾಗುವ ಗಂಡ, ಈ ಎಲ್ಲ ಘಟನೆಗಳಿಗೆ ಎದುರುಗೊಳ್ಳುತ್ತ ಬದುಕು ಕಟ್ಟಿಕೊಳ್ಳಲು ಹೆಣಗುವವಳು. ಕೊನೆಯಲ್ಲಿ ಆಕೆಯ ಮಗಳೇ ಅವಳನ್ನು ಓದುವಂತೆ ಪ್ರೇರೇಪಿಸುತ್ತಾಳೆ. ಆ ಮೂಲಕ ಅಕ್ಷರಜ್ಞಾನದ ಕಡೆಗೆ ಮುಖ ಮಾಡುತ್ತಾಳೆ ಸಕುಬಾಯಿ.
• ಹಿಂದಿ ಮೂಲ: ನಾದಿರಾ ಒಬ್ಬರ್
• ಕನ್ನಡ ಅನುವಾದ ಡಿ.ಎಸ್.ಚೌಗಲೆ
• ನಿರ್ದೇಶನ- ಹುಲುಗಪ್ಪ ಕಟ್ಟಿಮನಿ
• ಮುದ್ರಿತ ಸಂಗೀತ ವಿನ್ಯಾಸ-
ಸಾಲಿಯಾನ ಉಮೇಶ್ ನಾರಾಯಣ
• ಪ್ರಸ್ತುತಿ- ನುಡಿರಂಗ ಬೆಂಗಳೂರು
ಬೆಂಗಳೂರು: ನಾಳೆ ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ರಾಜ್ಯ ಬಜೆಟ್ ಮಂಡನೆಯ…
ಹನೂರು: ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ತೀವ್ರ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ವನ್ಯಜೀವಿಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕೊಳ್ಳೇಗಾಲ…
ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಎಐಸಿಸಿ ಮಹತ್ವದ ಜವಾಬ್ದಾರಿ ಕೊಟ್ಟಿದೆ. ಈ…
ಮಂಡ್ಯ: ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣದ ಮಹತ್ವವನ್ನು ರೈತರಿಗೆ ಪರಿಚಯಿಸುವ ಉದ್ದೇಶದಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯ ವತಿಯಿಂದ “ಕೃಷಿ ಯಂತ್ರೋಪಕರಣ…
ಮಂಡ್ಯ: ಹಳೆಯ ಬೀದಿ ದೀಪಗಳನ್ನು ಎಲ್ಇಡಿ ದೀಪಗಳಾಗ ಬದಲಾಯಿಸುವುದು ಶಕ್ತಿ ಉಳಿತಾಯ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ದೀರ್ಘಾವಧಿಯ ಬಾಳಿಕೆಗೆ…