ಇವರ ಹೆಸರು ಲಲಿತಾ ಮೊದಲಿಯಾರ್.ಇರುವುದು ಮೈಸೂರಿನ ರಾಜೀವ ನಗರದಲ್ಲಿ. ಇವರ ತಂದೆ ಅರಮನೆಗೆ ಹತ್ತಿರವಿದ್ದ ಮೈಸೂರಿನ ಒಂದು ಕಾಲದ ವರ್ತಕರು.
ಜೀವನದ ಹಲವು ಜಂಜಡಗಳಿಗೆ ಸಿಲುಕಿ ಜರ್ಜರಿತರಾಗಿದ್ದ ಲಲಿತಾ ಅದರಿಂದ ಹೊರಬರಲು ಕಂಡುಕೊಂಡ ದಾರಿ ಕನ್ನಡ ತಾಯಿ ಭುವನೇಶ್ವರಿಯ ದಿರಿಸು ಧರಿಸಿ ನವಂಬರ್ ತಿಂಗಳು ಪೂರ್ತಿ ಮೈಸೂರು ನಗರದ ರಾಜ್ಯೋತ್ಸವದ ಸಮಾರಂಭಗಳಲ್ಲಿ ಪ್ರತ್ಯಕ್ಷರಾಗುವುದು ಮತ್ತು ಆಗಸ್ಟ್ ಹದಿನೈದರಂದು ಭಾರತ ಮಾತೆಯ ವೇಷ ಧರಿಸಿ ಸ್ವಾತಂತ್ರೋತ್ಸವದಲ್ಲಿ ಪಾಲುಗೊಳ್ಳುವುದು.
ಕಳೆದ ಹಲವು ಹತ್ತು ವರ್ಷಗಳಿಂದ ಚಾಚೂ ತಪ್ಪದೆ ಈ ಕೈಂಕರ್ಯದಲ್ಲಿ ತೊಡಗಿರುವ ಲಲಿತಾ ಮೊದಲಿಯಾರ್ ಎಂಬ ಈ ತಾಯಿಗೆ ಬದುಕಲ್ಲಿ ಬೇರೆ ಯಾವುದೂ ಮಹಾತ್ವಾಕಾಂಕ್ಷೆಗಳಿಲ್ಲ. ಕನ್ನಡ ನಾಡಿನ ಈ ಮಣ್ಣು ಮತ್ತು ಮೈಸೂರಿನ ಬದುಕು ತನಗೆ ಕೊಟ್ಟ ಸುಖ ಸಂತೋಷಗಳಿಗೆ ತಾನು ತೋರಿಸುವ ಕೃತಜ್ಞತೆ ತನ್ನ ಈ ಕಾಯಕ ಎಂದು ವಿನೀತಳಾಗಿ ಹೇಳುತ್ತಾರೆ. ತನ್ನ ಬದುಕಿನ ಕುರಿತು ಹೇಳಹೋದರೆ ದೊಡ್ಡ ಕಾದಂಬರಿಯೇ ಸಾಕಾಗಲಾರದು ಎಂದು ವಿಷಾಧದಿಂದ ನಗುತ್ತಾರೆ.
ಜೆರುಸಲೆಮ್ : ಪಶ್ಚಿಮ ಏಷ್ಯಾದ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ಈ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು…
ಹನೂರು : ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರಾವರಿ ವ್ಯವಸ್ಥೆ ಕಲ್ಪಿಸುವುದರ ಮೂಲಕ ರೈತರಿಗೆ ವ್ಯವಸಾಯಕ್ಕೆ ಹೆಚ್ಚಿನ…
ಹನೂರು : ಮಳೆಗಾಲದ ಸಂದರ್ಭದಲ್ಲಿ ರೈತರು ಹಾಗೂ ನೆರೆಯ ತಮಿಳುನಾಡಿಗೆ ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆ,…
ಬೆಂಗಳೂರು : ಭಾರತೀಯ ಚುನಾವಣಾ ಆಯೋಗವು(ಇಸಿಐ) ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕವನ್ನು ಭಾನುವಾರ ಪ್ರಕಟಿಸಿದೆ. ಈ ಕುರಿತು…
ಹೊಸದಿಲ್ಲಿ : 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗ(ಇಸಿಐ) ಅಧಿಕೃತವಾಗಿ…
ಟೆಹರಾನ್: ಯುಎಸ್ ಮಿಲಿಟರಿ ಬಳಸುತ್ತಿದ್ದ ಸೌದಿ ಅರೇಬಿಯಾದ ಅಲ್ ಖಾರ್ಜ್ ವಾಯುನೆಲೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಕೆಲವು…