ಹೊಸತು ಎಂಬುದು ನಿರಂತರ ಕ್ರಿಯಾಶೀಲತೆಗೆ ಸಂಬಂಧಪಟ್ಟದ್ದು, ಒಂದು ಪರಿಚಯವಾದರೆ ಮತ್ತೊಂದರ ಅವಿಷ್ಕಾರ ಆಗಲೇ ಬೇಕು. ಇದು ಆಧುನಿಕ ಜಗತ್ತಿನ ಅಭಿರುಚಿ, ಈ ಅಭಿರುಚಿ ನಿಂತ ನೀರಾಗಿರುವುದಿಲ್ಲ. ಸದಾ ಹೊಸದರೆಡೆಗಿನ ಸೆಳೆತ,ಆಕರ್ಷಣೆ ನಿರಂತರ ಪ್ರಯತ್ನಗಳಲ್ಲಿ ತೊಡಗುವಂತೆ ಮಾಡುತ್ತದೆ. ಶಿಲಾಯುಗದ ನಂತರ ನವ ನಾಗರಿಕ ಪ್ರಪಂಚದ ಮಸ್ತಿಷ್ಕಕಕ್ಕೆ ಹೊಳೆಯದೆ ಗೌಣವೆನಿಸಿದ್ದ ವಸ್ತುಗಳೆಲ್ಲ ಇವತ್ತಿನ ಕೌಶಲದ ನಾಜೂಕಿನ ಕೈಗಳಿಗೆ ಸಿಕ್ಕಿ ನವನವೀನ ರೂಪವನ್ನೇ ಪಡದುಕೊಳ್ಳುತ್ತಿವೆ. ಇಂತಹ ಕೌಶಲಗಳಲ್ಲಿ ಮಣ್ಣಿನ ‘ಟೆರ್ರಾಕೋಟಾ’ಕಲೆಯೂ ಒಂದು…!
ಅದರಲ್ಲೇನಿದೆ ಮಣ್ಣು…! ಇದು ಸಾಮಾನ್ಯ ಸಂದರ್ಭಗಳಲ್ಲೂ ಹೆಚ್ಚಾಗಿ ಹಳ್ಳಿಗರ ಬಾಯಿಂದ ಹೊರಡುವ ಗ್ರಾಮೀಣ ಸೊಗಡಿನ ಮಾತು.ತಿರುಳಿಲ್ಲದ್ದು,ಸಾರವಿಲ್ಲದ್ದು ಎಂಬುದೇ ಇದರ ಅರ್ಥ. ಆದರೆ ವಾಸ್ತವದಲ್ಲಿ ಮಣ್ಣಿನ ಒಡನಾಟವಿಲ್ಲದ ಮನುಷ್ಯನ ಬದುಕು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ್ದು. ಅದರ ಜತೆಗಿನ ಅವಿನಾಭಾವ ಸಂಬಂಧವೇ ಅಂಥದ್ದು.
ಮೈಸೂರಿನ ಕೆ.ಜಿ.ಕೊಪ್ಪಲಿನವರಾದ ನೀಲಿ ಲೋಹಿತ್ ಅವರು ಓದಿದ್ದು ಬಿಎ ಪದವಿ, ನಂತರ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮ ಡಿಪ್ಲೊಮಾ ಪಡೆದಿದ್ದಾರೆ. ಇವರಿಗೀಗ ೩೭ ವರ್ಷ. ಆದರೆ ಅವರ ಪರಿಕಲ್ಪನೆ ವಯಸ್ಸಿಗೂ ಮೀರಿದ್ದು.
ಅಮೆರಿಕಾದ ಕ್ಯಾಲಿಫೋರ್ನಿಯಾ, ಉಗಾಂಡ, ದೆಹಲಿ,ಹೈದರಾಬಾದ್, ತಮಿಳುನಾಡು, ಗುಜರಾತ್ ಹಾಗೂ ಕರ್ನಾಟಕದ ಎಲ್ಲ ಜಿಲ್ಲೆಗಳ ಗ್ರಾಹಕರಿಗೆ ಇವರು ಮಣ್ಣಿನಿಂದ ತಯಾರಿಸಿದ ಮೂಗುತಿ,ಕಿವಿಯೋಲೆ, ಬೈತಲೆಬೊಟ್ಟು,ವಿವಿಧ ಮಾದರಿಯ ಕತ್ತಿನ ಸರಗಳು, ತೋಳ್ಬಂದಿ, ಸೊಂಟದಪಟ್ಟಿ, ಕಾಲ್ಗೆಜ್ಜೆ,ಜಡೆಬಿಲ್ಲೆ ಮುಂತಾದ ಮಣ್ಣಿನ ಆಭರಣಗಳು ತಲುಪಿ, ಜನಪ್ರಿಯತೆ ಗಳಿಸಿವೆ.
2017 ರ ಆರಂಭದಲ್ಲಿ ಶೂನ್ಯದಿಂದಲೇ ಆರಂಭವಾದ ಮಣ್ಣಿನ ಆಭರಣಗಳ ಕುಟೀರ 2019ರ ಸೆಪ್ಟಂಬರ್ನಲ್ಲಿ ‘ನೀಲಿಕಲಾ ಕ್ರಿಯೇಷನ್ಸ್ ’ ರೂಪ ತಾಳಿತು. ಕೊರೊನಾ ಸಂದರ್ಭದಲ್ಲಿ 9 ವರ್ಷದಿಂದ 60 ವರ್ಷದ ವರೆಗಿನ ಗೃಹಿಣಿಯರೂ ಆನ್ಲೈನ್ ತರಗತಿಯಲ್ಲಿ ಮಣ್ಣಿನ ಆಭರಣಗಳ ತಯಾರಿಕೆ ಕೌಶಲದ ಬಗ್ಗೆ ಕಲಿತಿದ್ದಾರೆ.ಸಾಕಷ್ಟು ಹೋರಾಟದ ನಂತರ ಕಳೆದ ವರ್ಷ ಕುವೆಂಪುನಗರ ಎಸ್ಬಿಐ ಶಾಖೆಯಿಂದ ಆರ್ಥಿಕ ನೆರವು ಸಿಕ್ಕಿದೆ. ಮರುಪಾವತಿಯೂ ಆಗುತ್ತಿದೆ. ಸಾಲಕೊಡುವಾಗ ಖಾತರಿಯ ಬಗ್ಗೆ ಹಿಂದೆಮುಂದೆ ನೋಡಿದ್ದ ಬ್ಯಾಂಕ್ ಅಧಿಕಾರಿಗಳು ನಿರಾಳರಾಗಿದ್ದಾರೆ.ನೀಲಿ ಕಲಾ ಅಕಾಡೆಮಿಯಲ್ಲಿ ತರಬೇತಿ ಪಡೆಯಲಿಚ್ಚಿಸುವವರು ಮೊಬೈಲ್ ಸಂಖ್ಯೆ : 7676960671 ಇಲ್ಲಿ ಸಂಪರ್ಕಿಸಬಹುದು. ವೆಬ್ಸೈಟ್: www.Neelikala.com
8 ಮಂದಿಗೆ ಉದ್ಯೋಗ ಕೊಟ್ಟಿದ್ದೇನೆ. ಈ ಕೆಲಸದಲ್ಲಿ ‘ಕ್ರಿಯೇಟಿವಿಟಿ’ ಬಹಳ ಮುಖ್ಯ. ಅದೇ ಬಂಡವಾಳ, ಸದಾ ಹೊಸತರ ಬಗ್ಗೆ ಯೋಚಿಸುತ್ತಿರಬೇಕು, ಜನರೂ ಸಹ ಹೊಸ ಹೊಸ ವಿನ್ಯಾಸಗಳನ್ನು ಬಯಸುತ್ತಾರೆ. ಅದಕ್ಕೆ ನಾನೂ ಹೊಂದಿಕೊಂಡಿದ್ದೇನೆ. 5 ವರ್ಷಗಳ ಪರಿಶ್ರಮದ ನಂತರ ಸ್ಪಷ್ಟತೆ,ನೆಮ್ಮದಿ ಎರಡೂ ಸಿಕ್ಕಿದೆ.
-ನೀಲಿ ಲೋಹಿತ್.
————————-
ಇಂಟ್ರಾ :
ಹೊಸತು ಎಂಬುದು ನಿರಂತರ ಕ್ರಿಯಾಶೀಲತೆಗೆ ಸಂಬಂಧಪಟ್ಟದ್ದು, ಒಂದು ಪರಿಚಯವಾದರೆ ಮತ್ತೊಂದರ ಅವಿಷ್ಕಾರ ಆಗಲೇ ಬೇಕು. ಇದು ಆಧುನಿಕ ಜಗತ್ತಿನ ಅಭಿರುಚಿ, ಈ ಅಭಿರುಚಿ ನಿಂತ ನೀರಾಗಿರುವುದಿಲ್ಲ. ಸದಾ ಹೊಸದರೆಡೆಗಿನ ಸೆಳೆತ,ಆಕರ್ಷಣೆ ನಿರಂತರ ಪ್ರಯತ್ನಗಳಲ್ಲಿ ತೊಡಗುವಂತೆ ಮಾಡುತ್ತದೆ. ಶಿಲಾಯುಗದ ನಂತರ ನವ ನಾಗರಿಕ ಪ್ರಪಂಚದ ಮಸ್ತಿಷ್ಕಕಕ್ಕೆ ಹೊಳೆಯದೆ ಗೌಣವೆನಿಸಿದ್ದ ವಸ್ತುಗಳೆಲ್ಲ ಇವತ್ತಿನ ಕೌಶಲದ ನಾಜೂಕಿನ ಕೈಗಳಿಗೆ ಸಿಕ್ಕಿ ನವನವೀನ ರೂಪವನ್ನೇ ಪಡೆದುಕೊಳ್ಳುತ್ತಿವೆ. ಇಂತಹ ಕೌಶಲಗಳಲ್ಲಿ ಮಣ್ಣಿನ ‘ಟೆರ್ರಾಕೋಟಾ’ಕಲೆಯೂ ಒಂದು…!
ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಏಪ್ರಿಲ್.8ರಿಂದ ಪ್ರಾರಂಭವಾಗಲಿದೆ. ರಾಜ್ಯದ ಎಲ್ಲಾ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಏಕಕಾಲಕ್ಕೆ…
ಬೆಂಗಳೂರು: ಶಾಸಕರು ಐಪಿಎಲ್ ಟಿಕೆಟ್ ಕೇಳೋದು ತಪ್ಪು. ಐಪಿಎಲ್ ಆಸಕ್ತಿ ಇರೋರು ಕಾಸು ಕೊಟ್ಟು ಟಿಕೆಟ್ ತಗೋಳಿ ಎಂದು ಮಾಜಿ…
ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಐದು ದಿನಗಳ ಕಾಲ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…
ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ತಮ್ಮ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ರಾಜ್ಯಸಭೆಗೆ…
ಕುಶಾಲನಗರ: ಹಿಟ್ ಅಂಡ್ ರನ್ಗೆ ಯುವಕ ಬಲಿಯಾಗಿರುವ ಘಟನೆ ಬೈಲಕುಪ್ಪೆ ಮುಖ್ಯ ರಸ್ತೆಯಲ್ಲಿ ನಡೆದಿದೆ. ಕಾರು, ಆಟೋ ಹಾಗೂ ಬೈಕ್…
ಬೆಂಗಳೂರು: ಕೆಎಸ್ಆರ್ಟಿಸಿ ಬಸ್ಗಳಿಗೆ ತಕ್ಷಣಕ್ಕೆ ಡೀಸೆಲ್ ಸಮಸ್ಯೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಇರಾನ್-ಇಸ್ರೇಲ್ ಸಂಘರ್ಷ…