ಆಂದೋಲನ ಪುರವಣಿ

ಯುವ ಡಾಟ್‌ ಕಾಮ್‌: ಕ್ರೀಡಾಪಟುಗಳನ್ನು ‘ಕಾಡುವ’ ಗಾಯವೆಂಬೋ ಪೆಡಂಭೂತ

ರಾಷ್ಟ್ರೀಯ ಕ್ರೀಡಾ ದಿನ ಇಂದು

‘ಟೆಂಪಲ್‌ರನ್’ ಮೊಬೈಲ್‌ನಲ್ಲಿ ಆಡುವ ಗೇಮ್ ಆ್ಯಪ್. ಅಬಾಲವೃದ್ಧರ ತನಕವೂ ಇದರ ‘ಹುಚ್ಚು’ ಇದೆ. ಈ ಗೇಮ್‌ನಲ್ಲಿ ಮುಂದೆ ಒಬ್ಬ ಓಡುತ್ತಿರುತ್ತಾನೆ. ಅವನನ್ನು ಹಿಡಿಯಲು ಹಿಂದೊಬ್ಬ ಧಾವಿಸಿ ಬರುತ್ತಾನೆ. ಮುಂದಿನ ಓಟಗಾರನಿಗೆ ಅಲ್ಲಲ್ಲಿ ಅಡ ತಡೆಗಳಿರುತ್ತವೆ ಹಾಗೇಯೇ ಮಧ್ಯೆ-ಮಧ್ಯೆ ‘ಗಿಫ್ಟ್’ಗಳು ಕೂಡಾ ದೊರಕುತ್ತವೆ. ಇವೆಲ್ಲ ಸಿಕ್ಕರೂ ಆತ ಸಮಾಧಾನ ಪಟ್ಟುಕೊಳ್ಳುವಂತಿಲ್ಲ. ಹಿಂದಿನವ ಆತನ ಬೆನ್ನತ್ತಿ ಬರುವುದನ್ನೂ ಬಿಡುವುದೇ ಇಲ್ಲ..

ಈ ಗೇಮ್ ಅನ್ನೇ ನಮ್ಮ ಕ್ರೀಡಾಪಟುಗಳಿಗೆ ರೂಪಕವಾಗಿ ತಗೆದುಕೊಳ್ಳಬಹುದು. ಮುಂದೆ ಓಡುತ್ತಿರುವವ ಆಟಗಾರನಾದರೇ ಹಿಂದೆ ಬೆನ್ನತ್ತಿರುವವ ‘ಗಾಯ’ಎಂಬೋ ಬ್ರಹ್ಮ ರಾಕ್ಷಸ ಎಂದುಕೊಳ್ಳಬಹುದು. ಎಷ್ಟೇ ಹುಷಾರಾಗಿದ್ದರೂ ಕೂಡ ಈ ಬ್ರಹ್ಮರಾಕ್ಷಸ ಎತ್ತಲಿಂದಾದರೂ ಧುತ್ತೆಂದು ಬಂದು ಕಣ್ಣ ಮುಂದೆ ಕ್ಷಣಾರ್ಧದಲ್ಲಿ ಕಾಣಿಸಿಕೊಳ್ಳುತ್ತಾನೆ. ಕಾಣಿಸಿಕೊಂಡವನೂ ಸುಮ್ಮನೆ ಹೋಗುವುದಿಲ್ಲ. ಆಟಗಾರರ ಭವಿಷ್ಯವನ್ನೇ ನಾಶ ಮಾಡುತ್ತಾನೆ.

ಭಾರತದಲ್ಲಿ ಅನೇಕ ಕ್ರೀಡಾಪಟುಗಳನ್ನು ‘ಗಾಯ’ ಇನ್ನಿಲ್ಲದಂತೆ ಕಾಡಿದೆ. ಕೆಲವರು ಇದರ ವಿರುದ್ಧ ಹೋರಾಡಿ ಮತ್ತೆ ಅಂಗಳಕ್ಕೆ ಬಂದರೂ ಮೊದಲಿನ ಪ್ರದರ್ಶನ ನೀಡಲು ಆಗದೇ ಒದ್ದಾಡಿದ್ದಾರೆ. ಇನ್ನೂ ಕೆಲವರಂತೂ ಇದರಿಂದ ರೋಸಿ ಹೋಗಿ ನಿವೃತ್ತಿಯಾದ ಉದಾಹರಣೆಗಳಿವೆ.

ಒಲಂಪಿಕ್ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಗೆರೆ ದಾಟಿದ ಹುಡುಗ ನೀರಜ್ ಚೋಪ್ರಾ ಗಾಯಗೊಂಡ ಕಾರಣ ಕಾಮನ್‌ವೆಲ್ತ್ ಗೇಮ್ ತಪ್ಪಿಸಿಕೊಂಡರು. ಚಿನ್ನದ ಭರವಸೆ ಇಟ್ಟಿದ್ದ ಲಕ್ಷಾಂತರ ಭಾರತೀಯರು ಮಮ್ಮುಲ ಮರುಗಿದರು. ಕ್ರಿಕೆಟ್ ದೇವರು ಸಚಿನ್ ಅವರನ್ನು ಬೆನ್ನುಹುರಿ ಸಮಸ್ಯೆ ‘ಬೇತಾಳ’ನಂತೆ ನೇತು ಹಾಕಿಕೊಂಡಿತ್ತು. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದು ಮತ್ತೆ ‘ಪಿಚ್’ಗೆ ಬಂದರೂ ಮೊದಲು ಹೊಡೆಯುತ್ತಿದ್ದ ‘ಶಾಟ್ಸ್’ಗಳು ಬತ್ತಳಿಕೆಯಿಂದ ಕಾಣೆಯಾಗಿದ್ದವು. ಬ್ಯಾಟಿನ ಭಾರವೂ ಕಡಿಮೆಯಾಗಿತ್ತು. ಕರ್ನಾಟಕದ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ ವಿಜಯ ಭಾರದ್ವಾಜ್ ಆಡಿದ ಮೊದಲ ಅಂತಾರಾಷ್ಟ್ರೀಯ ಸರಣಿಯಲ್ಲಿ ಸರಣಿ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. ಗಾಯಾಳುವಾದರು ಮತ್ತೆ ಇಂಡಿಯಾ ಟೀಮ್ ಪ್ರತಿನಿಧಿಸಲೇ ಇಲ್ಲ.

ಚಿಕಿತ್ಸೆಯೊಂದಿಗೆ ಮನಸ್ಥೈರ್ಯ ತುಂಬಬೇಕು
ಕ್ರೀಡಾಪಟುಗಳು ಗಾಯಗೊಂಡ ಸಮಯದಲ್ಲಿ ಅವರಿಗೆ ಉತ್ತಮ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯವೋ ಅವರಿಗೆ ಮನಸ್ಥೈರ್ಯ ತುಂಬುದು ಅಷ್ಟೇ ಮುಖ್ಯ ಎನ್ನುತ್ತಾರೆ ಡಾ.ವಿಜಯ ಸ್ಯಾಮುವೆಲ್.

ಜೆಎಸ್‌ಎಸ್ ಫಿಜಿಯೋಥೆರಪಿ ಕಾಲೇಜಿನ ಕ್ರೀಡಾ ವಿಜ್ಞಾನದ ಮುಖ್ಯಸ್ಥರಾಗಿರುವ ಡಾ.ವಿಜಯ್ ಅವರು ಇಲ್ಲಿವರೆಗೆ ನೂರಾರು ಕ್ರೀಡಾಪಟುಗಳಿಗೆ ಚಿಕಿತ್ಸೆ ನೀಡಿದ್ದಾರೆ. ಅವರಿಗೆ ಕೌನ್ಸಿಲಿಂಗ್ ಕೂಡಾ ಮಾಡಿದ್ದಾರೆ. ಅವರ ಅನುಭವದ ಪ್ರಕಾರ, ಗಾಯಗೊಂಡ ಸಮಯದಲ್ಲಿ ಮಾನಸಿಕ ಗೊಂದಲದಿಂದಾಗಿ ಕ್ರೀಡಾಪಟುಗಳು ಕುಗ್ಗಿ ಹೋಗಿರುತ್ತಾರೆ. ಭವಿಷ್ಯವೇನು ಎನ್ನುವ ಚಿಂತೆಯೂ ಮನಸ್ಸಿನಲ್ಲಿ ಓಡಾಡುತ್ತಿರುತ್ತದೆ. ಅಂತಹ ಸಮಯದಲ್ಲಿ ಅವರಿಗೆ ಸೂಕ್ತ ಆಪ್ತ ಸಮಾಲೋಚನೆ ನಡೆಸಿ, ಧೈರ್ಯ ತುಂಬಿದರೆ ಅವರು ಗಾಯವನ್ನು ಮರೆತು ಮೊದಲಿನ ಮಟ್ಟದಲ್ಲೇ ಪ್ರದರ್ಶನ ನೀಡುತ್ತಾರೆ ಎನ್ನುವುದಾಗಿದೆ.

ತಂತ್ರಜ್ಞಾನ ಬೆಳವಣಿಗೆಯಾಗಿರುವುದರಿಂದ ಗಾಯಗೊಂಡ ಕ್ರೀಡಾಪಟುಗಳನ್ನು ಪುನಶ್ಚೇತನಗೊಳಿಸುವ ಕ್ರಮವು ಮೊದಲಿಗಿಂತ ಹೆಚ್ಚು ಉತ್ತಮಗೊಂಡಿದೆ.ಮಾಂಸಖಂಡ, ಮೀನಖಂಡಗಳ ಸಾಮರ್ಥ್ಯವನ್ನು ನಿಖರವಾಗಿ ಅಳೆಯುವ ಉಪಕರಣಗಳು ಲಭ್ಯವಿರುವುದರಿಂದ ಕ್ರೀಡಾಳುಗಳಿಗೆ ಸೂಕ್ತ ಚಿಕಿತ್ಸೆ ದೊರೆತು ಮೊದಲಿನಂತೆ ಅವರು ಮೈದಾನಕ್ಕೆ ಧುಮುಕಬಹುದು ಎಂದರು.

ಇತ್ತೀಚೆಗೆ ನಡೆದ ಘಟನೆಯೊಂದನ್ನು ನೆನಪು ಮಾಡಿಕೊಂಡ ಸ್ಯಾಮುವೆಲ್ ಅವರು, ವಾಲಿಬಾಲ್ ಆಟಗಾರನೊಬ್ಬ ಗಾಯಗೊಂಡು ಆಸ್ಪತ್ರೆಗೆ ಬಂದ ಸಮಯದಲ್ಲಿ ತುಂಬ ಗಾಬರಿಯಾಗಿದ್ದರು. ಅವರಿಗೆ ಧೈರ್ಯ ತುಂಬಿ, ನೀವು ಮೊದಲಿನಂತೆ ಉತ್ತಮವಾಗಿ ಆಟವಾಡುತ್ತೀರಿ ಎಂದು ಭರವಸೆ ನೀಡಿ, ಚಿಕಿತ್ಸೆ ಮಾಡಲಾಯಿತು. ಅತಿ ಬೇಗನೆ ಚೇತರಿಸಿಕೊಂಡ ಅವರು, ಮತ್ತೆ ಮೈದಾನಕ್ಕೆ ಇಳಿದು ಉತ್ತಮವಾಗಿ ಆಟವಾಡಿ ತಮ್ಮ ತಂಡಕ್ಕೆ ಕಪ್ ಗೆದ್ದುಕೊಟ್ಟರು ಎಂದು ತಿಳಿಸಿದರು.

andolana

Recent Posts

ಆಂಧ್ರದಲ್ಲಿ ಮತ್ತೆ ಕೋವಿಡ್‌ ಆತಂಕ: ಇಬ್ಬರು ಬಲಿ

ಅಮರಾವತಿ: ಆಂಧ್ರಪ್ರದೇಶದಲ್ಲಿ ಮತ್ತೆ ಕೋವಿಡ್‌ ಸೋಂಕಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ವೈಎಸ್‌ಆರ್‌ ಕಡಪ ಜಿಲ್ಲೆಯಲ್ಲಿ ಇತ್ತೀಚಿನ ವಾರಗಳಲ್ಲಿ 8 ಸಕ್ರಿಯ ಕೋವಿಡ್‌…

4 hours ago

ಪಂಚಭೂತಗಳಲ್ಲಿ ಲೀನರಾದ ಗಾನಕೋಗಿಲೆ ಎಸ್.ಜಾನಕಿ

ಮೈಸೂರು: ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ಅಂತ್ಯಕ್ರಿಯೆಯು ತೆಲುಗು ಬ್ರಾಹ್ಮಣ ಕುಟುಂಬದ ಸಂಪ್ರದಾಯದಂತೆ ನೆರವೇರಿತು. ಜಾನಕಿ ಅವರ ಪುತ್ರ…

5 hours ago

ಹೇಮಾವತಿ ನದಿ ಹಿನ್ನೀರಿನಲ್ಲಿ ಕಣ್ಮರೆಯಾಗಿದ್ದ ಇಬ್ಬರ ಮೃತದೇಹ ಪತ್ತೆ

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದ ಹೇಮಾವತಿ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿ ಕಣ್ಮರೆಯಾಗಿದ್ದ ಸ್ಥಳೀಯ…

6 hours ago

ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನ: ಹಾರ್ಮುಜ್‌ ಜಲಸಂಧಿ ಮುಚ್ಚಿದ ಇರಾನ್‌

ಟೆಹರಾನ್:‌ ಹಾರ್ಮುಜ್‌ ಜಲಸಂಧಿಯನ್ನು ಮುಚ್ಚುವುದಾಗಿ ಐಆರ್‌ಜಿಸಿ ಘೋಷಣೆ ಮಾಡಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಅಮೇರಿಕಾ ತನ್ನ ಹಸ್ತಕ್ಷೇಪವನ್ನು ಕೊನೆಗೊಳಿಸುವವರೆಗೆ ಜಲಮಾರ್ಗವನ್ನು…

6 hours ago

ರಾಜ್ಯದಲ್ಲಿ ನೈರುತ್ಯ ಮುಂಗಾರು ಮತ್ತೆ ದುರ್ಬಲ: ತೀವ್ರಗೊಂಡ ಬರದ ಛಾಯೆ

ಬೆಂಗಳೂರು: ನೈಋತ್ಯ ಮುಂಗಾರು ಮತ್ತೆ ರಾಜ್ಯದಲ್ಲಿ ದುರ್ಬಲಗೊಂಡಿದ್ದು, ಮಳೆ ಕೊರತೆಯಿಂದಾಗಿ ಬರದ ಛಾಯೆ ತೀವ್ರವಾಗತೊಡಗಿದೆ. ಜುಲೈ ತಿಂಗಳ ಮೊದಲ ವಾರದಲ್ಲಿ…

6 hours ago

ಕಣಿಯನಹುಂಡಿ ತೋಟದ ಮನೆಯಲ್ಲಿ ನೆರವೇರಲಿದೆ ಎಸ್‌.ಜಾನಕಿ ಅವರ ಅಂತ್ಯಕ್ರಿಯೆ

ಮೈಸೂರು: ಹಿರಿಯ ಗಾಯಕಿ ಎಸ್. ಜಾನಕಿ ಅವರ ಅಂತ್ಯಕ್ರಿಯೆ ಇಂದು ಮೈಸೂರಿನ ಬೋಗಾದಿ ಬಳಿಯ ಕಣಿಯನಹುಂಡಿ ತೋಟದ ಮನೆಯಲ್ಲಿ ಸಕಲ…

8 hours ago