ಆಂದೋಲನ ಪುರವಣಿ

ಯುವ ಡಾಟ್‌ ಕಾಮ್‌: ಕ್ರೀಡಾಪಟುಗಳನ್ನು ‘ಕಾಡುವ’ ಗಾಯವೆಂಬೋ ಪೆಡಂಭೂತ

ರಾಷ್ಟ್ರೀಯ ಕ್ರೀಡಾ ದಿನ ಇಂದು

‘ಟೆಂಪಲ್‌ರನ್’ ಮೊಬೈಲ್‌ನಲ್ಲಿ ಆಡುವ ಗೇಮ್ ಆ್ಯಪ್. ಅಬಾಲವೃದ್ಧರ ತನಕವೂ ಇದರ ‘ಹುಚ್ಚು’ ಇದೆ. ಈ ಗೇಮ್‌ನಲ್ಲಿ ಮುಂದೆ ಒಬ್ಬ ಓಡುತ್ತಿರುತ್ತಾನೆ. ಅವನನ್ನು ಹಿಡಿಯಲು ಹಿಂದೊಬ್ಬ ಧಾವಿಸಿ ಬರುತ್ತಾನೆ. ಮುಂದಿನ ಓಟಗಾರನಿಗೆ ಅಲ್ಲಲ್ಲಿ ಅಡ ತಡೆಗಳಿರುತ್ತವೆ ಹಾಗೇಯೇ ಮಧ್ಯೆ-ಮಧ್ಯೆ ‘ಗಿಫ್ಟ್’ಗಳು ಕೂಡಾ ದೊರಕುತ್ತವೆ. ಇವೆಲ್ಲ ಸಿಕ್ಕರೂ ಆತ ಸಮಾಧಾನ ಪಟ್ಟುಕೊಳ್ಳುವಂತಿಲ್ಲ. ಹಿಂದಿನವ ಆತನ ಬೆನ್ನತ್ತಿ ಬರುವುದನ್ನೂ ಬಿಡುವುದೇ ಇಲ್ಲ..

ಈ ಗೇಮ್ ಅನ್ನೇ ನಮ್ಮ ಕ್ರೀಡಾಪಟುಗಳಿಗೆ ರೂಪಕವಾಗಿ ತಗೆದುಕೊಳ್ಳಬಹುದು. ಮುಂದೆ ಓಡುತ್ತಿರುವವ ಆಟಗಾರನಾದರೇ ಹಿಂದೆ ಬೆನ್ನತ್ತಿರುವವ ‘ಗಾಯ’ಎಂಬೋ ಬ್ರಹ್ಮ ರಾಕ್ಷಸ ಎಂದುಕೊಳ್ಳಬಹುದು. ಎಷ್ಟೇ ಹುಷಾರಾಗಿದ್ದರೂ ಕೂಡ ಈ ಬ್ರಹ್ಮರಾಕ್ಷಸ ಎತ್ತಲಿಂದಾದರೂ ಧುತ್ತೆಂದು ಬಂದು ಕಣ್ಣ ಮುಂದೆ ಕ್ಷಣಾರ್ಧದಲ್ಲಿ ಕಾಣಿಸಿಕೊಳ್ಳುತ್ತಾನೆ. ಕಾಣಿಸಿಕೊಂಡವನೂ ಸುಮ್ಮನೆ ಹೋಗುವುದಿಲ್ಲ. ಆಟಗಾರರ ಭವಿಷ್ಯವನ್ನೇ ನಾಶ ಮಾಡುತ್ತಾನೆ.

ಭಾರತದಲ್ಲಿ ಅನೇಕ ಕ್ರೀಡಾಪಟುಗಳನ್ನು ‘ಗಾಯ’ ಇನ್ನಿಲ್ಲದಂತೆ ಕಾಡಿದೆ. ಕೆಲವರು ಇದರ ವಿರುದ್ಧ ಹೋರಾಡಿ ಮತ್ತೆ ಅಂಗಳಕ್ಕೆ ಬಂದರೂ ಮೊದಲಿನ ಪ್ರದರ್ಶನ ನೀಡಲು ಆಗದೇ ಒದ್ದಾಡಿದ್ದಾರೆ. ಇನ್ನೂ ಕೆಲವರಂತೂ ಇದರಿಂದ ರೋಸಿ ಹೋಗಿ ನಿವೃತ್ತಿಯಾದ ಉದಾಹರಣೆಗಳಿವೆ.

ಒಲಂಪಿಕ್ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಗೆರೆ ದಾಟಿದ ಹುಡುಗ ನೀರಜ್ ಚೋಪ್ರಾ ಗಾಯಗೊಂಡ ಕಾರಣ ಕಾಮನ್‌ವೆಲ್ತ್ ಗೇಮ್ ತಪ್ಪಿಸಿಕೊಂಡರು. ಚಿನ್ನದ ಭರವಸೆ ಇಟ್ಟಿದ್ದ ಲಕ್ಷಾಂತರ ಭಾರತೀಯರು ಮಮ್ಮುಲ ಮರುಗಿದರು. ಕ್ರಿಕೆಟ್ ದೇವರು ಸಚಿನ್ ಅವರನ್ನು ಬೆನ್ನುಹುರಿ ಸಮಸ್ಯೆ ‘ಬೇತಾಳ’ನಂತೆ ನೇತು ಹಾಕಿಕೊಂಡಿತ್ತು. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದು ಮತ್ತೆ ‘ಪಿಚ್’ಗೆ ಬಂದರೂ ಮೊದಲು ಹೊಡೆಯುತ್ತಿದ್ದ ‘ಶಾಟ್ಸ್’ಗಳು ಬತ್ತಳಿಕೆಯಿಂದ ಕಾಣೆಯಾಗಿದ್ದವು. ಬ್ಯಾಟಿನ ಭಾರವೂ ಕಡಿಮೆಯಾಗಿತ್ತು. ಕರ್ನಾಟಕದ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ ವಿಜಯ ಭಾರದ್ವಾಜ್ ಆಡಿದ ಮೊದಲ ಅಂತಾರಾಷ್ಟ್ರೀಯ ಸರಣಿಯಲ್ಲಿ ಸರಣಿ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. ಗಾಯಾಳುವಾದರು ಮತ್ತೆ ಇಂಡಿಯಾ ಟೀಮ್ ಪ್ರತಿನಿಧಿಸಲೇ ಇಲ್ಲ.

ಚಿಕಿತ್ಸೆಯೊಂದಿಗೆ ಮನಸ್ಥೈರ್ಯ ತುಂಬಬೇಕು
ಕ್ರೀಡಾಪಟುಗಳು ಗಾಯಗೊಂಡ ಸಮಯದಲ್ಲಿ ಅವರಿಗೆ ಉತ್ತಮ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯವೋ ಅವರಿಗೆ ಮನಸ್ಥೈರ್ಯ ತುಂಬುದು ಅಷ್ಟೇ ಮುಖ್ಯ ಎನ್ನುತ್ತಾರೆ ಡಾ.ವಿಜಯ ಸ್ಯಾಮುವೆಲ್.

ಜೆಎಸ್‌ಎಸ್ ಫಿಜಿಯೋಥೆರಪಿ ಕಾಲೇಜಿನ ಕ್ರೀಡಾ ವಿಜ್ಞಾನದ ಮುಖ್ಯಸ್ಥರಾಗಿರುವ ಡಾ.ವಿಜಯ್ ಅವರು ಇಲ್ಲಿವರೆಗೆ ನೂರಾರು ಕ್ರೀಡಾಪಟುಗಳಿಗೆ ಚಿಕಿತ್ಸೆ ನೀಡಿದ್ದಾರೆ. ಅವರಿಗೆ ಕೌನ್ಸಿಲಿಂಗ್ ಕೂಡಾ ಮಾಡಿದ್ದಾರೆ. ಅವರ ಅನುಭವದ ಪ್ರಕಾರ, ಗಾಯಗೊಂಡ ಸಮಯದಲ್ಲಿ ಮಾನಸಿಕ ಗೊಂದಲದಿಂದಾಗಿ ಕ್ರೀಡಾಪಟುಗಳು ಕುಗ್ಗಿ ಹೋಗಿರುತ್ತಾರೆ. ಭವಿಷ್ಯವೇನು ಎನ್ನುವ ಚಿಂತೆಯೂ ಮನಸ್ಸಿನಲ್ಲಿ ಓಡಾಡುತ್ತಿರುತ್ತದೆ. ಅಂತಹ ಸಮಯದಲ್ಲಿ ಅವರಿಗೆ ಸೂಕ್ತ ಆಪ್ತ ಸಮಾಲೋಚನೆ ನಡೆಸಿ, ಧೈರ್ಯ ತುಂಬಿದರೆ ಅವರು ಗಾಯವನ್ನು ಮರೆತು ಮೊದಲಿನ ಮಟ್ಟದಲ್ಲೇ ಪ್ರದರ್ಶನ ನೀಡುತ್ತಾರೆ ಎನ್ನುವುದಾಗಿದೆ.

ತಂತ್ರಜ್ಞಾನ ಬೆಳವಣಿಗೆಯಾಗಿರುವುದರಿಂದ ಗಾಯಗೊಂಡ ಕ್ರೀಡಾಪಟುಗಳನ್ನು ಪುನಶ್ಚೇತನಗೊಳಿಸುವ ಕ್ರಮವು ಮೊದಲಿಗಿಂತ ಹೆಚ್ಚು ಉತ್ತಮಗೊಂಡಿದೆ.ಮಾಂಸಖಂಡ, ಮೀನಖಂಡಗಳ ಸಾಮರ್ಥ್ಯವನ್ನು ನಿಖರವಾಗಿ ಅಳೆಯುವ ಉಪಕರಣಗಳು ಲಭ್ಯವಿರುವುದರಿಂದ ಕ್ರೀಡಾಳುಗಳಿಗೆ ಸೂಕ್ತ ಚಿಕಿತ್ಸೆ ದೊರೆತು ಮೊದಲಿನಂತೆ ಅವರು ಮೈದಾನಕ್ಕೆ ಧುಮುಕಬಹುದು ಎಂದರು.

ಇತ್ತೀಚೆಗೆ ನಡೆದ ಘಟನೆಯೊಂದನ್ನು ನೆನಪು ಮಾಡಿಕೊಂಡ ಸ್ಯಾಮುವೆಲ್ ಅವರು, ವಾಲಿಬಾಲ್ ಆಟಗಾರನೊಬ್ಬ ಗಾಯಗೊಂಡು ಆಸ್ಪತ್ರೆಗೆ ಬಂದ ಸಮಯದಲ್ಲಿ ತುಂಬ ಗಾಬರಿಯಾಗಿದ್ದರು. ಅವರಿಗೆ ಧೈರ್ಯ ತುಂಬಿ, ನೀವು ಮೊದಲಿನಂತೆ ಉತ್ತಮವಾಗಿ ಆಟವಾಡುತ್ತೀರಿ ಎಂದು ಭರವಸೆ ನೀಡಿ, ಚಿಕಿತ್ಸೆ ಮಾಡಲಾಯಿತು. ಅತಿ ಬೇಗನೆ ಚೇತರಿಸಿಕೊಂಡ ಅವರು, ಮತ್ತೆ ಮೈದಾನಕ್ಕೆ ಇಳಿದು ಉತ್ತಮವಾಗಿ ಆಟವಾಡಿ ತಮ್ಮ ತಂಡಕ್ಕೆ ಕಪ್ ಗೆದ್ದುಕೊಟ್ಟರು ಎಂದು ತಿಳಿಸಿದರು.

andolana

Recent Posts

ಮಹಾಶಿವರಾತ್ರಿ ಜಾತ್ರೆಯ ಸಂಭ್ರಮ: ಮಲೆ ಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ, ತ್ರಿಚಕ್ರ ವಾಹನಗಳ ಪ್ರವೇಶಕ್ಕೆ ಬ್ರೇಕ್‌

ಹನೂರು: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿ ಜಾತ್ರೆಯ ಹಿನ್ನೆಲೆಯಲ್ಲಿ ದ್ವಿಚಕ್ರ ಹಾಗೂ…

6 mins ago

ಭಕ್ತರ ಸುರಕ್ಷತೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ: ಶಾಸಕ ಮಂಜುನಾಥ್ ಸೂಚನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಫೆಬ್ರವರಿ.14ರಿಂದ ಆರಂಭಗೊಳ್ಳಲಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸಕ್ಕೆ ಲಕ್ಷಾಂತರ ಮಂದಿ ಭಕ್ತರು…

28 mins ago

ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಗೃತಿ ಜಾಥಾ

ಮೈಸೂರು: ಮೈಸೂರು ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಮಾದರಿ ಜಿಲ್ಲೆಯನ್ನಾಗಿಸುವ ಗುರಿಯೊಂದಿಗೆ ಇಂದು ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು…

51 mins ago

ಓದುಗರ ಪತ್ರ: ಸುಂಕ ಕದನಕೆ ತೆರೆ!

ಸುಂಕ ಕದನಕೆ ತೆರೆ! ಕೊನೆಗೂ ಭಾರತ ಅಮೆರಿಕ ಜಂಟಿಯಾಗಿ ಒಪ್ಪಂದಕೆ ಬಂದಿವೆ ಆಮದು ಸುಂಕ ಕಡಿತಗೊಳಿಸಲು ತೆರೆ ಬಿದ್ದಿದೆ ಸುಂಕ…

6 hours ago

ಓದುಗರ ಪತ್ರ: ಶಾಲೆಗೆ ಸುತ್ತುಗೋಡೆ ನಿರ್ಮಿಸಿ

ನಂಜನಗೂಡು ತಾಲ್ಲೂಕಿನ ಕಾರ್ಯ ಗ್ರಾಮದಲ್ಲಿ ರಸ್ತೆಯ ಪಕ್ಕದಲ್ಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಶಾಲೆಗೆ ಸುತ್ತುಗೋಡೆ ಇಲ್ಲದ ಕಾರಣ ಶಾಲೆಯಿಂದ…

6 hours ago

ಓದುಗರ ಪತ್ರ: ಜಿಲ್ಲಾ ನ್ಯಾಯಾಲಯಗಳಿಗೆ ಬಸ್ ಸೌಲಭ್ಯ ಕಲ್ಪಿಸಿ

ಮೈಸೂರಿನ ಜಿಲ್ಲಾ ನ್ಯಾಯಾಲಯಗಳಿಗೆ ಸಾಕಷ್ಟು ಬಸ್ ಸೌಲಭ್ಯವಿಲ್ಲದೆ ನ್ಯಾಯಾಲಯದ ಕಲಾಪಗಳಿಗೆ ಬರುವ ವಕೀಲರು ಹಾಗೂ ಕಕ್ಷಿದಾರರಿಗೆ ತೀವ್ರ ತೊಂದರೆಯಾಗಿದೆ. ನಗರ…

6 hours ago