10ನೇ ಚಾಮರಾಜ ಒಡೆಯರ್ ಆಳ್ವಿಕೆಯಲ್ಲಿ ನಡೆದ ಪ್ರಸಂಗ
• ಧರ್ಮೇಂದ್ರ ಕುಮಾರ್ ಮೈಸೂರು
ಮೈಸೂರು ಸಂಸ್ಥಾನವನ್ನು ಭೀಕರ ಬರಗಾಲ ಕಾಡಿತ್ತು… ಶ್ರೀಮಂತರೊಬ್ಬರು ತಾವು ಸಂಗ್ರಹಿಸಿಟ್ಟಿದ್ದ ದವಸ ಧಾನ್ಯಗಳನ್ನು ಉಚಿತವಾಗಿ ಬಡವರಿಗೆ ಹಂಚಿದರು… ಅವರ ಮಾನವೀಯ ಕಾರ್ಯವನ್ನು ಮೆಚ್ಚಿದ ಮೈಸೂರು ಮಹಾರಾಜರು ‘ನಾನು ನಿಮಗೇನಾದರೂ ಉಡುಗೊರೆ ಕೊಡಬೇಕಲ್ಲ ಎನ್ನುತ್ತಾರೆ. ಅದಕ್ಕೆ ಮಹಾದಾನಿ ಏನು ಕೇಳಿದರು ಗೊತ್ತೇ… ಅದು ಊಹೆಗೆ ನಿಲುಕದ್ದು… ಆದರೆ, ಅವರ ಉದಾರ ಹೃದಯದ ವೈಶಾಲ್ಯತೆಯ ಪ್ರತೀಕವಾಗಿತ್ತು.
10ನೇ ಚಾಮರಾಜ ಒಡೆಯರ್ 1881ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರಾಗಿ ಅಧಿಕಾರ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಉತ್ತರ ಭಾಗದಲ್ಲಿ ಬರಗಾಲ ತಾಂಡವವಾಡುತ್ತಿತ್ತು.
ಚಿತ್ರದುರ್ಗದ ಅತ್ಯಂತ ಶ್ರೀಮಂತ ಕಾಶಿ ಅಪ್ಪಣ್ಣ ಶೆಟ್ಟರ್ ಅವರು ತಮ್ಮಲ್ಲಿದ್ದ ನೂರಾರು ಗೋಡೌನ್ ಗಳಿಂದ ಚಿತ್ರದುರ್ಗದಾದ್ಯಂತ ಜನರಿಗೆ ದವಸ ಮತ್ತು ಧಾನ್ಯಗಳನ್ನು ಉಚಿತವಾಗಿ ಹಂಚುತ್ತಾರೆ.
ಒಬ್ಬ ಸಾಮಾನ್ಯ ಪ್ರಜೆ ತನ್ನಲ್ಲಿದ್ದ ಸಿರಿ ಸಂಪತ್ತನ್ನು ಬಡವರ ಕಷ್ಟಕ್ಕಾಗಿ ದಾನ ನೀಡಿದ ಎಂದು ಮಹಾರಾಜರಿಗೆ ತಿಳಿದಾಗ, ಕಾಶಿ ಅಪ್ಪಣ್ಣ ಶೆಟ್ಟರ್ ಅವರನ್ನು ನೋಡಬೇಕು ಎಂದು ಮೈಸೂರು ಸಂಸ್ಥಾನಕ್ಕೆ ಕರೆಸುತ್ತಾರೆ. ಸಂಸ್ಥಾನಕ್ಕೆ ಬಂದ ಅಪ್ಪಣ್ಣನವರಿಗೆ ಆದರಾತಿಥ್ಯ ನೀಡಿದ ಮಹಾರಾಜರು, ಇಂತಹ ಔದರ್ಯ ಮೆರೆದಿರುವ ನಿಮಗೆ ಏನು ಬೇಕು ಎಂದು ಕೇಳಿದಾಗ, ಕಾಶಿ ಅಪ್ಪಣ್ಣ ಅವರು ಕೈಮುಗಿದು ಮಹಾಸ್ವಾಮಿ ನನಗಾಗಿ ಏನೂ ಬೇಡ, ಆದರೆ ನಿಮ್ಮೊಡನೆ ಇರುವ ಒಂದು ಚಿತ್ರಪಟ
ಕಾಶಿ ಅಪ್ಪಣ್ಣ ಅವರು ಇರುವ ಚಿತ್ರಪಟ ಮಾಡಿಸಿಕೊಟ್ಟರೆ ಸಾಕು ಎಂದು ವಿನಮ್ರರಾಗಿ ಕೇಳುತ್ತಾರೆ. ಮಹಾರಾಜರು ಅರಮನೆ ಕಲಾವಿದರಿಗೆ ವರ್ಣಚಿತ್ರವನ್ನು ರಚಿಸಲು ಸೂಚಿಸುತ್ತಾರೆ. ಚಿನ್ನದ ಪದಕದೊಡನೆ ಚಿತ್ರಪಟವನ್ನೂ ಅಪ್ಪಣ್ಣ ಅವರಿಗೆ ನೀಡುತ್ತಾರೆ.
ಅವರ ನಂತರ ನಮ್ಮ ಕುಟುಂಬಸ್ಥರು ದಾನ-ಧರ್ಮಗಳ ಜೊತೆಗೆ ಟ್ರಸ್ಟ್ ಹಾಗೂ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದೇವೆ ಎಂದು ಕಾಶಿ ಅಪ್ಪಣ್ಣ ಅವರ ಮರಿ ಮೊಮ್ಮಗ ಮನೋಹರ್ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ 1881ರಲ್ಲಿ ಬರಗಾಲ ಬಂದಾಗ ರಾಜ್ಯದ ಪರಿಸ್ಥಿತಿಯನ್ನು ಕಂಡು ಕಾಶಿ ಅಪ್ಪಣ್ಣ ಅವರು ಬಹಳ ಜನ ಬಡವರಿಗೆ ಹಸಿವು ತಣಿಸಲು ಹಗೇವುನಲ್ಲಿದ್ದ ಧಾನ್ಯವನ್ನು ಹೊರತೆಗೆದು ಹಂಚಿರುತ್ತಾರೆ. ಈ ವಿಷಯವನ್ನು ತಿಳಿದ 10ನೇ ಚಾಮರಾಜ ಒಡೆಯರು ಅವರು ಸನ್ಮಾನಿಸಲು ಇಚ್ಚಿಸಿದಾಗ, ಕಾಶಿ ಅಪ್ಪಣ್ಣ ಅವರು ನನಗೆ ಅದೆಲ್ಲ ಬೇಡ, ಕೇವಲ ಮಹಾರಾಜರ ಜೊತೆಯಲ್ಲಿರುವ ಒಂದು ಚಿತ್ರಪಟ ಸಾಕು ಎಂದಿದ್ದರಂತೆ.
ಬೆಂಗಳೂರು : ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಸವಾಲು ಎದುರಾಗಿದೆ. ತಮಿಳುನಾಡಿಗೆ ಬಿಳಿಗುಂಡ್ಲುವಿನಲ್ಲಿ ಮುಂದಿನ 15 ದಿನಗಳ…
ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಹತ್ವದ ಸಭೆ ಜಲಾಶಯಗಳಲ್ಲಿ ನೀರು ಕುಸಿತ - ನಾಳೆಯೇ ಏಜೆನ್ಸಿ ಅಂತಿಮ ಬೆಂಗಳೂರು : ರಾಜ್ಯದ…
ಚೆನ್ನೈ: ತಮಿಳುನಾಡಿನ ಜನರಿಗೆ ವಿಜಯ್ ಸರ್ಕಾರದಿಂದ ಭರ್ಜರಿ ಗುಡ್ನ್ಯೂಸ್ ನೀಡಲಾಗಿದ್ದು, ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳ ವಿಚಾರದಲ್ಲಿ ಮಹತ್ವದ…
ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿವಾದಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆ ನಡೆದಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ…
ಸಂಸತ್ತಿನಲ್ಲಾಗಲಿ ಅಥವಾ ರಾಜ್ಯಗಳ ವಿಧಾನಸಭೆ ಹಾಗೂ ವಿಧಾನಪರಿಷತ್ತುಗಳಲ್ಲಾಗಲಿ ಕೆಲವು ವರ್ಷಗಳಿಂದ ಕಲಾಪಗಳೇ ಸುಸೂತ್ರವಾಗಿ ನಡೆಯದೆ ಗದ್ದಲ, ಧರಣಿ, ಪ್ರತಿ ಭಟನೆಗಳು…
ರಮೇಶ್ ಹೆಚ್.ಕೆ. ಒಳ ಮೀಸಲಾತಿ ಜಾತಿ ಪ್ರಮಾಣ ಪತ್ರ ವಿತರಣೆ ಗೊಂದಲ ಸುದೀರ್ಘವಾದ ಒಳ ಮೀಸಲಾತಿ ಹೋರಾಟದ ಬಳಿಕ ಸದ್ಯ…