ಆಂದೋಲನ ಪುರವಣಿ

ಬರಗಾಲದಲ್ಲಿ ಜನರಿಗೆ ನೆರವಾದ ಶ್ರೀಮಂತ, ರಾಜರಿಂದ ಬಯಸಿದ್ದೇನು ಗೊತ್ತೇ?!

10ನೇ ಚಾಮರಾಜ ಒಡೆಯರ್ ಆಳ್ವಿಕೆಯಲ್ಲಿ ನಡೆದ ಪ್ರಸಂಗ

• ಧರ್ಮೇಂದ್ರ ಕುಮಾರ್ ಮೈಸೂರು

ಮೈಸೂರು ಸಂಸ್ಥಾನವನ್ನು ಭೀಕರ ಬರಗಾಲ ಕಾಡಿತ್ತು… ಶ್ರೀಮಂತರೊಬ್ಬರು ತಾವು ಸಂಗ್ರಹಿಸಿಟ್ಟಿದ್ದ ದವಸ ಧಾನ್ಯಗಳನ್ನು ಉಚಿತವಾಗಿ ಬಡವರಿಗೆ ಹಂಚಿದರು… ಅವರ ಮಾನವೀಯ ಕಾರ್ಯವನ್ನು ಮೆಚ್ಚಿದ ಮೈಸೂರು ಮಹಾರಾಜರು ‘ನಾನು ನಿಮಗೇನಾದರೂ ಉಡುಗೊರೆ ಕೊಡಬೇಕಲ್ಲ ಎನ್ನುತ್ತಾರೆ. ಅದಕ್ಕೆ ಮಹಾದಾನಿ ಏನು ಕೇಳಿದರು ಗೊತ್ತೇ… ಅದು ಊಹೆಗೆ ನಿಲುಕದ್ದು… ಆದರೆ, ಅವರ ಉದಾರ ಹೃದಯದ ವೈಶಾಲ್ಯತೆಯ ಪ್ರತೀಕವಾಗಿತ್ತು.

10ನೇ ಚಾಮರಾಜ ಒಡೆಯರ್ 1881ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರಾಗಿ ಅಧಿಕಾರ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಉತ್ತರ ಭಾಗದಲ್ಲಿ ಬರಗಾಲ ತಾಂಡವವಾಡುತ್ತಿತ್ತು.

ಚಿತ್ರದುರ್ಗದ ಅತ್ಯಂತ ಶ್ರೀಮಂತ ಕಾಶಿ ಅಪ್ಪಣ್ಣ ಶೆಟ್ಟರ್ ಅವರು ತಮ್ಮಲ್ಲಿದ್ದ ನೂರಾರು ಗೋಡೌನ್‌ ಗಳಿಂದ ಚಿತ್ರದುರ್ಗದಾದ್ಯಂತ ಜನರಿಗೆ ದವಸ ಮತ್ತು ಧಾನ್ಯಗಳನ್ನು ಉಚಿತವಾಗಿ ಹಂಚುತ್ತಾರೆ.

ಒಬ್ಬ ಸಾಮಾನ್ಯ ಪ್ರಜೆ ತನ್ನಲ್ಲಿದ್ದ ಸಿರಿ ಸಂಪತ್ತನ್ನು ಬಡವರ ಕಷ್ಟಕ್ಕಾಗಿ ದಾನ ನೀಡಿದ ಎಂದು ಮಹಾರಾಜರಿಗೆ ತಿಳಿದಾಗ, ಕಾಶಿ ಅಪ್ಪಣ್ಣ ಶೆಟ್ಟರ್ ಅವರನ್ನು ನೋಡಬೇಕು ಎಂದು ಮೈಸೂರು ಸಂಸ್ಥಾನಕ್ಕೆ ಕರೆಸುತ್ತಾರೆ. ಸಂಸ್ಥಾನಕ್ಕೆ ಬಂದ ಅಪ್ಪಣ್ಣನವರಿಗೆ ಆದರಾತಿಥ್ಯ ನೀಡಿದ ಮಹಾರಾಜರು, ಇಂತಹ ಔದರ್ಯ ಮೆರೆದಿರುವ ನಿಮಗೆ ಏನು ಬೇಕು ಎಂದು ಕೇಳಿದಾಗ, ಕಾಶಿ ಅಪ್ಪಣ್ಣ ಅವರು ಕೈಮುಗಿದು ಮಹಾಸ್ವಾಮಿ ನನಗಾಗಿ ಏನೂ ಬೇಡ, ಆದರೆ ನಿಮ್ಮೊಡನೆ ಇರುವ ಒಂದು ಚಿತ್ರಪಟ
ಕಾಶಿ ಅಪ್ಪಣ್ಣ ಅವರು ಇರುವ ಚಿತ್ರಪಟ ಮಾಡಿಸಿಕೊಟ್ಟರೆ ಸಾಕು ಎಂದು ವಿನಮ್ರರಾಗಿ ಕೇಳುತ್ತಾರೆ. ಮಹಾರಾಜರು ಅರಮನೆ ಕಲಾವಿದರಿಗೆ ವರ್ಣಚಿತ್ರವನ್ನು ರಚಿಸಲು ಸೂಚಿಸುತ್ತಾರೆ. ಚಿನ್ನದ ಪದಕದೊಡನೆ ಚಿತ್ರಪಟವನ್ನೂ ಅಪ್ಪಣ್ಣ ಅವರಿಗೆ ನೀಡುತ್ತಾರೆ.

ಅವರ ನಂತರ ನಮ್ಮ ಕುಟುಂಬಸ್ಥರು ದಾನ-ಧರ್ಮಗಳ ಜೊತೆಗೆ ಟ್ರಸ್ಟ್ ಹಾಗೂ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದೇವೆ ಎಂದು ಕಾಶಿ ಅಪ್ಪಣ್ಣ ಅವರ ಮರಿ ಮೊಮ್ಮಗ ಮನೋಹರ್ ತಿಳಿಸಿದ್ದಾರೆ.

ಚಿತ್ರದುರ್ಗದಲ್ಲಿ 1881ರಲ್ಲಿ ಬರಗಾಲ ಬಂದಾಗ ರಾಜ್ಯದ ಪರಿಸ್ಥಿತಿಯನ್ನು ಕಂಡು ಕಾಶಿ ಅಪ್ಪಣ್ಣ ಅವರು ಬಹಳ ಜನ ಬಡವರಿಗೆ ಹಸಿವು ತಣಿಸಲು ಹಗೇವುನಲ್ಲಿದ್ದ ಧಾನ್ಯವನ್ನು ಹೊರತೆಗೆದು ಹಂಚಿರುತ್ತಾರೆ. ಈ ವಿಷಯವನ್ನು ತಿಳಿದ 10ನೇ ಚಾಮರಾಜ ಒಡೆಯರು ಅವರು ಸನ್ಮಾನಿಸಲು ಇಚ್ಚಿಸಿದಾಗ, ಕಾಶಿ ಅಪ್ಪಣ್ಣ ಅವರು ನನಗೆ ಅದೆಲ್ಲ ಬೇಡ, ಕೇವಲ ಮಹಾರಾಜರ ಜೊತೆಯಲ್ಲಿರುವ ಒಂದು ಚಿತ್ರಪಟ ಸಾಕು ಎಂದಿದ್ದರಂತೆ.

ಆಂದೋಲನ ಡೆಸ್ಕ್

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago