ಆಂದೋಲನ ಪುರವಣಿ

ಬರಗಾಲದಲ್ಲಿ ಜನರಿಗೆ ನೆರವಾದ ಶ್ರೀಮಂತ, ರಾಜರಿಂದ ಬಯಸಿದ್ದೇನು ಗೊತ್ತೇ?!

10ನೇ ಚಾಮರಾಜ ಒಡೆಯರ್ ಆಳ್ವಿಕೆಯಲ್ಲಿ ನಡೆದ ಪ್ರಸಂಗ

• ಧರ್ಮೇಂದ್ರ ಕುಮಾರ್ ಮೈಸೂರು

ಮೈಸೂರು ಸಂಸ್ಥಾನವನ್ನು ಭೀಕರ ಬರಗಾಲ ಕಾಡಿತ್ತು… ಶ್ರೀಮಂತರೊಬ್ಬರು ತಾವು ಸಂಗ್ರಹಿಸಿಟ್ಟಿದ್ದ ದವಸ ಧಾನ್ಯಗಳನ್ನು ಉಚಿತವಾಗಿ ಬಡವರಿಗೆ ಹಂಚಿದರು… ಅವರ ಮಾನವೀಯ ಕಾರ್ಯವನ್ನು ಮೆಚ್ಚಿದ ಮೈಸೂರು ಮಹಾರಾಜರು ‘ನಾನು ನಿಮಗೇನಾದರೂ ಉಡುಗೊರೆ ಕೊಡಬೇಕಲ್ಲ ಎನ್ನುತ್ತಾರೆ. ಅದಕ್ಕೆ ಮಹಾದಾನಿ ಏನು ಕೇಳಿದರು ಗೊತ್ತೇ… ಅದು ಊಹೆಗೆ ನಿಲುಕದ್ದು… ಆದರೆ, ಅವರ ಉದಾರ ಹೃದಯದ ವೈಶಾಲ್ಯತೆಯ ಪ್ರತೀಕವಾಗಿತ್ತು.

10ನೇ ಚಾಮರಾಜ ಒಡೆಯರ್ 1881ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರಾಗಿ ಅಧಿಕಾರ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಉತ್ತರ ಭಾಗದಲ್ಲಿ ಬರಗಾಲ ತಾಂಡವವಾಡುತ್ತಿತ್ತು.

ಚಿತ್ರದುರ್ಗದ ಅತ್ಯಂತ ಶ್ರೀಮಂತ ಕಾಶಿ ಅಪ್ಪಣ್ಣ ಶೆಟ್ಟರ್ ಅವರು ತಮ್ಮಲ್ಲಿದ್ದ ನೂರಾರು ಗೋಡೌನ್‌ ಗಳಿಂದ ಚಿತ್ರದುರ್ಗದಾದ್ಯಂತ ಜನರಿಗೆ ದವಸ ಮತ್ತು ಧಾನ್ಯಗಳನ್ನು ಉಚಿತವಾಗಿ ಹಂಚುತ್ತಾರೆ.

ಒಬ್ಬ ಸಾಮಾನ್ಯ ಪ್ರಜೆ ತನ್ನಲ್ಲಿದ್ದ ಸಿರಿ ಸಂಪತ್ತನ್ನು ಬಡವರ ಕಷ್ಟಕ್ಕಾಗಿ ದಾನ ನೀಡಿದ ಎಂದು ಮಹಾರಾಜರಿಗೆ ತಿಳಿದಾಗ, ಕಾಶಿ ಅಪ್ಪಣ್ಣ ಶೆಟ್ಟರ್ ಅವರನ್ನು ನೋಡಬೇಕು ಎಂದು ಮೈಸೂರು ಸಂಸ್ಥಾನಕ್ಕೆ ಕರೆಸುತ್ತಾರೆ. ಸಂಸ್ಥಾನಕ್ಕೆ ಬಂದ ಅಪ್ಪಣ್ಣನವರಿಗೆ ಆದರಾತಿಥ್ಯ ನೀಡಿದ ಮಹಾರಾಜರು, ಇಂತಹ ಔದರ್ಯ ಮೆರೆದಿರುವ ನಿಮಗೆ ಏನು ಬೇಕು ಎಂದು ಕೇಳಿದಾಗ, ಕಾಶಿ ಅಪ್ಪಣ್ಣ ಅವರು ಕೈಮುಗಿದು ಮಹಾಸ್ವಾಮಿ ನನಗಾಗಿ ಏನೂ ಬೇಡ, ಆದರೆ ನಿಮ್ಮೊಡನೆ ಇರುವ ಒಂದು ಚಿತ್ರಪಟ
ಕಾಶಿ ಅಪ್ಪಣ್ಣ ಅವರು ಇರುವ ಚಿತ್ರಪಟ ಮಾಡಿಸಿಕೊಟ್ಟರೆ ಸಾಕು ಎಂದು ವಿನಮ್ರರಾಗಿ ಕೇಳುತ್ತಾರೆ. ಮಹಾರಾಜರು ಅರಮನೆ ಕಲಾವಿದರಿಗೆ ವರ್ಣಚಿತ್ರವನ್ನು ರಚಿಸಲು ಸೂಚಿಸುತ್ತಾರೆ. ಚಿನ್ನದ ಪದಕದೊಡನೆ ಚಿತ್ರಪಟವನ್ನೂ ಅಪ್ಪಣ್ಣ ಅವರಿಗೆ ನೀಡುತ್ತಾರೆ.

ಅವರ ನಂತರ ನಮ್ಮ ಕುಟುಂಬಸ್ಥರು ದಾನ-ಧರ್ಮಗಳ ಜೊತೆಗೆ ಟ್ರಸ್ಟ್ ಹಾಗೂ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದೇವೆ ಎಂದು ಕಾಶಿ ಅಪ್ಪಣ್ಣ ಅವರ ಮರಿ ಮೊಮ್ಮಗ ಮನೋಹರ್ ತಿಳಿಸಿದ್ದಾರೆ.

ಚಿತ್ರದುರ್ಗದಲ್ಲಿ 1881ರಲ್ಲಿ ಬರಗಾಲ ಬಂದಾಗ ರಾಜ್ಯದ ಪರಿಸ್ಥಿತಿಯನ್ನು ಕಂಡು ಕಾಶಿ ಅಪ್ಪಣ್ಣ ಅವರು ಬಹಳ ಜನ ಬಡವರಿಗೆ ಹಸಿವು ತಣಿಸಲು ಹಗೇವುನಲ್ಲಿದ್ದ ಧಾನ್ಯವನ್ನು ಹೊರತೆಗೆದು ಹಂಚಿರುತ್ತಾರೆ. ಈ ವಿಷಯವನ್ನು ತಿಳಿದ 10ನೇ ಚಾಮರಾಜ ಒಡೆಯರು ಅವರು ಸನ್ಮಾನಿಸಲು ಇಚ್ಚಿಸಿದಾಗ, ಕಾಶಿ ಅಪ್ಪಣ್ಣ ಅವರು ನನಗೆ ಅದೆಲ್ಲ ಬೇಡ, ಕೇವಲ ಮಹಾರಾಜರ ಜೊತೆಯಲ್ಲಿರುವ ಒಂದು ಚಿತ್ರಪಟ ಸಾಕು ಎಂದಿದ್ದರಂತೆ.

ಆಂದೋಲನ ಡೆಸ್ಕ್

Recent Posts

ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಹೇಳಿಕೆಗೆ ಕಿಚ್ಚ ಸುದೀಪ್‌ ಕೆಂಡಾಮಂಡಲ

ಬೆಂಗಳೂರು:ಇತ್ತೀಚೆಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಕನ್ನಡ ಚಿತ್ರರಂಗದ ಹಲವರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. ಅಶ್ಲೀಲವಾಗಿ ಮಾತನಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ…

22 mins ago

ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಾಕಷ್ಟು ಅಭ್ಯರ್ಥಿಗಳಿದ್ದಾರೆ: ಎಚ್.ಡಿ.ಕುಮಾರಸ್ವಾಮಿ

ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್‌ ಪಕ್ಷದಿಂದ ದೂರ ಉಳಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ…

39 mins ago

ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಬಜೆಟ್ ಬಗ್ಗೆ ಟೀಕೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಮೈಸೂರು: ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಬಜೆಟ್‌ ಬಗ್ಗೆ ಟೀಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ…

53 mins ago

ಎಸ್‌ಡಿಪಿಐ ರಾಜ್ಯಾಧ್ಯಕ್ಷ ಮಜಿದ್‌ ಪ್ರಯಾಣಿಸುತ್ತಿದ್ದ ಕಾರ್‌ನಲ್ಲಿ ಬೆಂಕಿ: ಅದೃಷ್ಟವಶಾತ್‌ ಪಾರು

ಮಡಿಕೇರಿ: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಮಜಿದ್‌ ಪ್ರಯಾಣಿಸುತ್ತಿದ್ದ ಕಾರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್‌ ಪಾರಾಗಿದ್ದಾರೆ. ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ…

2 hours ago

ಓದುಗರ ಪತ್ರ: ಜಲಪುರಿ ಬಡಾವಣೆ ರಸ್ತೆ ದುರಸ್ತಿ ಮಾಡಿ

ಮೈಸೂರಿನ ಜಲಪುರಿ ಬಡಾವಣೆಯ  ಪೊಲೀಸ್ ಆಸ್ಪತ್ರೆ ಮುಂಭಾಗದ  ರಸ್ತೆ ತೀರಾ ಹದಗೆಟ್ಟಿದೆ.  ಕಾಳಿಕಾಂಬ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ಕೆಲವು…

3 hours ago

ಓದುಗರ ಪತ್ರ: ಐಪಿಎಲ್‌ನಲ್ಲಿ ಭಾರತೀಯ ಆಟಗಾರರೇ ಆಡಲಿ

೨೦೦೮ರಲ್ಲಿ ಭಾರತದಲ್ಲಿ ಶುರುವಾದ ‘ಇಂಡಿಯನ್ ಪ್ರೀಮಿಯರ್ ಲೀಗ್’  (ಐಪಿಎಲ್) ಕ್ರಿಕೆಟ್ ಆಟವು ಇಡೀ ದೇಶದ ಗಮನ ಸೆಳೆದಿದೆ.  ಐಪಿಎಲ್ ತಂಡಗಳಲ್ಲಿ …

3 hours ago