ಆಂದೋಲನ ಪುರವಣಿ

ಯುವ ಡಾಟ್ ಕಾಂ : ಹಳೆಯ ಹಾಡು ಹಾಡು ಮತ್ತೆ

ವಿನುತ ಪುರುಷೋತ್ತಮ್

ಹಳೆಯ ಹಾಡು ಹಾಡು ಮತ್ತೆ

ಇಂದಿಗೆ ಹೊಸತು ನಾಳೆಗೆ ಹಳತು. ಆದರೆ ಅದು ನಿತ್ಯ ನೂತನವಾಗಬೇಕಾದರೆ ಅದರೊಳಗೊಂದು ಶಕ್ತಿ ಇರಬೇಕು, ಸ್ವಾದ ಬೇಕೇ ಬೇಕು.

ಹೀಗೊಂದು ಸ್ವಾದವನ್ನು ಬದುಕಿನ ಹಲವು ಘಟ್ಟಗಳಲ್ಲಿ ಹೀರಿಕೊಂಡಿರುತ್ತೇವೆ. ಆದರೆ ಮತ್ತೆ ಅದೇ ಸ್ವಾದ ಬೇಕು ಎಂದರೆ ಸಿಕ್ಕದು. ಸಿಕ್ಕಿದರೂ ಮೊದಲ ತೀವ್ರತೆ ಇರುವುದೇ ಎಂಬುದಕ್ಕೆ ನಿಖರ ಉತ್ತರ ಕಷ್ಟ.

ಗೆಳೆಯ, ಗೆಳತಿಯ ಕೈ ಹಿಡಿದು ಕಾಡಿನ ನಡುವಲ್ಲಿನ ಬೆಟ್ಟದ ಮೆಟ್ಟಿಲನ್ನು ಏರಿದ್ದ ಮೊದಲ ಫೀಲ್, ತಂದೆಯೊಟ್ಟಿಗೆ ಸುತ್ತಾಡಿದ ಪೇಟೆ ಬೀದಿಯ ನೆನಪು, ತಾಯಿ ಮಾಡಿಸುತ್ತಿದ್ದ ಮಜ್ಜನ, ಅಜ್ಜಿಯ ಬೆಚ್ಚಗಿನ ಪ್ರೀತಿ, ಅಚ್ಚನ ನೆನಪುಗಳೆಲ್ಲವೂ ಈಗಲೂ ಇದ್ದರೂ, ಅವೆಲ್ಲವೂ ಮತ್ತೆ ಪುನರಾವರ್ತನೆಯಾದರೂ ಮೊದ ಮೊದಲು ಸಿಕ್ಕ ಒಟ್ಟಂದ ಮತ್ತೆ ದೊರಕದು. ಅದಕ್ಕಾಗಿಯೇ ಅಲ್ಲವೇ ‘ಮೈ ಆಟೋಗ್ರಾಫ್’ ಚಿತ್ರದ ಸವಿ ಸವಿ ನೆನಪು ಸಾವಿರ ನೆನಪು ಹಾಡು ಅಷ್ಟೊಂದು ಹಿಟ್ ಆಗಿದ್ದು, ಎಲ್ಲರೂ ಗುನುಗಿ ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದು.

ಇದಕ್ಕಾಗಿಯೇ ಮೊದಲ ಅನುಭವಗಳ ಹಿತವಾದ ಸೆಳೆತ ಎಲ್ಲರ ಬಾಳಲ್ಲೂ ಇದ್ದೇ ಇರುತ್ತದೆ. ಅವುಗಳ ಹಂಗಿನಲ್ಲಿಯೇ ಹೊಸ ಸಂತೋಷಗಳನ್ನು ಮನುಷ್ಯ ಹುಡುಕಿ ಹೊರಡುತ್ತಾನೆ. ಇವುಗಳಿಂದಲೇ ಹೊಸ ಜೀವ ಸೆಲೆ ಸದಾ ಹರಿಯುವುದು. ಅದಕ್ಕಾಗಿಯೇ ಕವಿ ಜಿ.ಎಸ್.ಶಿವರುದ್ರಪ್ಪ ‘ಹಳೆಯ ಹಾಡು ಹಾಡು ಮತ್ತೆ ಅದನೇ ಕೇಳಿ ತಣಿಯುವೆ, ಹಳೆಯ ಹಾಡಿನಿಂದ ಹೊಸತು ಜೀವನವ ಕಟ್ಟುವೆ’ ಎಂದಿರುವುದು.

 

andolanait

Recent Posts

ಏತ ನೀರಾವರಿ ಪುನಶ್ಚೇತನ ಕಾಮಗಾರಿಗೆ ಪರೀಕ್ಷಾರ್ಥ ಚಾಲನೆ ನೀಡಿದ ಡಿ.ಕೆ.ಶಿವಕುಮಾರ್‌

ರಾಮನಗರ: ಕನಕಪುರ ತಾಲ್ಲೂಕಿನ ಮೂಲೆಗುಂದಿ ಗ್ರಾಮದಲ್ಲಿ ಅರ್ಕಾವತಿ ಬಲದಂಡೆಯ ಏತ ನೀರಾವರಿ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪರೀಕ್ಷಾರ್ಥ ಚಾಲನೆ…

4 mins ago

ಮುಡಾ ಡೈವರ್ಟ್‌ ಮಾಡಲು ದರ್ಶನ್‌ ಪೋಟೋ ವೈರಲ್: ಜೋಶಿ ಆರೋಪಕ್ಕೆ ಡಿ.ಕೆ ಶಿವಕುಮಾರ್ ಕೌಂಟರ್‌ ತಿರುಗೇಟು

ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮುಚ್ಚುಹಾಕೋಕೆ ಕಾಂಗ್ರೆಸ್‌ ಸರ್ಕಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯದ ಫೋಟೋ ಹರಬಿಟ್ಟಿದ್ದೆ ಎಂಬ ಕೇಂದ್ರ…

8 hours ago

ಐಎಎಸ್‌ ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳ ಆರೋಪ ಹೊತ್ತಿದ್ದ ಮಾಜಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರನ್ನು ತಕ್ಷಣದಿಂದಲೇ…

9 hours ago

‘ಕೋಣ’ದ ಕಥೆಯೊಂದಿಗೆ ಬಂದ ಕೋಮಲ್

ಕೋಮಲ್‍ ಈಗಾಗಲೇ ‘ಕಾಲಾಯ ನಮಃ’, ‘ರೋಲೆಕ್ಸ್’, ‘ಎಲಾ ಕುನ್ನಿ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.…

9 hours ago

ಮೈಸೂರು: ಬೆಳವಾಡಿ ರಾಯಲ್‌ ಬ್ರದರ್ಸ್‌ ವತಿಯಿಂದ 13ಅಡಿ ಗಣಪ ಪ್ರತಿಷ್ಠಾಪನೆ

ಮೈಸೂರು: ನಗರದಲ್ಲಿ ವಿನಾಯಕ ಚೌತಿ ಹಬ್ಬದ ಆಚರಣೆ ಚೋರಾಗಿಯೇ ನಡೆಯುತ್ತಿದೆ. ನಗರದ ಬೆಳವಾಡಿಯ ರಾಯಲ್‌ ಬ್ರದರ್ಸ್‌ ವತಿಯಿಂದ ಸತತ ಎಂಟು…

15 hours ago

ಸೆಟ್ಟೇರಿತು ರಮೇಶ್ ಅರವಿಂದ್, ಗಣೇಶ್ ಹೊಸ ಸಿನಿಮಾ …

ರಮೇಶ್‍ ಅರವಿಂದ್ ಮತ್ತು ಗಣೇಶ್‍ ಒಟ್ಟಿಗೆ ನಟಿಸುತ್ತಾರೆ ಎಂಬುದು ಕಳೆದ ವರ್ಷದ ಸುದ್ದಿ. ‘ಇನ್‍ಸ್ಪೆಕ್ಟರ್‍ ವಿಕ್ರಂ’, ‘ಮಾನ್ಸೂನ್‍ ರಾಗ’, ‘ರಂಗನಾಯಕ’…

15 hours ago