ಆಂದೋಲನ ಪುರವಣಿ

ಯೋಗ ಕ್ಷೇಮ : ಹಲ್ಲು ಇಲ್ಲವೇ ; ಚಿಂತೆ ಬೇಡ

ಹಲ್ಲುಗಳ ಆರೋಗ್ಯದಲ್ಲಿ ಏರುಪೇರಾದರೆ ಅವರು ಉದುರುವುದು ಮಾಮೂಲು. ಆದರೆ ಅದಕ್ಕೆ ಬದಲಿಯಾಗಿ ಕೃತಕ ಹಲ್ಲುಗಳನ್ನು ಕಟ್ಟಿಸಿಕೊಳ್ಳಲು ಇಂದು ಹಲವಾರು ಚಿಕಿತ್ಸಾ ವಿಧಾನಗಳಿವೆ. ಅವುಗಳನ್ನು ಮಾಡಿಸಿಕೊಂಡರೆ ದಂತಪಂಕ್ತಿ ಸುರಕ್ಷಿತ ಮತ್ತು ಹಲ್ಲು ಕಾಣುವಂತೆ ಚೆಂದದ ನಗು ಬೀರಲು ಸಾಧ್ಯ.

ಅನುವಂಶೀಯ ಕಾರಣಗಳು, ಅಪಘಾತ, ಒಸಡು ರೋಗ, ದಂತಕುಳಿ ಅಥವಾ ಹಲ್ಲುಗಳನ್ನು ಸ್ವಚ್ಚವಾಗಿಡದೆ ಇರುವ ಕಾರಣಗಳಿಂದ ಹಲ್ಲು ಕಳೆದುಕೊಳ್ಳಬಹುದು. ಇದು ಆತ್ಮವಿಶ್ವಾಸಕ್ಕೆ ಧಕ್ಕೆ ಉಂಟು ಮಾಡುವುದಲ್ಲದೆ, ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಇದಕ್ಕಾಗಿ ಕೃತಕ ದಂತ ಪಂಕ್ತಿ (ಹಲ್ಲುಸೆಟ್), ಡೆಂಟಲ್ ಇಂಪ್ಲಾಂಟ್ಸ್ ಅಥವಾ ಫಿಕ್ಸ್ ಬ್ರಿಡ್ಜ್ ಮುಂತಾದ ಚಿಕಿತ್ಸಾ ವಿಧಾನಗಳಿವೆ.

ಹಲ್ಲು ಕಟ್ಟಿಸದೇ ಇದ್ದರೆ ಆಗುವ ತೊಂದರೆ

* ಹಲ್ಲು ಬಿದ್ದ ಜಾಗಕ್ಕೆ ಪಕ್ಕದ ಹಲ್ಲು ಜರುಗಿ ಹಲ್ಲುಗಳ ಮಧ್ಯೆ ಕಿಂಡಿ ಕಾಣಿಸಿಕೊಳ್ಳುತ್ತದೆ.

* ಹಲ್ಲುಗಳು ಜರುಗುತ್ತಾ ಹೋದಂತೆ ಹಲ್ಲಿನ ಬೇರಿಗೂ ತೊಂದರೆ.

* ದವಡೆಯ ಮೂಳೆಗಳಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.

* ಉಳಿದ ಹಲ್ಲುಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.

* ಆಹಾರವನ್ನು ಅಗಿಯಲು ಕಷ್ಟ, ಜೀರ್ಣಕ್ರಿಯೆ ಮೇಲೆ ಪರಿಣಾಮ.

* ಮುಖದ ರಚನೆಯ ಮೇಲೆ ಪ್ರಭಾವ, ಸ್ನಾಯುಗಳು ಜೋತು ಬೀಳುತ್ತವೆ.

* ಮಾತುಗಳಲ್ಲಿ ತೊದಲು, ಸ್ವಾಭಾವಿಕವಾಗಿ ಮಾತನಾಡಲು ಸಮಸ್ಯೆ

ಹಲ್ಲನ್ನು ಕಟ್ಟಿಸಿಕೊಳ್ಳುವ ವಿವಿಧ ಆಯ್ಕೆಗಳು 

* ಡೆಂಟಲ್ ಇಂಪ್ಲಾಂಟ್ಸ್
ಒಂದು ಹಲ್ಲು ಇಲ್ಲದಿರುವಾಗ ಅದನ್ನು ಪುನಃ ಜೋಡಿಸಲು ಡೆಂಟಲ್ ಇಂಪ್ಲಾಂಟ್ ಒಳ್ಳೆಯ ಆ್ಂಕೆು. ಈ ವಿಧಾನದಲ್ಲಿ ಕೃತಕ ದಂತವನ್ನು ಒಸಡಿನಲ್ಲಿ ಶಾಶ್ವತವಾಗಿ ಜೋಡಣೆ ಮಾಡಲಾಗುತ್ತದೆ.

* ಕೃತಕ ದಂತಪಂಕ್ತಿ
ಕೆಲವು ಅಥವಾ ಸಂಪೂರ್ಣ ಹಲ್ಲುಗಳು ಇಲ್ಲದಿರುವಾಗ ಅದಕ್ಕೆ ಅನುಗುಣವಾಗಿ ಕೃತಕ ದಂತ ಪಂಕ್ತಿಗಳನ್ನು ಹಾಕಿಕೊಡಲಾಗುತ್ತದೆ. ಕೃತಕ ದಂತಪಂಕ್ತಿಗಳು ಎರಡು ರೀತಿಯಾಗಿರುತ್ತದೆ.

೧. ಸಂಪೂರ್ಣ ಹಲ್ಲುಗಳ ದಂತಪಂಕ್ತಿಯಲ್ಲಿ ಎಲ್ಲ ಹಲ್ಲುಗಳನ್ನು ಜೋಡಣೆ ಮಾಡುವುದು.

೨. ವಿಭಾಗೀಯ ದಂತ ಪಂಕ್ತಿಯಲ್ಲಿ ಒಂದು ಅಥವಾ ಕೆಲವು ಹಲ್ಲುಗಳನ್ನು ಜೋಡಣೆ.

* ಡೆಂಟಲ್ ಬ್ರಿಡ್ಜ್
ಒಂದು ಅಥವಾ ಎರಡು ಹಲ್ಲು ಇಲ್ಲದಿದ್ದಾಗ, ಅಕ್ಕ ಪಕ್ಕದ ಹಲ್ಲುಗಳನ್ನು ಆಧಾರವಾಗಿ ಬಳಸಿ ಡೆಂಟಲ್ ಬ್ರಿಡ್ಜ್ ಅನ್ನು ಮಾಡಬಹುದು. ಅದನ್ನು ಸಾಮಾನ್ಯವಾಗಿ ಕ್ಯಾಪ್ ಅಥವಾ ಕ್ರೌನ್ ಅನ್ನುತ್ತಾರೆ. ಇದನ್ನು ಡೆಂಟಲ್ ಸಿಮೆಂಟ್‌ನಿಂದ ಫಿಕ್ಸ್ ಮಾಡಲಾಗುತ್ತದೆ.

-ಡಾ. ಸಿ.ಪಿ. ಕಾತ್ಯಾಯಿನಿ, ಅಧ್ಯಾಪಕರು, ಹಲ್ಲು ನ್ಯೂನ ಪೂರಣ ಶಾಸ್ತ್ರ ವಿಭಾಗ, ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮೈಸೂರು

andolana

Recent Posts

ಓದುಗರ ಪತ್ರ:  ದೇವಾಲಯಗಳ ಬಳಿ ಪೊಲೀಸ್ ಗಸ್ತು ಹೆಚ್ಚಿಸಿ

ಧನುರ್ಮಾಸ ಆರಂಭವಾದ ಕೂಡಲೇ ಎಲ್ಲೆಡೆ ದೇವಸ್ಥಾನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ ಜಾವ ಪೂಜೆ ಆರಂಭವಾಗುತ್ತದೆ. ಮಹಿಳೆಯರು ಬೆಳಗಿನ ಚಳಿಯಲ್ಲಿಯೇ ದೇವಾಲಯಗಳಿಗೆ…

1 hour ago

ನಂಜನಗೂಡು | ಚಲಿಸುತ್ತಿದ್ದ ಬಸ್‌ ಬೆಂಕಿಗಾಹುತಿ ; 40ಕ್ಕೂ ಹೆಚ್ಚು ಪ್ರಯಾಣಿಕರು ಪಾರು

ಮೈಸೂರು : ಚಲಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊತ್ತಿ ಉರಿದಿರುವ ಘಟನೆ…

1 hour ago

ಓದುಗರ ಪತ್ರ: ನಂಜನಗೂಡಿನಲ್ಲಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ

ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಪಟ್ಟಣದಿಂದ ಊಟಿ ಮತ್ತು ಸುಲ್ತಾನ್ ಬತ್ತೇರಿಗೆ ಹಾದು ಹೋಗಿರುವ ರಸ್ತೆಗಳಲ್ಲಿ ಮತ್ತು…

1 hour ago

ಓದುಗರ ಪತ್ರ: ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿ ಆಟೋ ಸಂಚಾರ ನಿಯಂತ್ರಿಸಿ

ಮೈಸೂರು ನಗರದ ಸಬ್ ಅರ್ಬನ್ ಬಸ್ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಬಳಿ ಆಟೋಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿದ್ದು,…

2 hours ago

ಶತಾಯುಷಿ ಸುತಾರ್ ವಿಧಿವಶ ; ದೇಶ-ವಿದೇಶ ನಾಯಕರ ಪ್ರತಿಮೆ ಕೆತ್ತಿದ್ದ ಹೆಗ್ಗಳಿಕೆ

ಹೊಸದಿಲ್ಲಿ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಶಿಲ್ಪಿ ರಾಮ್‌ ಸುತಾರ್‌ ಗುರುವಾರ ( 100) ವಿಧಿವಶರಾಗಿದ್ದಾರೆ. ಮಹಾರಾಷ್ಟ್ರದ ಧುಲೆ…

2 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಸದ್ದು ಮಾಡುತ್ತಿರುವ ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವ

ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವದ ೩೦ನೇ ಆವೃತ್ತಿ ಕಳೆದ ಶುಕ್ರವಾರ ಉದ್ಘಾಟನೆಯಾಗಿ ಇಂದು ಕೊನೆಯಾಗುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಮಾನ್ಯತೆ ಪಡೆದ ಐದು…

2 hours ago