ಆಂದೋಲನ ಪುರವಣಿ

ಹಿಮಾಲಯ ಬೆನ್ನೇರಿದ ಮೈಸೂರು ಸೈಕಲ್ ನಾರಿಯರು

• ನಂದಿನಿ ಎನ್.
ಹಚ್ಚ ಹಸಿರಿನ ಪಚ್ಚೆ ಪೈರು ಒಂದೆಡೆ, ಜುಳು ಜುಳು ಹರಿವ ತೊರೆಯೊಂದೆಡೆ, ಮಧ್ಯೆ ಮಲಗಿದ, ನೇರ ಎನ್ನಬಹುದಾದ ಕೆಂಪನೆಯ ಕಾಲುದಾರಿಯ ತುಸು ಇಳಿಜಾರಿನಲ್ಲಿ, ಎಳೆ ಬಿಸಿಲ ಸೀಳಿ ಬರುವ ತಂಪು ಗಾಳಿಗೆ ಕಣ್ಮುಚ್ಚಿ, ಆಕಾಶಕೆ ಮುಖವೊಡ್ಡಿ, ಆ ಸುಂದರ ಕ್ಷಣದ ಅನುಭೂತಿಯಷ್ಟೂ ನನಗೇ ಸಿಗಬೇಕೆನ್ನುವ ಆಸೆಯಲ್ಲಿ ಸೈಕಲ್ಲಿನ ಹಿಡಿಯನ್ನು ಬಿಟ್ಟು ಥೇಟ್ ಶಾರುಖ್ ಖಾನ್ ಸ್ಟೈಲ್‌ನಲ್ಲಿ ಕೈ ಆಗಲಿಸಿ ಭರದಿಂದ ಮುನ್ನುಗ್ಗುವಾಗ ಸಿಗುವ ಆನಂದಕ್ಕೆ ಪಾರವೇ ಇಲ್ಲ!

ವೃತ್ತಿಯಲ್ಲಿ ಮಕ್ಕಳ ದಂತ ವೈದ್ಯೆ ಡಾ.ವೃಂದ, ತನ್ನ ಈ ಸೈಕ್ಲಿಂಗ್‌ನ ಅನುಭವವನ್ನು ವಿವರಿಸುವಾಗ ಮನದಲ್ಲಿದ್ದ ತೀರದ ಉತ್ಸಾಹ ಎದ್ದುಕಾಣುತ್ತಿತ್ತು. ಕ್ರೀಡೆಯಲ್ಲಿ ಅತೀವ ಆಸಕ್ತಿ ಇದ್ದು, ಕೂಡು ಕುಟುಂಬದ ನಿರ್ವಹಣೆಯಲ್ಲಿ ಸಮಯ ಹೊಂದಿಸುವುದೇ ಕಷ್ಟವಿದ್ದರೂ, ತನಗಾಗಿ ಕೊಂಚ ಕಾಲ ಸೈಕ್ಲಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಗೃಹಿಣಿ ವೀಣಾ ಅಶೋಕರದ್ದೂ ಕೂಡ ಇದೇ ಅನುಭವ. ಈ ರೀತಿ ವ್ಯಾಯಾಮಕ್ಕೆ, ಒತ್ತಡ ನಿವಾರಣೆಗೆ ಎಂದು ಸೈಕಲ್ ತುಳಿಯಲು ಶುರು ಮಾಡಿ, ಈಗ ಸೈಕ್ಲಿಂಗ್‌ನಲ್ಲಿ ಸಾಕಷ್ಟು ಸಾಧನೆ ಮಾಡಿರುವ ಮೈಸೂರಿನ ಬಹಳಷ್ಟು ಮಹಿಳೆಯರಲ್ಲಿ ಇವರೀರ್ವರೂ ಇದ್ದಾರೆ.

ಸೈಕ್ಲಿಂಗ್ ಅನ್ನು ಹವ್ಯಾಸಕ್ಕಾಗಿ ಮಾಡುವುದು ಬೇರೆ ಮತ್ತು ವೃತ್ತಿಪರವಾಗಿ ಅನುಸರಿಸುವುದು ಬೇರೆ! ಹವ್ಯಾಸ ಹೆಚ್ಚು ಬೇಡದು, ಹಾಗೇ ವೃತ್ತಿಯ ಬೇಡಿಕೆ ನೀಗದು! ಅವಶ್ಯಕತೆಗೆ ತಕ್ಕಂತೆ ಐದು ಸಾವಿರ ರೂ.ಗಳಿಂದ ಲಕ್ಷಗಳ ರೂ. ಗಳವರೆಗೂ ಸೈಕಲ್‌ಗಳು ಲಭ್ಯವಿವೆ. ಇದರ ಜೊತೆಗೆ ಅದಕ್ಕಾಗಿಯೇ ಬೇಕಾಗುವ ಉಡುಪುಗಳು, ಶಿರಸ್ತ್ರಾಣ, ಶೂ, ಕಾಲುಚೀಲ, ನೀರಿನ ಬಾಟಲಿ, ಸೈಕಲ್ ನಿರ್ವಹಣೆ …ಹೀಗೆ ಅನೇಕ ಅವಶ್ಯಕತೆಗಳಿವೆ. ಹಾಗಾಗಿ ಹವ್ಯಾಸಕ್ಕಲ್ಲದೆ ವೃತ್ತಿಯಾಗಿ ಇದನ್ನು ಸ್ವೀಕರಿಸಿದಲ್ಲಿ ಜೇಬಿಗೆ ಸ್ವಲ್ಪ ಭಾರವಾಗುವುದೂ ದಿಟ ! ಇದರೊಂದಿಗೆ ಫಿಟ್ಟೆಸ್ ಹೆಸರಿನಲ್ಲಿ ನಾಲಿಗೆಯ ಚಪಲಕ್ಕೆ ಕಡಿವಾಣ ಬೀಳುವ ಭಯವೂ ಇದೆ ! ಈ ಆರಂಭಿಕ ತೊಡಕುಗಳನ್ನು ಮೀರಿದರೆ ಅವಕಾಶಗಳು ಅಪರಿಮಿತ!

ವರ್ಷವಿಡೀ ಹಲವಾರು ಸಂಸ್ಥೆಗಳು ಒಂದಿಲ್ಲೊಂದು ಸೈಕ್ಲಿಂಗ್ ಕಾರ್ಯಕ್ರಮವನ್ನು ಆಯೋಜಿಸುತ್ತವೆ. ಸ್ಥಳೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಗಳಲ್ಲದೆ ಅಂತರರಾಷ್ಟ್ರೀಯ ಮಟ್ಟದ ಸೈಕ್ಲೋಥಾನ್‌ಗಳೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಆಯೋಜಿಸಲ್ಪಡುತ್ತವೆ. ಭಾಗವಹಿಸುವವರಲ್ಲಿ ಈ ಅವಕಾಶಗಳು ಹೊಸ ಸ್ನೇಹವನ್ನು, ಅವಿಸ್ಮರಣೀಯ ಅನುಭವವನ್ನು ಮತ್ತು ಆತ್ಮವಿಶ್ವಾಸವನ್ನು, ವೃದ್ಧಿಸುವುದರಲ್ಲಿ ಸಂದೇಹವೇ ಇಲ್ಲ!

ಮೈಸೂರಿನ ಮಟ್ಟಿಗೆ ಹೇಳುವುದಾದರೆ, ಈ ಶತಮಾನ ಕಂಡ ಅತ್ಯಂತ ಕೆಟ್ಟ ಜಾಗತಿಕ ಸೋಂಕು ಕೊರೊನಾ ದಿನಗಳಲ್ಲಿ ಸಾರ್ವಜನಿಕರಲ್ಲಿ ಹೆಚ್ಚು ಆರೋಗ್ಯ ಕಾಳಜಿ ಮೂಡಿದ್ದಲ್ಲದೆ, ಸೈಕ್ಲಿಂಗ್ ಮಾಡುವವರ ಸಂಖ್ಯೆ ಗಣನೀಯವಾಗಿ ಏರಿತು.

ಅದರಲ್ಲೂ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಸೈಕಲ್ ತುಳಿಯಲು ಶುರು ಮಾಡಿದ್ದು ಗಮನಾರ್ಹ. ದೈಹಿಕ ಸದೃಢತೆಯ ಜೊತೆಗೆ ಆತ್ಮವಿಶ್ವಾಸವನ್ನೂ ಹೆಚ್ಚಿಸುವ ಸೈಕ್ಲಿಂಗ್ ಕಲಿಸಲು ಮೈಸೂರಿನಲ್ಲಿ ಉತ್ತಮ ತರಬೇತುದಾರರಿರುವ ಕಾರಣ ಕೊರೊನಾ ಬಳಿಕ ತಂತಮ್ಮ ವೃತ್ತಿಗೆ ಮರಳಿದರೂ ಈ ಮಹಿಳೆಯರು ಸೈಕ್ಲಿಂಗ್ ಅನ್ನು ಮರೆಯಲಿಲ್ಲ! ಮೈಸೂರಿನ ಹಲವಾರು ಸೈಕ್ಲಿಂಗ್ ಕಾರ್ಯಕ್ರಮಗಳಲ್ಲಿ ಇವರ ಹಾಜರಿ ಖಚಿತ.

ಹಿಮಾಲಯದ ರುದ್ರರಮಣೀಯ ಪ್ರಕೃತಿಯ ಮಡಿಲಲ್ಲಿರುವ ಮನಾಲಿ – ಲೇಹ್ – ಕಾರದೊಂಗ್ಲಾ ಪಾಸ್ ರಸ್ತೆಯನ್ನು ಕ್ರಮಿಸುವುದು ಪ್ರತೀ ಸೈಕ್ಲಿಸ್ಟ್‌ನ ಕನಸು. ಆದರೀ ಕನಸನ್ನು ನನಸಾಗಿಸಲು ಮೈಯನ್ನು ಹುರಿಗಟ್ಟಿಸುವ ಜೊತೆಗೆ ಮಾನಸಿಕವಾಗಿಯೂ ಸದೃಢರಾಗುವುದು ಆವಶ್ಯಕ. ಕುಟುಂಬ ಮತ್ತು ಸ್ನೇಹಿತರ ಬೆಂಬಲದ ಜೊತೆಗೆ ಸಮುದಾಯದ ಪ್ರೋತ್ಸಾಹವೂ ಮಹಿಳಾ ಸೈಕ್ಲಿಸ್ಟ್‌ಗಳಿಗೆ ಮುಖ್ಯವಾಗುತ್ತದೆ. ಇಂತಹ ಅತಿಪ್ರಯಾಸದ ದೂರವನ್ನು ನಮ್ಮ ಮೈಸೂರಿನ ಕೆಲ “ಛಲದಂಕ ಮಲ್ಲಿ’ಯರು ಹಠ ತೊಟ್ಟು ಕ್ರಮಿಸಿ, ಸಾಧಿಸಿ ತೋರಿದ್ದಾರೆ!

ವೃತ್ತಿ-ಮನೆ- ಮಕ್ಕಳ ಜೊತೆಗೆ ಅನಾಯಾಸವಾಗಿ ತಮ್ಮ ಪ್ರವೃತ್ತಿಯನ್ನು ಮುಂದುವರಿಸುವುದಲ್ಲದೆ ಅದರಲ್ಲಿ ಸಾಧಿಸಿರುವುದು ಉಳಿದ ಮಹಿಳೆಯರಿಗೆ ಪ್ರೇರಣೆಯಾಗಬಹುದೇ? ಎಲ್ಲರಿಗೂ ಬರಲಿರುವ ಮಹಿಳಾ ದಿನದ ಶುಭಾಶಯಗಳು !!

 

andolana

Recent Posts

ಓದುಗರ ಪತ್ರ | ರಾಜ್ಯ ವಿಧಾನ ಮಂಡಲ ಅಧಿವೇಶನ ಸದ್ಬಳಕೆಗೆ ದಾರಿ ಯಾವುದಯ್ಯ!?

ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ವಿರೋಧ ಪಕ್ಷಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದೇ ನೀರಸವಾಗಿ ಕೊನೆಗೊಂಡಿದ್ದು ಪ್ರಜಾಪ್ರಭುತ್ವದ ದುರ್ದೈವದ ಸಂಗತಿಯಾಗಿದೆ.…

14 hours ago

ಓದುಗರ ಪತ್ರ | ಹಿಂದಿ ಶಿಕ್ಷಕರ ನೇಮಕಾತಿ ಏಕಿಲ್ಲ?

15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಹಿಂದಿ ಶಿಕ್ಷಕರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ. ಇದು ಸಂವಿಧಾನ ಬಾಹಿರ ನಡೆ. ಇದು ಹಿಂದಿ…

14 hours ago

ಓದುಗರ ಪತ್ರ | ಕನ್ನಡ ಚಿತ್ರ; ಟಿಕೆಟ್‌ಗಳಲ್ಲಿ ಆಂಗ್ಲ ಹೆಸರು !

ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡದ ಚಲನಚಿತ್ರಗಳು ಪ್ರದರ್ಶಿತವಾಗುತ್ತವೆ. ಗ್ರಾಹಕರಿಗೆ ನೀಡುವ ಟಿಕೆಟಿನಲ್ಲಿ ಸಿನಿಮಾದ ಹೆಸರೂ ಅಚ್ಚಾಗಿರುತ್ತದೆ.ಆದರೆ... ಕನ್ನಡ ಚಿತ್ರಕ್ಕೆ ಖರೀದಿಸುವ ಟಿಕೆಟ್‌ನಲ್ಲಿ ಚಿತ್ರದ…

14 hours ago

ಓದುಗರ ಪತ್ರ | ಮತದಾರರ ಕರಡು ಪಟ್ಟಿಯ ತಪ್ಪುಗಳನ್ನು ಸರಿಪಡಿಸಿ

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್-೨೬) ಕಾರ್ಯ ಮುಗಿದು ಇದೀಗ ಕರಡು ಪಟ್ಟಿ ಬಿಡುಗಡೆಯಾಗಿದೆ. ಎಸ್‌ಐಆರ್ ಬಗ್ಗೆ ಹಲವಾರು ಅನುಮಾನ…

14 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಕಳಚಿದ ಚಲನಚಿತ್ರ ಪತ್ರಿಕೋದ್ಯಮದ ಹಿರಿಯ ಕೊಂಡಿ ಶ್ರೀಕೃಪಾ

ಕನ್ನಡ ಚಿತ್ರವೊಂದು ದೇಶ-ವಿದೇಶಗಳಲ್ಲಿ ಜೈತ್ರಯಾತ್ರೆ ಮಾಡುತ್ತಿರುವ ಸಂದರ್ಭ. ಕನ್ನಡ ಚಿತ್ರರಂಗದ ಕಡೆ ಭಾರತದ ಉಳಿದ ಚಿತ್ರೋದ್ಯಮಗಳು ತಿರುಗಿ ನೋಡುವ ಬೆಳವಣಿಗೆ.…

14 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 28  ಶುಕ್ರವಾರ

15 hours ago