ಗುರುಗಳ ಪಾತ್ರ ಪ್ರತಿೊಂಬ್ಬರ ಜೀವನದಲ್ಲೂ ಮಹತ್ತರವಾದುದು. ಅದರಲ್ಲೂ ಪ್ರಾಥಮಿಕ ಶಿಕ್ಷಕರು ನಮ್ಮ ಜೀವನದ ಸಾರಥಿಗಳೇ ಸರಿ. ನನ್ನ ಎಲ್ಲ ಗುರುಬಳಗವು ನನ್ನ ಬಾಳಿನ ದೀಪಜ್ಯೋತಿಗಳು. ನನ್ನ ಹುಟ್ಟೂರಾದ ಮಡಹಳ್ಳಿಯಲ್ಲಿ ನಾನು ಪ್ರಾಥಮಿಕ ಶಿಕ್ಷಣವನ್ನು ತುಂಬಾ ಸಂತಸದಿಂದ ಮುಗಿಸಿದೆ. ನನ್ನ ಹೆಮ್ಮೆಯ ನೆಚ್ಚಿನ ಗುರುಗಳಾದ ಸತ್ಯನಾರಾಯಣ ಸರ್ ಅವರನ್ನು ನಾನೆಂದೂ ಮನದಲ್ಲಿ ಪೂಜಿಸುತ್ತೇನೆ. ಗಣಿತ ವಿಷಯವನ್ನು ಬೋಧಿಸುತ್ತಿದ್ದ ಬಹಳ ಶಿಸ್ತಿನ ಗುರುಗಳಾಗಿದ್ದ ಅವರು ತುಂಬಾ ಸರಳ ಸ್ವಭಾವದವರು. ಅವರು ತೋರಿಸಿಕೊಟ್ಟ ಹಾದಿಯ ಪಯಣ ಇಂದು ನನಗೆ ಆದರ್ಶಪ್ರಾಯವಾಗಿದೆ. ನಾನೂ ಇಂದು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಲು ಪ್ರೇರಣೆಯಾಗಿದೆ.
‘ನೀನು ಜಾಣೆ ಕಣಮ್ಮ, ಏನಾದ್ರೂ ಸಾಧನೆ ಮಾಡು’ ಎಂದು ಸದಾ ಹೇಳುತ್ತಿದ್ದ, ಈಗಲೂ ಸಿಕ್ಕಾಗ ಹೇಳುವ ನನ್ನ ಗುರುಗಳೆಂದರೆ ಈಗಲೂ ನನಗೆ ಗೌರವ, ಆತ್ಮೀಯತೆ. ನೈತಿಕ ಮೌಲ್ಯಗಳನ್ನು ಮೈಗೂಡಿಸಿದ ಉತ್ತಮ ಗುಣದವರು ನನ್ನ ಗುರುಗಳು. ಶಿಕ್ಷಕ ತರಬೇತಿ ಮುಗಿಸಿ ೩ ತಿಂಗಳ ತರಬೇತಿಗೆ ಮಡಹಳ್ಳಿ ಶಾಲೆಗೆ ನನ್ನನ್ನು ನಿೋಂಜಿಸಲಾದ ಸಂದರ್ಭದಲ್ಲಿ ಸತ್ಯನಾರಾಯಣ ಸರ್ ಅಲ್ಲೇ ಕಾರ್ಯನಿರ್ವಹಿಸುತ್ತಿದ್ದರು. ಆಗ ಶಿಕ್ಷಕ ವೃತ್ತಿಯಲ್ಲಿ ಮೌಲ್ಯ, ಗೌರವಗಳೆಲ್ಲವನ್ನೂಕಲಿಸಿಕೊಟ್ಟರು. ‘ಅನಿತಾ, ನಿನಗೆ ಪ್ರತಿೊಂಂದು ಕೆಲಸವೂ ಗೊತ್ತಿರಬೇಕು. ಬೇಗ ಕಲಿತಿಕೊ’ ಎಂದು ತಿಳಿಹೇಳಿ ಎಲ್ಲವನ್ನೂ ಕಲಿಸಿಕೊಟ್ಟು, ಇಂದು ನನ್ನ ಈ ಹೆಮ್ಮೆಯ ವೃತ್ತಿಯನ್ನು ಯಶಸ್ವಿಯಾಗಿ ನಿರ್ವಹಿಸಲು ದಾರಿ ತೋರಿದರು. ನಮ್ಮ ಸರ್ ಈಗ ನಿವೃತ್ತಿ ಜೀವನಕ್ಕೆ ಅಡಿಯಿಟ್ಟಿದ್ದು, ಅವರ ಮುಂದಿನ ದಿನಗಳು ಆರೋಗ್ಯದಾಯಕವಾಗಿ, ಸಂತಸದಾಯಕವಾಗಿರಲಿ.
– ಅನಿತ ಸಿ.
ಶಿಕ್ಷಕರು, ಗುಂಡ್ಲುಪೇಟೆ
ಗುಂಡ್ಲುಪೇಟೆ: ಪಟ್ಟಣ ಮತ್ತು ಮಲ್ಲಯ್ಯನಪುರ ನಡುವಿನ ಅನ್ಗಲ್ ಗುಡ್ಡದ ತಪ್ಪಲಿನ ಪ್ರದೇಶದಲ್ಲಿ ಅಪರೂಪದ ಥೋರಿಯಂ ನಿಕ್ಷೇಪ ಪತ್ತೆಯಾಗಿದೆ. ಹಿಂದಿನ ವರ್ಷ…
ಹೆಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದ ಮೈಸೂರು -ಮಾನಂದವಾಡಿ ಮುಖ್ಯ ರಸ್ತೆಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ಖಾಸಗಿ ಕಟ್ಟಡದ ಎರಡನೇ…
ಅಯೋಧ್ಯೆಯ ರಾಮ ಮಂದಿರವೂ ಸೇರಿದಂತೆ ದೇಶದ ವಿವಿಧ ದೇವಾಲಯಗಳಲ್ಲಿ ಕಾಣಿಕೆ ಹಣ, ದೇವರಿಗೆ ಭಕ್ತರು ಕಾಣಿಕೆ ರೂಪದಲ್ಲಿ ಸಲ್ಲಿಸುವ ಚಿನ್ನಾಭರಣಗಳು…
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದವರು ಮೈಸೂರು ನಗರದ ವಿವಿಧೆಡೆ ಭೂಗತ ಕೇಬಲ್ಗಳನ್ನು ಅಳವಡಿಸುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಸೆಸ್ಕ್ ಯುಜಿ ಕೇಬಲ್…
ಸಂಗ್ರಹ ಮತ್ತು ಅನುವಾದ ಚೇತನಾ ತೀರ್ಥಹಳ್ಳಿ ಚೋಕನ್ ಎಂಬವನಿಗೆ ಸೀಜೋ ಎಂಬ ಸುಂದರ ಮಗಳಿದ್ದಳು. ಚೋಕನ್ ತನ್ನ ದೂರದ ಸಂಬಂಧಿಯಾದ…
ನವೀನ್ ಡಿಸೋಜ ಕೊಡಗಿನಲ್ಲಿ ಒಟ್ಟು ೪,೬೮,೬೫೭ ಮತದಾರರ ಪೈಕಿ ೩,೦೦,೩೬೯ ಮಂದಿಗೆ ನಮೂನೆ ವಿತರಣೆ; ೯,೧೨೫ ನಮೂನೆಗಳ ಡಿಜಿಟಲೀಕರಣ ಮಡಿಕೇರಿ:…