ಆಂದೋಲನ ಪುರವಣಿ

ನನ್ನ ಪ್ರೀತಿಯ ಮೇಷ್ಟ್ರು : ಗುರುವೇ ಗುರುವಾಗಲು ದಾರಿ ತೋರಿದರು

ಗುರುಗಳ ಪಾತ್ರ ಪ್ರತಿೊಂಬ್ಬರ ಜೀವನದಲ್ಲೂ ಮಹತ್ತರವಾದುದು. ಅದರಲ್ಲೂ ಪ್ರಾಥಮಿಕ ಶಿಕ್ಷಕರು ನಮ್ಮ ಜೀವನದ ಸಾರಥಿಗಳೇ ಸರಿ. ನನ್ನ ಎಲ್ಲ ಗುರುಬಳಗವು ನನ್ನ ಬಾಳಿನ ದೀಪಜ್ಯೋತಿಗಳು. ನನ್ನ ಹುಟ್ಟೂರಾದ ಮಡಹಳ್ಳಿಯಲ್ಲಿ ನಾನು ಪ್ರಾಥಮಿಕ ಶಿಕ್ಷಣವನ್ನು ತುಂಬಾ ಸಂತಸದಿಂದ ಮುಗಿಸಿದೆ. ನನ್ನ ಹೆಮ್ಮೆಯ ನೆಚ್ಚಿನ ಗುರುಗಳಾದ ಸತ್ಯನಾರಾಯಣ ಸರ್ ಅವರನ್ನು ನಾನೆಂದೂ ಮನದಲ್ಲಿ ಪೂಜಿಸುತ್ತೇನೆ. ಗಣಿತ ವಿಷಯವನ್ನು ಬೋಧಿಸುತ್ತಿದ್ದ ಬಹಳ ಶಿಸ್ತಿನ ಗುರುಗಳಾಗಿದ್ದ ಅವರು ತುಂಬಾ ಸರಳ ಸ್ವಭಾವದವರು. ಅವರು ತೋರಿಸಿಕೊಟ್ಟ ಹಾದಿಯ ಪಯಣ ಇಂದು ನನಗೆ ಆದರ್ಶಪ್ರಾಯವಾಗಿದೆ. ನಾನೂ ಇಂದು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಲು ಪ್ರೇರಣೆಯಾಗಿದೆ.

‘ನೀನು ಜಾಣೆ ಕಣಮ್ಮ, ಏನಾದ್ರೂ ಸಾಧನೆ ಮಾಡು’ ಎಂದು ಸದಾ ಹೇಳುತ್ತಿದ್ದ, ಈಗಲೂ ಸಿಕ್ಕಾಗ ಹೇಳುವ ನನ್ನ ಗುರುಗಳೆಂದರೆ ಈಗಲೂ ನನಗೆ ಗೌರವ, ಆತ್ಮೀಯತೆ. ನೈತಿಕ ಮೌಲ್ಯಗಳನ್ನು ಮೈಗೂಡಿಸಿದ ಉತ್ತಮ ಗುಣದವರು ನನ್ನ ಗುರುಗಳು. ಶಿಕ್ಷಕ ತರಬೇತಿ ಮುಗಿಸಿ ೩ ತಿಂಗಳ ತರಬೇತಿಗೆ ಮಡಹಳ್ಳಿ ಶಾಲೆಗೆ ನನ್ನನ್ನು ನಿೋಂಜಿಸಲಾದ ಸಂದರ್ಭದಲ್ಲಿ ಸತ್ಯನಾರಾಯಣ ಸರ್ ಅಲ್ಲೇ ಕಾರ್ಯನಿರ್ವಹಿಸುತ್ತಿದ್ದರು. ಆಗ ಶಿಕ್ಷಕ ವೃತ್ತಿಯಲ್ಲಿ ಮೌಲ್ಯ, ಗೌರವಗಳೆಲ್ಲವನ್ನೂಕಲಿಸಿಕೊಟ್ಟರು. ‘ಅನಿತಾ, ನಿನಗೆ ಪ್ರತಿೊಂಂದು ಕೆಲಸವೂ ಗೊತ್ತಿರಬೇಕು. ಬೇಗ ಕಲಿತಿಕೊ’ ಎಂದು ತಿಳಿಹೇಳಿ ಎಲ್ಲವನ್ನೂ ಕಲಿಸಿಕೊಟ್ಟು, ಇಂದು ನನ್ನ ಈ ಹೆಮ್ಮೆಯ ವೃತ್ತಿಯನ್ನು ಯಶಸ್ವಿಯಾಗಿ ನಿರ್ವಹಿಸಲು ದಾರಿ ತೋರಿದರು. ನಮ್ಮ ಸರ್ ಈಗ ನಿವೃತ್ತಿ ಜೀವನಕ್ಕೆ ಅಡಿಯಿಟ್ಟಿದ್ದು, ಅವರ ಮುಂದಿನ ದಿನಗಳು ಆರೋಗ್ಯದಾಯಕವಾಗಿ, ಸಂತಸದಾಯಕವಾಗಿರಲಿ.

– ಅನಿತ ಸಿ.
ಶಿಕ್ಷಕರು, ಗುಂಡ್ಲುಪೇಟೆ

andolanait

Recent Posts

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ; 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ

ಮೊದಲಬಾರಿಗೆ ರಾಷ್ಟ್ರರಾಜಧಾನಿಯಿಂದ ಹೊರಗೆ ಆಯೋಜನೆ   72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಮೊದಲ ಬಾರಿಗೆ ನವದೆಹಲಿಯಿಂದ…

19 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 21 ಶುಕ್ರವಾರ

3 hours ago

911 ಅಕ್ರಮ ವಿದೇಶಿ ನುಸುಳುಕೋರರು ಪತ್ತೆ : ಗೃಹ ಸಚಿವ ಖರ್ಗೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…

15 hours ago

ಕಾವೇರಿ ವನ್ಯಧಾಮದಲ್ಲಿ 8 ಕಳ್ಳಬೇಟೆ ಶಿಬಿರ ಧ್ವಂಸ : ಎಫ್‌ಐಆರ್ ದಾಖಲು, ತನಿಖೆ ಚುರುಕು

ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…

16 hours ago

1984 ಸಿಖ್‌ ವಿರೋಧಿ ದಂಗೆ ಪ್ರಕರಣ; ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್‌ ಕುಮಾರ್‌ ನಿಧನ

ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…

18 hours ago

ನಾರಾಯಣಸ್ವಾಮಿಗೆ ಕಮಾಂಡೆಂಟ್‌ ಬೆಳ್ಳಿ ಪದಕ

ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…

18 hours ago