ಗುರುಗಳ ಪಾತ್ರ ಪ್ರತಿೊಂಬ್ಬರ ಜೀವನದಲ್ಲೂ ಮಹತ್ತರವಾದುದು. ಅದರಲ್ಲೂ ಪ್ರಾಥಮಿಕ ಶಿಕ್ಷಕರು ನಮ್ಮ ಜೀವನದ ಸಾರಥಿಗಳೇ ಸರಿ. ನನ್ನ ಎಲ್ಲ ಗುರುಬಳಗವು ನನ್ನ ಬಾಳಿನ ದೀಪಜ್ಯೋತಿಗಳು. ನನ್ನ ಹುಟ್ಟೂರಾದ ಮಡಹಳ್ಳಿಯಲ್ಲಿ ನಾನು ಪ್ರಾಥಮಿಕ ಶಿಕ್ಷಣವನ್ನು ತುಂಬಾ ಸಂತಸದಿಂದ ಮುಗಿಸಿದೆ. ನನ್ನ ಹೆಮ್ಮೆಯ ನೆಚ್ಚಿನ ಗುರುಗಳಾದ ಸತ್ಯನಾರಾಯಣ ಸರ್ ಅವರನ್ನು ನಾನೆಂದೂ ಮನದಲ್ಲಿ ಪೂಜಿಸುತ್ತೇನೆ. ಗಣಿತ ವಿಷಯವನ್ನು ಬೋಧಿಸುತ್ತಿದ್ದ ಬಹಳ ಶಿಸ್ತಿನ ಗುರುಗಳಾಗಿದ್ದ ಅವರು ತುಂಬಾ ಸರಳ ಸ್ವಭಾವದವರು. ಅವರು ತೋರಿಸಿಕೊಟ್ಟ ಹಾದಿಯ ಪಯಣ ಇಂದು ನನಗೆ ಆದರ್ಶಪ್ರಾಯವಾಗಿದೆ. ನಾನೂ ಇಂದು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಲು ಪ್ರೇರಣೆಯಾಗಿದೆ.
‘ನೀನು ಜಾಣೆ ಕಣಮ್ಮ, ಏನಾದ್ರೂ ಸಾಧನೆ ಮಾಡು’ ಎಂದು ಸದಾ ಹೇಳುತ್ತಿದ್ದ, ಈಗಲೂ ಸಿಕ್ಕಾಗ ಹೇಳುವ ನನ್ನ ಗುರುಗಳೆಂದರೆ ಈಗಲೂ ನನಗೆ ಗೌರವ, ಆತ್ಮೀಯತೆ. ನೈತಿಕ ಮೌಲ್ಯಗಳನ್ನು ಮೈಗೂಡಿಸಿದ ಉತ್ತಮ ಗುಣದವರು ನನ್ನ ಗುರುಗಳು. ಶಿಕ್ಷಕ ತರಬೇತಿ ಮುಗಿಸಿ ೩ ತಿಂಗಳ ತರಬೇತಿಗೆ ಮಡಹಳ್ಳಿ ಶಾಲೆಗೆ ನನ್ನನ್ನು ನಿೋಂಜಿಸಲಾದ ಸಂದರ್ಭದಲ್ಲಿ ಸತ್ಯನಾರಾಯಣ ಸರ್ ಅಲ್ಲೇ ಕಾರ್ಯನಿರ್ವಹಿಸುತ್ತಿದ್ದರು. ಆಗ ಶಿಕ್ಷಕ ವೃತ್ತಿಯಲ್ಲಿ ಮೌಲ್ಯ, ಗೌರವಗಳೆಲ್ಲವನ್ನೂಕಲಿಸಿಕೊಟ್ಟರು. ‘ಅನಿತಾ, ನಿನಗೆ ಪ್ರತಿೊಂಂದು ಕೆಲಸವೂ ಗೊತ್ತಿರಬೇಕು. ಬೇಗ ಕಲಿತಿಕೊ’ ಎಂದು ತಿಳಿಹೇಳಿ ಎಲ್ಲವನ್ನೂ ಕಲಿಸಿಕೊಟ್ಟು, ಇಂದು ನನ್ನ ಈ ಹೆಮ್ಮೆಯ ವೃತ್ತಿಯನ್ನು ಯಶಸ್ವಿಯಾಗಿ ನಿರ್ವಹಿಸಲು ದಾರಿ ತೋರಿದರು. ನಮ್ಮ ಸರ್ ಈಗ ನಿವೃತ್ತಿ ಜೀವನಕ್ಕೆ ಅಡಿಯಿಟ್ಟಿದ್ದು, ಅವರ ಮುಂದಿನ ದಿನಗಳು ಆರೋಗ್ಯದಾಯಕವಾಗಿ, ಸಂತಸದಾಯಕವಾಗಿರಲಿ.
– ಅನಿತ ಸಿ.
ಶಿಕ್ಷಕರು, ಗುಂಡ್ಲುಪೇಟೆ
ಕೊರಿಯನ್ ಗೇಮ್ಸ್ ವ್ಯಸನದಿಂದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂದು ನಮ್ಮ ಯುವಜನತೆ ಕೆ ಪಾಪ್ ಮತ್ತು ಕೆ…
ಮೈಸೂರಿನ ಶ್ರೀರಾಂಪುರ ೨ನೇ ಹಂತದಲ್ಲಿ ನಿವೇಶನನವೊಂದು ಕಳೆದ ೨೬ ವರ್ಷಗಳಿಂದ ಖಾಲಿಬಿದ್ದಿದೆ. ಈ ಖಾಲಿ ನಿವೇಶನದಲ್ಲಿ ಅಕ್ಕಪಕ್ಕದ ಮನೆಯ ನಿವಾಸಿಗಳು…
ಮೈಸೂರು ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿರುವುದು ಸ್ವಾಗತಾರ್ಹ ಸಂಗತಿ. ಆದರೆ ಗ್ರಾಮದ ನೈಸರ್ಗಿಕ ಸಂಪತ್ತಾದ ‘ಬೆಳವಾಡಿ ಕೆರೆ’ಗೆ…
ನವೀನ್ ಡಿಸೋಜ ಜನವರಿಯಲ್ಲಿ ೬೩ ಎನ್ಡಿಪಿಎಸ್ ಪ್ರಕರಣಗಳು ದಾಖಲು; ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ಮಡಿಕೇರಿ: ಮಾದಕ ವಸ್ತುಗಳ ಮಾರಾಟ…
ಮಂಜು ಕೋಟೆ ಜಕ್ಕಹಳ್ಳಿ ಆಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮುಜುಗರ; ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಪೋಷಕರ ಆಗ್ರ ಎಚ್.ಡಿ.ಕೋಟೆ: ಗಿರಿಜನ ಮಕ್ಕಳ…
ಪ್ರಶಾಂತ್ ಎಸ್. ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಅನಾಹುತಕ್ಕೆ ಹಾದಿ ಎನ್.ಎಚ್.ಪಾಳ್ಯ,ಟೋಲ್ಗೇಟ್, ಶಿವಪುರ ತಿರುವಿನಲ್ಲಿ ರಿಫ್ಲೆಕ್ಟರ್,ಬ್ಯಾರಿಕೇಡ್ ಅಳವಡಿಕೆ ಅಗತ್ಯ ಮೈಸೂರು:…