ಮಹಿಳೆ ಸಬಲೆ

ಸ್ವಇಚ್ಛೆಯಿಂದ ಹೆಸರು ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ

ಅಂಜಲಿ ರಾಮಣ್ಣ
ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು

ಒಮ್ಮೆ ಮಗುವಿಗೆ ೧೫ ತಿಂಗಳಾದ್ರೂ ಬರ್ತ್ ಸರ್ಟಿಫಿಕೇಟ್ ಮಾಡಿಸಿರಲಿಲ್ಲ. ಯಾಕೆ ಎಂದಿದ್ದಕ್ಕೆ ಬಂದ ಉತ್ತರ ‘೩ ತಿಂಗಳ ಹಿಂದೇನೆ ಕೊಟ್ಟಿದ್ದೀವಿ, ತಂದೆ ಹೆಸರು ಕೊಡದೆ ಮಾಡಲ್ಲ ಅಂತಿದ್ದಾರೆ. ತಾಯಿ ಲೈಂಗಿಕ ದೌರ್ಜನ್ಯದಿಂದ ನೊಂದವಳೆನ್ನುವ ಆದೇಶ ತೋರಿಸಿದರೂ ಆಫೀಸಿನಲ್ಲಿ ತಂದೆ ಹೆಸರು ಬೇಕೆನ್ನುತ್ತಿದ್ದಾರೆ’

ಇನ್ನೊಂದು ಪ್ರಕರಣದಲ್ಲಿ ೫ ಮಕ್ಕಳನ್ನು ಭಿಕ್ಷಾಟನೆಯಿಂದ ರಕ್ಷಿಸಲಾಗಿತ್ತು. ತಾಯಿಯರಿಗೆ ದಾಖಲೆಗಳನ್ನು ತರಲು ಹೇಳಲಾಗಿತ್ತು. ಅವರೆಲ್ಲರೂ ತಮ್ಮ ರಾಜ್ಯದ ಅಧಿಕಾರಿಗಳಿಂದ ಜನ್ಮದಾಖಲೆ ತಂದರು. ದಾಖಲೆಗಳಲ್ಲಿ ಐದೂ ಮಕ್ಕಳ ಅಮ್ಮಂದಿರ ಹೆಸರು ಬೇರೆ ಬೇರೆ, ತಂದೆಯ ಹೆಸರು ಒಬ್ಬನದ್ದೇ ಇತ್ತು. ಪರಿಶೀಲನೆಯಿಂದ ಸತ್ಯ ಗೊತ್ತಾಯಿತು. ಕೆಲವರಿಗೆ ಮಕ್ಕಳ ತಂದೆಯರ ಹೆಸರು ತಿಳಿದಿರಲಿಲ್ಲ.

ಕೆಲವರಿಗೆ ಕಾರಣಾಂತರಗಳಿಂದ ಹೇಳಲಾಗುತ್ತಿಲ್ಲ. ಆದರೆ ಜನ್ಮದಾಖಲೆ, ಆಧಾರ್ ಕಾರ್ಡ್ ಇತರೆ ಯಾವುದಕ್ಕೂ ತಂದೆಯ ಹೆಸರು ಕೇಳುತ್ತಾರೆ. ಅದಕ್ಕೇ ಅವರೂರಿನ ಪುಢಾರಿಯೊಬ್ಬರು ಒಂದೆರಡು ಹೆಸರು ಕೊಟ್ಟು ಅಧಿಕಾರಿಗೆ ಎಲ್ಲಾ ಮಕ್ಕಳಿಗೂ ಆ ಹೆಸರನ್ನೇ ತಂದೆಯ ಹೆಸರು ಎಂದು ಬಳಸಿ ದಾಖಲೆ ನೀಡಲು ಹೇಳಿಬಿಟ್ಟಿದ್ದರು.

ಸರ್ವೋಚ್ಚ ನ್ಯಾಯಾಲಯವೇ ಯಾವ ಮಹಿಳೆಗೂ ತನ್ನ ಹೆಸರಿನ ಮುಂದೆ ಗಂಡನ ಅಥವಾ ತಂದೆಯ ಹೆಸರು ಸೇರಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ತೀರ್ಪು ಕೊಟ್ಟಿದೆ. ಒಂಟಿ ಮಹಿಳೆಯರು ಬೇರೆ ಬೇರೆ ವಿಧಾನದಿಂದ ತಾಯಿಯಾಗುತ್ತಿದ್ದಾರೆ. ಸಮಾಜದ ಮನ್ನಣೆ ಸಿಗುತ್ತಿದೆ. ಕಾನೂನು ಒಪ್ಪುತ್ತಿದೆ.

ಗಂಡ ತೀರಿಕೊಂಡಾಕೆಗೆ, ಒಂಟಿ ಹೆಂಗಸಿಗೆ, ಮಾಜಿ ದೇವದಾಸಿಯರಿಗೆ ಬದುಕುವ, ಆಸ್ತಿ ಹೊಂದುವ, ದತ್ತು ತೆಗೆದುಕೊಳ್ಳುವ ಹಕ್ಕುಗಳನ್ನು ಸಂವಿಧಾನವೇ ನೀಡಿದೆ. ಪಾಸ್ಪೋರ್ಟ್ನಲ್ಲಿ ತಾಯಿಯ ಹೆಸರು ಕಡ್ಡಾಯ ತಂದೆಯ ಹೆಸರು ಆಯ್ಕೆ ಎನ್ನುವ ನಿರ್ಧಾರಗಳೂ, ಪಾನ್ಕಾರ್ಡ್ನಲ್ಲಿ ತಂದೆಯ ಹೆಸರು ಕಡ್ಡಾಯ ಅಲ್ಲ ಎನ್ನುವ ನಿರ್ದೇಶನಗಳೂ ಹೊರಬಂದಿವೆ. ವೈವಾಹಿಕ ಸ್ಥಿತಿಯನ್ನು ಘೋಷಿಸಿಕೊಳ್ಳಲು ಕೆಲವು ದಾಖಲೆಗಳಲ್ಲಿ ಕೇಳಬಹುದು. ಆದರೆ ಹೆಸರಿನ ಜೊತೆ ಗಂಡನ ಹೆಸರನ್ನು ಸೇರಿಸಿಕೊಳ್ಳಬೇಕು ಎನ್ನುವ ಹಾಗಿಲ್ಲ. ಇದೆಲ್ಲವನ್ನು ಗಮನಿಸಿಯೇ ೨೦೧೫ರ ಜುಲೈ ತಿಂಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ ‘ವಯಸ್ಕ ಹೆಂಗಸರ Identifi cationಗಾಗಿ ತಂದೆ ಅಥವಾ ಗಂಡನ ಹೆಸರು ಇರಬೇಕು
ಎನ್ನುವ ನಿಯಮ ಎಲ್ಲೂ ಇಲ್ಲ. ಇದೊಂದುby practice’ ಬಂದಿರುವ ಅಲಿಖಿತ ನಿಯಮವಾಗಿ ಬಿಟ್ಟಿದೆ. ಕೆಲವು ದಾಖಲೆಗಳು ಆಗಬೇಕಾದಾಗ ತಿಳಿವಳಿಕೆಯಿಲ್ಲದೆ ಸಂಸ್ಥೆಗಳಲ್ಲಿ ತಂದೆಯ ಅಥವಾ ಗಂಡನ ಹೆಸರಿಗಾಗಿ ಒತ್ತಾಯ ಹೇರುತ್ತಾರೆ.

ಆದರೆ,ಆಯ್ಕೆಯ ಸಾತಂತ್ರ್ಯ ಕಾನೂನಿನಲ್ಲಿ ಖಂಡಿತಾ ಇದೆ. ಕೆಲವು ಶಾಲಾ-ಕಾಲೇಜು ಹಾಗೂ ಸಂಸ್ಥೆಗಳ ಅರ್ಜಿಯಲ್ಲಿ ಪ್ರಮುಖವಾಗಿ ತಾಯಿಯ ಹೆಸರನ್ನೇ ಕೇಳಲಾಗುತ್ತಿದೆ ಎನ್ನುವುದನ್ನೂ ಗಮನಿಸಬೇಕು. ನಮ್ಮನ್ನು ನಾವು ‘”Identify’’ ಹೇಗೆ
ಮಾಡಿಕೊಳ್ಳಬೇಕೆನ್ನುವುದು ಸಂವಿಧಾನ ನೀಡಿದ ಹಕ್ಕು ಮತ್ತು ಆಯ್ಕೆ“ ಎಂದು ಹೇಳಿ ಮುಂದುವರೆದು, “ಜನ್ಮದಾಖಲೆ ನೀಡುವ ಅಧಿಕಾರಿಗಳು ತಾಯಿಯು ಇಚ್ಛಿಸಿದಲ್ಲಿ ಆಕೆಯ ಹೆಸರನ್ನು ಮಾತ್ರ ನಮೂದಿಸಿ ಜನ್ಮದಾಖಲೆಯನ್ನು ನೀಡಬೇಕು. ತಂದೆಯ ಹೆಸರಿಗಾಗಿ ಒತ್ತಾಯ ಮಾಡಬಾರದು, ಸರ್ಕಾರಗಳು ಇಲಾಖೆಗಳಿಗೆ ಸುತ್ತೋಲೆ ನೀಡಬೇಕು” ಎಂದು ಆದೇಶಿಸಿದೆ. ಸ್ವ ಇಚ್ಛೆಯಿದ್ದಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳಲು ಅವಕಾಶ ಇದೆ.

ಆಂದೋಲನ ಡೆಸ್ಕ್

Recent Posts

ಸಿಲಿಂಡರ್ ಸ್ಪೋಟ ಪ್ರಕರಣ : ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…

2 hours ago

ಮರ್ಯಾದೆಗೇಡು ಹತ್ಯೆ ವಿರೋಧಿಸಿ ಸಹಿ ಸಂಗ್ರಹ

ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…

6 hours ago

ಕೆ.ಆರ್.ಆಸ್ಪತ್ರೆ ಶೆಡ್ ನಲ್ಲಿ ಬೆಂಕಿ : ಹಾಸಿಗೆಗಳು ಬೆಂಕಿಗಾಹುತಿ

ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…

7 hours ago

ಹೊಸ ವರ್ಷಾಚರಣೆಗೆ ಮುನ್ನೆಚ್ಚರಿಕೆ : ಸೂಕ್ಷ ಪ್ರದೇಶಗಳ ಬಗ್ಗೆ ಸಮೀಕ್ಷೆ ವರದಿಗೆ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…

7 hours ago

ಸಿಲಿಂಡರ್‌ ಸ್ಪೋಟ ಪ್ರಕರಣ : ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಂಜುಳ ಸಾವು

ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…

8 hours ago

ಇತಿಹಾಸ ಸೃಷ್ಟಿಸಿದ ಬಿಜೆಪಿ : ತಿರುವನಂತಪುರಂನ ಮೇಯರ್ ಆಗಿ ವಿ.ವಿ.ರಾಜೇಶ್ ಆಯ್ಕೆ

ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…

8 hours ago