ಮಹಿಳೆ ಸಬಲೆ

ಬದುಕಲ್ಲಿ ಜಗಳ ಇರುವುದು ತಪ್ಪಲ್ಲ: ಜಗಳವೇ ಬದುಕಾಗಬಾರದು

ಡಾ. ಅಶ್ವಿನಿ

ಇದು ಒಬ್ಬರಿಂದ ಸಾಧ್ಯವಾಗುವ ಸಂಗತಿಯಲ್ಲ. ಎರಡು ಕೈ ಸೇರಿದರೇನೇ ಚಪ್ಪಾಳೆ. ಮನೆಯಲ್ಲಿ ಶಾಂತಿಯನ್ನು ಕಾಯ್ದುಕೊಳ್ಳುವುದು ಇಬ್ಬರ ಆಯ್ಕೆಯಾಗಿರಬೇಕು. ಕೆಲವು ಕುಟುಂಬಗಳಲ್ಲಿ ಒಬ್ಬರು ತೀರಾ ಮುಂಗೋಪಿಗಳಾ ಗಿಯೋ ಅಥವಾ ಮಾತು ಮಾತಿಗೂ ಜಗಳವಾಡುವ ಗುಣವನ್ನೋ ಹೊಂದಿರಬಹುದು. ಅಂತಹ ಸಂದರ್ಭಗಳಲ್ಲಿ ಉಳಿದವರು ಕನಿಷ್ಠ ಪಕ್ಷ ಮಕ್ಕಳ ಎದುರು ಮೌನವಾಗಿದ್ದು ಬಿಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮತ್ತೆ ಗಂಡ-ಹೆಂಡತಿ ಇಬ್ಬರೇ ಇದ್ದಾಗ ಆಡಿದ ಮಾತುಗಳು ತಪ್ಪು ಎಂಬುದನ್ನು ಮನವರಿಕೆ ಮಾಡಿಕೊಡಬಹುದು.

ಸದಾ ಜಗಳವಾಡುವ ಅಪ್ಪ-ಅಮ್ಮನನ್ನು ಕಂಡ ಮಕ್ಕಳು ಸಂಬಂಧಗಳಲ್ಲಿನ ನಂಬಿಕೆಯನ್ನು ಕಳೆದುಕೊಂಡು ಬಿಡುತ್ತಾರೆ. ನಾಳೆ ನನ್ನ ಬದುಕು ಕೂಡ ಇದೆ ತರಹ ಆಗಿಬಿಡಬಹುದು ಎಂಬ ಭಯ ಮನಸ್ಸಿನಲ್ಲಿ ಮನೆ ಮಾಡಿಬಿಡುತ್ತದೆ.

ಅಪರೂಪದ ಸಂದರ್ಭಗಳಲ್ಲಿ ನಾನು ಈ ರೀತಿ ಆಗಬಾರದು ಎಂಬ ಪಕ್ವವಾದ ಮನಸ್ಥಿತಿಯನ್ನು ಸಹ ಬೆಳೆಸಿಕೊಳ್ಳಬಹುದು. ಆದರೆ ಅಂತಹ ಪ್ರಕರಣಗಳ ಸಂಖ್ಯೆ ಬಹಳ ಕಡಿಮೆ. ಒಬ್ಬರು ಮತ್ತೊಬ್ಬರನ್ನು ನಿಂದಿಸುತ್ತಿದ್ದರೆ,

ಅವಹೇಳನಕಾರಿ ಮಾತುಗಳನ್ನಾಡಿದರೆ, ಅಸಭ್ಯ ಭಾಷೆ ಬಳಸಿದರೆ, ಅಗೌರವವನ್ನು ತೋರಿಸಿದರೆ ಅದು ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಅತೀವ ಪರಿಣಾಮವನ್ನುಂಟು ಮಾಡುತ್ತದೆ. ಎಷ್ಟೋ ಮನೆಗಳಲ್ಲಿ ಪೋಷಕರು ಜೋರಾಗಿ ಜಗಳ ಆಡುವಾಗ ಮಕ್ಕಳು ದಿಕ್ಕು ಕಾಣದೆ ಅಳುತ್ತಾ ನಿಂತುಬಿಡುತ್ತವೆ. ದೈಹಿಕ ಶೋಷಣೆಯ ಪ್ರಕರಣಗಳು ಉಂಟುಮಾಡುವ ಕೆಟ್ಟ ಪರಿಣಾಮವನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಗಂಡು ಮಗು ತಂದೆಯನ್ನು ಗಮನಿಸಿ ನಾನೂ ಇದೇ ರೀತಿ ರೂಪುಗೊಳ್ಳ ಬೇಕು ಎಂದುಕೊಂಡರೆ,, ಹೆಣ್ಣು ಮಕ್ಕಳು ಅಮ್ಮನನ್ನು ಅನುಸರಿಸುತ್ತಾರೆ. ಈ ಕಾರಣಕ್ಕಾಗಿಯೇ ಸರಿಯಾದ ವ್ಯಕ್ತಿತ್ವವನ್ನು ಮಾದರಿಯಾಗಿ ರೂಪಿಸಿಕೊಡುವುದು ಪೋಷಕರ ಜವಾಬ್ದಾರಿ.

ಮಕ್ಕಳ ಎದುರು ಯಾವುದೇ ಕಾರಣಕ್ಕೂ ಗಂಡ ಹೆಂಡತಿಯನ್ನಾಗಲಿ ಅಥವಾ ಹೆಂಡತಿ ಗಂಡನನ್ನಾಗಲಿ ಅವಮಾನಿಸುವುದು ಸರಿಯಲ್ಲ. ತಮಾಷೆಗೆ ಒಬ್ಬರು ಮತ್ತೊಬ್ಬರ ಕಾಲು ಎಳೆಯುವುದು, ನಗೆ ಚಟಾಕಿ ಹಾರಿಸುವುದು ಆರೋಗ್ಯಕರ. ಆದರೆ ನಿರಂತರವಾಗಿ ಒಬ್ಬರು ಮತ್ತೊಬ್ಬರನ್ನು ಅವಮಾನಿಸುತ್ತಿದ್ದರೆ ಮಕ್ಕಳು ಪೋಷಕರ ಮೇಲಿನ ಗೌರವವನ್ನು ಕಳೆದುಕೊಳ್ಳುತ್ತಾರೆ. ಇದು ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತದೆ.

ಕೂಗಾಡಿ, ಕಿರುಚಾಡಿ, ಕೈಗೆ ಸಿಕ್ಕ ವಸ್ತುಗಳನ್ನು ಬಿಸಾಡಿ ಒತ್ತಡದ ವಾತಾವರಣವನ್ನು ಸೃಷ್ಟಿಸಿ ಮಕ್ಕಳ ವಿದ್ಯೆ, ಆತ್ಮವಿಶ್ವಾಸ, ವ್ಯಕ್ತಿತ್ವ, ಮನೆಯ ಶಾಂತಿ, ಸಮಾಧಾನವನ್ನು ಬಲಿ ಕೊಡುವ ಬದಲು ಕಠಿಣ ಸಂದರ್ಭಗಳಲ್ಲಿ ಪೋಷಕರು ಜೊತೆಯಾಗಿ ಬದುಕಿನ ಏಳು-ಬೀಳುಗಳನ್ನು ಎದುರಿಸಲು ಸಾಧ್ಯ. ಅತಿ ಒತ್ತಡದ ವಾತಾವರಣದಲ್ಲಿ ಬೆಳೆದ ಮಕ್ಕಳು ಭಾವನಾತ್ಮಕವಾಗಿ ದುರ್ಬಲರಾಗುತ್ತಾರೆ.

ಇಂತಹ ಮಕ್ಕಳಲ್ಲಿ ಕಡಿಮೆ ನಿದ್ದೆ, ಕ್ಷೀಣಿಸಿದ ಉತ್ಸಾಹ, ಚಟುವಟಿಕೆ ಇಲ್ಲದ ಮತ್ತು ಗೊಂದಲದ ವ್ಯಕ್ತಿತ್ವ ಕಂಡುಬರಬಹುದು. ಎಂತಹ ಸಮಸ್ಯೆ ಇದ್ದರೂ ಪೋಷಕರು ಕೊಠಡಿಯ ಒಳಗೆ ಮಾತುಕತೆ, ವಾದವನ್ನು ಮುಗಿಸಿ ಪರಿಹಾರ ಕಂಡುಕೊಂಡು ಹೊರಗೆ ಬಂದರೆ ಮಕ್ಕಳು ಮುಂದೆ ಸಂಘರ್ಷ ಎದುರಾದಾಗ ಇದೇ ಕ್ರಮವನ್ನು ಪಾಲಿಸುತ್ತಾರೆ.

ಉತ್ತಮವಾದ ವಾಗ್ವಾದ, ಒಬ್ಬರು ತಪ್ಪು ಮಾಡಿದಾಗ ಮತ್ತೊಬ್ಬರು ತಿದ್ದುವುದು ಸಂಬಂಧದ ಮೇಲೆ ಧನಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ಪೋಷಕರು ಜಗಳ ಆಡುವುದು ತಪ್ಪಲ್ಲ. ಆದರೆ ಜಗಳವೇ ಬದುಕಾಗಿಬಿಡುವುದು ತಪ್ಪು. ಇದು ತಮ್ಮ ಮೇಲೆ ಅಷ್ಟೇ ಅಲ್ಲದೆ ಇಡೀ ಕುಟುಂಬದ ಮೇಲೆ, ಸುತ್ತ ಮುತ್ತಲಿನವರ ಮೇಲೆ ಅತೀವ ಪರಿಣಾಮ ಉಂಟು ಮಾಡುತ್ತದೆ. ಅಹಂ ಬಿಟ್ಟು ಮಕ್ಕಳ ಕುರಿತು ಚಿಂತಿಸಿ ಅವರ ಬದುಕು ರೂಪಿಸುವ ಕುರಿತು ಆಲೋಚಿಸುವುದು ಜಾಣತನ.

(ಲೇಖಕರು: ಪತ್ರಿಕೋದ್ಯಮ ಸಹ ಪ್ರಾಧ್ಯಾಪಕರು, ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು)

ಆಂದೋಲನ ಡೆಸ್ಕ್

Recent Posts

ಎಸ್‌ಸಿ, ಎಸ್‌ಟಿಗಳ ಹಕ್ಕು ರಕ್ಷಣೆಗೆ ಕ್ರಮ : ಡಾ.ಮೂರ್ತಿ

ಮೈಸೂರು : ಆದಿವಾಸಿ ಸಮುದಾಯಗಳ ಮೇಲಿನ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ ಹಾಗೂ ಮೈಸೂರು ಭಾಗದಲ್ಲಿ ದಾಖಲಾಗಿರುವ 134 ಪೋಕ್ಸೊ ಪ್ರಕರಣಗಳು…

3 hours ago

ಬೆಂಕಿ ಅವಘಡ | ಅಬಕಾರಿ ಡಿಸಿ ಅಮಾನತಿಗೆ ಶಿಫಾರಸ್ಸು ಮಾಡಲು ಸೂಚನೆ ಕೊಟ್ಟ ಯತೀಂದ್ರ ಸಿದ್ದರಾಮಯ್ಯ!

ಮೈಸೂರು : ಸೋಮವಾರ ಪಬ್‌ನಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಕಾರಣಕ್ಕಾಗಿ ಅಬಕಾರಿ…

4 hours ago

ರೈತರಿಗೆ ಬಿಗ್‌ ಗಿಫ್ಟ್‌ ಕೊಟ್ಟ ತಮಿಳುನಾಡು ಸಿಎಂ ವಿಜಯ್‌

ಚೆನ್ನೈ: ತಮಿಳುನಾಡಿನ ರೈತರಿಗೆ ಸಿಎಂ ವಿಜಯ್‌ ಬಂಪರ್‌ ಕೊಡುಗೆ ನೀಡಿದ್ದಾರೆ. ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ 75,000 ರೂ…

8 hours ago

ಮುಂಗಾರು ಕೊರತೆ: ಹಾರಂಗಿ ಜಲಾಶಯದ ಒಳಹರಿವು ತೀವ್ರ ಕುಸಿತ

ಮಡಿಕೇರಿ: ಮುಂಗಾರು ಮಳೆ ಕೊರತೆಯಿಂದ ಹಾರಂಗಿ ಜಲಾಶಯಕ್ಕೆ ಒಳಹರಿವು ತೀವ್ರವಾಗಿ ಕುಸಿದಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಮಳೆಗಾಲವಾದರೂ ಜಿಲ್ಲೆಯಲ್ಲಿ ಮಳೆ…

9 hours ago

ಮೆಡಿಕಲ್‌ನಲ್ಲಿ ಇನ್ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್‌ ಖರೀದಿ ಮಾಡುವಂತಿಲ್ಲ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಮೆಡಿಕಲ್‌ ಶಾಪ್‌ಗಳಲ್ಲಿ ಇನ್ಮು ಮುಂದೆ ಸಾರ್ವಜನಿಕರು ನೇರವಾಗಿ ಸಿರಪ್‌ ಖರೀದಿ ಮಾಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಆದೇಶ…

10 hours ago

ನಟ ವಿಜಯ್‌ ರಾಘವೇಂದ್ರ, ಶ್ರೀಮುರಳಿಗೆ ಮಾತೃ ವಿಯೋಗ

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡ ಅವರ ಪತ್ನಿ ಹಾಗೂ ನಟರಾದ ವಿಜಯ್‌ ರಾಘವೇಂದ್ರ, ಶ್ರೀಮುರಳಿ ಅವರ ತಾಯಿ…

11 hours ago