ಮಹಿಳೆ ಸಬಲೆ

ಬದುಕಲ್ಲಿ ಜಗಳ ಇರುವುದು ತಪ್ಪಲ್ಲ: ಜಗಳವೇ ಬದುಕಾಗಬಾರದು

ಡಾ. ಅಶ್ವಿನಿ

ಇದು ಒಬ್ಬರಿಂದ ಸಾಧ್ಯವಾಗುವ ಸಂಗತಿಯಲ್ಲ. ಎರಡು ಕೈ ಸೇರಿದರೇನೇ ಚಪ್ಪಾಳೆ. ಮನೆಯಲ್ಲಿ ಶಾಂತಿಯನ್ನು ಕಾಯ್ದುಕೊಳ್ಳುವುದು ಇಬ್ಬರ ಆಯ್ಕೆಯಾಗಿರಬೇಕು. ಕೆಲವು ಕುಟುಂಬಗಳಲ್ಲಿ ಒಬ್ಬರು ತೀರಾ ಮುಂಗೋಪಿಗಳಾ ಗಿಯೋ ಅಥವಾ ಮಾತು ಮಾತಿಗೂ ಜಗಳವಾಡುವ ಗುಣವನ್ನೋ ಹೊಂದಿರಬಹುದು. ಅಂತಹ ಸಂದರ್ಭಗಳಲ್ಲಿ ಉಳಿದವರು ಕನಿಷ್ಠ ಪಕ್ಷ ಮಕ್ಕಳ ಎದುರು ಮೌನವಾಗಿದ್ದು ಬಿಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮತ್ತೆ ಗಂಡ-ಹೆಂಡತಿ ಇಬ್ಬರೇ ಇದ್ದಾಗ ಆಡಿದ ಮಾತುಗಳು ತಪ್ಪು ಎಂಬುದನ್ನು ಮನವರಿಕೆ ಮಾಡಿಕೊಡಬಹುದು.

ಸದಾ ಜಗಳವಾಡುವ ಅಪ್ಪ-ಅಮ್ಮನನ್ನು ಕಂಡ ಮಕ್ಕಳು ಸಂಬಂಧಗಳಲ್ಲಿನ ನಂಬಿಕೆಯನ್ನು ಕಳೆದುಕೊಂಡು ಬಿಡುತ್ತಾರೆ. ನಾಳೆ ನನ್ನ ಬದುಕು ಕೂಡ ಇದೆ ತರಹ ಆಗಿಬಿಡಬಹುದು ಎಂಬ ಭಯ ಮನಸ್ಸಿನಲ್ಲಿ ಮನೆ ಮಾಡಿಬಿಡುತ್ತದೆ.

ಅಪರೂಪದ ಸಂದರ್ಭಗಳಲ್ಲಿ ನಾನು ಈ ರೀತಿ ಆಗಬಾರದು ಎಂಬ ಪಕ್ವವಾದ ಮನಸ್ಥಿತಿಯನ್ನು ಸಹ ಬೆಳೆಸಿಕೊಳ್ಳಬಹುದು. ಆದರೆ ಅಂತಹ ಪ್ರಕರಣಗಳ ಸಂಖ್ಯೆ ಬಹಳ ಕಡಿಮೆ. ಒಬ್ಬರು ಮತ್ತೊಬ್ಬರನ್ನು ನಿಂದಿಸುತ್ತಿದ್ದರೆ,

ಅವಹೇಳನಕಾರಿ ಮಾತುಗಳನ್ನಾಡಿದರೆ, ಅಸಭ್ಯ ಭಾಷೆ ಬಳಸಿದರೆ, ಅಗೌರವವನ್ನು ತೋರಿಸಿದರೆ ಅದು ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಅತೀವ ಪರಿಣಾಮವನ್ನುಂಟು ಮಾಡುತ್ತದೆ. ಎಷ್ಟೋ ಮನೆಗಳಲ್ಲಿ ಪೋಷಕರು ಜೋರಾಗಿ ಜಗಳ ಆಡುವಾಗ ಮಕ್ಕಳು ದಿಕ್ಕು ಕಾಣದೆ ಅಳುತ್ತಾ ನಿಂತುಬಿಡುತ್ತವೆ. ದೈಹಿಕ ಶೋಷಣೆಯ ಪ್ರಕರಣಗಳು ಉಂಟುಮಾಡುವ ಕೆಟ್ಟ ಪರಿಣಾಮವನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಗಂಡು ಮಗು ತಂದೆಯನ್ನು ಗಮನಿಸಿ ನಾನೂ ಇದೇ ರೀತಿ ರೂಪುಗೊಳ್ಳ ಬೇಕು ಎಂದುಕೊಂಡರೆ,, ಹೆಣ್ಣು ಮಕ್ಕಳು ಅಮ್ಮನನ್ನು ಅನುಸರಿಸುತ್ತಾರೆ. ಈ ಕಾರಣಕ್ಕಾಗಿಯೇ ಸರಿಯಾದ ವ್ಯಕ್ತಿತ್ವವನ್ನು ಮಾದರಿಯಾಗಿ ರೂಪಿಸಿಕೊಡುವುದು ಪೋಷಕರ ಜವಾಬ್ದಾರಿ.

ಮಕ್ಕಳ ಎದುರು ಯಾವುದೇ ಕಾರಣಕ್ಕೂ ಗಂಡ ಹೆಂಡತಿಯನ್ನಾಗಲಿ ಅಥವಾ ಹೆಂಡತಿ ಗಂಡನನ್ನಾಗಲಿ ಅವಮಾನಿಸುವುದು ಸರಿಯಲ್ಲ. ತಮಾಷೆಗೆ ಒಬ್ಬರು ಮತ್ತೊಬ್ಬರ ಕಾಲು ಎಳೆಯುವುದು, ನಗೆ ಚಟಾಕಿ ಹಾರಿಸುವುದು ಆರೋಗ್ಯಕರ. ಆದರೆ ನಿರಂತರವಾಗಿ ಒಬ್ಬರು ಮತ್ತೊಬ್ಬರನ್ನು ಅವಮಾನಿಸುತ್ತಿದ್ದರೆ ಮಕ್ಕಳು ಪೋಷಕರ ಮೇಲಿನ ಗೌರವವನ್ನು ಕಳೆದುಕೊಳ್ಳುತ್ತಾರೆ. ಇದು ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತದೆ.

ಕೂಗಾಡಿ, ಕಿರುಚಾಡಿ, ಕೈಗೆ ಸಿಕ್ಕ ವಸ್ತುಗಳನ್ನು ಬಿಸಾಡಿ ಒತ್ತಡದ ವಾತಾವರಣವನ್ನು ಸೃಷ್ಟಿಸಿ ಮಕ್ಕಳ ವಿದ್ಯೆ, ಆತ್ಮವಿಶ್ವಾಸ, ವ್ಯಕ್ತಿತ್ವ, ಮನೆಯ ಶಾಂತಿ, ಸಮಾಧಾನವನ್ನು ಬಲಿ ಕೊಡುವ ಬದಲು ಕಠಿಣ ಸಂದರ್ಭಗಳಲ್ಲಿ ಪೋಷಕರು ಜೊತೆಯಾಗಿ ಬದುಕಿನ ಏಳು-ಬೀಳುಗಳನ್ನು ಎದುರಿಸಲು ಸಾಧ್ಯ. ಅತಿ ಒತ್ತಡದ ವಾತಾವರಣದಲ್ಲಿ ಬೆಳೆದ ಮಕ್ಕಳು ಭಾವನಾತ್ಮಕವಾಗಿ ದುರ್ಬಲರಾಗುತ್ತಾರೆ.

ಇಂತಹ ಮಕ್ಕಳಲ್ಲಿ ಕಡಿಮೆ ನಿದ್ದೆ, ಕ್ಷೀಣಿಸಿದ ಉತ್ಸಾಹ, ಚಟುವಟಿಕೆ ಇಲ್ಲದ ಮತ್ತು ಗೊಂದಲದ ವ್ಯಕ್ತಿತ್ವ ಕಂಡುಬರಬಹುದು. ಎಂತಹ ಸಮಸ್ಯೆ ಇದ್ದರೂ ಪೋಷಕರು ಕೊಠಡಿಯ ಒಳಗೆ ಮಾತುಕತೆ, ವಾದವನ್ನು ಮುಗಿಸಿ ಪರಿಹಾರ ಕಂಡುಕೊಂಡು ಹೊರಗೆ ಬಂದರೆ ಮಕ್ಕಳು ಮುಂದೆ ಸಂಘರ್ಷ ಎದುರಾದಾಗ ಇದೇ ಕ್ರಮವನ್ನು ಪಾಲಿಸುತ್ತಾರೆ.

ಉತ್ತಮವಾದ ವಾಗ್ವಾದ, ಒಬ್ಬರು ತಪ್ಪು ಮಾಡಿದಾಗ ಮತ್ತೊಬ್ಬರು ತಿದ್ದುವುದು ಸಂಬಂಧದ ಮೇಲೆ ಧನಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ಪೋಷಕರು ಜಗಳ ಆಡುವುದು ತಪ್ಪಲ್ಲ. ಆದರೆ ಜಗಳವೇ ಬದುಕಾಗಿಬಿಡುವುದು ತಪ್ಪು. ಇದು ತಮ್ಮ ಮೇಲೆ ಅಷ್ಟೇ ಅಲ್ಲದೆ ಇಡೀ ಕುಟುಂಬದ ಮೇಲೆ, ಸುತ್ತ ಮುತ್ತಲಿನವರ ಮೇಲೆ ಅತೀವ ಪರಿಣಾಮ ಉಂಟು ಮಾಡುತ್ತದೆ. ಅಹಂ ಬಿಟ್ಟು ಮಕ್ಕಳ ಕುರಿತು ಚಿಂತಿಸಿ ಅವರ ಬದುಕು ರೂಪಿಸುವ ಕುರಿತು ಆಲೋಚಿಸುವುದು ಜಾಣತನ.

(ಲೇಖಕರು: ಪತ್ರಿಕೋದ್ಯಮ ಸಹ ಪ್ರಾಧ್ಯಾಪಕರು, ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು)

ಆಂದೋಲನ ಡೆಸ್ಕ್

Recent Posts

ದಿಲ್ಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ 2026 : ಕೃಷಿ ಮತ್ತು ತಂತ್ರಜ್ಞಾನದ ಸಮಾಗಮ

ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…

8 hours ago

ಮ.ಬೆಟ್ಟ | ಪಾದಯಾತ್ರಿ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ ; ನಿಟ್ಟುಸಿರು ಬಿಟ್ಟ ಯಾತ್ರಾರ್ಥಿಗಳು

ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…

8 hours ago

ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌ : 5 ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ!

ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…

9 hours ago

ಇವಿ ವಾಹನ ಸವಾರರಿಗೆ ಸಿಹಿ ಸುದ್ದಿ : ಮಂಡ್ಯದಲ್ಲಿ ಮೊದಲ ಇವಿ ಫಾಸ್ಟ್‌ ಚಾರ್ಜಿಂಗ್‌ ಕೇಂದ್ರ ಆರಂಭ

ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…

10 hours ago

ಜಾ.ದಳ ಓಡಿಸಲು ಚಲುವರಾಯಸ್ವಾಮಿಗೆ ಸಾಧ್ಯವೇ? : ಜೆಡಿಎಸ್‌ ನಾಯಕ ಸುರೇಶ್‌ ಗೌಡ ಪ್ರಶ್ನೆ

ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…

10 hours ago

ಜಮೀನು ಕಬಳಿಕೆ ಪ್ರಕರಣ | ಸಚಿವ ಚಲುವರಾಯಸ್ವಾಮಿಯೇ ನೇರ ಹೊಣೆ : ಸುರೇಶ್‌ಗೌಡ ಆರೋಪ

ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…

11 hours ago