ಕೀರ್ತಿ ಬೈಂದೂರು

‘ಮುಂದೆ ಏನಾಗಬೇಕೆಂದು ಅಂದು ಕೊಂಡಿದ್ದೀಯಾ?’ ಎಂದು ಚಿಕ್ಕಂದಿನಲ್ಲಿ ಕೇಳುತ್ತಿದ್ದ ಪ್ರಶ್ನೆಗೆ ಭವತಾರಿಣಿ ಮಾತ್ರ ಟೀಚರ್ ಆಗುತ್ತೇನೆ ಎಂಬ ಒಂದೇ ಉತ್ತರವನ್ನು ಕೊಡುತ್ತಿದ್ದರು. ಇಪ್ಪತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸುವ ಶಿಕ್ಷಕಿ, ಅನೇಕ ವೇದಿಕೆಗಳಲ್ಲಿ ಕೇಳಿಬರುವ ಮಧುರ ಕಂಠದ ಹಾಡುಗಾರ್ತಿ ಇವರು.

ಭವತಾರಿಣಿ ಕೆ.ಎಸ್.ಅವರ ತಾತ ಬಸವರಾಜು ಎಂಬುವರು ಅರಮನೆ ಬ್ಯಾಂಡ್ನಲ್ಲಿ ಕ್ಲಾರಿಯೋನೆಟ್, ಕೊಳಲು ವಾದಕರಾಗಿದ್ದರು. ತಂದೆ-ಪ್ರೊ.ಮೈಸೂರು ಕೃಷ್ಣಮೂರ್ತಿ, ತಾಯಿ-ಶಿವರಂಜಿನಿ. ತಂದೆ ವೃತ್ತಿಯಲ್ಲಿ ಕನ್ನಡ ಅಧ್ಯಾಪಕರಾಗಿದ್ದರೂ ಸಂಗೀತದೆಡೆಗೆ ವಿಶೇಷ ಒಲವು. ಅಂತೆಯೇ ಕೃಷ್ಣಮೂರ್ತಿ ಅವರು ಜಾನಪದ ವಿದ್ವಾಂಸರಾದ ಡಾ.ಪಿ.ಕೆ.ರಾಜಶೇಖರ್ ಅವರ ಗರಡಿಯಲ್ಲಿ ಬೆಳೆದವರು. ಅವರ ಹೊನ್ನಾರು ಕಲಾತಂಡದ ಗಾಯಕರಲ್ಲೊಬ್ಬರು. ಹಾಗಾಗಿ ಅಭ್ಯಾಸದ ವೇಳೆಯಲ್ಲಿ ತಂದೆ ಹಾಡುತ್ತಿದ್ದ ಜನಪದ ಹಾಡುಗಳು ಮಗಳ ಬಾಯಲ್ಲಿ ಗುನುಗುತ್ತಿದ್ದವು. ಈ ಆಸಕ್ತಿ ಶಾಸ್ತ್ರೀಯವಾಗಿ ಸಂಗೀತ ಕಲಿಯುವುದಕ್ಕೆ ಸೂಕ್ತ ಅಡಿಪಾಯವನ್ನೇ ಹಾಕಿತು.

ಭವತಾರಿಣಿ ಅವರಾಗ ಆರು ವರ್ಷದ ಹುಡುಗಿ. ವಿದುಷಿ ಕೃಷ್ಣವೇಣಿ ಅವರು ಸ್ವತಃ ಇವರ ಮನೆಗೇ ಬಂದು ಸಂಗೀತ ಕಲಿಸುತ್ತಿದ್ದರು. ಆರಂಭದ ಕಲಿಕೆ ಸುಸೂತ್ರವಾಗೇ ಸಾಗಿತು. ನಿಧಾನಕ್ಕೆ, ಮನಸ್ಸು ಆಟದ ಕಡೆಗೇ ತುಡಿಯುತ್ತಿತ್ತು. ಕೃಷ್ಣವೇಣಿ ಅವರು ಹೇಗಿದ್ದರೆಂದರೆ ಹೇಳಿಕೊಟ್ಟ ಪಾಠ ಹೃದ್ಯವಾಗಿಲ್ಲ ಎನಿಸಿದರೆ, ಪಾಠ ಮುಂದುವರೆಸುತ್ತಿರಲಿಲ್ಲ. ಹೀಗೊಮ್ಮೆ ಆಟದ ಗೋಜಿನಲ್ಲಿ ಸಂಗೀತಾಭ್ಯಾಸ ಮಾಡುವುದನ್ನು ಮರೆತ ಭವತಾ ರಿಣಿ ಅವರು ಬಾಸುಂಡೆ ಏಟು ತಿಂದಿದ್ದರು.

ಸಂಗೀತದ ಸಹವಾಸ ಬೇಡವೇ ಬೇಡ ಎಂದಾಗ ಮನೆಯವರು ಬಿಡದೇ ಒತ್ತಾಯಿಸಿ, ಅರ್ಥೈಸಿ ಕಲಿಕೆಗೆ ಕಳಿಸಿದ್ದರಿಂದ ಹಾಡು ಹಕ್ಕಿಯ ರೆಕ್ಕೆಗಳಿಗೆ ಬಲತುಂಬಿತು. ಓದಿನಲ್ಲೂ ಮುಂದಿದ್ದ ಭವತಾರಿಣಿ ಅವರ ಕಲಾಸಕ್ತಿಗೆ ಶಿಕ್ಷಕರ ಪ್ರೋತ್ಸಾಹವೂ ಅಪರಿಮಿತವಾಗಿ ಒದಗಿತು.

ಪ್ರತಿಭಾ ಕಾರಂಜಿಯಿಂದ ಹಿಡಿದು ಎಲ್ಲೇ ಸಂಗೀತ ಸ್ಪರ್ಧೆಗಳು ನಡೆಯುತ್ತಿದ್ದರೂ ಪೋಷಕರು ಇವರನ್ನು ಕಳುಹಿಸಿಕೊಡುತ್ತಿದ್ದರು. ಹಾಗಾಗಿ ಇವರಿಗೆ ಸಂಗೀತ ಮತ್ತು ಓದು ಭಿನ್ನವೆಂದೇನೂ ಅನಿಸಲೇ ಇಲ್ಲ. ರಾಜೇಶ್ವರಿ, ಶಂಭುಲಿಂಗಪ್ಪ, ಮಂಗಳ ಮುದ್ದು ಮಾದಪ್ಪ ಅವರೆಲ್ಲರೂ ಭವತಾರಿಣಿ ಅವರ ಸಂಗೀತದ ಒಲವನ್ನು ಒರತೆಯಂತೆ ಹರಿಯ ಬಿಟ್ಟವರು.

ಪ್ರೌಢಶಾಲೆಯಲ್ಲಿ ಓದುತ್ತಿದ್ದ ಸಮಯ. ಶಾಲಾ ವಾರ್ಷಿಕೋತ್ಸವಕ್ಕಾಗಿ ಭವತಾರಿಣಿ ಅವರು ಗುಂಪಿನಲ್ಲಿದ್ದ ಸಹಪಾಠಿಗಳಿಗೆಲ್ಲ ‘ಶಿವನೇ ನಿನ್ನಾಟ ಬಲ್ಲವರ‍್ಯಾರಾರೋ, ಗುರುವೇ ನಿನ್ನಾಟ ಬಲ್ಲವರ‍್ಯಾರಾರೊ’ ಹಾಡನ್ನು ಕಲಿಸಿದ್ದರು.

ಆ ಹೊತ್ತಿಗೆ ಗೀತೆ ಈಗಿನಷ್ಟೇನೂ ಪ್ರಸಿದ್ಧಿ ಪಡೆದಿರಲಿಲ್ಲ. ಕಲಾಮಂದಿರದ ವೇದಿಕೆ ಯಲ್ಲಿ ಭವತಾರಿಣಿ ಹಾಡು ಮುಗಿಸಿದ ಬಳಿಕ ನಾಲ್ಕೈದು ನಿಮಿಷಗಳವರೆಗೆ ನಿಲ್ಲದ ಕರತಾಡನ!

ದಸರಾ ಮಹೋತ್ಸವದಿಂದ ಹಿಡಿದು ನಾಡಿನಾದ್ಯಂತ ಅನೇಕ ವೇದಿಕೆಗಳಲ್ಲಿ ಹಾಡುತ್ತಲಿದ್ದಾರೆ. ಈ ಸಂದರ್ಭದಲ್ಲಿ ಇವರು ಸ್ಮರಿಸುವ ಹೆಸರು, ತಾತ ನಾರಾಯಣರದು. ‘ನಾನು ಹಾರ್ಮೋನಿಯಂ ನುಡಿಸುತ್ತೇನೆ, ನೀನು ಹಾಡು’ ಎನ್ನುತ್ತಾ, ಮಂತ್ರಾಲಯ, ಚಾಮುಂಡಿ ಬೆಟ್ಟ, ಶೃಂಗೇರಿ ಹೀಗೆ ಅನೇಕ ದೇವಸ್ಥಾನಗಳ ವೇದಿಕೆಗಳಲ್ಲಿ ಹಾಡಿಸಿದ್ದರು. ದೇವರಿಗೆ ಗೀತ ಸೇವೆಯನ್ನು ನೀಡಬೇ ಕೆಂದು ಅವಕಾಶ ಸಿಕ್ಕ ಕಡೆಗಳಲೆಲ್ಲ ಹಾಡಿ ಸಿದ, ತಾತನ ಕುರಿತು ಈ ಮೊಮ್ಮಗಳಿಗೆ ಅಕ್ಕರೆ.

ಅತ್ತ ಸಂಗೀತದಲ್ಲಿ ಜೂನಿಯರ್, ಸೀನಿಯರ್ ಪರೀಕ್ಷೆಗಳಲ್ಲಿ ಉತ್ತೀರ್ಣ ರಾಗಿದ್ದರು. ಅಂತೆಯೇ ಹೈಸ್ಕೂಲ್ ಮತ್ತು ಪಿಯುಸಿ ಓದಿನಲ್ಲಿ ವಿಶಿಷ್ಟ ಶ್ರೇಣಿ ಪಡೆದಿದ್ದರು. ಮುಂದೆ ಇಂಗ್ಲಿಷ್ ವಿಷಯದಲ್ಲಿ ಸ್ನಾತ ಕೋತ್ತರ ಪದವಿಯನ್ನೂ ಪಡೆದರು. ಶಿಕ್ಷಕಿ ಯಾಗಬೇಕೆಂದಿದ್ದ ಕನಸಿಗೆ ಜೀವ ತುಂಬುವ ಸಲುವಾಗಿ ಬಿ.ಇಡಿ ಪದವಿ ಯನ್ನೂ ಪಡೆದು, ಸಂಗೀತವನ್ನೇ ಧ್ಯಾನಿ ಸುತ್ತಾ, ವೃತ್ತಿ ಗಾಯಕಿಯಾಗಿ ಗುರುತಿಸಿ ಕೊಂಡಿದ್ದಾರೆ.

ಜನಪದ, ಶಾಸ್ತ್ರೀಯ ಸಂಗೀತ ಮಾತ್ರವಲ್ಲ, ಸುಗಮ ಸಂಗೀತದ ಗಾಯನಕ್ಕೆ ಅವಕಾಶ ನೀಡಿದ ಅನೇಕರಿ ದ್ದಾರೆ. ಸದ್ಯ ಪದ್ಮಪಾಣಿ ಅಕಾಡೆಮಿ ಟ್ರಸ್ಟ್‌ನ ಸದಸ್ಯರಾಗಿದ್ದಾರೆ. ಎರಡು ವರ್ಷಗಳ ಹಿಂದೆ ಮೈಸೂರಿನ ಮನು- ರಾಮ್ ಸ್ಟುಡಿಯೋ ವತಿಯಿಂದ ಇವರು ಹಾಡಿದ ಜೀಸಸ್‌ನ ಕುರಿತ ಗೀತೆ ಯೂಟ್ಯೂಬ್‌ನಲ್ಲಿ ಟ್ರೆಂಡ್ ಸೃಷ್ಟಿಸುತ್ತಿದೆ. ನಂತರ ಅರ್ಪಿತ ಸ್ಟುಡಿಯೋದ ಮಾದೇಶ್ವರನ ಹಾಡು ಗಳನ್ನೂ ಹಾಡಿದರು. ‘ಅಕ್ಷರದಮ್ಮ’ ಎನ್ನುವ ಕ್ಯಾಸೆಟ್‌ನಲ್ಲಿಯೂ ಇವರು ಹಾಡಿದ ಎರಡು ಹಾಡುಗಳಿವೆ.

ಗಮನಿಸಿದರೆ, ನಿರ್ದಿಷ್ಟವಾಗಿ ಯಾವ ಕಲಾ ತಂಡದೊಂದಿಗೂ ಭವತಾರಿಣಿ ಗುರುತಿಸಿಕೊಂಡಿಲ್ಲ. ತಾವೇ ಒಂದು ತಂಡವನ್ನು ಕಟ್ಟಬಾರದೇಕೆ? ಎಂಬುದಕ್ಕೆ ಅನುಭವ ಬೇಕೆಂಬುದು ಇವರ ನಿಲುವು. ‘ಸಂಗೀತವನ್ನು ಕಲಿತಿಲ್ಲವೆಂದಿದ್ದರೆ ನನ್ನ ಅಸ್ಮಿತೆಯೇ ಇರುತ್ತಿರಲಿಲ್ಲ. ಕಲಾವಿದೆ ಯಾಗಿರುವುದು ಬದುಕಿಗೊಲಿದ ಭಾಗ್ಯ’ ಎನ್ನುತ್ತಾರೆ ಭವತಾರಿಣಿ.

ಆಂದೋಲನ ಡೆಸ್ಕ್

Recent Posts

ದಿಲ್ಲಿ ಗಣರಾಜ್ಯೋತ್ಸವಕ್ಕೆ ಬೆದರಿಕೆ : ಗುರುಪತ್ವಂತ್‌ ಸಿಂಗ್‌ ವಿರುದ್ಧ ಎಫ್‌ಐಆರ್‌

ಹೊಸದಿಲ್ಲಿ : ಗಣರಾಜ್ಯೋತ್ಸವಕ್ಕೂ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ಅಶಾಂತಿ ಸೃಷ್ಟಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಸಿಖ್ ಫಾರ್ ಜಸ್ಟೀಸ್ ನಿಯೋಜಿತ ಭಯೋತ್ಪಾದಕ…

5 hours ago

ಕಾಡಾನೆಗಳ ಲಗ್ಗೆ : ಕಬ್ಬಿನ ಫಸಲು ನಾಶ, ಪರಿಹಾರಕ್ಕಾಗಿ ಒತ್ತಾಯ

ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಪಿ.ದೊಡ್ಡಿ ಗ್ರಾಮದಲ್ಲಿ 5 ಕಾಡಾನೆಗಳ ಹಿಂಡು ಬೀಡುಬಿಟ್ಟು ಕಬ್ಬಿನ ಬೆಳೆ ಫಸಲನ್ನು ನಾಶಗೊಳಿಸಿರುವ ಘಟನೆ…

6 hours ago

ಕೊಡಗಿನ ತಿತಿಮತಿಯಲ್ಲಿ ಹುಲಿ ಪ್ರತ್ಯಕ್ಷ ; ಸ್ಥಳೀಯರಲ್ಲಿ ಆತಂಕ

ಮಡಿಕೇರಿ : ಮೈಸೂರು-ಗೋಣಿಕೊಪ್ಪ ಹೆದ್ದಾರಿಯ ದಕ್ಷಿಣ ಕೊಡಗಿನ ತಿತಿಮತಿ ವ್ಯಾಪ್ತಿಯಲ್ಲಿ ಹುಲಿಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದು, ಹುಲಿ ಸೆರೆಗೆ ಶಾಸಕ…

6 hours ago

ಖಾಸಗಿ ಶಾಲೆಗಳನ್ನು ನಾಚಿಸುವ ಹೈಟೆಕ್ ಸರ್ಕಾರಿ ಶಾಲೆ : ಆದರೆ ಮಕ್ಕಳ ದಾಖಲಾತಿ ಕೇವಲ 40!

ನಂಜನಗೂಡು : ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಗಳನ್ನು ಸಹ ನಾಚಿಸುವಂತಹ ಆಧುನಿಕ ಸೌಲಭ್ಯಗಳನ್ನು…

6 hours ago

ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಜಾಗ ನೀಡುವಂತೆ ಸಿಎಂಗೆ ಪತ್ರ ಬರೆದಿದ್ದೇನೆ : ಎಚ್‌ಡಿಕೆ

ಬೃಹತ್ ಕೈಗಾರಿಕೆ ಸಚಿವಾಲಯ ಅಧೀನದ ಎಆರ್‌ಎಐ ಘಟಕ ಸ್ಥಾಪನೆಗೆ ಪರಿಶೀಲನೆ ನಡೆಯುತ್ತಿದೆ : ಕುಮಾರಸ್ವಾಮಿ ಮಂಡ್ಯ : ಜಿಲ್ಲೆಯಲ್ಲಿ ಕೈಗಾರಿಕೆ…

7 hours ago

ರಾಜ್ಯವೇ ನನ್ನ ಪರಿಮಿತಿ, ಜನ ಬಯಸಿದ ಕಡೆ ಸ್ಪರ್ಧೆ : ಎಚ್‌.ಡಿ.ಕುಮಾರಸ್ವಾಮಿ

ಮಂಡ್ಯ : ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಮಾಡುತ್ತಾರೆ ಅಲ್ಲಿಂದ ನನ್ನ ಸ್ಪರ್ಧೆ ಮಾಡುತ್ತೇನೆ ಎನ್ನುವ…

7 hours ago