ಮಹಿಳೆ ಸಬಲೆ

ಸಂಬಂಧಗಳಿಗೆ ಅಡ್ಡ ಬರುವ ಮೊಬೈಲ್ ಶನಿರಾಯ

ಮನೆಯ ಮೂಲೆಯೊಂದರಲ್ಲಿ ಕುಳಿತು ದಿನಕ್ಕೆ ಒಮ್ಮೆಯೋ, ಎರಡು ದಿನಗಳಿಗೊಮ್ಮೆಯೋ ರಿಂಗಣಿಸಿ ದೂರದ ಊರುಗಳ ಶುಭ-ಅಶುಭ ಸಮಾಚಾರಗಳನ್ನು ತಲುಪಿಸುವ ಸಾಧನವಾಗಿದ್ದ ಸ್ಥಿರ ದೂರವಾಣಿಗಳು ಮೂಲೆ ಸೇರಿ, ಎಲ್ಲರ ಕೈಗೆ ಮೊಬೈಲ್‌ಗಳು ಬಂದ ಹೊಸದರಲ್ಲಿ ಹಾಯ್, ಹಲೋಗೆ ಸೀಮಿತವಾಗಿದ್ದರೂ ದಿನಕಳೆದಂತೆ ಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿ ಆಂಡ್ರಾಯ್ಡ್ ಮೊಬೈಲ್‌ಗಳು ಎಲ್ಲರ ಕೈ ಸೇರಿ ಜಗತ್ತಿನ ವಿದ್ಯಮಾನಗಳೆಲ್ಲವನ್ನೂ ಅಂಗೈಯಲ್ಲೇ ತೋರಿಸುವಂತಾದಾಗ, ಮೊಬೈಲ್ ಇಲ್ಲದೇ ದಿನಕಳೆಯುವುದು ಸಾಧ್ಯವೇ ಇಲ್ಲ ಎಂಬಂಥ ಚಡಪಡಿಕೆಗೆ ಸಿಲುಕಿದ್ದೇವೆ.

ಈ ಇಂಟರ್‌ನೆಟ್ ಯುಗದಲ್ಲಿ ಮೊಬೈಲ್ ಫೋನ್‌ಗಳು ಸಂಪರ್ಕ ಸಾಧನವಾಗಷ್ಟೇ ಉಳಿದಿಲ್ಲ. ಬದಲಿಗೆ ಬಹು ಆಯಾಮಗಳಲ್ಲಿ ಬಳಕೆಯಾಗುತ್ತಿವೆ. ಇತ್ತೀಚಿನ ದಿನಗಳಲ್ಲಂತೂ ಗಂಡ-ಹೆಂಡತಿ ಇಬ್ಬರೂ ಯಾವುದಾದರೂ ಒಂದು ಥೀಮ್ ಇಟ್ಟುಕೊಂಡು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಆ ವಿಡಿಯೋ ಹರಿಬಿಟ್ಟು, ನಮ್ಮ ರೀಲ್ಸ್‌ಅನ್ನು ಎಷ್ಟು ಜನ ವೀಕ್ಷಿಸಿದರು, ಎಷ್ಟು ಜನ ಲೈಕ್ ಒತ್ತಿದರು ಎಂಬುದನ್ನು ಗೆಳೆಯ-ಗೆಳತಿಯರೊಂದಿಗೆ ಖುಷಿಯಿಂದ ಹಂಚಿಕೊಳ್ಳುವ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತಿವೆ. ಗಂಡನಿಗೆ ಇಷ್ಟವಿದೆಯೋ, ಹೆಂಡತಿಗೆ ಇಷ್ಟವಿದೆಯೋ ಎಂಬುದನ್ನು ಲೆಕ್ಕಿಸದೆ ಮನೆಮಂದಿಯನ್ನೆಲ್ಲ ಮೊಬೈಲ್‌ನೊಳಗೆ ಎಳೆದು ತರುತ್ತಿದ್ದಾರೆ.

ಕೆಲವರು ರೀಲ್ಸ್ ಮಾಡಲು ಆಯ್ಕೆ ಮಾಡಿಕೊಂಡ ಥೀಮ್‌ಗೆ ಮೆಚ್ಚುಗೆ ಗಳಿಸಿದರೆ, ಮತ್ತೆ ಕೆಲವರು ನಗೆಪಾಟಲಿಗೀಡಾದರೂ ರೀಲ್ಸ್ ಮಾಡುವ ಹುಚ್ಚನ್ನು ಮಾತ್ರ ಬಿಡುತ್ತಿಲ್ಲ. ದಾಂಪತ್ಯ, ಪ್ರೇಮ ಸಂಬಂಧ ಆರೋಗ್ಯಕರವಾಗಿರಲು ಸಂಗಾತಿಗಳು ಒಟ್ಟಿಗೆ ಸಮಯ ಕಳೆಯುವಂತಹದ್ದು, ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕೊಟ್ಟುಕೊಳ್ಳುವಂತಹದ್ದನ್ನು ಮಾಡುತ್ತಿರುತ್ತಾರೆ. ಮದುವೆಯಾದ ಹೊಸತರಲ್ಲಿ ಅಥವಾ ಪ್ರೀತಿ-ಪ್ರೇಮದ ಬಲೆಗೆ ಬಿದ್ದ ಹೊಸತರಲ್ಲಿ ಸಂಗಾತಿಗಳಿಬ್ಬರೂ ತುಂಬಾ ಖುಷಿಯಾಗಿರುತ್ತಾರೆ.

ನಂತರದ ದಿನಗಳಲ್ಲಿ ಈ ಸಂಬಂಧಗಳಿಗೆ ಈ ಮೊಬೈಲ್ ಎಂಬ ಮಾಯಾಜಾಲವೇ ಹುಳಿ ಹಿಂಡುವ ಸಾಧನವಾಗಿದೆ. ಎಷ್ಟು ಹೊತ್ತಿನಲ್ಲೂ ಮೊಬೈಲ್‌ನಲ್ಲಿ ಯಾರೊಂದಿಗೋ ಸಂಭಾಷಣೆಯಲ್ಲಿ, ಚಾಟಿಂಗ್, ವಿಡಿಯೋ ಕರೆಯಲ್ಲಿ ತೊಡಗಿರುತ್ತಾನೆ/ಳೆ ಎಂಬ ಅಪವಾದಗಳಿಂದಾಗಿ ಸಂಬಂಧಗಳು ಹಾಳಾಗುತ್ತಿರುವುದು ಹೊಸದೇನಲ್ಲ.

ಸಂಬಂಧಗಳಲ್ಲಿ ದಿನಕಳೆದಂತೆ ಮನಸ್ತಾಪ, ಜಗಳ, ಅಂತರ ಕಾಯ್ದುಕೊಳ್ಳುವಿಕೆ, ಕಡೆಗೊಮ್ಮೆ ಆತ್ಮಹತ್ಯೆಯೋ, ಕೊಲೆಯೋ, ವಿಚ್ಛೇದನವೋ ಆಗಿ ಸಂಬಂಧಗಳು ಅಂತ್ಯವಾಗುತ್ತಿವೆ. ಮನಃಶಾಸಜ್ಞರು ಹೇಳುವ ಪ್ರಕಾರ ಮೊಬೈಲ್ ಫೋನ್‌ಅನ್ನು ಇತಿಮಿತಿಯಲ್ಲಿ ಬಳಸುವ ಎಚ್ಚರಿಕೆಯಲ್ಲಿರುವವರ ಸಂಬಂಧ ಸದಾ ಕಾಲ ಖುಷಿಯಾಗಿರುತ್ತದೆ. ಉತ್ತಮ ಸಂಬಂಧದಲ್ಲಿರುವ ದಂಪತಿಗಳು ಯಾವಾಗಲೂ ಪರಸ್ಪರ ತಮ್ಮ ಸಂಬಂಧದ ಸ್ಥಿತಿಯ ಬಗ್ಗೆ ಮಾತನಾಡುತ್ತಾರಂತೆ. ನಿಜವಾಗಿಯೂ ನನ್ನ ಸಂಗಾತಿ ಸಂತೋಷ ವಾಗಿದ್ದಾಳೆಯೇ/ಸಂತೋಷವಾಗಿದ್ದಾನೆಯೇ ಎಂಬುದನ್ನು ಪರಿಶೀಲಿಸುತ್ತಾರಂತೆ. ಸಂಬಂಧದಲ್ಲಿ ಖುಷಿಯಾಗಿರುವ ಜೋಡಿಗಳು ಪರಸ್ಪರ ತಮ್ಮ ಸಂಗಾತಿಯ ಇಷ್ಟಕಷ್ಟಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಲ್ಲದೇ ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ಪರಸ್ಪರ ಒಂದು ಕರೆ ಮಾಡಿಯೋ ಅಥವಾ ಮೆಸೇಜ್ ಮಾಡಿಯೋ ಒಬ್ಬರಿಗೊಬ್ಬರು ವಿಚಾರಿಸಿಕೊಳ್ಳುತ್ತಾರಂತೆ.

ಈ ರೀತಿಯ ದೈನಂದಿನ ಚೆಕ್-ಇನ್‌ಗಳು ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಜೊತೆಗೆ ತಮ್ಮ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಕನಸುಗಳನ್ನು ಕಟ್ಟಲು-ಆ ಕನಸುಗಳನ್ನು ನನಸು ಮಾಡುವ ದಾರಿ ಕಂಡುಕೊಳ್ಳಲು ಪರಸ್ಪರ ಮುಕ್ತ ಮಾತುಕತೆ ಪರಿಣಾಮಕಾರಿ ಎನ್ನುತ್ತಾರೆ.

ಹೆಚ್ಚಿನವರು ತಮ್ಮ ಭಯ ಮತ್ತು ಒತ್ತಡಗಳ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆದರೆ ಸಂಬಂಧದಲ್ಲಿ ಸಂತೋಷವಾಗಿರುವ ಜೋಡಿಗಳು ತಮಗೆ ಕಾಡುವ ಆತಂಕದ ಬಗ್ಗೆ ತಮ್ಮ ಸಂಗಾತಿಯ ಬಳಿ ಮುಕ್ತವಾಗಿ ಹಂಚಿಕೊಳ್ಳುತ್ತಾರೆ ಮತ್ತು ಆ ಸಮಸ್ಯೆಗಳನ್ನು ಪರಿಹರಿಸಲು ಒಟ್ಟಿಗೇ ಪ್ರಯತ್ನಿಸುತ್ತಾರೆ. ಕೆಲಸದ ಸ್ಥಳದಲ್ಲಿ ಎದುರಾಗುವ ಸಮಸ್ಯೆಗಳಾಗಿರಬಹುದು, ಸಂಬಂಧದಲ್ಲಿ ಉಂಟಾಗುವ ಅಭದ್ರತೆಯ ಭಾವನೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ.

ಈ ಮಾತುಕತೆಗಳು ಪರಸ್ಪರ ಸುರಕ್ಷತೆಯ ಭಾವನೆಯನ್ನು ಮೂಡಿಸುತ್ತವೆ. ತಮ್ಮ ಮನಸ್ಸಿನಲ್ಲಿ ಮೂಡುವ ಸಣ್ಣಪುಟ್ಟ ಆಲೋಚನೆಗಳು ಸಿಲ್ಲಿ, ವಿಚಿತ್ರ, ತಮಾಷೆಯಂತೆ ಕಾಣಬಹುದು. ಆದರೆ ಇಂತಹ ಮಾತುಕತೆಗಳು ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ ಮನೆಗಳಲ್ಲಿ ಮೊಬೈಲ್ ಫೋನ್ ಅನ್ನು ಬದಿಗಿಟ್ಟು ಮನೆಯವರೊಂದಿಗೆ ಹರಟೆ ಹೊಡೆಯಿರಿ, ಮನಸ್ಸು ಹಗುರಾಗಲಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕೆ.ಕೆ.ಮಹಮದ್ ಅವರ ಹೇಳಿಕೆ ಪ್ರಬುದ್ಧ ನಡೆ

ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…

21 mins ago

ಓದುಗರ ಪತ್ರ: ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ನಾಗರಿಕ ಸ್ನೇಹಿ

ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…

24 mins ago

ಓದುಗರ ಪತ್ರ: ದ್ವೇಷ ಭಾಷಣಕ್ಕೆ  ಕಾನೂನು ಕಡಿವಾಣ ಸಾಗತಾರ್ಹ

ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…

38 mins ago

ಡಾ.ಬಿ.ಆರ್.ಅಂಬೇಡ್ಕರ್ ಎಂಬ ಅಮರ ಜಗತ್ತು…

ಮಲ್ಕುಂಡಿ ಮಹದೇವಸ್ವಾಮಿ ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ  ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ…

44 mins ago

ರೈಲ್ವೆ ಮೇಲ್ಸೇತುವೆ; ಭೂ ದರ ಕಗ್ಗಂಟು ಬಗೆಹರಿಯುವುದೇ?

ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…

3 hours ago

ಜನವರಿಗೆ ಚಾ.ಬೆಟ್ಟದ ಅಭಿವೃದ್ಧಿ ಕಾಮಗಾರಿ ಶುರು

ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…

4 hours ago