ಹೆಣ್ಣು ಮಕ್ಕಳು ನಿರ್ದಿಷ್ಟ ವಯಸ್ಸಿಗೂ ಮುನ್ನ ಮುಟ್ಟಾಗುವುದು ಪ್ರಸ್ತುತ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ.
ಇದಕ್ಕೆ ಆಹಾರ, ಜೀವನಶೈಲಿಯೂ ಕಾರಣವೆಂಬುದು ಅನೇಕರ ಅಭಿಪ್ರಾಯ. ದುರಂತವೆಂದರೆ ೨೬ ಮಿಲಿಯನ್ನಷ್ಟು ಹೆಣ್ಣು ಮಕ್ಕಳು ಮುಟ್ಟಾಗುತ್ತಿದ್ದಂತೆಯೇ ತಮ್ಮ ಶಿಕ್ಷಣದಿಂದಲೂ ವಂಚಿತರಾಗುತ್ತಿದ್ದಾರೆ.
‘ಮುಟ್ಟು’ ಎನ್ನುವ ಪದ ಬಳಕೆಯನ್ನು ಎಲ್ಲರೆದುರು ಮಾತನಾಡದ ಕಾಲವೊಂದಿತ್ತು. ವರ್ಷ ಕಳೆದಂತೆ ಹೆಣ್ಣು ಮಕ್ಕಳಿಗೆ ಮನೆಯಿಂದಲೂ ಶಾಲೆಯಿಂದಲೂ ಈ ಕುರಿತು ಅರಿವು ದೊರಕುತ್ತಿದೆ. ಹೆಣ್ಣು ಮಕ್ಕಳು ಬಹುಬೇಗ ಮುಟ್ಟಾಗುತ್ತಿರುವ ಸನ್ನಿವೇಶವನ್ನು ಆಧರಿಸಿದ ಸ್ಯಾನಿಟರಿ ನ್ಯಾಪ್ಕಿನ್ ಜಾಹೀರಾತು ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆ ಜಾಹೀರಾತಿನಲ್ಲಿ ಸ್ನೇಹಿತೆಯ ಯೂನಿಫಾರಂನಲ್ಲಿ ರಕ್ತದ ಕಲೆಯನ್ನು ಕಂಡ ಇಬ್ಬರು ಹೆಣ್ಣು ಮಕ್ಕಳು ಅದನ್ನು ಕಂಡದ್ದೇ ಮೊದಲು ಸಮಾಧಾನದಿಂದ ‘ರಕ್ತ ಒಸರುವುದು ನಿಂತ ಮೇಲೆ ಮತ್ತೆ ಶಾಲೆಗೆ ಬಾ’ ಎನ್ನುತ್ತಾರೆ. ಈಕೆ ಮತ್ತೆ ತೋರಿದಾಗ, ‘ಹಾಗಾದ್ರೆ ನೀನು ಶಾಲೆಗೆ ಬರೋ ಹಾಗೇ ಇಲ್ವಾ? ನಿಂಗೇನಾದ್ರೂ ಕಾಯಿಲೆ ಬಂದಿದ್ಯಾ?’ ಎಂದು ಒಬ್ಬಳು ಮುಗ್ಧವಾಗಿ ಕೇಳುತ್ತಾಳೆ. ಕಂಗಾಲಾದ ಹುಡುಗಿ ಶಾಲಾ ಶಿಕ್ಷಕಿ ಎದುರಾದಾಗ ಅತ್ತುಬಿಡುತ್ತಾಳೆ. ವಿಷಯ ಅರ್ಥವಾದ ಹೊತ್ತಿಗೆ ಶಿಕ್ಷಕಿ ತರಗತಿಗೆ ಹೊರಟು ನಿಂತಾಗ, ‘ಈ ವಿಷಯ ವನ್ನು ಮಕ್ಕಳಿಗೆ ಮೊದಲೇ ಹೇಳಬಹುದೇ?’
ಮತ್ತೊಬ್ಬ ಶಿಕ್ಷಕಿ ಕೇಳಿದ ಮಾತಿಗೆ ಮೊದಲೆ ‘ಮುಟ್ಟು ಆಗುವಾಗ, ಅದಕ್ಕೆ ಪೂರ್ವ ತಯಾರಿಯನ್ನು ಮೊದಲೇ ಮಾಡಿಕೊಳ್ಳಬೇಕು’ ಎನ್ನುತ್ತಾ ಮುಂದೆ ಸಾಗುತ್ತಾಳೆ. ಇಂಥ ಸನ್ನಿವೇಶ ಧುತ್ತೆಂದು ಎದುರಾದಾಗ ಗಾಬರಿ ಯಾಗಿ, ದಿನವಿಡೀ ಯೋಚಿಸುವುದಕ್ಕಿಂತ ಮಗಳು ಚಿಕ್ಕವಳಿದ್ದಾಗಲೇ ಮೊದಲ ಮುಟ್ಟಿನ ಕುರಿತು ತಾಯಿಯು ಅರಿವು ಮೂಡಿಸುವುದು ಸೂಕ್ತ.
ಜಕಾರ್ತ: ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದಲ್ಲಿ ಶನಿವಾರ ಮುಂಜಾನೆ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಮೃತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.…
ಅಯೋಧ್ಯೆ: ಅಯೋಧ್ಯೆ ರಾಮಮಂದಿರದ ಅರ್ಚಕರಿಗೆ ಹಳದಿ ರೇಷ್ಮೆ ಧೋತಿಯನ್ನು ಹೊಸ ಡ್ರೆಸ್ ಕೋಡ್ ಆಗಿ ಜಾರಿಗೆ ತರಲಾಗಿದೆ. ರಾಮನಂದಿ ಸಂಪ್ರದಾಯಕ್ಕೆ…
ವಸ್ತುಗಳು, ಬಂದೂಕು ಸೇರಿ ಸಾಕ್ಷಿಗಳು ಲಭ್ಯ ಬೆಂಗಳೂರು : ಹನೂರಿನಲ್ಲಿ ನಡೆದಿರುವ ಶೂಟೌಟ್ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆಗೆ ಆದೇಶ…
ಮಂಡ್ಯ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ದೂರದೃಷ್ಠಿಯ ಮೇಕೆದಾಟು ಯೋಜನೆಗೆ 2027ರ ಸ್ವಾತಂತ್ರ ದಿನಾಚರಣೆ ವೇಳೆಗೆ ಶಂಕುಸ್ಥಾಪನೆ ನೆರವೇರಿಸಿ ಅಣೆಕಟ್ಟು…
ಮೈಸೂರು: ಮೂವರು ಬೇಟೆಗಾರರ ಎನ್ಕೌಂಟರ್ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸುನೀಲ್ ಬೋಸ್ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಗಾರಕ್ಕೆ…
ಮೈಸೂರು: ಅರಣ್ಯ ಇಲಾಖೆಯಿಂದ ಬಹಳ ದೊಡ್ಡ ತಪ್ಪು ಆಗಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಈ…