ಮಹಿಳೆ ಸಬಲೆ

ಮುಟ್ಟಿನ ಅರಿವು ಹೆಣ್ಣಿಗೆ ಮುಖ್ಯ

ಹೆಣ್ಣು ಮಕ್ಕಳು ನಿರ್ದಿಷ್ಟ ವಯಸ್ಸಿಗೂ ಮುನ್ನ ಮುಟ್ಟಾಗುವುದು ಪ್ರಸ್ತುತ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ.

ಇದಕ್ಕೆ ಆಹಾರ, ಜೀವನಶೈಲಿಯೂ ಕಾರಣವೆಂಬುದು ಅನೇಕರ ಅಭಿಪ್ರಾಯ. ದುರಂತವೆಂದರೆ ೨೬ ಮಿಲಿಯನ್‌ನಷ್ಟು ಹೆಣ್ಣು ಮಕ್ಕಳು ಮುಟ್ಟಾಗುತ್ತಿದ್ದಂತೆಯೇ ತಮ್ಮ ಶಿಕ್ಷಣದಿಂದಲೂ ವಂಚಿತರಾಗುತ್ತಿದ್ದಾರೆ.

‘ಮುಟ್ಟು’ ಎನ್ನುವ ಪದ ಬಳಕೆಯನ್ನು ಎಲ್ಲರೆದುರು ಮಾತನಾಡದ ಕಾಲವೊಂದಿತ್ತು. ವರ್ಷ ಕಳೆದಂತೆ ಹೆಣ್ಣು ಮಕ್ಕಳಿಗೆ ಮನೆಯಿಂದಲೂ ಶಾಲೆಯಿಂದಲೂ ಈ ಕುರಿತು ಅರಿವು ದೊರಕುತ್ತಿದೆ. ಹೆಣ್ಣು ಮಕ್ಕಳು ಬಹುಬೇಗ ಮುಟ್ಟಾಗುತ್ತಿರುವ ಸನ್ನಿವೇಶವನ್ನು ಆಧರಿಸಿದ ಸ್ಯಾನಿಟರಿ ನ್ಯಾಪ್‌ಕಿನ್ ಜಾಹೀರಾತು ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆ ಜಾಹೀರಾತಿನಲ್ಲಿ ಸ್ನೇಹಿತೆಯ ಯೂನಿಫಾರಂನಲ್ಲಿ ರಕ್ತದ ಕಲೆಯನ್ನು ಕಂಡ ಇಬ್ಬರು ಹೆಣ್ಣು ಮಕ್ಕಳು ಅದನ್ನು ಕಂಡದ್ದೇ ಮೊದಲು ಸಮಾಧಾನದಿಂದ ‘ರಕ್ತ ಒಸರುವುದು ನಿಂತ ಮೇಲೆ ಮತ್ತೆ ಶಾಲೆಗೆ ಬಾ’ ಎನ್ನುತ್ತಾರೆ. ಈಕೆ ಮತ್ತೆ ತೋರಿದಾಗ, ‘ಹಾಗಾದ್ರೆ ನೀನು ಶಾಲೆಗೆ ಬರೋ ಹಾಗೇ ಇಲ್ವಾ? ನಿಂಗೇನಾದ್ರೂ ಕಾಯಿಲೆ ಬಂದಿದ್ಯಾ?’ ಎಂದು ಒಬ್ಬಳು ಮುಗ್ಧವಾಗಿ ಕೇಳುತ್ತಾಳೆ. ಕಂಗಾಲಾದ ಹುಡುಗಿ ಶಾಲಾ ಶಿಕ್ಷಕಿ ಎದುರಾದಾಗ ಅತ್ತುಬಿಡುತ್ತಾಳೆ. ವಿಷಯ ಅರ್ಥವಾದ ಹೊತ್ತಿಗೆ ಶಿಕ್ಷಕಿ ತರಗತಿಗೆ ಹೊರಟು ನಿಂತಾಗ, ‘ಈ ವಿಷಯ ವನ್ನು ಮಕ್ಕಳಿಗೆ ಮೊದಲೇ ಹೇಳಬಹುದೇ?’

ಮತ್ತೊಬ್ಬ ಶಿಕ್ಷಕಿ ಕೇಳಿದ ಮಾತಿಗೆ ಮೊದಲೆ ‘ಮುಟ್ಟು ಆಗುವಾಗ, ಅದಕ್ಕೆ ಪೂರ್ವ ತಯಾರಿಯನ್ನು ಮೊದಲೇ ಮಾಡಿಕೊಳ್ಳಬೇಕು’ ಎನ್ನುತ್ತಾ ಮುಂದೆ ಸಾಗುತ್ತಾಳೆ. ಇಂಥ ಸನ್ನಿವೇಶ ಧುತ್ತೆಂದು ಎದುರಾದಾಗ ಗಾಬರಿ ಯಾಗಿ, ದಿನವಿಡೀ ಯೋಚಿಸುವುದಕ್ಕಿಂತ ಮಗಳು ಚಿಕ್ಕವಳಿದ್ದಾಗಲೇ ಮೊದಲ ಮುಟ್ಟಿನ ಕುರಿತು ತಾಯಿಯು ಅರಿವು ಮೂಡಿಸುವುದು ಸೂಕ್ತ.

ಆಂದೋಲನ ಡೆಸ್ಕ್

Recent Posts

ಪಿಯುಸಿ : ಸರ್ಕಾರಿ ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಳದ ನಿರೀಕ್ಷೆ

ಮಕ್ಕಳೊಂದಿಗೆ ಸರ್ಕಾರಿ ಕಾಲೇಜುಗಳತ್ತ ಮುಖ ಮಾಡಿದ ಪೋಷಕರು ಗಿರೀಶ್‌ ಹುಣಸೂರು ಮೈಸೂರು : ೨೦೨೫-೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ…

48 mins ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ : ಕರ್ನಾಟಕದ ಮೇಲೆ ಬಿಜೆಪಿಯ ರಾಷ್ಟ್ರೀಯ ನಾಯಕರ ಕಣ್ಣು

ದಕ್ಷಿಣದ ರಾಜ್ಯಗಳಲ್ಲಿ ತನ್ನ ಪಾರುಪತ್ಯ ಭದ್ರಗೊಳಿಸಲು ಬಿಜೆಪಿಗೆ ಕರ್ನಾಟಕ ಅವಶ್ಯ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ…

1 hour ago

ತಮಿಳುನಾಡು ಸಿಎಂ ವಿಜಯ್ ಮುಂದೆ ಸವಾಲುಗಳ ಬೆಟ್ಟ

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜೋಸೆಫ್ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆ ಮೂಲಕ ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಮಿತ್ರ ಪಕ್ಷಗಳ…

2 hours ago

ಲ್ಯಾನ್ಸ್‌ಡೌನ್‌ ಕಟ್ಟಡಕ್ಕಿಲ್ಲ ಮುಕ್ತಿ : ಚರ್ಚೆಯಲ್ಲೇ ಕಾಲಹರಣ

ಕಟ್ಟಡವನ್ನು ಜೀರ್ಣೋದ್ಧಾರ ಮಾಡಬೇಕೋ? ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸಬೇಕೋ? ಸುಪ್ರೀಂ ತೀರ್ಪು ಎದುರು ನೋಡುತ್ತಿರುವ ಪಾಲಿಕೆ ಚಿರಂಜೀವಿ ಸಿ.ಹುಲ್ಲಹಳ್ಳಿ ಮೈಸೂರು :…

2 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಮೇ.11 ಸೋಮವಾರ

2 hours ago

ಪ್ರಮಾಣ ವಚನ ಸಮಾರಂಭಕ್ಕೆ ವಿಜಯ್‌ ಪತ್ನಿ, ಮಕ್ಕಳು ಗೈರು

ಚೆನ್ನೈ : ದಳಪತಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಮಾರಂಭದಲ್ಲಿ ಅನೇಕ ಗಣ್ಯರು ಸೇರಿದ್ದರು.…

13 hours ago